Bigg Boss: ಲಾಯರ್ ಜಗದೀಶ್ಗೆ ಭಾರಿ ಬೆಂಬಲ; ಗಂಡಸರಿಗೆ ಮಾತ್ರ ಯಾಕಿಂಗೆ ಅಂತಿದ್ದಾರೆ ನೆಟ್ಟಿಗರು
ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯಲ್ಲಿ ಹಲವು ವಿವಾದಗಳಿಗೆ ಕಾರಣವಾಗಿದೆ. ಸ್ವರ್ಗ ನರಕ ಪರಿಕಲ್ಪನೆ ಬಗ್ಗೆ ಮಹಿಳಾ ಆಯೋಗ ದೂರು ಕೊಟ್ಟಿದ್ದು, ಮಹಿಳಾ ಸ್ಪರ್ಧಿಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪ ಕೇಳಿಬಂದ ಬೆನ್ನಲ್ಲೇ ಬಿಗ್ ಬಾಸ್ ಮನೆಗೆ ನುಗ್ಗಿದ್ದ ಕ್ರೇನ್ ಜೈಲು ಸೆಟ್ ರೀತಿ ಇದ್ದ ಗೋಡೆಯನ್ನು ಕಿತ್ತುಕೊಂಡು ಹೋಗಿತ್ತು. ಇದೀಗ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಒಂದೇ ಬಾರಿ ಇಬ್ಬರು ಅಭ್ಯರ್ಥಿಗಳನ್ನು ಶೋನಿಂದ ಹೊರಹಾಕಲಾಗಿದೆ.
ವಕೀಲ್ ಸಾಬ್ ಎಂದೇ ಖ್ಯಾತರಾಗಿರುವ ಜಗದೀಶ್ ಮತ್ತು ರಂಜಿತ್ರನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳಿಸಲಾಗಿದ್ದು, ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ವಿರುದ್ಧ ಉಳಿದ 15 ಅಭ್ಯರ್ಥಿಗಳು ಒಟ್ಟಾಗಿ ಜಗಳವಾಡಿದ್ದು, ಎಲ್ಲರಿಗೂ ಜಗದೀಶ್ ತಿರುಗೇಟು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ್ ಮಹಿಳಾ ಅಭ್ಯರ್ಥಿಗಳಿಗೆ ಗೌರವ ಕೊಡದೆ ಮಾತನಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಜಗಳ ವಿಕೋಪಕ್ಕೆ ಹೋಗಿದ್ದು, ರಂಜಿತ್ ಜಗದೀಶ್ರನ್ನು ತಳ್ಳಿದ್ದಾರೆ. ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ ಇಬ್ಬರನ್ನು ಕಾರ್ಯಕ್ರಮದಿಂದ ಹೊರಹಾಕಲಾಗಿದೆ. ಇದೀಗ ಲಾಯರ್ ಜಗದೀಶ್ಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಮಹಿಳೆಯಾದ ಮಾತ್ರಕ್ಕೆ ಏನು ಬೇಕಾದರೂ ಮಾತನಾಡಬಹುದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
#BBK11 give respect take respect pic.twitter.com/5w3up3GSJy
— Simple trolls (@simpletrolls) October 17, 2024
ಚೈತ್ರಾ ಕುಂದಾಪುರ ಮಾಡಿದ್ದೇನು?
ಜಗಳವಾಡುವ ಸಂದರ್ಭದಲ್ಲಿ ಸ್ಪರ್ಧಿ ಚೈತ್ರಾ ಕುಂದಾಪುರ ಲಾಯರ್ ಜಗದೀಶ್ ಅವರಿಗೆ ನೀನು ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ಎನ್ನುವ ಪದ ಬಳಕೆ ಮಾಡಿದ್ದಾರೆ. ಇದು ಜಗದೀಶ್ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಜೊತೆಗೆ ಜಗದೀಶ್ರನ್ನು ಹೋಗಲೋ ಎಂದು ಏಕವಚನದಲ್ಲಿ ಕರೆಯಲಾಗಿದೆ, ಜಗದೀಶ್ ಕೂಡ ಮಹಿಳಾ ಅಭ್ಯರ್ಥಿಗಳನ್ನು ಏಕವಚನದಲ್ಲೇ ಮಾತನಾಡಿಸಿದ್ದಾರೆ. ಆದರೆ ಜಗದೀಶ್ರನ್ನು ಮಾತ್ರ ಶೋದಿಂದ ಹೊರಹಾಕಿದ್ದು, ಮಹಿಳಾ ಅಭ್ಯರ್ಥಿಗಳು ಮಾಡಿದ್ದು ಸರೀನಾ ಎಂದು ಪ್ರಶ್ನೆ ಮಾಡಲಾಗುತ್ತಿದೆ.
"ಒಬ್ಬ ಅಪ್ಪಂಗೆ ಹುಟ್ಟಿದ್ರೆ" ಅನ್ನೋದು ಎಷ್ಟು ಕೆಟ್ಟ ಪದ ಅಂತ ಕಲರ್ಸ್ ಕನ್ನಡಕ್ಕೆ ತಿಳಿದಿಲ್ವ. ಮಹಿಳಾ ಆಯೋಗ ರೀತಿ ಒಂದು ಗಂಡಸರ ಆಯೋಗ ಬೇಕಾಗಿದೆ#bbk11 #BBKS11 pic.twitter.com/ZgUQd0zUAW
— 🌹Putnanja🌹 (@Putnanja_) October 18, 2024
ಮಹಿಳೆ ಎಂದ ಮಾತ್ರಕ್ಕೆ ಗಂಡಸರಿಗೆ ಗೌರವ ಕೊಡದೇ ಮಾತನಾಡಬಹುದಾ, ಮಹಿಳಾ ಸ್ಪರ್ಧಿ ಮಾನಸಾ ಮೊದಲು ಜಗದೀಶ್ ಅವರಿಗೆ ಏಕವಚನದಲ್ಲಿ ಮಾತನಾಡಿದರು, ಜಗದೀಶ್ ಕೂಡ ಅದನ್ನೇ ತಿರುಗಿಸಿ ಕೊಟ್ಟರು. ಆದರೆ ಇಲ್ಲಿ ಜಗದೀಶ್ರನ್ನು ಮಾತ್ರ ಟಾರ್ಗೆಟ್ ಮಾಡಲಾಗಿದೆ ಎಂದು ಎಕ್ಸ್ನಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಗಂಡಸ್ರು ಹೆಣ್ಮಕ್ಳು ಬಗ್ಗೆ ಕೆಟ್ದಾಗಿ ಮಾತಾಡೋದು ತಪ್ಪು ಅವರಿಗೆ ಶಿಕ್ಷೆ ಆಗ್ಬೇಕು , ಹಾಗೆಯೇ ಗಂಡ್ಮಕ್ಳು ಬಗ್ಗೆ ಹೆಣ್ಮಕ್ಳು ಮಾತಾಡಿದ್ರೆ ಅವರ್ಗೆ ಶಿಕ್ಷೆ ಆಗ್ಬಾರ್ದ?
— Abhay Suryaa (@AbhaySuryaa_) October 18, 2024
ಮೊದ್ಲು ಈ ತುಕಾಲಿ ಹೆಂಡತಿನ ಹೊರಗಡೆ ಹಾಕಿ Irritation😲, ಯಾವಾಗ್ಲು Highlight ಆಗೋದು ಗಂಡ್ಮಕ್ಳು ಮಾಡೋದೆ ಅದು ಆಗಬಾರ್ದು.#BBK11 #BBKS11 #BBKSeason11 #BBK pic.twitter.com/M1adz3hJyU
ಲಾಯರ್ ಜಗದೀಶ್ ಮಾತನಾಡಿದ ರೀತಿ ತಪ್ಪಾಗಿರಬಹುದು ಆದರೆ ಉಳಿದ ಅಭ್ಯರ್ಥಿಗಳು ಮಾಡಿದ್ದು ಸರಿನಾ ಎಂದು ಕೇಳಿರುವ ವೀಕ್ಷಕರು, ಜಗದೀಶ್ರನ್ನು ಹೊರ ಹಾಕುವುದಾದರೆ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಹಿಳಾ ಅಭ್ಯರ್ಥಿಗಳನ್ನು ಕೂಡ ಹೊರ ಹಾಕಿ ಎಂದು ಒತ್ತಾಯಿಸಿದ್ದಾರೆ.
ಜಗದೀಶ್ ಇಲ್ಲದೇ ಇದ್ದರೆ ಬಿಗ್ ಬಾಸ್ ಕಾರ್ಯಕ್ರಮ ಫ್ಲಾಪ್ ಆಗಲಿದೆ. ಅವರು ಕಾರ್ಯಕ್ರಮಕ್ಕೆ ವಾಪಸ್ ಬರಬೇಕು ಎಂದು ಕೇಳಲಾಗುತ್ತಿದೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election












Click it and Unblock the Notifications