ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯನ್ನೇ ತಡವಿಕೊಂಡಿರುವ ಸಿದ್ದು ಸಮಸ್ಯೆ ಮೈ ಮೇಲೆ ಎಳೆದುಕೊಂಡರಾ?

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಸಿದ್ದರಾಮಯ್ಯ ಮೋದಿಯವರನ್ನ ಟಾರ್ಗೆಟ್ ಮಾಡಿ ತಪ್ಪು ಮಾಡಿದ್ರಾ? | Oneindia Kannada

ನರೇಂದ್ರ ಮೋದಿಯವರನ್ನೇ ನೇರಾನೇರ ಎದುರಿಸುವ ಮೂಲಕ ಸಿದ್ದರಾಮಯ್ಯ ತಪ್ಪು ಮಾಡಿದರಾ? ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋದಲ್ಲಿ- ಬಂದಲ್ಲಿ ನರೇಂದ್ರ ಮೋದಿ ಅವರನ್ನೇ ತಡವಿಕೊಂಡು ಸಿದ್ದು ತಪ್ಪು ಮಾಡಿದರು ಎಂದು ಬಿಜೆಪಿ ಪಾಳಯದಲ್ಲಿ ಮಾತು ಹರಿದಾಡುತ್ತಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸ್ವತಃ ಸಿದ್ದರಾಮಯ್ಯ ಅವರೇ ತಮ್ಮ ಹಾಗೂ ಮೋದಿ ವಿರುದ್ಧದ ಈ ಕದನ ಎಂಬಂತೆ ಬಿಂಬಿಸಿದರು. ಇದು ಸಿದ್ದರಾಮಯ್ಯ ಮಾಡಿದ ಬಹು ದೊಡ್ಡ ತಪ್ಪು ಎಂದು ಬಿಜೆಪಿ ವಲಯದಲ್ಲಿ ಚರ್ಚೆ ಚಾಲ್ತಿಯಲ್ಲಿದೆ. ರಾಷ್ತ್ರೀಯ ನಾಯಕರೊಬ್ಬರನ್ನು ತಡವಿಕೊಂಡ ಸಿದ್ದರಾಮಯ್ಯ ಅವರಿಗೆ ಈ ಆಟದ ಪರಿಣಾಮ ಏನು ಎಂಬ ಅಂದಾಜಿರಲಿಕ್ಕಿಲ್ಲ ಎಂಬುದು ಸಹ ಸದ್ಯಕ್ಕೆ ಚರ್ಚೆಯ ವಿಷಯ.

ನರೇಂದ್ರ ಮೋದಿ 'ಕಾಲ್ಗುಣ' ನೆನಪಿಸಿದ ಸಿದ್ದರಾಮಯ್ಯನರೇಂದ್ರ ಮೋದಿ 'ಕಾಲ್ಗುಣ' ನೆನಪಿಸಿದ ಸಿದ್ದರಾಮಯ್ಯ

ಈ ದೊಡ್ಡ ಆಟ ಸಿದ್ದರಾಮಯ್ಯ ಪಾಲಿಗೆ ದುಬಾರಿ ಆಗುತ್ತಾ? ಇದರ ಬೆಲೆಯನ್ನು ಸಿದ್ದರಾಮಯ್ಯ ತೆರಬೇಕಾಗುತ್ತದಾ? ರಾಜಕೀಯ ವಿಶ್ಲೇಷಕ ಡಾ.ಸಂದೀಪ್ ಶಾಸ್ತ್ರಿ ಅವರು ಒನ್ ಇಂಡಿಯಾ ಜತೆ ಮಾತನಾಡಿ, ವೈಯಕ್ತಿಕ ಮಟ್ಟದ ಈ ರಾಜಕಾರಣ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಎದ್ದು ಕಾಣುತ್ತಿದೆ. ವಾಸ್ತವ ಏನೆಂದರೆ ಬಿಜೆಪಿ ಪಾಲಿನ ಕೇಂದ್ರಬಿಂದು ನರೇಂದ್ರ ಮೋದಿ ಎನ್ನುತ್ತಾರೆ.

Will Siddaramaiah’s gamble to take Modi head-on pay off?

ಈ ವಿಚಾರವನ್ನು ಅರ್ಥ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರು ಮೋದಿ ವಿರುದ್ಧವೇ ದಾಳಿಗೆ ಇಳಿದಿದ್ದಾರೆ. ಬಿಜೆಪಿ ಸ್ಥಳೀಯ ಮಟ್ಟದಲ್ಲಿ ಚುನಾವಣೆ ಎದುರಿಸುತ್ತಿಲ್ಲ ಎಂಬುದನ್ನು ಹೇಳುವುದಕ್ಕೆ ಅವರು ಪ್ರಯತ್ನಿಸುತ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಮೇಲೆ ನಡೆದಿರುವ ಪ್ರಬಲ ರಾಜಕಾರಣ ದಾಳಿಯೂ ಮೋದಿ ಅವರಿಂದಲೇ ಆಗಿರುವುದು ಎಂದರು.

ಅದ್ದರಿಂದ ಎರಡೂ ಕಡೆಯಿಂದ ಗಮನ ಹರಿಸುತ್ತಿರುವುದು ನಾಯಕತ್ವ ಯಾರದು ಎಂಬ ಆಧಾರದಲ್ಲಿಯೇ. "ಕಾಂಗ್ರೆಸ್ ನ ಚುನಾವಣೆ ಪ್ರಚಾರ ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿದೆ. ಆದರೆ ಬಿಜೆಪಿಯದು ದೆಹಲಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಸವಾಲಂತೂ ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ. ಆದರೆ ಇದು ಪ್ರಜ್ಞಾಪೂರ್ವಕವಾದ ನಿರ್ಧಾರ" ಎನ್ನುತ್ತಾರೆ ಸಂದೀಪ್ ಶಾಸ್ತ್ರಿ.

English summary
The BJP feels that the biggest mistake that Siddaramaiah could have made is taking the Prime Minister Narendra Modi head on during the campaign for the Karnataka Assembly Elections 2018. It is an interesting gamble by the Chief Minister of Karnataka as he had made it Modi vs him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X