ಮಂಚ ಹತ್ತಿದ್ರೆ ಸಿನಿಮಾದಲ್ಲಿ ಚಾನ್ಸ್ ಎಂದು ಸಂಬಂಧಿಕಳನ್ನೇ ದಂಧೆಗೆ ತಳ್ಳಿದ ಖ್ಯಾತ ನಟಿ!
ಭಾರತೀಯ ಚಿತ್ರರಂಗದಲ್ಲಿ ಮೀಟೂ ಎಂಬುದು ದೊಡ್ಡ ಕ್ರಾಂತಿಗೆ ಮುನ್ನುಡಿ ಬರೆದಿತ್ತು. ಹಲವು ನಟಿಯರು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗ ಹೇಳಿಕೆ ನೀಡುವ ಸಂಚಲನ ಸೃಷ್ಟಿಸಿದ್ದರು. ಕನ್ನಡದಲ್ಲೂ ಮೀಟೂ ಸದ್ದು ಮಾಡಿತ್ತು. ಈ ಸಾಲಿನಲ್ಲಿ ಖ್ಯಾತ ನಟಿ ಮಿನು ಮುನೀರ್ ಕೂಡ ಒಬ್ಬರಾಗಿದ್ದರು. ಖ್ಯಾತ ನಟನ ವಿರುದ್ಧ ಲೈಂಗಿಕ ಕಿರುಕುಳ ಮಾಡಿದ್ದ ಮಿನು, ಬಳಿಕ ಅರೆಸ್ಟ್ ಕೂಡ ಆಗಿದ್ದರು. ಇದೀಗ ವೇ*ಶ್ಯಾವಾಟಿಕೆ ಕೇಸ್ನಲ್ಲಿ ನಟಿ ಮಿನು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿರುವ ಮಿನು ಮುನೀರ್ ಅವರನ್ನ 10 ವರ್ಷದ ಹಿಂದಿನ ಕೇಸ್ನಲ್ಲಿ ಅರೆಸ್ಟ್ ಮಾಡಲಾಗಿದೆ. ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಮಂಗಲಂ ಮಹಿಳಾ ಪೊಲೀಸರು ನಟಿಯನ್ನ ಬಂಧಿಸಿದ್ದಾರೆ. ತಿರುಮಂಗಲಂನ ಪೊಲೀಸ್ ತಂಡವು ಕೇರಳಕ್ಕೆ ಹೋಗಿ ವಿಚಾರಣೆಗಾಗಿ ಚೆನ್ನೈಗೆ ಕರೆತಂದಿದೆ.

ಏನಿದು ಆರೋಪ?
ಸುಮಾರು 10 ವರ್ಷಗಳ ಹಿಂದೆ ಈ ಪ್ರಕರಣ ನಡೆದಿದೆ. ನಟಿಯ ಸಂಬಂಧಿಯೇ ಆಗಿದ್ದ 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಈಗ 26 ವರ್ಷದ ಅದೇ ಬಾಲಕಿ ಕೇರಳದಲ್ಲಿ ದೂರು ದಾಖಲಿಸಿದ್ದಳು. ಬಳಿಕ ಚೆನ್ನೈನಲ್ಲಿ ಆ ಅಪರಾಧ ನಡೆದ ಸ್ಥಳವಾಗಿದ್ದರಿಂದ ಅದನ್ನು ಕೇರಳದಿಂದ ಚೆನ್ನೈ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಈ ಹಿನ್ನೆಲೆ ನಟಿಯನ್ನು ಬಂಧಿಸಲಾಗಿದೆ.
ಶಾಲೆ ರಜೆಗೆ ಬಂದಿದ್ದ ಬಾಲಕಿ
ಸಂತ್ರಸ್ತೆಯ ತಾಯಿ ತನ್ನ 16 ವರ್ಷದ ಮಗಳನ್ನು ಶಾಲಾ ರಜೆಯ ಸಮಯದಲ್ಲಿ ದೂರದ ಸಂಬಂಧಿಯಾಗಿದ್ದ ನಟಿ ಮಿನು ಮುನೀರ್ ಜೊತೆ ಚೆನ್ನೈಗೆ ಕಳುಹಿಸಿದ್ದರು. ಅಲ್ಲದೆ ಸಿನಿಮಾಗಳಲ್ಲಿ ಚಾನ್ಸ್ ಪಡೆಯಲು ತನಗೆ ಸಹಾಯ ಮಾಡುವಂತೆ ಆ ಬಾಲಕಿಗೆ ಒತ್ತಾಯಿಸಿ, ಅಣ್ಣಾ ನಗರದ ಹೋಟೆಲ್ಗೆ ಕರೆದೊಯ್ದಿದ್ದರು. ಅಲ್ಲಿ ಸಿನಿಮಾಗಳಲ್ಲಿ ಅವಕಾಶದ ಚರ್ಚಿಸುವ ನೆಪದಲ್ಲಿ ನಾಲ್ಕು ಮಂದಿ ಪುರುಷರನ್ನು ಪರಿಚಯಿಸಿದ್ದು, ಅದರಲ್ಲಿ ಇಬ್ಬರು ಹುಡುಗಿಯನ್ನು ಅನುಚಿತವಾಗಿ ಮುಟ್ಟಿದ್ದರು. ಆದರೆ ಭಯದಿಂದ ಸಂತ್ರಸ್ತೆ ಆ ಸಮಯದಲ್ಲಿ ಘಟನೆಯ ಬಗ್ಗೆ ವರದಿ ಮಾಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ತನ್ನ ಸಂಬಂಧಿಯಾಗಿರುವ ಹುಡುಗಿಯನ್ನ ಸಿನಿಮಾ ಅವಕಾಶದ ಭರವಸೆ ನೀಡಿ ತಮಿಳುನಾಡಿಗೆ ಕರೆದೊಯ್ದು, ನಂತರ ವೇ*ಶ್ಯಾವಾಟಿಕೆ ಜಾಲಕ್ಕೆ ದೂಡಲು ಯತ್ನಿಸಿದ್ದರು ಎಂಬ ಆರೋಪವೂ ನಟಿಯ ಮೇಲೆ ಕೇಳಿಬಂದಿದೆ. ಕಳೆದ ವರ್ಷ ಆ ಸಂತ್ರಸ್ತ ಹುಡುಗಿಯ ಪೋಷಕರು ಕೇರಳ ಪೊಲೀಸರನ್ನು ಸಂಪರ್ಕಿಸಿ, ನಾಲ್ವರು ಪುರುಷರ ಹೆಸರನ್ನು ಹೆಸರಿಸಿ ಮತ್ತು ಮಿನು ಅವರ ಕೃತ್ಯಗಳನ್ನು ಹೇಳಿ ದೂರು ದಾಖಲಿಸಿದ್ದರು. ಪೊಲೀಸರು ಆ ಹೋಟೆಲ್ ಅನ್ನು ಪರಿಶೀಲಿಸುತ್ತೇವೆ. ಆ ನಾಲ್ವರು ಪುರುಷರನ್ನು ಗುರುತಿಸುತ್ತೇವೆ ಎಂದು ಹೇಳಿದ್ದಾರೆ. ನಟಿ ಮಿನು ಈ ಅಪರಾಧಕ್ಕೆ ಪ್ರಚೋದನೆ ನೀಡಿರುವುದು ಕಂಡುಬಂದರೆ, ಅವರಿಗೆ ಶಿಕ್ಷೆಯಾಗಲಿದೆ. ಹೀಗಾಗಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications