Darshan Thoogudeepa: ಬಳ್ಳಾರಿ ಜೈಲಿನಲ್ಲೇ ಕುಸಿದು ಬಿದ್ದ ದರ್ಶನ್ ತೂಗುದೀಪ್...
ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿರುವ ನಟ ದರ್ಶನ್ ತೂಗುದೀಪ್ಗೆ ಭಾರಿ ದೊಡ್ಡ ಆಘಾತ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದು, ಜಾಮೀನು ಪಡೆದುಕೊಂಡು ಹೊರಗೆ ಬರಲು ಕಾಯುತ್ತಿದ್ದರು. ಅವರಿಗೆ ಜಾಮೀನು ಸಿಗಲಿದೆ ಅಂತಾ, ಕೋಟ್ಯಂತರ ದರ್ಶನ್ ತೂಗುದೀಪ್ ಅಭಿಮಾನಿಗಳು ಕೂಡ ಕಾಯುತ್ತಿದ್ದರು. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಜಾಮೀನು ಅರ್ಜಿ ವಜಾ ಆಗಿದ್ದು, ಈ ಸುದ್ದಿ ತಿಳಿದ ತಕ್ಷಣ ಬಳ್ಳಾರಿ ಜೈಲಿನಲ್ಲೇ ಕುಸಿದು ಬಿದ್ದ ದರ್ಶನ್ ತೂಗುದೀಪ್...
ಬಳ್ಳಾರಿ ಜೈಲಿನಿಂದ ದರ್ಶನ್ ತೂಗುದೀಪ್ ಜಾಮೀನು ಪಡೆದು ಇನ್ನೇನು ರಿಲೀಸ್ ಆಗ್ತಾರೆ ಎಂಬ ನಿರೀಕ್ಷೆಯಲ್ಲಿ, ಕೋಟಿ ಕೋಟಿ ದರ್ಶನ್ ತೂಗುದೀಪ್ ಅಭಿಮಾನಿಗಳು ಕಾಯುತ್ತಿದ್ದರು. ಸುಮಾರು 100ಕ್ಕೂ ಹೆಚ್ಚು ದಿನಗಳಿಂದ ಜೈಲಿನ ಊಟ ತಿನ್ನುತ್ತಾ, ಜೈಲಿನಲ್ಲೇ ಪರದಾಟ ಪಡುತ್ತಿರುವ ನಟ ದರ್ಶನ್ ತೂಗುದೀಪ್ ಅವರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕು ಜೈಲಿಂದ ಅವರು ರಿಲೀಸ್ ಆಗಲಿದ್ದಾರೆ ಎಂಬ ನಿರೀಕ್ಷೆ ಕೂಡ ಇತ್ತು. ಪರಿಸ್ಥಿತಿ ಹೀಗಿದ್ದರೂ ಕೋರ್ಟ್ ಇಂದು ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ವಜಾ ಮಾಡಿದ್ದು, ಬಳ್ಳಾರಿ ಜೈಲಿನಲ್ಲೇ ಕುಸಿದು ಬಿದ್ದ ದರ್ಶನ್ ತೂಗುದೀಪ್...

ಹೌದು, ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿರುವ ದರ್ಶನ್ ತೂಗುದೀಪ್ಗೆ ಕೊನೆಗೂ ಜಾಮೀನು ಸಿಗದೇ ಹೋದರೆ ಇದು ಅಭಿಮಾನಿಗಳಿಗೆ ಆಗುವ ದೊಡ್ಡ ಆಘಾತ ಎಂದು ಹೇಳಲಾಗುತ್ತಿತ್ತು. ಅದೇ ರೀತಿ ಇದೀಗ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ದೊಡ್ಡ ಆಘಾತ ಸಿಕ್ಕಿದೆ. ಹೀಗೆ ದರ್ಶನ್ ತೂಗುದೀಪ್ ಅವರ ಬೇಲ್ ಅಪ್ಲಿಕೇಷನ್ ರಿಜೆಕ್ಟ್ ಆದ ಸುದ್ದಿ ಅಂದ್ರೆ ಜಾಮೀನು ಅರ್ಜಿ ತಿರಸ್ಕಾರ ಆಗಿದ್ದೇ ತಡ ನಟ ದರ್ಶನ್ ಏನು ಮಾಡಿದ್ದಾರೆ ಗೊತ್ತಾ? ಮುಂದೆ ಓದಿ.
ಬಳ್ಳಾರಿ ಜೈಲಿನಲ್ಲೇ ಕುಸಿದು ಬಿದ್ದ ದರ್ಶನ್?
ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ತೂಗುದೀಪ್ ಬೆಳಗ್ಗೆಯಿಂದ ಕೂಡ ಊಟ & ತಿಂಡಿಯನ್ನ ಮಾಡದೆ ನರಳುತ್ತಿದ್ದರು. ಇಂದು ನನಗೆ ಜಾಮೀನು ಸಿಗಲಿದೆ, ಜೈಲಿನಿಂದ ಹೊರ ಬಂದು ನಾನು ಆರಾಮವಾಗಿ ಇರುತ್ತೇನೆ ಅಂತಾ ದರ್ಶನ್ ತೂಗುದೀಪ್ ಕನಸು ಕಂಡಿದ್ದರು. ಹೀಗೆ ಇದ್ದಾಗಲೇ ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ತಿರಸ್ಕಾರ ಆಗಿದ್ದು, ಜೈಲಿನಲ್ಲೇ ದರ್ಶನ್ ತೂಗುದೀಪ್ ಮತ್ತಷ್ಟು ದಿನ ನರಳುವ ಪರಿಸ್ಥಿತಿ ಬಂದಿದೆ. ಈ ಸುದ್ದಿಯನ್ನ ಕೇಳಿ ತಕ್ಷಣವೇ ಬಳ್ಳಾರಿ ಜೈಲಿನಲ್ಲೇ ಕುಸಿದು ಬಿದ್ದ ದರ್ಶನ್ ತೂಗುದೀಪ್ ಎಂಬ ಸುದ್ದಿಯು ಹಬ್ಬಿದೆ.
ಆದ್ರೆ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಲ್ಲೇ ಕುಸಿದು ಬಿದ್ದ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ. ಹೀಗಾಗಿ ಆತಂಕ ಹೆಚ್ಚಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಈಗ ದರ್ಶನ್ ಅವರ ಫ್ಯಾನ್ಸ್ ಎಂಬ ಅಕೌಂಟ್ನಿಂದ ಪೋಸ್ಟ್ ಹಾಕಲಾಗಿದೆ. ಮತ್ತೊಂದು ಕಡೆ ದರ್ಶನ್ ತೂಗುದೀಪ್ ಕುಟುಂಬದ ಸದಸ್ಯರು ಬಳ್ಳಾರಿಗೆ ಹೋಗಿ ದರ್ಶನ್ ಅವರಿಗೆ ಧೈರ್ಯ ಹೇಳುವ ಸಾಧ್ಯತೆ ಇದೆ.
ದರ್ಶನ್ ಜಾಮೀನು ಅರ್ಜಿ ವಜಾ ಆಗಿದ್ದು...
ಇಂದು 57ನೇ ಸಿಟಿ ಸಿವಿಲ್ ಕೋರ್ಟ್ ದರ್ಶನ್ ತೂಗುದೀಪ್ ಜಾಮೀನು ವಿಚಾರದಲ್ಲಿ ಭಾರಿ ಮಹತ್ವದ ತೀರ್ಪು ನೀಡಿದೆ. ರೇಣುಕಾಸ್ವಾಮಿ ಕೊಲೆ ಆರೋಪದಡಿ ಜೈಲು ಸೇರಿರುವ ಒಟ್ಟು 06 ಆರೋಪಿಗಳಲ್ಲಿ ನಾಲ್ವರ ಜಾಮೀನು ಅರ್ಜಿ ವಜಾ ಆಗಿದೆ. ಪವಿತ್ರಾಗೌಡ ಮತ್ತು ದರ್ಶನ್, ನಾಗರಾಜ್ ಮತ್ತು ಲಕ್ಷ್ಮಣ್ ಅರ್ಜಿ ವಜಾ ಮಾಡಲಾಗಿದೆ. ಹೀಗಾಗಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಆಘಾತ ಎದುರಾಗಿದೆ, ಅಲ್ಲದೆ ಖುದ್ದು ದರ್ಶನ್ ತೂಗುದೀಪ್ಗೆ ಈ ಸುದ್ದಿ ದೊಡ್ಡ ಶಾಕ್ ನೀಡಿದೆ.
ದರ್ಶನ್ ತೂಗುದೀಪ್ ದೂರ.. ದೂರ..?
ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ್ ನಡುವೆ 10 ವರ್ಷಗಳ ಸುದೀರ್ಘ ಸಂಬಂಧವಿದೆ. ದರ್ಶನ್ ತೂಗುದೀಪ್ಗೂ ಮೊದಲು ಪವಿತ್ರಾ ಗೌಡ ಒಂದು ಮದುವೆ ಕೂಡ ಆಗಿದ್ದರಂತೆ. ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಸಂಬಂಧ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಡಿ-ಬಾಸ್ ನಟ ದರ್ಶನ್ ತೂಗುದೀಪ್ ವಿರುದ್ಧವೇ ಪವಿತ್ರಾ ಗೌಡ ಆರೋಪ ಮಾಡಿದ್ರು ಎಂಬ ಆರೋಪವು ಕೇಳಿಬಂತು. ಪೊಲೀಸರ ಎದುರು ದರ್ಶನ್ ತೂಗುದೀಪ್ ವಿರುದ್ಧ ಪವಿತ್ರಾ ಗೌಡ ಆರೋಪ ಮಾಡಿದ್ದರಂತೆ. ಹೀಗಾಗಿ ಇಬ್ಬರೂ ಈಗ ದೂರವಾಗಲು ಇಚ್ಛಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications