Anchor Anushree: ಆಂಕರ್ ಅನುಶ್ರೀಗೆ ಕಾಡುತ್ತಿದೆ ನಿರುದ್ಯೋಗಿ ಭಾವನೆ, ಕೆಲಸ ಹುಡುಕಬೇಕಂತೆ
ಕನ್ನಡದ ಖ್ಯಾತ ನಿರೂಪಕಿ ಹಾಗೂ ಕರಾವಳಿ ಚೆಲುವೆ ಅನುಶ್ರೀ ಮದುವೆ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಅನುಶ್ರೀಗೆ ಮದುವೆ ಯಾವಾಗ? ಎನ್ನುವ ಪ್ರಶ್ನೆ ಎದುರಾಗುತ್ತಲೇ ಇದೆ. ಇದೀಗ ಅನುಶ್ರೀ ಅವರ ಅಭಿಮಾನಿಗಳ ಕುತೂಹಲಕ್ಕೆ ಅನುಶ್ರೀ ಬ್ರೇಕ್ ಹಾಕಿದ್ದು, ಮದುವೆ ಆಗುತ್ತಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದ್ರೆ ಅನುಶ್ರೀ ಮದುವೆ ಯಾವಾಗ? ಮದುವೆ ಆಗುತ್ತಿರುವ ಹುಡುಗ ಯಾರು? ಎನ್ನುವ ಪ್ರಶ್ನೆ ಒಂದು ಕಡೆಯಾದ್ರೆ ಅನುಶ್ರೀ ಅವರಿಗೆ ನಿರುದ್ಯೋಗಿ ಸಮಸ್ಯೆ ಕಾಡುತ್ತಿದೆಯಂತೆ.
ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಅವರ ವಿಡಿಯೋ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಆಂಕರ್ ಅನುಶ್ರೀ ಅವರ ನಿರುದ್ಯೋಗದ ಬಗ್ಗೆ ಮಾತನಾಡಿದ್ದು, ಹೌದು, ನನಗೆ ಕೆಲಸ ಇಲ್ಲ. ಕೆಲಸ ಹುಡುಕಬೇಕಾಗಿದೆ ಎಂದು ಆಂಕರ್ ಅನುಶ್ರೀ ಅವರು ಹೇಳಿದ್ದಾರೆ. ಆಂಕರಿಂಗ್ ಬಿಟ್ಟು ಜೀವನಕ್ಕೆ ಏನು ಮಾಡಿಕೊಂಡಿದ್ದೀರಾ ಎಂದು ಅಭಿಮಾನಿಯೊಬ್ಬರು ಅನುಶ್ರೀ ಅವರಿಗೆ ಕಮೆಂಟ್ ಮಾಡಿದ್ದು, ಇದಕ್ಕೆ ಅನುಶ್ರೀ ಅವರು ನನ್ನ ಜೀವನದಲ್ಲಿ ನಾನು ಏನು ಮಾಡುತ್ತಿಲ್ಲ. ನನ್ನ ನಿರುದ್ಯೋಗಿ ಅಂದುಕೊಂಡಿದ್ದಾರೆ. ನಾನು ನಿರುದ್ಯೋಗಿ, ಕೆಲಸ ಹುಡುಕಬೇಕಾಗಿದೆ ಎಂದು ಅನುಶ್ರೀ ಅವರು ತಮಾಷೆಯಾಗಿ ಉತ್ತರಿಸಿದ್ದಾರೆ. ಇನ್ನೂ ನಿಮ್ಮ ಸಂಬಳ ಎಷ್ಟು ಎಂಬ ಪ್ರಶ್ನೆಗೆ, ನಾನು ನಿರುದ್ಯೋಗಿ ಎಂದು ಹೇಳಿದ್ದಾರೆ.

ಆಂಕರ್ ಅನುಶ್ರೀ ಮದುವೆ ಯಾವಾಗ?
2024ರ ಅಕ್ಟೋಬರ್ ತಿಂಗಳಲ್ಲಿ ತಮ್ಮದೇ ಯೂಟ್ಯೂಬ್ ಚಾನೆಲ್ನಲ್ಲಿ ತಮ್ಮ ಮದುವೆ ಬಗ್ಗೆ ಅನುಶ್ರೀ ಮಾತನಾಡಿದ್ದರು. ಮದುವೆ ಡೇಟ್ ರಿವೀಲ್ ಮಾಡುವುದಾಗಿಯೂ ಕೂಡ ಹೇಳಿಕೊಂಡಿದ್ದರು. ಅನುಶ್ರೀ ಅಪ್ಪು ಅವರ ಅಪ್ಪಟ ಫ್ಯಾನ್ ಆಗಿರುವುದರಿಂದ ಮಾರ್ಚ್ನಲ್ಲಿಯೇ ಮದುವೆ ಆಗುವುದಾಗಿಯೂ ಹೇಳಿಕೊಂಡಿದ್ದರು. ಇದೀಗ ಮಾರ್ಚ್ ಮುಗಿದರೂ ಅನುಶ್ರೀ ಕಡೆಯಿಂದ ಯಾವುದೇ ಅಪ್ಡೇಟ್ ಬಾರದೇ ಇದ್ದಿದ್ದನ್ನು ಕಂಡ ಫ್ಯಾನ್ಸ್ಗೆ ಕೊಂಚ ನಿರಾಸೆಯಾಗಿದೆ.
ಈ ಹಿಂದೆ ನಟ ನಾಗಭೂಷಣ್ ಮತ್ತು ನಟಿ ಮಲೈಕಾ ವಸುಪಾಲ್ ನಟನೆಯ ವಿದ್ಯಾಪತಿ ಸಿನಿಮಾ (ಏಪ್ರಿಲ್ 10) ರಿಲೀಸ್ ಆಗಿದೆ. ಸಿನಿಮಾ ಪ್ರಚಾರದ ಕುರಿತು ವಿದ್ಯಾಪತಿ ತಂಡ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಆಂಕರ್ ಅನುಶ್ರೀ ಅವರೊಟ್ಟಿಗೆ ಸಿನಿಮಾದ ಬಗ್ಗೆ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಇದೇ ವೇಳೆ ಅನುಶ್ರೀಗೆ, ಅಕ್ಕಾ ನಿಮ್ಮ ಹುಡುಗ ಹೇಗಿರಬೇಕು" ಎಂದು ಮಲೈಕಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ, ಹುಡುಗ ತುಂಬಾ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಅಷ್ಟೇ ಸಾಕು ನನಗೆ ಎಂದು ಅನುಶ್ರೀ ಅವರು ಹೇಳಿದರು.
ಮದುವೆ ಯಾವಾಗ ಎಂದು ಮಲೈಕಾ ಅನುಶ್ರೀಗೆ ಕೇಳಿದ್ದಾರೆ. ಆಗ, ಈ ವರ್ಷ ಅನುಶ್ರೀ ಮದುವೆ ಗ್ಯಾರಂಟಿ. ಈ ತಿಂಗಳ 10ನೇ ತಾರೀಖು ವಿದ್ಯಾಪತಿ ಬರ್ತಿದ್ದಾರೆ. 2025ರಲ್ಲಿ ʻಅನುಪತಿʼ ಬರಬಹುದು ಎಂದು ಇದೇ ವರ್ಷ ಮದುವೆ ಆಗುವುದಾಗಿ ಅನುಶ್ರೀ ಸುಳಿವು ನೀಡಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
-
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಪ್ರೇಮ್ ಬರೆದ ಹಾಡು ಅಕ್ಷರ ರೂಪದ ಬೆತ್ತಲೆ ಸಿನೆಮಾ ತೋರಿಸಿದಂತಿದೆ: ಅರುಣ್ ಜೋಳದಕೂಡ್ಲಿಗಿ ಬರಹ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications