Anupama Gowda: ನನ್ನ ಮದುವೆಗೆ ನನ್ನನ್ನೂ ಕರೆಯಿರಿ: ಎಂಗೇಜ್ಮೆಂಟ್ ಸುದ್ದಿ ಹಬ್ಬಿಸಿದವರಿಗೆ ನಿರೂಪಕಿ ಅನುಪಮಾ ಗೌಡ ಕ್ಲಾರಿಟಿ
ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ವದಂತಿಗಳು ಹರಡುವುದು ಹೊಸದೇನಲ್ಲ. ಆದರೆ, ಅಂತಹ ವದಂತಿಗಳಿಗೆ ನಟಿ ಅನುಪಮಾ ಗೌಡ ನೀಡಿರುವ ಪ್ರತಿಕ್ರಿಯೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ತಮ್ಮ ಎಂಗೇಜ್ಮೆಂಟ್ ಮತ್ತು ಮದುವೆ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಅನುಪಮಾ ಬಹಳ ವ್ಯಂಗ್ಯವಾಗಿ ಮತ್ತು ಚತುರತೆಯಿಂದ ತಿರುಗೇಟು ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಅನುಪಮಾ ಗೌಡ ಅವರಿಗೆ ನಿಶ್ಚಿತಾರ್ಥವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು "ಎರಡು ದಿನದ ಹಿಂದೆ ಎಂಗೇಜ್ಮೆಂಟ್ ಆಗಿದೆ ಅಂತ ಹೇಳ್ತಿದ್ದೀರ, ಆದರೆ ಇಮಿಡಿಯೇಟ್ ಆಗಿ ಮದುವೆ ಮಾಡಿಸೋದಕ್ಕೆ ಹೋಗಬೇಡಿ. ಯಾಕೆಂದರೆ, ಜನರಿಗೆ ಸ್ವಲ್ಪ ಡೌಟ್ ಆಗುತ್ತೆ. ಈಗಲೇ ಪೋಸ್ಟ್ ಮಾಡಿದ್ರೆ ಅದು ಚೆನ್ನಾಗಿ ಅನಿಸಲ್ಲ" ಎಂದು ಗಾಸಿಪ್ ಹಬ್ಬಿಸುವವರ ಕಾಲೆಳೆದಿದ್ದಾರೆ.

ಸುಳ್ಳು ಸುದ್ದಿ ಮಾಡುವವರಿಗೆ ಟಿಪ್ಸ್ ನೀಡುವ ಧಾಟಿಯಲ್ಲಿ ಮಾತನಾಡಿರುವ ಅವರು, "ಒಂದೆರಡು ತಿಂಗಳು ಬಿಟ್ಟು ಪೋಸ್ಟ್ ಮಾಡಿ. ಆಗ ನಿಮಗೆ ಒಳ್ಳೆಯ ಟ್ರಾಕ್ಷನ್ ಸಿಗುತ್ತೆ, ಜನ ಎಲ್ಲಾ ನೋಡ್ತಾರೆ ಮತ್ತು ಶೇರ್ ಮಾಡುತ್ತಾರೆ. ನಮಗೆ ಟ್ರೆಡಿಷನಲ್ ಔಟ್ಫಿಟ್ ಎಲ್ಲ ಹಾಕಿ ಮದುವೆ ಪೋಸ್ಟ್ ಕ್ರಿಯೇಟ್ ಮಾಡಿ. ಆಮೇಲೆ ಎಲ್ಲ ಕಡೆ ಪೋಸ್ಟ್ ಮಾಡಬಹುದು" ಎಂದು ವ್ಯಂಗ್ಯವಾಡಿದ್ದಾರೆ.
ಎಐ ಬಳಸಿ ಫೋಟೋ ಕ್ರಿಯೇಟ್ ಮಾಡಿ
ಇತ್ತೀಚೆಗೆ ತಮಗೆ ನಿಶ್ಚಿತಾರ್ಥವಾಗಿದೆ ಎಂಬ ಸುದ್ದಿಗಳಿಗೆ ಪ್ರತಿಕ್ರಿಯಿಸಿದ ಅವರು, ಸುದ್ದಿ ಮಾಡುವವರ ಕಾಲೆಳೆದಿದ್ದಾರೆ. ಮುಂದಿನ ಬಾರಿ ಸುದ್ದಿಯ ಜೊತೆಗೆ ಒಂದು ಒಳ್ಳೆಯ ಇಮೇಜ್ ಕ್ರಿಯೇಟ್ ಮಾಡಿ. ನಮಗೆ ಉಂಗುರ ಹಾಕುವ ರೀತಿಯ ಫೋಟೋ ಸೃಷ್ಟಿ ಮಾಡಿ. ಈಗ ಹೇಗಿದ್ದರೂ ಎಐ ತಂತ್ರಜ್ಞಾನ ಬಂದಿದೆ, ಅದನ್ನು ಬಳಸಿ ಫೋಟೋ ಮಾಡಿ. ಆಗ ನಮಗೂ ಇನ್ನೂ ಖುಷಿ ಆಗುತ್ತದೆ ಎಂದು ಅನುಪಮಾ ನಗುತ್ತಲೇ ಟಾಂಗ್ ನೀಡಿದ್ದಾರೆ.

"ನನ್ನ ಮದುವೆಗೆ ನನ್ನನ್ನೇ ಕರೆಯಿರಿ"
ಇಷ್ಟಕ್ಕೆ ನಿಲ್ಲಿಸದ ಅನುಪಮಾ, "ಸಾಧ್ಯವಾದರೆ ನನ್ನ ಮತ್ತು ರಾಘವ್ನ ಮದುವೆಗೆ ನಮ್ಮನ್ನೇ ಕರೆಯಿರಿ. ಖಂಡಿತವಾಗಿಯೂ ನಾವು ಬರ್ತೀವಿ. ಪೇಜ್ ರೀಚ್ ಆಗಲಿ ಅನ್ನೋ ಕಾರಣಕ್ಕೆ ಬೇರೆಯವರ ಪರ್ಸನಲ್ ಲೈಫ್ನಲ್ಲಿ ಇಷ್ಟೊಂದು ಆಸಕ್ತಿ ತೋರಿಸ್ತೀರ ಅಲ್ವಾ? ನನ್ನ ಮದುವೆಯಲ್ಲಿ ಎಷ್ಟು ಇಂಟ್ರೆಸ್ಟ್ ತೋರಿಸ್ತೀರ ಅಂತ ನೋಡೋದಕ್ಕೆ ಆಸೆ ಇದೆ. ದಯಮಾಡಿ ನಮ್ಮನ್ನ ಇನ್ವೈಟ್ ಮಾಡಿ" ಎಂದು ಹೇಳುವ ಮೂಲಕ ಬಿಸಿಮುಟ್ಟಿಸಿದ್ದಾರೆ. ಅನುಪಮಾ ಗೌಡ ಅವರ ಈ ಕೌಂಟರ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಸುಳ್ಳು ಸುದ್ದಿ ಹಬ್ಬಿಸುವವರಿಗೆ ಈ ಮೂಲಕ ಖಡಕ್ ಸಂದೇಶ ಕೊಟ್ಟಿದ್ದಾರೆ. ಅನುಪಮಾ ಗೌಡ ಅವರ ಈ 'ಎಐ' ಮತ್ತು 'ಟ್ರೆಡಿಷನಲ್ ಔಟ್ ಫಿಟ್' ಕಾಮೆಂಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ. ಸುಳ್ಳು ಸುದ್ದಿ ಹಬ್ಬಿಸುವವರಿಗೆ ಇದೊಂದು ಹೊಸ ತರಹದ ಖಡಕ್ ಸಂದೇಶ ಎನ್ನುತ್ತಿದೆ ಅವರ ಅಭಿಮಾನಿ ಬಳಗ.
-
Ramya: 'ಧುರಂಧರ್-2' ನೋಡಿ ಹಣ, ಸಮಯ ವ್ಯರ್ಥ ಮಾಡಬೇಡಿ: ನಟಿ ರಮ್ಯಾ ಪೋಸ್ಟ್ -
Vijay Sethupathi: ರಿಷಬ್ ಶೆಟ್ಟಿ ಜೊತೆ ನಟಿಸುವ ದೊಡ್ಡ ಆಸೆ ನನಗಿದೆ: ಆಸೆ ಬಿಚ್ಚಿಟ್ಟ ನಟ ವಿಜಯ್ ಸೇತುಪತಿ -
Rashmika Mandanna: ಪುಟ್ಟ ಅಭಿಮಾನಿಗೆ ಮನೆಯಲ್ಲೇ ಭರ್ಜರಿ ಔತಣ: ಕೊಟ್ಟ ಮಾತಿನಂತೆ ನಡೆದುಕೊಂಡ ರಶ್ಮಿಕಾ-ವಿಜಯ್ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ













Click it and Unblock the Notifications