Darshan Thoogudeepa: ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್ ಮುನಿರತ್ನ ಸಾಕಿದ್ದ ನಾಯಿ? ಹಿಂಗೆ ಹೇಳಿ...

ಬಳ್ಳಾರಿ ಜೈಲಲ್ಲಿ ದರ್ಶನ್ ತೂಗುದೀಪ್ ಇದೀಗ ಕೊಲೆ ಆರೋಪ ಹೊತ್ತು ವಿಲವಿಲ ಒದ್ದಾಟ ನಡೆಸುವ ಸ್ಥಿತಿ ನಿರ್ಮಾಣ ಆಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ತಪ್ಪೇ ಇಲ್ಲ, ರೇಣುಕಾಸ್ವಾಮಿ ಕೊಲೆ ಮಾಡಿರುವುದು ದರ್ಶನ್ ತೂಗುದೀಪ್ ಅಲ್ಲವೇ ಅಲ್ಲ. ಹೀಗಿದ್ದರೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಜೈಲಿಗೆ ಕಳುಹಿಸಿದ್ದಾರೆ ಅಂತಾ ಈಗ ಅಭಿಮಾನಿಗಳು ಅಳುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ, ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್ ಮುನಿರತ್ನ ಸಾಕಿದ್ದ ನಾಯಿ? ಹಿಂಗೆ ಹೇಳಿ...

ದರ್ಶನ್ ತೂಗುದೀಪ್ ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಆಗ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದರ್ಶನ್ ತೂಗುದೀಪ್ ಎಂಟ್ರಿ ಕೊಟ್ಟಾಗ ಬೇಕು ಅಂತಾ ಕೆಲವು ಜನರು ದರ್ಶನ್ ತೂಗುದೀಪ್ ಅವರನ್ನ ತುಳಿದರು. ಹೀಗೆ ದರ್ಶನ್ ತೂಗುದೀಪ್ ಅವರನ್ನು ಬೇಕು ಅಂತಲೇ ಕಾಟ ಕೊಟ್ಟು ಓಡಿಸಲು ನೋಡಿದರು. ಇದೆಲ್ಲವನ್ನೂ ಫೇಸ್ ಮಾಡಿ ಈ ಹಂತಕ್ಕೆ ಬಂದು ನಿಲ್ಲಲು ದರ್ಶನ್ ತೂಗುದೀಪ್ ರಕ್ತ ಹರಿಸಿದ್ದಾರೆ. ಲೈಟ್ ಬಾಯ್ ಟು ಬಾಕ್ಸ್ ಆಫಿಸ್ ಸುಲ್ತಾನ್ ಆಗುವ ತನಕ ದರ್ಶನ್ ತೂಗುದೀಪ್ ಸಾಕಷ್ಟು ಮಣ್ಣು ಹೊತ್ತಿದ್ದಾರೆ. ಅರೆರೆ ಇದು ನಾವು ಹೇಳುತ್ತಿರುವ ಮಾತು ಅಲ್ಲ, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈ ರೀತಿ ತಮ್ಮ ನೆಚ್ಚಿನ ನಟ ದರ್ಶನ್ ತೂಗುದೀಪ್ ಸಿನಿಮಾ ರಂಗಕ್ಕೆ ಬಂದ ಬಗ್ಗೆ ಮಾತಾಡುತ್ತಾರೆ. ಇಂತಹ ಸಮಯದಲ್ಲೇ, ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್ ಮುನಿರತ್ನ ಸಾಕಿದ್ದ ನಾಯಿ? ಹಿಂಗೆ ಹೇಳಿ...

Darshan Thoogudeepa And Munirathna Naidu Friendship History Explained

ದರ್ಶನ್ ತೂಗುದೀಪ್ ಮುನಿರತ್ನ ಸಾಕಿದ್ದ...

ಬಳ್ಳಾರಿ ಜೈಲಿನಲ್ಲಿ ನರಳುತ್ತಿರುವ ದರ್ಶನ್ ತೂಗುದೀಪ್ ಅವರನ್ನು ಇದೀಗ ಜಾಮೀನ ಮೇಲೆ ರಿಲೀಸ್ ಮಾಡಿಕೊಂಡು ಹೊರಗೆ ಕರೆತರಲು ಪ್ರಯತ್ನ ನಡೆಯುತ್ತಿದೆ. ಆದ್ರೆ ಸದ್ಯಕ್ಕೆ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಗುತ್ತಿಲ್ಲ. ಇಂತಹ ಸಮಯದಲ್ಲೇ ಸ್ಫೋಟಕ ಆರೋಪ ಒಂದು ಕೇಳಿಬಂದಿದೆ. ರೇಣುಕಾಸ್ವಾಮಿಯನ್ನು ಹೊಡೆದು ಸಾಯಿಸುವ ಉದ್ದೇಶ ದರ್ಶನ್‌ ತೂಗುದೀಪ್ ಅವರಿಗೆ ಇರಲಿಲ್ಲ ಅನಿಸುತ್ತದೆ. ಆದ್ರೆ ಶಾಸಕ ಮುನಿರತ್ನ ಅಕ್ಕನ ಮಗ ದೀಪುಗೆ ಕೊಲೆಯನ್ನ ಮಾಡಿ, ಅದನ್ನ ದರ್ಶನ್ ತೂಗುದೀಪ್ ತಲೆಗೆ ಕಟ್ಟಬೇಕು ಎನ್ನುವ ಆಲೋಚನೆ ಇತ್ತೆಂದು ನಮಗೆ ಅನ್ನಿಸಿದೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ ಲಾಯರ್.

ಅಲ್ಲದೆ, ದರ್ಶನ್‌ಗೂ & ಮುನಿರತ್ನಗೂ ಏನು ವೈಷಮ್ಯ ಇತ್ತೋ ಗೊತ್ತಿಲ್ಲ. ದರ್ಶನ್ ಮೇಲೆ ಮುನಿರತ್ನಗೆ ಯಾಕೆ ಕೋಪ ಅಂತಾ ಕೂಡ ನಮಗೆ ಗೊತ್ತಿಲ್ಲ. ಆದರೆ ಮಂಡ್ಯದಲ್ಲಿ ಲೋಕಸಭೆ ಚುನಾವಣೆಗೆ ಕುಮಾರಸ್ವಾಮಿ ಸ್ಪರ್ಧಿಸಿದ್ದಾಗ ಸ್ಟಾರ್ ಚಂದ್ರು ಪರವಾಗಿ ಪ್ರಚಾರಕ್ಕೆ ಹೋಗಬೇಡ ಅಂತಾನೇ ದರ್ಶನ್‌ಗೆ ಮುನಿರತ್ನ ಹೇಳಿದ್ದರಂತೆ. ಹೀಗಿದ್ದರೂ ಮುನಿರತ್ನ ಮಾತನ್ನ ಕೇಳದೇ ದರ್ಶನ್ ತೂಗುದೀಪ್ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಿ ಬಂದರು. ಆ ನಂತರ ದರ್ಶನ್ ಅವರ ಬಗ್ಗೆ ಮುನಿರತ್ನ ಯಾರ ಬಳಿಯೋ ಮಾತನಾಡುವಾಗ, 'ನಾನು ಸಾಕಿದ ನಾಯಿ, ನನಗೆ ಕಚ್ಚುವ ರೀತಿ ಆಗಿದೆ' ಅಂತಾ ಹೇಳಿದ್ದರಂತೆ ಎಂದು ಲಾಯರ್ ಜಗದೀಶ್ ಆರೋಪ ಮಾಡಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ.

ಲಾಯರ್ ಜಗದೀಶ್ ಹೇಳಿಕೆ ವೈರಲ್

ಇದೇ ವಿಡಿಯೋದಲ್ಲಿ ಲಾಯರ್ ಜಗದೀಶ್ ಅವರು, ಇದನ್ನು ನಾನು ನೋಡಿಲ್ಲ. ಯಾರೋ ಹೇಳಿದ್ದನ್ನ ಕೇಳಿದ್ದೇನೆ. ಇದು ಸತ್ಯ ಕೂಡ ಇರಬಹುದು, ಸುಳ್ಳು ಕೂಡ ಇರಬಹುದು ಅಂತಾ ಕೂಡ ಹೇಳಿದ್ದಾರೆ. ಅಲ್ಲದೆ ತಮ್ಮ ಮಾತನ್ನು ಮುಂದುವರಿಸಿರುವ ವಕೀಲರಾದ ಜಗದೀಶ್, ಮುನಿರತ್ನ ಆ ರೀತಿ ಹೇಳಿರುವ ಸಾಧ್ಯತೆ ಇದೆ. ಯಾಕಪ್ಪಾ ಅಂದರೆ ದುಹಂಕಾರ ಜಾಸ್ತಿ ಎಂದು ಲಾಯರ್ ಜಗದೀಶ್ ಅವರು ಮಾಧ್ಯಮಗಳ ಮುಂದೆ ನೀಡಿದ್ದ ಹೇಳಿಕೆ ಫುಲ್ ವೈರಲ್ ಆಗ್ತಿದೆ.

ದರ್ಶನ್ ತೂಗುದೀಪ್ ದೂರ.. ದೂರ..?

ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ್ ನಡುವೆ 10 ವರ್ಷಗಳ ಸುದೀರ್ಘ ಸಂಬಂಧವಿದೆ. ದರ್ಶನ್ ತೂಗುದೀಪ್‌ಗೂ ಮೊದಲು ಪವಿತ್ರಾ ಗೌಡ ಒಂದು ಮದುವೆ ಕೂಡ ಆಗಿದ್ದರಂತೆ. ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಸಂಬಂಧ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ನಟ ದರ್ಶನ್ ತೂಗುದೀಪ್ ವಿರುದ್ಧವೇ ಪವಿತ್ರಾ ಗೌಡ ಆರೋಪ ಮಾಡಿದ್ರು ಎಂಬ ಆರೋಪವು ಕೇಳಿಬಂತು. ಪೊಲೀಸರ ಎದುರು ದರ್ಶನ್ ತೂಗುದೀಪ್ ವಿರುದ್ಧ ಪವಿತ್ರಾ ಗೌಡ ಆರೋಪ ಮಾಡಿದ್ದರಂತೆ. ಹೀಗಾಗಿ ಇಬ್ಬರೂ ಈಗ ದೂರವಾಗಲು ಇಚ್ಛಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+