ದರ್ಶನ್ಗೆ ಮತ್ತೊಂದು ಆಘಾತ! ದಾಖಲಾಯ್ತು ಇನ್ನೊಂದು ದೂರು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಒಂದು ವರ್ಷದ ಹಿಂದಿನ ಹಳೆ ಪ್ರಕರಣವೊಂದಕ್ಕೆ ಮರುಜೀವ ಬಂದಿದ್ದು, ಮತ್ತೆ ಓಪನ್ ಆಗುವ ಸಾಧ್ಯತೆ ಇದೆ.
ಕೊಲೆಗೂ ನನಗೂ ಸಂಬಂಧವೇ ಇಲ್ಲ ಎನ್ನುತ್ತಿರುವ ದರ್ಶನ್ ಮತ್ತು ಗ್ಯಾಂಗ್ನ ಮತ್ತೊಂದು ಮುಖದ ಅನಾವರಣ ಆಗುತ್ತಿದೆ. ನಿರ್ಮಾಪಕ ಭರತ್ ಎನ್ನುವವರು ದರ್ಶನ್ ವಿರುದ್ಧ ಕೊಲೆ ಬೆದರಿಕೆ ಆರೋಪ ಮಾಡಿದ್ದು ದೂರು ನೀಡಿದ್ದಾರೆ.

ಭರತ್-ದರ್ಶನ್ ನಡುವಿನ ಸಂಭಾಷಣೆಯ ಹಳೆಯ ಆಡಿಯೋ ಸದ್ಯ ವೈರಲ್ ಆಗುತ್ತಿದೆ. ಆಪ್ತ ಗೆಳೆಯನ ಸಿನಿಮಾ ಸಂಬಂಧ ದರ್ಶನ್ ನಿರ್ಮಾಪಕರಿಗೆ ಜೀವ ಬೆದರಿಕೆ ಹಾಕಿದ್ದಾರೆ.
ನಿರ್ಮಾಪಕ ಭರತ್ ಹೇಳಿದ್ದೇನು?
ನಿರ್ಮಾಪಕ ಭರತ್ 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಎನ್ನುವ ಸಿನಿಮಾಗೆ ಬಂಡವಾಳ ಹಾಕಿದ್ದರು. ಈ ಸಿನಿಮಾದಲ್ಲಿ ನಟ ದರ್ಶನ್ ಆಪ್ತ ಸ್ನೇಹಿತ ನಟನೆ ಮಾಡುತ್ತಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಲಾಗಿತ್ತು. ನಾಯಕ ತನ್ನ ಸ್ನೇಹಿತ ಎನ್ನುವ ಕಾರಣಕ್ಕೆ ದರ್ಶನ್ ಭರತ್ಗೆ ಬೆದರಿಕೆ ಹಾಕಿದ್ದರು ಎಂದು ನಿರ್ಮಾಪಕ ಭರತ್ ಹೇಳಿದ್ದಾರೆ.
ದೂರು ಕೊಟ್ಟಿದ್ದ ಭರತ್
ಕರೆ ಮಾಡಿ ಬೆದರಿಕೆ ಹಾಕಿದ್ದ ದರ್ಶನ್ ವಿರುದ್ಧ ಪೊಲೀಸರಿಗೆ ಭರತ್ ದೂರು ನಿಡಿದ್ದರು. ಆದರೆ ಕೆಂಗೇರಿ ಪೊಲೀಸರು ಎನ್ಸಿಆರ್ ಮಾಡಿ ಪ್ರಕರಣ ಮುಗಿಸಿದ್ದರು. ಕೇಸ್ ವಿಚಾರದಲ್ಲಿ ನನ್ನ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ ಎಂದರು.
ನಾನು ದೂರು ಕೊಟ್ಟಾಗ ತಮ್ಮ ಪ್ರಭಾವ ಬಳಸಿ ಮುಚ್ಚಿಹಾಕಿದ್ದರು. ನನ್ನ ಮೇಲೆ ಎರಡು ಬಾರಿ ಅಟ್ಯಾಕ್ ಮಾಡಲಾಗಿತ್ತು. ನನಗೆ ಯಾರೂ ವೈರಿಗಳಿಲ್ಲ, ನನ್ನ ಮೇಲೆ ದಾಳಿ ಮಾಡಿದ್ರೆ ಅದು ದರ್ಶನ್ ಗ್ಯಾಂಗ್ ಮಾತ್ರ. ಇಂದು ಆಗಿರುವ ಅನಾಹುತಕ್ಕೆ ದರ್ಶನ್ ಸುತ್ತ ಇರುವವರೇ ಕಾರಣ ಎಂದಿದ್ದಾರೆ.
ಭದ್ರತೆ ಬೇಕು ಅಂದಿರುವ ಭರತ್
ಭರತ್ ಈಗ ಮತ್ತೆ ಪೊಲೀಸರ ಮೊರೆ ಹೋಗಿದ್ದಾರೆ. ಕೆಂಗೇರಿ ಎಸ್ಐ ಚಿತ್ರದುರ್ಗಕ್ಕೆ ಹೋಗಿದ್ದು, ಬಂದ ಮೇಲೆ ಭದ್ರತೆ ಯಾಕೆ ಬೇಕು ಎಂದು ಹೇಳುತ್ತೇನೆ. ಕಮೆಂಟ್ ಮಾಡಿದವರಿಗೂ ಕೂಡ ದರ್ಶನ್ ಗ್ಯಾಂಗ್ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.
Oo my god, Producer bharath just misss 🙏🏼#DrPuneethrajkumar👑 pic.twitter.com/fxDJzlct3I
— ಅನಭಿಷಿಕ್ತ 👑 (@Mstlohithcult) June 14, 2024
ವೈರಲ್ ಆಗುತ್ತಿರುವ ಆಡಿಯೋ
ನಟ ದರ್ಶನ್ ಮತ್ತು ಭರತ್ ನಡುವಿನ ಆಡಿಯೋ ಸದ್ಯ ವೈರಲ್ ಆಗುತ್ತದೆ. ಸಿನಿಮಾ ಮುಗಿಸದೇ ಇದ್ದರೆ ನಿನ್ನನ್ನು ಭೂಮಿ ಮೇಲೆ ಇಲ್ಲದಂತೆ ಮಾಡುತ್ತೇನೆ ಎನ್ನುವ ದರ್ಶನ್ ಧ್ವನಿಯನ್ನು ಕೂಡ ಕೇಳಬಹುದು.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications