Bigg Boss: ಬಿಗ್ಬಾಸ್ ವಿನ್ನರ್ ಕಾರ್ತಿಕ್ಗೆ ನಿಜವಾಗಿ ಬಂದ ಹಣವೆಷ್ಟು? ಮದುವೆ ಬಗ್ಗೆ ಹೇಳಿದ್ದೇನು?
ಬಿಗ್ಬಾಸ್ ಕನ್ನಡ ಸೀಸನ್ 12ಕ್ಕೆ ಇನ್ನು ಕೆಲವೇ ದಿನ ಬಾಕಿ ಇದೆ. ಕಳೆದ ಸೀಸನ್ನಲ್ಲಿ ಹನುಮಂತ ಬಿಗ್ಬಾಸ್ ಟ್ರೋಫಿ ಗೆದ್ದಿದ್ದರು. ಸೀಸನ್-10ರ ವಿನ್ನರ್ ಆಗಿ ಕಿರುತೆರೆ ನಟ ಕಾರ್ತಿಕ್ ಮಹೇಶ್ ವಿನ್ ಆಗಿದ್ದರು. ಅವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಸಹ ಘೋಷಿಸಲಾಗಿತ್ತು. ಇದರಲ್ಲಿ ಕಾರ್ತಿಕ್ ಅವರಿಗೆ ನಿಜವಾಗಿ ಕೈಸೇರಿದ ಹಣವೆಷ್ಟು? ಎಷ್ಟೆಲ್ಲ ಹಣ ಕಡಿತವಾಗಿ ಕೊನೆಗೆ ಎಷ್ಟು ಕೊಡುತ್ತಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ ತಮ್ಮ ವಿಚಾರದ ಬಗ್ಗೆಯೂ ಕಾರ್ತಿಕ್ ಬಾಯ್ಬಿಟ್ಟಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್-10ರಲ್ಲಿ ಕಾರ್ತಿಕ್ ಮಹೇಶ್ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ನಿರೀಕ್ಷೆಯಂತೆ ಆ ಸೀಸನ್ನಲ್ಲಿ ಟ್ರೋಫಿ ಕೂಡ ಗೆದ್ದಿದ್ದರು. ಪ್ರತಿ ಸೀಸನ್ನಲ್ಲೂ ಬಿಗ್ಬಾಸ್ ವಿಜೇತರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಆದರೆ ಈ ಪೂರ್ತಿ ಹಣ ವಿಜೇತರ ಕೈಸೇರೋದಿಲ್ಲ. ಸರ್ಕಾರದ ನಿಯಮಾನುಸಾರ ತೆರಿಗೆ ಕಡಿತವಾಗಿ ಬಾಕಿ ಹಣವಷ್ಟೇ ನೀಡಲಾಗುತ್ತದೆ. ಈ ಬಗ್ಗೆ ಕಾರ್ತಿಕ್ ಮಹೇಶ್ ಮಹತ್ವದ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ಸರ್ಕಾರದ ನಿಯಮಗಳ ಪ್ರಕಾರ ಬಿಗ್ಬಾಸ್ನಲ್ಲಿ ಗೆಲ್ಲುವ ಹಣದಲ್ಲಿ 30 ಪರ್ಸೆಂಟ್ ತೆರಿಗೆ ಹಾಕ್ತಾರೆ. ಬಾಕಿ ಹಣ ಬಂದೇ ಬರುತ್ತೆ. ಅದರೊಂದಿಗೆ ನಾನು ಒಂದು ಬಿಸಿನೆಸ್ ಕೂಡ ಶುರು ಮಾಡಿದ್ದೀನಿ. ಜೀವನಕ್ಕಾಗಿ ಏನಾದ್ರೂ ಮಾಡಬೇಕಲ್ಲ? ಹಾಗಾಗಿ ಕೆಲಸಗಳು ನಡೆದುಕೊಂಡು ಹೋಗ್ತಿವೆ. ನೀರು ಹರಿಯುತ್ತಾ ಇರ್ಬೇಕು, ಜೀವನ ಕೂಡ ಸಾಗುತ್ತಾ ಇರ್ಬೇಕು ಎಂದಿದ್ದಾರೆ ಕಾರ್ತಿಕ್.
ಕಾರ್ತಿಕ್ ಮದುವೆ ಯಾವಾಗ?
ಕಾರ್ತಿಕ್ ಅವರ ತಾಯಿ ಮಗನ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮಗ ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾನೆ. ಮದುವೆ ಖಂಡಿತವಾಗಿ ಮಾಡಲೇಬೇಕು. ಈಗ ಸಿನಿಮಾ ಮಾಡ್ತಿರೋದ್ರಿಂದ ಅದು ಮುಗಿದ ಕೂಡಲೇ ಮದುವೆ ಖಂಡಿತ ಮಾಡೋಣ, ಅವನೂ ಮದುವೆಗೆ ಒಪ್ಪಿದ್ದಾನೆ ಎಂದಿದ್ದಾರೆ. ಮದುವೆ ಹೇಗಿದ್ರೂ ಆಗ್ತಾನೆ, ಅವನಿಗೆ ಇನ್ನೂ ದೊಡ್ಡ ಸಕ್ಸಸ್ ಸಿಗಬೇಕು ಎಂದು ಕುಟುಂಬಸ್ಥರು ಆಶಿಸಿದ್ದಾರೆ.
ನಾನು ಮದುವೆ ಆಗಬೇಕು ಅನ್ನೋದು ಕುಟುಂಬದವರ ಆಸೆ. ಆದರೆ ಸಿನಿಮಾ ಮಾಡಬೇಕು, ಅದು ರಿಲೀಸ್ ಆಗಬೇಕು ಅನ್ನೋದು ನನ್ನ ಆಸೆ. ಹಾಗಾಗಿ ಇದೆಲ್ಲ ಮುಗಿದ ಮೇಲೆ ಮದುವೆ ಬಗ್ಗೆ ಮಾತನಾಡೋಣ ಅಂತ ಹೇಳಿದ್ದೀನಿ. ಮನೆಯವರು ಕೂಡ ಆ ದಿನಕ್ಕಾಗಿ ಕಾಯುತ್ತಿದ್ದಾರೆ ಎಂದು ಕಾರ್ತಿಕ್ ತಮ್ಮ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ. ಬ್ಯಾಚುಲರ್ ಆಗಿರುವ ಕಾರ್ತಿಕ್ ಕಿರುತೆರೆಯಲ್ಲಿ ಮಿಂಚಿದ್ದರು. ಇದೀಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಹೀರೋ ಆಗಿ ಸೌಂಡ್ ಮಾಡಲು ಮುಂದಾಗಿದ್ದಾರೆ. ಆದಷ್ಟು ಬೇಗ ಕಾರ್ತಿಕ್ ಮದುವೆ ನೆರವೇರಲಿ ಅನ್ನೋದು ಅವರ ಅಭಿಮಾನಿಗಳ ಆಸೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications