Darshan Thoogudeepa: ಡಿ-ಬಾಸ್ 500 ಅಡಿ ಕಟೌಟ್ ಬೆಂಗಳೂರಲ್ಲಿ ನಿಲ್ಲಿಸಲು ದರ್ಶನ್ ತೂಗುದೀಪ್ ಅಭಿಮಾನಿಗಳ....
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇಲ್ಲದೆ ಕನ್ನಡ ಸಿನಿಮಾ ಇಂಡಸ್ಟ್ರೀ ಉಳಿಯಲು ಸಾಧ್ಯವೇ ಇಲ್ಲ, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಂದ ಸಾವಿರಾರು ಕುಟುಂಬಗಳು ಈ ಸಮಯದಲ್ಲಿ ಅನ್ನ ತಿನ್ನುತ್ತಿವೆ.... ಈ ರೀತಿ ಡಿ-ಬಾಸ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ಮಾತನಾಡ್ತಾರೆ & ಹೊಗಳುತ್ತಾರೆ. ಇದೆಲ್ಲವನ್ನೂ ಮೀರಿ ಈಗ, ಡಿ-ಬಾಸ್ 500 ಅಡಿ ಕಟೌಟ್ ಬೆಂಗಳೂರಲ್ಲಿ ನಿಲ್ಲಿಸೋದಕ್ಕೆ ದರ್ಶನ್ ತೂಗುದೀಪ್ ಅಭಿಮಾನಿಗಳ....
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಾಸ್ ಆಗಿ ಒಂದು ಕಾಲದಲ್ಲಿ ಮೆರೆದಿದ್ದ ಡಿ-ಬಾಸ್ ದರ್ಶನ್ ಅವರು, ಇದೀಗ ಕೊಲೆ ಕೇಸ್ನಲ್ಲಿ ನರಕಯಾತನೆ ಅನುಭವಿಸುವ ಸ್ಥಿತಿ ಬಂದಿದೆ. ಇದನ್ನೆಲ್ಲಾ ನೋಡಿ ಅಭಿಮಾನಿಗಳು ಕೂಡ ಕಣ್ಣೀರು ಹಾಕುತ್ತಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇನ್ನಷ್ಟು ಕಂಟಕ ಎದುರಾಗಿದೆ, ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ಆಸ್ಪತ್ರೆಗೆ ಸೇರಿದ್ದು ಬೆನ್ನು ನೋವಿನಿಂದ ನರಳುತ್ತಿದ್ದಾರೆ. ಹೀಗಾಗಿ ನೆಮ್ಮದಿಯಾಗಿ ನಿದ್ದೆ ಕೂಡ ಮಾಡಲು ಆಗುತ್ತಿಲ್ಲ.....

ಡಿ-ಬಾಸ್ 500 ಅಡಿ ಕಟೌಟ್ ಬೆಂಗಳೂರಲ್ಲಿ....
ಮಾನ್ಯ ನ್ಯಾಯಾಲಯ ನೀಡಿರುವ ಮಧ್ಯಂತರ ಜಾಮೀನು ಅಂದ್ರೆ ಬೇಲ್ ಅನ್ನ ದುರ್ಬಳಕೆ ಮಾಡಿಕೊಂಡ ಆರೋಪ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ವಿರುದ್ಧ ಮಾಡಲಾಗಿದ್ದು, ಯಾವ ಕ್ಷಣದಲ್ಲಿ ಬೇಕಾದ್ರು ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಬಳ್ಳಾರಿ ಜೈಲಿಗೆ ಹೋಗುವ ಭಯ ಇದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಮಯದಲ್ಲೇ, ಡಿ-ಬಾಸ್ 500 ಅಡಿ ಕಟೌಟ್ ಬೆಂಗಳೂರಲ್ಲಿ ನಿಲ್ಲಿಸೋದಕ್ಕೆ ದರ್ಶನ್ ತೂಗುದೀಪ್ ಅಭಿಮಾನಿಗಳು ಎಲ್ಲಾ ರೀತಿ ತಯಾರಿ ನಡೆಸಿದ್ದಾರೆ!
ಇಡೀ ಜಗತ್ತಿಗೇ ಸಾರಿ ಹೇಳಬೇಕು ಅಂತಾ...
ಹೌದು, ಬೆಂಗಳೂರಿನ ಮೆಜೆಸ್ಟಿಕ್ ಬಳಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬರೋಬ್ಬರಿ 500 ಅಡಿ ಎತ್ತರದ ಕಟೌಟ್ ನಿಲ್ಲಿಸಬೇಕು ಎಂಬ ಚರ್ಚೆಯನ್ನ ನಡೆಸಲಾಗ್ತಿದೆ. ಅಂದಹಾಗೆ ಈ ರೀತಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈಗ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಭಾರಿ ದೊಡ್ಡ ಮಟ್ಟದ ಚರ್ಚೆ ನಡೆಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ಈಗ ಮಾತನಾಡುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು, ನಮ್ಮ ಬಾಸ್ ಯಾವುದೇ ರೀತಿ ತಪ್ಪು ಮಾಡಿಲ್ಲ. ಹೀಗಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ 500 ಅಡಿ ಎತ್ತರ ಕಟೌಟ್ ನಿಲ್ಲಿಸಬೇಕು. ಈ ಮೂಲಕ, ಇಡೀ ಜಗತ್ತಿಗೇ ಅವರು ತಪ್ಪು ಮಾಡಿಲ್ಲ ಎಂಬುದನ್ನು ಸಾರಿ ಸಾರಿ ಹೇಳಬೇಕು ಅಂತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು.
ಕೋಟಿ ಕೋಟಿ ಅಭಿಮಾನಿಗಳ ಪ್ರಾರ್ಥನೆ!
ಒಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ವಿಲವಿಲ ಒದ್ದಾಡುತ್ತಿರುವ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ಎಲ್ಲಾ ಸಂಕಷ್ಟಗಳನ್ನ ಎದುರಿಸಿ ಗೆದ್ದು ಹೊರಗೆ ಬರಲಿ ಅನ್ನೋದು ಅಭಿಮಾನಿಗಳ ಆಶಯ. ಇದೇ ಕಾರಣಕ್ಕೆ ಕೋಟಿ ಕೋಟಿ ಅಭಿಮಾನಿಗಳು ಇದೀಗ ಪ್ರಾರ್ಥನೆ ಮಾಡುತ್ತಿದ್ದಾರೆ.












Click it and Unblock the Notifications