Get Updates
Get notified of breaking news, exclusive insights, and must-see stories!

Vijayalakshmi Darshan: ದಿನ ದಿನಕ್ಕೂ ಜನಪ್ರಿಯತೆ ಪಡೆಯುತ್ತಿದ್ದಾರೆ ವಿಜಯಲಕ್ಷ್ಮಿ ದರ್ಶನ್: ಹೇಗೆ ತಿಳಿಯಿರಿ

ಬೆಂಗಳೂರು, ಜೂನ್. 27: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಆತನ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳಾಗಿದ್ದಾರೆ. ಪವಿತ್ರಾ ಗೌಡ ಅವರಿಗೆ ಜನ ಸಕತ್ ಶಾಪ ಹಾಕುತಿದ್ದಾರೆ. ಇದರ ಜೊತೆಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಹೆಚ್ಚು ಪ್ರೀತಿ ಮತ್ತು ಖ್ಯಾತಿ ಸಿಗುತ್ತಿದೆ.

ನಟ ದರ್ಶನ್ ಬಂಧನದ ಜೊತೆಗೆ ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿದೆ. ಎರಡು ದಿನ ಯಾವುದೇ ಪ್ರತಿಕ್ರಿಯೆ ನೀಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಿಧಾನವಾಗಿ ಗಂಡನ ಮೇಲಿನ ಕೋಪವನ್ನು ಹತೋಟಿಗೆ ತಂದುಕೊಂಡರು. ಡಿಆಕ್ಟಿವೆಟ್ ಮಾಡಿದ್ದ ಇನ್‌ಸ್ಟಾಗ್ರಾಮ್ ಖಾತೆಯನ್ನು ಮತ್ತೆ ಆಕ್ಟಿವ್ ಮಾಡಿಕೊಂಡರು. ಗಂಡನನ್ನು ಜೈಲಿನ ಕಂಬಿಗಳ ಹಿಂದಿನಿಂದ ಹೊರತರಲು ಕಾನೂನಿನ ಸಮರಕ್ಕೆ ಮುಂದಾದರು. ಇದು ಅವರನ್ನು ಜನ ಪ್ರೀತಿಸುವಂತೆ ಮಾಡಿದೆ.

Actor Darshan s wife Vijayalakshmi is becoming more famous

ಜನಪ್ರಿಯತೆಯಲ್ಲಿ ಮುಳುಗುತ್ತಿದ್ದಾರೆ ವಿಜಯಲಕ್ಷ್ಮಿ

ನಟ ದರ್ಶನ್ ಈ ಹಿಂದೆ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ್ದರು. ಆಗಲೂ ಕೂಡ ಕೋಪ ಮರೆತು ಗಂಡನನ್ನು ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಬಂದಿದ್ದರು. ಈಗ ಮತ್ತೆ ಗಂಡನನ್ನು ಜೈಲಿನಿಂದ ಬಿಡಿಸಲು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಇದು ದರ್ಶನ್ ಅವರ ಕೋಟ್ಯಾಂತರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಅತ್ತಿಗೆಯಿಂದ ಈಗ ಅವರನ್ನು ದೇವತೆ ಎಂದು ಹೇಳುತ್ತಿದ್ದಾರೆ.

ದರ್ಶನ್ ಬಂಧನದ ಮೊದಲು ವಿಜಯಲಕ್ಷ್ಮಿ ಅವರ ಇನ್‌ಸ್ಟಾಗ್ರಾಮ್ ಅಕೌಂಟ್ ಫಾಲೋ ಮಾಡುವವರ ಸಂಖ್ಯೆ 171 ಸಾವಿರವಿತ್ತು. ಆದರೆ ದರ್ಶನ್ ಪ್ರಕರಣದ ಬಳಿಕ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಮ್ ಪ್ರೋಫೈಲ್ ಡಿ ಆಕ್ಟಿವೆಟ್ ಮಾಡುವ ಮುನ್ನ ಈ ಸಂಖ್ಯೆ 188 ಸಾವಿರಕ್ಕೆ ಏರಿಕೆಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅವರ ಅಕೌಂಟ್ ಆಕ್ಟಿವ್ ಆಯಿತು. ಆಗ ಎರಡು ಲಕ್ಷ ಫಾಲೋವರ್ಸ್ ಅದರು. ಈಗ ಆ ಸಂಖ್ಯೆ ಗಂಟೆ ಗಂಟೆಗೂ ಹೆಚ್ಚಾಗುತ್ತಿದ್ದು, 219ಕ್ಕೆ ಏರಿಕೆಯಾಗಿದೆ.

Actor Darshan s wife Vijayalakshmi is becoming more famous

ವಿಜಯಲಕ್ಷ್ಮಿ ಅವರು ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗುವ ಮುಂಚೆಯಿಂದಲೂ ಅವರ ಜೊತೆಗಿದ್ದವರು. ಗಂಡನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾ ತಾನು ಕೆಲಸಕ್ಕೆ ಹೋಗಿ ತಮ್ಮ ಸಂಸಾರ ತೂಗಿಸಿದವರು. ಹೀಗಾಗಿಯೇ ಅವರ ಬಗ್ಗೆ ಇಂದಿಗೂ ಚಿತ್ರರಂಗದಲ್ಲಿ ಮತ್ತು ಅಭಿಮಾನಿಗಳಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಇಷ್ಟು ದಿನ ಅತ್ತಿಗೆ ಅತ್ತಿಗೆ ಎನ್ನುತ್ತಿದ್ದ ಅಭಿಮಾನಿಗಳು ಈಗ ದೇವತೆ ದೇವತೆ ಎನ್ನುತ್ತಿದ್ದಾರೆ.

ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ!

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ತನ್ನ ಮಗನ ಜೊತೆಗೆ ಹೋಗಿ ಭೇಟಿಯಾಗಿರುವ ಅವರು ಕಾನೂನು ಸಮರ ನಡೆಸಿ ಗಂಡನನ್ನು ಕಂಬಿಹಿಂದೆಯಿಂದ ಹೊರ ತರುವುದಾಗಿ ಹೇಳಿದ್ದಾರೆ. ದರ್ಶನ್ ಅವರು ತಮ್ಮ ಸೆಲಬ್ರಿಟಿಗಳಿಗೆ ಕೊಟ್ಟಿರುವ ವಿಶೇಷ ಸಂದೇಶವನ್ನು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ.

"ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ "ಸೆಲೆಬ್ರಿಟಿಗಳನ್ನು" ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ. ಇದೊಂದು ಪರೀಕ್ಷೆಯ ಸಮಯ. ನನಗೆ,ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ. ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ" ಎಂದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+