Bhargavi LLB: 'ಅಮೃತಧಾರೆ' ನಟನೊಂದಿಗೆ 'ಭಾರ್ಗವಿ ಎಲ್ಎಲ್ಬಿ' ಖ್ಯಾತಿಯ ಕಿರುತೆರೆ ನಟಿ ರಾಧಾ ಭಗವತಿ ನಿಶ್ಚಿತಾರ್ಥ
ಕನ್ನಡ ಕಿರುತೆರೆಯ ಜನಪ್ರಿಯ ನಟ ರಾಣವ್ ಮತ್ತು ರಾಧಾ ಭಗವತಿ ಅವರು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕನ್ನಡ ಕಿರುತೆರೆಯ ಇಬ್ಬರು ಪ್ರತಿಭಾವಂತ ಕಲಾವಿದರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಅಮೃತಧಾರೆ' ಖ್ಯಾತಿಯ ರಾಣವ್ ಗೌಡ (ಜೆಡಿ ಪಾತ್ರಧಾರಿ) ಹಾಗೂ ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್ಬಿ' ಖ್ಯಾತಿಯ ರಾಧಾ ಭಗವತಿ ಅವರ ನಿಶ್ಚಿತಾರ್ಥ ಸಂಭ್ರಮದಿಂದ ನೆರವೇರಿದೆ.
ಪ್ರೀತಿ ಚಿಗುರಿದ್ದು ಎಲ್ಲಿ?
ರಾಣವ್ ಮತ್ತು ರಾಧಾ ಅವರ ಪ್ರೇಮಕಥೆ ಶುರುವಾಗಿದ್ದು "ಅಮೃತಧಾರೆ" ಧಾರಾವಾಹಿಯ ಸೆಟ್ನಲ್ಲಿ. ಈ ಹಿಂದೆ ರಾಧಾ ಭಗವತಿ ಅವರು ಇದೇ ಸೀರಿಯಲ್ನಲ್ಲಿ 'ಮಲ್ಲಿ' ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಜೊತೆಯಾಗಿ ನಟಿಸುತ್ತಿದ್ದ ಇಬ್ಬರ ನಡುವೆ ಸ್ನೇಹ ಏರ್ಪಟ್ಟು, ಅದು ಪ್ರೀತಿಯಾಗಿ ಬದಲಾಯಿತು. ನಂತರ ರಾಧಾ ಅವರಿಗೆ ಕಲರ್ಸ್ನ "ಭಾರ್ಗವಿ ಎಲ್ಎಲ್ಬಿ" ಸೀರಿಯಲ್ನಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿದ್ದರಿಂದ ಅವರು "ಅಮೃತಧಾರೆ" ತಂಡದಿಂದ ಹೊರಬಂದಿದ್ದರು.

ಫೋಟೋ ಹಂಚಿಕೊಂಡ ಜೋಡಿ
ತಮ್ಮ ನಿಶ್ಚಿತಾರ್ಥದ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಾಣವ್ ಗೌಡ ಹಾಗೂ ರಾಧಾ "ಫೈನಲಿ" (Finally) ಎಂದು ಬರೆದುಕೊಂಡು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಸಹ ಕಲಾವಿದರು ಈ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಸುರಿಸುತ್ತಿದ್ದಾರೆ.
ಪ್ರಸ್ತುತ ರಾಣವ್ ಗೌಡ ಅವರು 'ಅಮೃತಧಾರೆ'ಯಲ್ಲಿ ಜೆಡಿ ಪಾತ್ರದ ಮೂಲಕ ವಿಲನ್ ಹಾಗೂ ಕಾಮಿಡಿ ಶೇಡ್ಗಳಲ್ಲಿ ಮನೆಮಾತಾಗಿದ್ದಾರೆ. ಇನ್ನೊಂದೆಡೆ ರಾಧಾ ಭಗವತಿ ಅವರು 'ಭಾರ್ಗವಿ ಎಲ್ಎಲ್ಬಿ'ಯಲ್ಲಿ ನ್ಯಾಯವಾದಿ ಭಾರ್ಗವಿಯಾಗಿ ಮಿಂಚುತ್ತಿದ್ದಾರೆ. ತೆರೆ ಮೇಲೆ ಜೊತೆಯಾಗಿ ಮೋಡಿ ಮಾಡಿದ್ದ ಈ ಜೋಡಿ ಈಗ ನಿಜಜೀವನದಲ್ಲೂ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿ ಮತ್ತು ಸಂಭ್ರಮ ತಂದಿದೆ.
"ಅಮೃತಧಾರೆ" ಧಾರಾವಾಹಿಯಲ್ಲಿ ರಾಣವ್ (ಜೆಡಿ) ಮತ್ತು ರಾಧಾ (ಮಲ್ಲಿ) ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಕ್ಯಾಮೆರಾ ಆಫ್ ಆದಾಗ ಇವರಿಬ್ಬರ ನಡುವೆ ಪ್ರೀತಿ ಅರಳುತ್ತಿತ್ತು ಎಂಬುದು ಈಗ ಬಯಲಾಗಿದೆ. ಸೆಟ್ನಲ್ಲಿ ಎಲ್ಲರಿಗೂ ಇವರ ಸ್ನೇಹದ ಬಗ್ಗೆ ತಿಳಿದಿತ್ತಾದರೂ, ಅದು ಮದುವೆಯವರೆಗೆ ಹೋಗುತ್ತದೆ ಎಂದು ಯಾರು ಊಹಿಸಿರಲಿಲ್ಲವಂತೆ!
ರಾಧಾ ಭಗವತಿ ಅವರು 'ಅಮೃತಧಾರೆ'ಯಲ್ಲಿ ಪೋಷಕ ಪಾತ್ರ ಮಾಡುತ್ತಿದ್ದಾಗ ಅವರಿಗೆ ಸಿಕ್ಕ ದೊಡ್ಡ ಅವಕಾಶವೆಂದರೆ 'ಭಾರ್ಗವಿ ಎಲ್ಎಲ್ಬಿ'. ನಾಯಕಿಯಾಗಿ ಬಡ್ತಿ ಸಿಕ್ಕ ಕಾರಣ ಅವರು ಅಮೃತಧಾರೆಯನ್ನು ಬಿಡಬೇಕಾಯಿತು. ವಿಶೇಷವೆಂದರೆ, ರಾಧಾ ಅವರು ಬೇರೆ ವಾಹಿನಿಗೆ ಹೋದರೂ ರಾಣವ್ ಜೊತೆಗಿನ ಸಂಬಂಧ ಮಾತ್ರ ಹಾಗೆಯೇ ಉಳಿಯಿತು. ದೂರವಿದ್ದರೂ ಪ್ರೀತಿ ಗಟ್ಟಿಯಾಯಿತು ಎಂಬುದಕ್ಕೆ ಈ ನಿಶ್ಚಿತಾರ್ಥವೇ ಸಾಕ್ಷಿ.
ರಾಣವ್ ಮತ್ತು ರಾಧಾ ಇಬ್ಬರೂ ತಮ್ಮ ಪ್ರೀತಿಯ ವಿಚಾರವನ್ನು ಬಹಳ ಗೌಪ್ಯವಾಗಿ ಇಟ್ಟಿದ್ದರು. ಯಾವುದೇ ಹಂತದಲ್ಲೂ ಅವರು ಡೇಟಿಂಗ್ ಮಾಡುತ್ತಿರುವ ಬಗ್ಗೆ ಸುಳಿವು ನೀಡಿರಲಿಲ್ಲ. ದಿಢೀರನೆ ನಿಶ್ಚಿತಾರ್ಥದ ಫೋಟೋಗಳನ್ನು ಹಾಕುವ ಮೂಲಕ ಇಡೀ ಕಿರುತೆರೆ ಲೋಕಕ್ಕೆ 'ಸಪ್ರೈಸ್' ನೀಡಿದ್ದಾರೆ. ಇಬ್ಬರೂ ಪ್ರತಿಭಾವಂತರು, ಕಿರುತೆರೆಯ "ಪವರ್ ಕಪಲ್" ಎಂದು ಕರೆಯುತ್ತಿದ್ದಾರೆ. ಸದ್ಯಕ್ಕೆ ಇಬ್ಬರೂ ತಮ್ಮ ತಮ್ಮ ಧಾರಾವಾಹಿಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ ಶೀಘ್ರದಲ್ಲೇ ಮದುವೆಯು ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆಯಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications