ಯಡಿಯೂರಪ್ಪ ನಾಳೆ ಪ್ರಮಾಣವಚನ ಸ್ವೀಕಾರ ಮಾಡ್ತಾರಾ?
ಬೆಂಗಳೂರು, ಮೇ 16: ಮುಖ್ಯಮಂತ್ರಿಯಾಗಲು ತುದಿಗಾಲಲ್ಲಿ ನಿಂತಿರುವ ಯಡಿಯೂರಪ್ಪ ಅವರು ಬಯಸಿದಂತೆ ಮೇ 17ರಂದು ಪ್ರಮಾಣವಚನ ಸ್ವೀಕರಿಸುತ್ತಾರೆಯೇ ಇಲ್ಲವೇ ಎಂಬ ಕುತೂಹಲ ಮೂಡಿದೆ.
ಮೇ 17 ಅಥವಾ 18ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ಪ್ರಚಾರ ಭಾಷಣಗಳ ವೇಳೆ ಹೇಳಿಕೊಂಡಿದ್ದರು.
ಸರಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಿದ ರಾಜ್ಯಪಾಲರು!
ಪ್ರಮಾಣ ವಚನ ಸ್ವೀಕರಿಸಲು ಮೇ 17 ಸೂಕ್ತ ದಿನವೆಂದು ಯಡಿಯೂರಪ್ಪ ಅವರಿಗೆ ತಿಳಿಸಿದ್ದರಿಂದ ಅಂದೇ ಮುಹೂರ್ತ ನಿಗದಿಪಡಿಸಲು ಅವರು ಉತ್ಸಾಹ ತೋರಿದ್ದರು. ಆದರೆ, ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆಯೇ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ.
'ರಾಜ್ಯಪಾಲರ
ನಿರ್ಧಾರಕ್ಕೆ
ಕಾಯುತ್ತಿದ್ದೇವೆ'
ಬಿಜೆಪಿ
ಶಾಸಕಾಂಗ
ಪಕ್ಷದ
ನಾಯಕರಾಗಿ
ಆಯ್ಕೆಯಾಗಿರುವ
ಯಡಿಯೂರಪ್ಪ
ಅವರು,
ಪಕ್ಷದ
ಇತರೆ
ಮುಖಂಡರ
ಜತೆಗೂಡಿ
ರಾಜಭವನಕ್ಕೆ
ತೆರಳಿ
ಸರ್ಕಾರ
ರಚನೆಗೆ
ಅವಕಾಶ
ನೀಡುವಂತೆ
ರಾಜ್ಯಪಾಲ
ವಜೂಭಾಯಿ
ವಾಲಾ
ಅವರಿಗೆ
ಮನವಿ
ಸಲ್ಲಿಸಿದರು.
ತಮ್ಮನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ ನಿರ್ಧಾರದ ಪ್ರತಿಯನ್ನು ರಾಜ್ಯಪಾಲರಿಗೆ ಒಪ್ಪಿಸಿದರು.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡುವಂತೆ ಅವರನ್ನು ಕೋರಿದ್ದೇವೆ. ರಾಜ್ಯಪಾಲರು ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಶೀಘ್ರವೇ ತೀರ್ಮಾನ ಪ್ರಕಟಿಸಿ ನನಗೆ ಕರೆ ಮಾಡುವ ವಿಶ್ವಾಸವಿದೆ. ಅವರಿಂದ ಪತ್ರ ಬಂದ ಬಳಿಕ ನಿಮಗೆ ತಿಳಿಸಲಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು. .
ಬುಧವಾರ (ಮೇ 16 ) ಸಂಜೆ ವೇಳೆಗೆ ರಾಜ್ಯಪಾಲರು ಸರ್ಕಾರ ರಚನೆಯ ಬಗ್ಗೆ ಆಹ್ವಾನ ನೀಡುವ ಸಾಧ್ಯತೆ ಇದೆ. ಪ್ರಮಾಣವಚನ ಸ್ವೀಕಾರಕ್ಕೆ ಸೂಕ್ತ ಸಮಯ ನಿಗದಿಪಡಿಸಲು ಯಡಿಯೂರಪ್ಪ ಅವರು ಜ್ಯೋತಿಷಿಗಳ ಮೊರೆ ಹೊಕ್ಕಿದ್ದಾರೆ ಎನ್ನಲಾಗಿದೆ.