Bigg Boss 11: ವೈರಲ್ ಆಗ್ತಿದೆ ತುಕಾಲಿ ಸಂತು ಪತ್ನಿ ಮಾನಸಾ "ಪ್ರಶ್ನೆ ಮಾತು"
ಬಿಗ್ಬಾಸ್ ಸೀಸನ್ 11 ಶುರುವಾಗಿದ್ದು, ಈ ಬಾರಿ ಪ್ರಾರಂಭದಿಂದಲೇ ಬಿಗ್ಬಾಸ್ ಕಾವು ಹೆಚ್ಚಾಗಿದೆ. ಘಟಾನುಘಟಿ ಸ್ಪರ್ಧಿಗಳೇ ಈ ಬಾರಿ ಬಿಗ್ಬಾಸ್ನಲ್ಲಿದ್ದು, ಈ ಬಾರಿಯ ಸೀಸನ್ ಕುತೂಹಲ ಮೂಡಿಸಿದೆ. ಸೀಸನ್ ಪ್ರಾರಂಭವಾಗಿ ಮೊದಲ ವಾರವೇ ಬಿಗ್ಬಾಸ್ ಸ್ಪರ್ಧಿಗಳ ನಡುವೆ ಟಾಕ್ಫೈಟ್ ಜೋರಾಗಿದೆ. ನಾಮಿನೇಷನ್ ವಿಚಾರ ಜೋರಾಗಿದೆ.
ಮೊದಲವಾರ ನಾಮಿನೇಷನ್ ನಡೆಯುತ್ತಿದ್ದು, ಬಹುತೇಕ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈ ನಡುವೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಗೂ ಬಿಗ್ಬಾಸ್ ಸೀಸನ್ 10 ಸ್ಪರ್ಧಿ ತುಕಾಲಿ ಸಂತು ಅವರ ಪತ್ನಿ ಮಾನಸಾ ಅವರ ಮಾತು ವೈರಲ್ ಆಗಿದೆ.

ಮಾನಸಾ ಅವರು ಬಿಗ್ಬಾಸ್ 10ನೇ ಸೀಸನ್ನಿಂದಲೇ ಕನ್ನಡಿಗರ ಮನೆಮಾತಾಗಿದ್ದರು. ಬಿಗ್ಬಾಸ್ 10ರ ಸ್ಪರ್ಧಿಯಾಗಿದ್ದ ತುಕಾಲಿ ಸಂತು ಅವರನ್ನು ಕುಟುಂಬದವರು ಭೇಟಿ ಮಾಡುವುದಕ್ಕೆ ಅವಕಾಶ ನೀಡಲಾಗಿತ್ತು. ಆಗ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಮಾನಸಾ ಅವರು ಅವರ ಸೆನ್ಸ್ ಆಫ್ ಹ್ಯೂಮರ್ನಿಂದಲೇ ಹೆಚ್ಚು ಫೇಮಸ್ ಆಗಿದ್ದರು.
ಕಳೆದ ಬಾರಿಯೇ ಜನ ಬಿಗ್ಬಾಸ್ ಸೀಸನ್ 11ರಲ್ಲಿ ಮನಸಾ ಅವರು ಇರಬೇಕು ಎಂದು ಒತ್ತಾಯ ಮಾಡಿದ್ದರು. ಅದರಂತೆ ಈ ಬಾರಿ ದೊಡ್ಮನೆಗೆ ಮನಸಾ ಅವರ ಎಂಟ್ರಿಯಾಗಿದೆ. ಎಲ್ಲ ಸ್ಪರ್ಧಿಗಳಂತೆ ಅವರು ಸಹ ಈಗ ಉತ್ಸಾಹದಿಂದ ಬಿಗ್ಬಾಸ್ನಲ್ಲಿ ಇದ್ದಾರೆ. ಈ ನಡುವೆ ಅವರ ಕನ್ನಡಾಭಿಮಾನದ ಮಾತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಮನಸಾ ಹೇಳಿದ್ದೇನು: ಬಿಗ್ಬಾಸ್ ಸ್ಪರ್ಧಿಯಾಗಿರುವ ಮಾನಸಾ ಅವರು, ಒಂದು ಪದ ಇಂಗ್ಲಿಷ್ನಲ್ಲಿ ಅರ್ಥವಾಗಲಿಲ್ಲ ಎಂದರೂ, 30 ಸಲ ಕೇಳು ಅಂತ ನನಗೆ ಹೇಳಿ ಕಳಿಸಿದ್ದಾರೆ. ನಾನು ಕೇಳ್ತೀನಿ ನಂಗೆ ಅರ್ಥ ಆಗಲ್ಲ. ಇಂಗ್ಲಿಷ್ ಅಷ್ಟೇ ಅಲ್ಲ ನನಗೆ ಕನ್ನಡದಲ್ಲಿ ಅರ್ಥವಾಗಲಿಲ್ಲ ಎಂದರೂ ನಾನು ಕೇಳುತ್ತೇನೆ ಎಂದು ಹೇಳಿದ್ದಾರೆ ಇದೀಗ ಮಾನಸ ಅವರ ಮಾತು ಸಾಕಷ್ಟು ವೈರಲ್ ಆಗಿದೆ.
ಕಿರುತೆರೆಯಲ್ಲಿ ಮಿಂಚಿದ್ದ ಮಾನಸಾ: ಈ ಬಾರಿಯ ಬಿಗ್ಬಾಸ್ 11ನೇ ಸೀಸನ್ನಲ್ಲಿ ಅವಕಾಶ ಪಡೆದಿರುವ ಮಾನಸಾ ಅವರು, ಕಳೆದ ಬಾರಿಯೂ ಪ್ರೇಕ್ಷಕರನ್ನು ರಂಜಿಸಿದ್ದರು. ಕಳೆದ ವರ್ಷ ಅವರ ಪತಿ ತುಕಾಲಿ ಸಂತು ಅವರು ಬಿಗ್ಬಾಸ್ ಮನೆಯಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರೆ, ಈ ಬಾರಿ ಅವರ ಪತ್ನಿ ಮಾನಸಾ ಅವರ ಸರದಿ ಎನ್ನುವಂತಾಗಿದೆ.
ಈ ನಡುವೆ ಮಾನಸಾ ಅವರು ಪ್ರಮುಖ ಕಿರುತೆರೆ ಶೋಗಳಲ್ಲಿ ಭಾಗವಹಿಸಿದ್ದರು. ಇಲ್ಲೂ ಸಹ ಅವರಿಗೆ ಒಳ್ಳೆಯ ಪ್ರೋತ್ಸಾಹ ಹಾಗೂ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಕಳೆದ ಬಾರಿ ನೀವು ಬಿಗ್ಬಾಸ್ನಲ್ಲಿ ಸ್ಪರ್ಧೆ ಮಾಡಿದ್ದಿರಿ ಹೀಗಾಗಿ, ಈ ಬಾರಿ ಮಾನಸಾ ಅವರು ಬಿಗ್ಬಾಸ್ಗೆ ಹೋದರೆ ಏನಾದರೂ ಹೇಳಿತ್ತೀರಾ ಎನ್ನುವ ಪ್ರಶ್ನೆಗೆ ಬಿಗ್ಬಾಸ್ ಟಿಪ್ಸ್ ಕೊಟ್ಟು ಆಡುವ ಆಟವಲ್ಲ. ನನಗಿಂತ ನನ್ನ ಹೆಂಡ್ತಿಗೆ ಚೆನ್ನಾಗಿ ಆಟ ಗೊತ್ತು ಅಂತ ಹೇಳಿದ್ದರು ಸಂತು.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications