ಸರ್ಕಾರಿ ಬಸ್ ಓಡಿಸಿದ ನಟ ಬಾಲಯ್ಯ, ಆರಾಟ & ಕಿರುಚಾಟದ ವಿಡಿಯೋ ವೈರಲ್! Viral Video
Viral Video: ನಟ ಹಾಗೂ ರಾಜಕಾರಣಿ ಬಾಲಯ್ಯ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನ ಈ ವಿಡಿಯೋ ನೋಡಿ ಖುಷಿಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ವೈರಲ್ ಆಗಿರುವ ಟ್ರಾವೆಲ್ ವಿಡಿಯೋದಲ್ಲಿ ಇದೂ ಒಂದು ಅಂತಾ ನೆಟ್ಟಿಗರು ಹೇಳುತ್ತಿದ್ದಾರೆ. ನಟ ಬಾಲಯ್ಯ ಅವರ ಕ್ರೇಜ್ ಎರಡು ತೆಲುಗು ರಾಜ್ಯಗಳಲ್ಲಿ ಸಿಕ್ಕಾಪಟ್ಟೆ ಇದೆ. ಅಲ್ಲದೇ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಅವರ ಅಭಿಮಾನಿಗಳು ಇದ್ದಾರೆ. ಇದೀಗ ಅವರು ಸರ್ಕಾರಿ ಬಸ್ ಚಾಲನೆ ಮಾಡಿದ್ದು ಆ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ನಟ ಬಾಲಯ್ಯ ಕೇವಲ ನಟ ಮಾತ್ರವಲ್ಲ. ರಾಜಕಾರಣಿ ಹಾಗೂ ನಿರ್ಮಾಪಕರೂ ಹೌದು. ಜೈ ಬಾಲಯ್ಯ.. ಜೈ ಜೈ ಬಾಲಯ್ಯ ಎಂದು ಅವರ ಅಭಿಮಾನಿಗಳು ಸದಾ ಆರಾಧಿಸುವ ಡೈಲಾಗ್ ಈ ರೀತಿ ಮಾಸ್ ಮೆಚ್ಚುಗೆ ಇರುವ ನಟ ಬಾಲಯ್ಯ ಅವರು ಸರ್ಕಾರಿ ಬಸ್ ಚಾಲನೆ ಮಾಡಿ.. ಹೆಂಗಿದೆ ಅಂತಾ ಕೇಳಿದ್ದಾರೆ. ಆದರೆ, ಅವರ ಕೋಪ ಹಾಗೂ ಆಕ್ರೋಶವನ್ನು ತಿಳಿದುಕೊಂಡಿರುವವರು ಬಾಲಯ್ಯ ಗಾಡಿ ಓಡಿಸುವಾಗ ಭಯದಿಂದಲೇ ಪಕ್ಕ ಕುಳಿತಿರುವುದು ಸಹ ವಿಡಿಯೋದಲ್ಲಿ ಇದೆ.

ಬಾಲಯ್ಯ ಅವರು ಹಿಂದೂಪುರದ ಶಾಸಕರೂ ಹೌದು. ಇತ್ತೀಚಿಗೆ ಆಂಧ್ರಪ್ರದೇಶದಲ್ಲಿ ಕರ್ನಾಟಕ ಮಾದರಿಯಲ್ಲೇ ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ಕಲ್ಪಿಸಲಾಗಿದೆ. ಈಚೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಜಂಟಿಯಾಗಿ ಆಂಧ್ರಪ್ರದೇಶದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಗೆ ಚಾಲನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಯ್ಯ ಅವರು ಸಹ ಸರ್ಕಾರಿ ಬಸ್ ಓಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Orey 😂😂🤣🤣😭😭
— Vamc Krishna (@lyf_a_zindagi) August 15, 2025
Balayya bus naduputhunte ee scene ye gurthochindi 😭😭#NandamuriBalaKrishna drives bus in Hindupur #AndhraPradesh pic.twitter.com/MM2iP16Nmj
ನಟ ಮತ್ತ ರಾಜಕಾರಣಿ ಬಾಲಯ್ಯ ಅವರ ವಿಡಿಯೋವನ್ನು ನೋಡಿರುವ ನೆಟ್ಟಿಗರು ಬಾಲಯ್ಯ ಎಲ್ಲದಕ್ಕೂ ರೆಡಿ ಇರ್ತಾರೆ ಅಂತಾ ಹೇಳ್ತಿದ್ದಾರೆ. ಆದರೆ ಬಾಲಯ್ಯ ಅವರ ಮುಖದಲ್ಲಿ ಎದ್ದು ಕಾಣಿಸುತ್ತಿರುವ ಭಯದ ದೃಶ್ಯಗಳು ಈ ವೈರಲ್ ವಿಡಿಯೋದಲ್ಲಿ ಇದೆ. ಬಸ್ ಚಾಲನೆ ಮಾಡುತ್ತಲ್ಲೇ ಬಾಲಯ್ಯ ಅವರು ನಾನು ಹೆಂಗೆ ಡ್ರೈವ್ ಮಾಡ್ತೀನಿ ಅಂತಾ ಕೇಳಿದ್ದು ಅದಕ್ಕೆ ಅವರ ಅಭಿಮಾನಿಗಳು ಹಾಗೂ ಬಸ್ನಲ್ಲಿದ್ದ ಪ್ರಯಾಣಿಕರು.. ಅಣ್ಣಾ ಸೂಪರ್.. ಸೂಪರ್ ಚೆನ್ನಾಗಿ ಗಾಡಿ ಓಡಿಸುತ್ತೀರಾ ಅಂತಾ ಹೇಳಿದ್ದಾರೆ. ಆದರೆ ಅವರ ಮುಖದಲ್ಲಿರುವ ಭಯ ಮಿಶ್ರಿತ ನಗುವಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD











Click it and Unblock the Notifications