ಚಾನೆಲ್ ಮನೆ ಮಗಳಾದ್ರೆ ಬಿಗ್ಬಾಸ್ನಲ್ಲಿ ಉಳಿಯಲ್ಲ, ಜನರ ಮನೆ ಮಗಳಾಗಬೇಕು: ಸ್ಪಂದನಾ
ಬಿಗ್ಬಾಸ್ ಮನೆಯಿಂದ ಈ ವಾರ ಸ್ಪಂದನಾ ಸೋಮಣ್ಣ ಎಲಿಮಿನೇಟ್ ಆಗಿ ಹೊರಬಂದರು. ಸತತ 99 ದಿನಗಳ ಕಾಲ ಸ್ಪಂದನಾ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಟ್ರೋಲ್ಗಳ ಸುರಿಮಳೆಯೇ ಹರಿದಿತ್ತು. 'ಸ್ಪಂದನಾ ಚಾನಲ್ನ ಮನೆ ಮಗಳು, ಅದಕ್ಕೇ ಉತ್ತಮವಾಗಿ ಆಡದಿದ್ದರೂ ಬಿಗ್ಬಾಸ್ನಲ್ಲಿ ಇನ್ನೂ ಉಳಿದಿದ್ದಾರೆ' ಎಂದು ಗೇಲಿ ಮಾಡಿದ್ದರು. 'ಸ್ಪಂದನಾ ಅದೃಷ್ಟದಿಂದ ಸೇಫ್ ಆಗಿದ್ದಾರೆ' ಎಂದಿದ್ದರು. ಈ ಎಲ್ಲ ಟೀಕೆಗಳಿಗೆ ಸ್ಪಂದನಾ ಖಡಕ್ ಉತ್ತರ ಕೊಟ್ಟಿದ್ದಾರೆ.
'ಇಲ್ಲಿ ಯಾರೂ ಮನೆ ಮಗಳು, ಸೊಸೆ, ಮಗ ಅನ್ನೋ ಕಾರಣಕ್ಕೆ ಉಳಿದುಕೊಳ್ಳಲು ಆಗಲ್ಲ. ನಾವೆಲ್ಲ ಜನರ ಮನೆ ಮಗಳಾಗಬೇಕು. ಚಾನಲ್ ಮನೆ ಮಗಳಾದ್ರೆ ಅಲ್ಲಿ ಉಳಿಯಲು ಸಾಧ್ಯವೇ ಇಲ್ಲ. ಜಾಹ್ನವಿ ಅವರಿಗೂ ಆ ಅಭಿಪ್ರಾಯ ಬದಲಾಯಿತು ಅನಿಸುತ್ತೆ. ಟಾಸ್ಕ್ವೊಂದರಲ್ಲಿ ಅವರೇ ನನಗೆ ವೋಟ್ ಮಾಡಿ, ಒಂದಷ್ಟು ಒಳ್ಳೆಯ ಮಾತುಗಳನ್ನ ಹೇಳಿದ್ರು' ಎಂದಿದ್ದಾರೆ.

ಜಾಹ್ನವಿ ಕೂಡ ಅದೇ ಮನೆ ಮಗಳು
'ಸ್ಪಂದನಾ ಸಹಸ್ಪರ್ಧಿಯಾಗಿದ್ದ ಜಾಹ್ನವಿ ಕೂಡ ಇದೇ ಮಾತನ್ನಾಡಿದ್ದರು. ಚಾನಲ್ನ ಮನೆ ಮಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಸ್ಪಂದನಾ, ನನಗೆ ನಗು ಬರುತ್ತೆ, ಹಾಗೆ ನೋಡುವುದಾದ್ರೆ ಜಾಹ್ನವಿ ಕೂಡ ಇದೇ ಮನೆಯ ಮಗಳು. ಅವರು ಈ ಈ ರೀತಿಯ ಹೇಳಿಕೆ ಕೊಟ್ಟಿದ್ದು ನಿಜಕ್ಕೂ ನನಗೆ ಶಾಕಿಂಗ್' ಎಂದಿದ್ದಾರೆ.
'ಬಿಗ್ಬಾಸ್ ಮನೆಯಲ್ಲಿ ನಾನು ತುಂಬಾ ತಾಳ್ಮೆಯಿಂದ ಇದ್ದೆ. ಅಲ್ಲಿ ಒಳ್ಳೆಯ ಸ್ನೇಹಿತರು ಸಿಕ್ಕರು. ನಾನು ಹೊರಗಡೆ ಬಂದಾಗಲೂ ನನ್ನ ವ್ಯಕ್ತಿತ್ವ ಹಾಗೇ ಉಳಿಸಿಕೊಂಡೆ ಎಂದು ತಂದೆ ತಾಯಿ ಕೂಡ ಹೆಮ್ಮೆಪಟ್ಟರು. ಸೋಷಿಯಲ್ ಮೀಡಿಯಾದಲ್ಲೂ ಅನೇಕರು ನನಗೆ ಇದೇ ಕಾಮೆಂಟ್ ಮಾಡಿದ್ದಾರೆ. ಇದರ ಬಗ್ಗೆ ಖುಷಿ ಇದೆ' ಎಂದಿದ್ದಾರೆ.
ಮದುವೆ ಗುಟ್ಟು ಬಿಚ್ಚಿಟ್ಟ ಸ್ಪಂದನಾ
ತಮ್ಮ ಮದುವೆ ಬಗ್ಗೆಯೂ ಸ್ಪಂದನಾ ಪ್ರತಿಕ್ರಿಯಿಸಿದ್ದಾರೆ. 'ಇನ್ನೂ ಮದುವೆ ಯಾವಾಗ ಎಂದು ಗೊತ್ತಿಲ್ಲ. ನನಗೆ ಇಷ್ಟೊಂದು ದೊಡ್ಡ ವೇದಿಕೆ ಸಿಕ್ಕಿದೆ. ಮುಂದೆ ಏನೆಲ್ಲ ಅವಕಾಶಗಳು ಸಿಗುತ್ತೋ ನೋಡಬೇಕು. ನಾನು ಅದಕ್ಕಾಗಿ ಕಾಯುತ್ತಿದ್ದೇನೆ. ಹಾಗಾಗಿ ಮದುವೆ ಬಗ್ಗೆ ಸದ್ಯಕ್ಕೆ ನನಗೆ ಏನೂ ಗೊತ್ತಿಲ್ಲ ಎಂದಿದ್ದಾರೆ. ನಾನು ಮದುವೆಯಾಗುವ ಹುಡುಗ ಮುಖ್ಯವಾಗಿ ನನ್ನ ತಂದೆ ತಾಯಿಯನ್ನೂ ಅವರ ಮನೆಯವರಷ್ಟೇ ಇಷ್ಟಪಡಬೇಕು. ನಾನು ಇಂಡಸ್ಟ್ರಿಯಲ್ಲಿರುವುದರಿಂದ ಸಪೋರ್ಟ್ ಮಾಡುವ ಹುಡುಗ ಬೇಕು. ನೋಡಲು ಚೆನ್ನಾಗಿರಬೇಕು, ತಮಾಷೆ ಮಾಡುತ್ತಿರಬೇಕು. ತುಂಬಾ ಸೀರಿಯಸ್ ಆಗಿ ಇರೋಕಾಗಲ್ಲ, ಹಾಗಾಗಿ ನಗಬೇಕು' ಎಂದೂ ಕ್ವಾಲಿಟಿಗಳನ್ನು ಹೇಳಿಕೊಂಡಿದ್ದಾರೆ.
ಕಳೆದ ವಾರ ಎಲಿಮಿನೇಟ್ ಆಗಿದ್ದ ಮಾಳು ಬಿಗ್ಬಾಸ್ನಿಂದ ಹೊರಬಂದು ಅಸಮಾಧಾನ ಹೊರಹಾಕಿದ್ರು. ಬೇರೆ ಯಾರೇ ಕಪ್ ಗೆದ್ದರೂ ಒಪ್ಪಲ್ಲ ಎಂದಿದ್ದರು. ಈ ವಿಚಾರ ತಿಳಿದು ಸ್ಪಂದನಾ ಶಾಕ್ ಆಗಿದ್ದಾರೆ. 'ಮಾಳು ಹೀಗೆ ಹೇಳಿದ್ದಾರೆ ಅನ್ನೋದು ನನಗೆ ಸರ್ಪ್ರೈಸ್ ಆಗಿದೆ. ಮಾಳುಗೆ ಈ ಮೊದಲೇ ಎಲಿಮಿನೇಷನ್ ಭಯ ಇತ್ತು, ಅವರು ಎಲಿಮಿನೇಟ್ ಆಗುವುದ್ದಕ್ಕಿಂತ ಒಂದು ವಾರದ ಹಿಂದೆಯೇ ಇದರ ಬಗ್ಗೆ ಮಾತನಾಡಿದ್ರು. ಈ ವಾರ ನಾಮಿನೇಟ್ ಆಗಿದ್ದೇನೆ. ನಾನೇ ಹೊರಗೆ ಹೋಗೋದು ಅಂತ ಅನಿಸುತ್ತಿದೆ ಎಂದು ನನ್ನ ಬಳಿ ಹೇಳಿದ್ರು. ಮಾಳು ತುಂಬಾ ಸ್ಟ್ರಾಂಗ್, ಆದರೆ ತಮ್ಮ ಜನಪ್ರಿಯತೆ ಸರಿಯಾಗಿ ಬಳಸಿಕೊಂಡಿಲ್ಲ' ಎಂದು ಸ್ಪಂದನಾ ಹೇಳಿದ್ದಾರೆ.
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications