Amruthadhare Serial: ಕಳಚಿ ಬಿತ್ತು ಶಕುಂತಲಾ, ಜೈದೇವ್ ಮುಖವಾಡ: ಗೌತಮ್ ಮನೆ ಬಿಟ್ಟು ಹೋಗಿದ್ದೆಲ್ಲಿಗೆ?
ಅಮೃತ ಧಾರೆ ಧಾರಾವಾಹಿಯಲ್ಲಿ ಮಗುವನ್ನು ಕಾಪಾಡಿಕೊಳ್ಳಲು ಮನೆ ಬಿಟ್ಟು ಹೋದ ಬಳಿಕ ಮನೆಯಲ್ಲಿ ಮೌನ ಆವರಿಸಿದೆ. ಭೂಮಿಕಾ ಹಾಗೂ ಮಗು ನೆನಪಿನಲ್ಲಿ ಗೌತಮ್ ದಿನ ಕಳೆಯುತ್ತಿದ್ದಾನೆ. ಎರಡು ಮಕ್ಕಳ ಸತ್ಯ ಗೊತ್ತಾಗಿದ್ದಕ್ಕೆ ಭೂಮಿಕಾ ಮನೆಯಿಂದ ಹೊರ ಹೋಗಿದ್ದು ಎಂದುಕೊಂಡು ನೊಂದುಕೊಂಡಿದ್ದಾನೆ. ಇತ್ತ ಪೊಲೀಸರ ಮೂಲಕ ಗೌತಮ್ ಭೂಮಿಕಾ ಹುಡುಕಾಟ ನಡೆಸುತ್ತಿದ್ದಾನೆ. ಇತ್ತ ಗೌತಮ್ ಬದುಕಿನಲ್ಲಿ ಆದ ಬೆಳವಣಿಗೆಗಳು ಹಾಗೂ ಕೆಲ ಕಹಿ ಘಟನೆಯ ಹಿಂದೆ ಕೇಡಿ ಜೈದೇವ್ ಹಾಗೂ ಶಕುಂತಲಾ ಇರುವುದು ಬಯಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಅಮೃತಧಾರೆ ಧಾರಾವಾಹಿ ರಣ ರೋಚಕ ತಿರುವು ಪಡೆಯುತ್ತಿರುವ ವಿಚಾರ ಜಗಜ್ಜಾಹೀರಾಗಿತ್ತು. ಭೂಮಿಕಾ ಮನೆಯಿಂದ ಹೊರಗಡೆ ಹೋದ ಬೆನ್ನಲ್ಲಿಯೇ, ಮಲ್ಲಿಯೂ ಕಾಣೆಯಾಗಿದ್ದಾಳೆ. ಭೂಮಿಕಾ ಹುಡುಕುವ ಪ್ರಯತ್ನದಲ್ಲಿ ಗೌತಮ್ ಸುತ್ತಾಡುತ್ತಿದ್ದಾನೆ. ಇತ್ತ ಶಕುಂತಲಾ ತನ್ನ ಮುದ್ದಿನ ಮಗ ಜೈದೇವ್ ಜೊತೆ ಸಂಭ್ರಮ ಪಡುತ್ತಿದ್ದಾಗ ಭಾಗ್ಯಮ್ಮನ ಮೂಲಕ ಗೌತಮ್ ಎದುರು ಶಕುಂತಲಾ ಮುಖವಾಡ ಕಳಚಿ ಬಿದ್ದಂತೆ ಪ್ರೋಮೋವನ್ನು ಬಿಡುಗಡೆ ಮಾಡಲಾಗಿತ್ತು.

ಭೂಮಿಕಾ ಮನೆ ಬಿಟ್ಟು ಹೋಗುವಾಗ ಯಾವುದೇ ಪತ್ರವನ್ನ ಬರೆದಿಲ್ಲ. ಆ ಪತ್ರ ಬರೆದಿರುವುದು ಶಕುಂತಲಾ ಎಂದು ಭಾಗ್ಯಮ್ಮನ ಸಹಾಯದಿಂದ ಗೌತಮ್ ಸತ್ಯ ಗೊತ್ತಾಗಿದೆ. ಭಾಗ್ಯಮ್ಮ ಜೊತೆ ಸೃಜನ್ನ ಕರೆದುಕೊಂಡು ಗೌತಮ್ ಮನೆಗೆ ಹೋಗಿದ್ದು, ಅಲ್ಲಿ ಜೈದೇವ್, ದಿಯಾ ಮತ್ತು ಶಕುಂತಲಾ ಮಾತನಾಡುತ್ತಾ ಕುಳಿತುಕೊಂಡಿರುತ್ತಾರೆ. ಭೂಮಿಕಾ ಮನೆ ಬಿಟ್ಟು ಹೋಗೋಕೆ ನಾನೇ ಹೇಳಿದ್ದು, ಇನ್ನೊಂದು ಮಗುವಿನ ವಿಷ್ಯವನ್ನ ಭೂಮಿಕಾಗೆ ಹೇಳಿದ್ದೆ ನಾನು ಹಾಗೂ ಆ ಪತ್ರ ಬರೆದು ಗೌತಮ್ ಮನೆ ಬಿಟ್ಟು ಹೋಗುವಂತೆ ಮಾಡಿದ್ದೇನೆ ಎಂದು ಶಕುಂತಲಾ ಹೇಳಿಕೊಂಡಿದ್ದಾಳೆ.
ಈ ವೇಳೆ ನನಗೆ ಖುಷಿಯಾಗಿದೆ ಎಂದು ಜೈದೇವ್ ಹೇಳುತ್ತಾನೆ. ಇದೇ ಸಮಯದಲ್ಲಿ ಅಲ್ಲಿಗೆ ಗೌತಮ್, ಸೃಜನ್ ಹಾಗೂ ಭಾಗ್ಯಮ್ಮ ಬರುತ್ತಾರೆ. ಈ ವೇಳೆ ಗೌತಮ್ ಯಾಕಮ್ಮ ಹೀಗೆ ಮಾಡಿದ್ರೀ, ನಾನು ನಿಮಗೇನು ಅನ್ಯಾಯ ಮಾಡಿದ್ದೇ ಎಂದು ಪ್ರಶ್ನೆ ಕೇಳುತ್ತಾನೆ. ಒಂದು ವೇಳೆ ನನ್ನ ಮನಸಿನಲ್ಲಿ ಹಾಗೇನಾದರೂ ಇದ್ದಿದ್ದರೆ ನನ್ನ ಅಪ್ಪ ಯಾವತ್ತು ಈ ಐವರ ಜವಾಬ್ಧಾರಿ ನಿಂದು ಎಂದು ಕೈಗೆ ಒಪ್ಪಿಸಿ ಹೋದ್ರಲ್ಲ ಅವತ್ತೇ ನಾನು ನಿಮ್ಮನ್ನು ಬೀದಿ ಪಾಲು ಮಾಡಬಹುದಿತ್ತು ಎಂದು ಗೌತಮ್ ಹೇಳುತ್ತಾನೆ.
ಗೌತಮ್ ಮುಂದೆ ಭೂಮಿಕಾ ಮನೆ ಬಿಟ್ಟು ಹೋದ ಸತ್ಯ ಬಯಲಾಗಿದೆ. ಮನೆಯ ಸದಸ್ಯರಾದ ಪಾರ್ಥ, ಅಪೇಕ್ಷಾ, ಸುಧಾ, ಸೃಜನ್, ಮತ್ತು ಗೆಳೆಯನ ಆನಂದನ ಮುಂದೆ ಗೌತಮ್ ನನಗೆ ಯಾಕೆ ಮೋಸ ಮಾಡಿದ್ರಿ ಎಂದು ಪ್ರಶ್ನಿಸುತ್ತಾನೆ. ನಿಮಗೇನು ಬೇಕು ಅದು ಸಿಗುತ್ತೆ ಎಂದು ಹೇಳಿ ಆಸ್ತಿ ಪತ್ರಗಳನ್ನು ನೀಡಿದ್ದಾನೆ. ಇವತ್ತಿಗೆ ನನ್ನ ಮತ್ತು ಈ ಮನೆಯ ಋಣ ಮುಗೀತು ನಾನು ನೆಮ್ಮದಿಯನ್ನು ಹುಡುಕಿಕೊಂಡು ಹೊರಡ್ತೀನಿ ಮನೆಯಾಚೆ ಹೊರಡುತ್ತಾನೆ.
ಶಕುಂತಲಾಳ ಮೋಸದಿಂದಾಗಿ ಗೌತಮ್ ಮನೆ ಬಿಟ್ಟು ಹೋಗುತ್ತಾನೆ. ಮಲತಾಯಿ ಶಕುಂತಲಾ ಅವನನ್ನು ಮತ್ತು ಭೂಮಿಕಾಳನ್ನು ಬೇರ್ಪಡಿಸುತ್ತಾಳೆ. ಗೌತಮ್ ನಿಜವಾದ ಸತ್ಯ ತಿಳಿದುಕೊಂಡು ನೋವಿನಿಂದ ಮನೆ ಬಿಟ್ಟು ಹೋಗುತ್ತಾನೆ. ಬಳಿಕ ಐದು ವರ್ಷಗಳ ನಂತರದ ಕಥೆಯಲ್ಲಿ ಗೌತಮ್ ಕಾರು ಚಾಲಕನಾಗಿ ಕೆಲಸ ಮಾಡುತ್ತಾ ಇರುತ್ತಾನೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಐದು ವರ್ಷ ಕಾಲ ಕಾರು ಡ್ರೈವರ್ ಆಗಿ ಭೂಮಿಕಾಳ ಹುಡುಕುತ್ತಾ ಕಳೆದು ಹೋಗಿವೆ. ಈ ವೇಳೆ ಒಮ್ಮೆ ಗೌತಮ್ ಗೆ ಮಗ ಹಾಗೂ ಭೂಮಿಕಾ ಸಿಗುತ್ತಾರೆ. ಇದನ್ನ ಕಂಡು ಗೌತಮ್ ಖುಷಿ ಪಡುತ್ತಾನೆ. ಈ ವೇಳೆ ಮತ್ತೆ ಇವರು ಒಂದಾಗುತ್ತಾರಾ ಎಂಬುದು ಸದ್ಯ ಕುತೂಹಲ ಮೂಡಿಸಿದೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications