ಕೊಪ್ಪಳದಲ್ಲಿ ಅರಳಿದ ಕಮಲ: ಬಿಜೆಪಿಗೆ ಮೇಲುಗೈ
ಕರ್ನಾಟಕ ವಿಧಾನಸಭೆ ಚುನಾವಣೆ 2018 ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕಮಲ ಅರಳಿದೆ. ಐದು ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಬಿಜೆಪಿ ಪಡೆದಿದೆ. ಉಳಿದ ಎರಡು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.
ಅಷ್ಟಕ್ಕೂ, 2013 ರ ಚುನಾವಣೆಯಲ್ಲಿ ಕೊಪ್ಪಳ ಕೈವಶವಾಗಿತ್ತು. ಐದು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿ ಆಗಿತ್ತು. ಆದ್ರೀಗ, ಆ ಮೂರು ಸ್ಥಾನಗಳಲ್ಲಿ ಎರಡನ್ನು ಕಾಂಗ್ರೆಸ್ ಕಳೆದುಕೊಂಡಿದೆ.
ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಕನಕಗಿರಿಯಲ್ಲಿ ಜಯಭೇರಿ ಬಾರಿಸಿದ್ದ ಶಿವರಾಜ್ ತಂಗಡಗಿ ಹಾಗೂ ಯಲಬುರ್ಗದ ಬಸವರಾಜ್ ರಾಯರೆಡ್ಡಿ ಈ ಬಾರಿ ಸೋಲು ಕಂಡಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ಎರಡು ಸ್ಥಾನಗಳು ನಷ್ಟವಾಗಿದೆ.

ಕೊಪ್ಪಳದಲ್ಲಿ ಕಳೆದ ಬಾರಿ ಗೆದ್ದಿದ್ದ ರಾಘವೇಂದ್ರ ಹಿಟ್ನಾಳ್ ಈ ಬಾರಿಯೂ ಗೆಲುವು ಕಂಡಿರುವುದರಿಂದ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಕೊಪ್ಪಳ ಜಿಲ್ಲೆ ವಿಧಾನಸಭೆ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:
| ಕ್ಷೇತ್ರ | ಗೆದ್ದವರು | ಪಕ್ಷ | ಗಳಿಸಿದ ಮತಗಳು | ಸೋತವರು | ಪಕ್ಷ | ಗಳಿಸಿದ ಮತಗಳು |
| ಕುಷ್ಟಗಿ | ಅಮರೇಗೌಡ ಲಿಂಗನಗೌಡ ಪಾಟಿಲ್ ಬಯ್ಯಾಪುರ | ಕಾಂಗ್ರೆಸ್ | 87567 | ದೊಡ್ಡನಗೌಡ ಹನಮಗೌಡ ಪಾಟಿಲ್ | ಬಿಜೆಪಿ | 69536 |
| ಕನಕಗಿರಿ | ಬಸವರಾಜ್ | ಬಿಜೆಪಿ | 87735 | ಶಿವರಾಜ್ ತಂಗಡಗಿ | ಕಾಂಗ್ರೆಸ್ | 73510 |
| ಗಂಗಾವತಿ | ಪರಣ್ಣ ಮುನವಳ್ಳಿ | ಬಿಜೆಪಿ | 67617 | ಇಕ್ಬಾಲ್ ಅನ್ಸಾರಿ | ಕಾಂಗ್ರೆಸ್ | 59644 |
| ಯಲಬುರ್ಗ | ಹಾಲಪ್ಪ ಆಚಾರ್ | ಬಿಜೆಪಿ | 79072 | ಬಸವರಾಜ್ ರಾಯರೆಡ್ಡಿ | ಕಾಂಗ್ರೆಸ್ | 65754 |
| ಕೊಪ್ಪಳ | ರಾಘವೇಂದ್ರ ಬಸವರಾಜ್ ಹಿಟ್ನಾಲ್ | ಕಾಂಗ್ರೆಸ್ | 98783 | ಅಮರೇಶ್ ಸಂಗಣ್ಣ ಕರಡಿ | ಬಿಜೆಪಿ | 72432 |












Click it and Unblock the Notifications