Ravichandran: ನಟಿಯರು ಗ್ಲಾಮರ್ ಆಗಿದ್ದರಷ್ಟೇ ನನ್ನ ಕಣ್ಣು ಬೀಳೋದು ಎಂದ ರವಿಚಂದ್ರನ್... !
Ravichandran: ನಟ & ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿನಿಮಾದಲ್ಲಿ ನಟಿಯರ ಬಗ್ಗೆ ಹಾಗೂ ಅವರ ಕಾಲದ ಸಿನಿಮಾಗಳ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಮ್ಮ ಕಾಲದಲ್ಲಿ ಸಿನಿಮಾಗಳನ್ನು ಯಾವ ರೀತಿ ಮಾಡ್ತಿದ್ವಿ ಹಾಗೂ ಆ ಸಿನಿಮಾಗಳನ್ನು ಯಾವ ರೀತಿ ರಿಲೀಸ್ ಮಾಡುತ್ತಿದ್ದೇವು & ನಟಿ ಗ್ಲಾಮರಸ್ ಆಗಿದ್ರೆ ಮಾತ್ರ.... ಅಂತ ಕೆಲವೊಂದು ವಿಚಾರಗಳನ್ನು ಅವರು ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ರವಿಚಂದ್ರನ್ ಅವರನ್ನು ರವಿ ಮಾಮ ಅಂತಲೂ ಕರೆಯುವುದಿದೆ. ಅವರ ಸಿನಿಮಾಗಳಲ್ಲಿ ನಟಿಯರನ್ನು ಅತ್ಯಂತ ಆಕರ್ಷಕವಾಗಿ ಹಾಗೂ ಉತ್ತಮವಾಗಿ ತೋರಿಸುತ್ತಿದ್ದರು ಅಂತ ಅವರ ಜೊತೆ ನಟಿಸಿರುವ ಹಲವು ನಟಿಯರು ಹೇಳಿರುವುದು ಇದೆ. ಇದೀಗ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ನಟಿಯರು ಹಾಗೂ ಗ್ಲಾಮರ್ ಬಗ್ಗೆ ಅವರು ಮೊದಲ ಬಾರಿ ಬಹಿರಂಗವಾಗಿಯೇ ಕೆಲವೊಂದು ಇಂಟ್ರಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅವರು ತೆರೆಯ ಮೇಲೆ ಹಾಗೂ ಸಿನಿಮಾಗಳಲ್ಲಿ ಅತ್ಯಂತ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವುದೇ ಹೆಚ್ಚು.

ಇದೀಗ ಸೂತ್ರಧಾರಿ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಅವರು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಾವೆಲ್ಲಾ ಸಿನಿಮಾಗಳ ಬಗ್ಗೆ ಮಾತನಾಡುವಾಗ ಎಲ್ಲೂ ಸಿನಿಮಾಗಳ ಬಗ್ಗೆ ಮಾತನಾಡಿಯೇ ಇಲ್ಲ. ಸಿನಿಮಾ ಮಾಡುತ್ತಿದ್ವಿ. ಅದನ್ನು ಬಿಡುಗಡೆ ಮಾಡಲಾಗುತ್ತಿತ್ತು. ಅದನ್ನು ಜನ ನೋಡುತ್ತಿದ್ದರು. ಅದನ್ನು ಇಷ್ಟಪಟ್ಟು ಆ ಸಿನಿಮಾವನ್ನು ಮೇಲಕ್ಕೆ ಎತ್ತುಕೊಂಡು ಹೋಗುತ್ತಿದ್ದರು. ನಾವೆಲ್ಲೂ ಆಗೆಲ್ಲಾ ಸಿನಿಮಾಗಳ ಬಗ್ಗೆ ಮಾತನಾಡಿದ್ದೇ ಇಲ್ಲ ಅಂತ ಅವರು ಹೇಳಿದ್ದಾರೆ.
ಸಿನಿಮಾವನ್ನು ಜನ ಎತ್ತುಕೊಂಡು ಹೋಗಬೇಕು.. ನಾವು ಕಷ್ಟಪಟ್ಟು ಸಿನಿಮಾವನ್ನು ಜನರ ಮುಂದೆ ಇರಿಸಬೇಕು ಅಂತ ಹೇಳಿದ್ದಾರೆ. ಚಂದನ್ ಶೆಟ್ಟಿ ಬಗ್ಗೆಯೂ ಅವರು ಈ ಸಂದರ್ಭದಲ್ಲಿ ಮಾತನಾಡಿದ್ದಾರೆ. ಇದು ಚಂದನ್ ಶೆಟ್ಟಿ ಅವರ ಪೂರ್ಣ ಪ್ರಮಾಣದ ಸಿನಿಮಾ ಅಂತ ಗೊತ್ತಿರಲಿಲ್ಲ. ಅವರು ಹೇಳಿದ ಮೇಲೆಯೇ ಗೊತ್ತಾಗಿದ್ದು. ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಸಿನಿಮಾವೊಂದರಲ್ಲಿ ಹೀರೋವಾಗಿ ನಟಿಸಿರುವುದು ಇದೇ ಮೊದಲ ಸಿನಿಮಾ ಅಂತ ಅವರು ಹೇಳಿದರು. ಚಂದನ್ ಶೆಟ್ಟಿ ಅವರಿಗೆ ಒಳ್ಳೆಯದಾಗಲಿ ಅಂತ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಮುಂದುವರಿದು ನಟಿ ಅಪೂರ್ವ ಅವರ ಬಗ್ಗೆ ಮಾತನಾಡಿದ್ದಾರೆ. ಅಪೂರ್ವ ಗ್ಲಾಮರ್ ಆಗಿದ್ದಾರೆ. ಅವರು ಗ್ಲಾಮರ್ ಆಗಿರುವುದಕ್ಕೆ ಅಲ್ವಾ ರವಿಚಂದ್ರನ್ ಕಣ್ಣು ಬಿದ್ದಿರೋದು.. ಇಲ್ಲ ಅಂದರೆ ಎಲ್ಲಿ ಬೀಳುತ್ತೆ ಅಂತ ಹಾಸ್ಯ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಒಂದು ಕಾಲದಲ್ಲಿ ನಟ ರವಿಚಂದ್ರನ್ ಹಾಗೂ ಅವರೊಂದಿಗೆ ನಟಿಸುತ್ತಿದ್ದ ನಟಿಯರ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿತ್ತು. ರವಿಚಂದ್ರನ್ ಅವರು ಅವರ ಸಿನಿಮಾಗಳಲ್ಲಿ ನಟಿಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದರು. ಅವರ ಸಿನಿಮಾಗಳಲ್ಲಿ ಬಟ್ಟೆ ಹಾಗೂ ಗ್ಲಾಮರಸ್ ಆಗಿ ತೋರಿಸುತ್ತಿದ್ದರು ಎನ್ನುವ ಮಾತಿದೆ.
-
ಕೊಡಗು ಚಾರಣ: 4 ದಿನ ದಟ್ಟ ಕಾಡಿನಲ್ಲಿದ್ದ ಕೇರಳಂ ಮೂಲದ ಜಿ.ಎಸ್.ಶರಣ್ಯ ಬದುಕುಳಿದಿದ್ದು ಹೇಗೆ, ರೋಚಕ ಕಾರ್ಯಾಚರಣೆ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
ಧನುಷ್ ಜೊತೆ ಸ್ನೇಹ ಕಳೆದುಕೊಂಡಿದ್ದು ನನ್ನ ಜೀವನದ ದೊಡ್ಡ ನಷ್ಟ: ಪತ್ನಿ ನಯನತಾರ ಜೊತೆಗಿನ ಮನಸ್ತಾಪಕ್ಕೆ ವಿಘ್ನೇಶ್ ಶಿವನ್ ಬೇಸರ -
"ನಾನು ಔಟ್ ಆಗಿದ್ದಕ್ಕೇ ತುಂಬಾ ಖುಷಿಯಾಯ್ತು": ಸಿಎಸ್ಕೆ ಎದುರು ರನ್ ಮಳೆ ಹರಿಸಿದ ಬಳಿಕ ಪಡಿಕ್ಕಲ್ ಹೀಗಂದಿದ್ದೇಕೆ? -
2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
Virat Kohli: ನಾನೇನು ವಿದೇಶಿ ಆಟಗಾರನಾ?: ಲಂಡನ್ ವಾಸ್ತವ್ಯದ ಬಗ್ಗೆ ಟೀಕಾಕಾರರಿಗೆ ವಿರಾಟ್ ಕೊಹ್ಲಿ ತಿರುಗೇಟು -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral












Click it and Unblock the Notifications