ವಿಶ್ವಾಸ ಮತ ಯಾಚಿಸದೆ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬಿಎಸ್ವೈ | Oneindia Kannada
ಬೆಂಗಳೂರು, ಮೇ 19: ಕರ್ನಾಟಕ ರಾಜಕಾರಣದ ಪಾಲಿಗೆ ಮೇ 19 ಶನಿವಾರ ಅತ್ಯಂತ ಮಹತ್ವದ ದಿನ. ಸುಪ್ರೀಂ ಕೋರ್ಟಿನ ಸೂಚನೆಯಂತೇ ಕರ್ನಾಟಕದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಎಲ್ಲಾ ಪಕ್ಷಗಳೂ ಅಗ್ನಿಪರೀಕ್ಷೆ ಎದುರಿಸುತ್ತಿವೆ.
ಮೇ 17ರಂದು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ ಎಸ್ ಯಡಿಯೂರಪ್ಪ ಆ ಸ್ಥಾನದಲ್ಲೇ ಮುಂದುವರಿಯುತ್ತಾರಾ ಅಥವಾ ಜೆಡಿಎಸ್ ನ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುತ್ತಾರಾ ಎಂಬುದು ಶನಿವಾರ ಸಂಜೆ ತಿಳಿಯಲಿದೆ.
ಬಿಜೆಪಿಗೆ ಇದು ಉಭಯ ಸಂಕಟವಾದರೆ, ಕಾಂಗ್ರೆಸ್-ಜೆಡಿಎಸ್ ಪ್ರತಿಷ್ಠೆಯ ಪ್ರಶ್ನೆ. ಮೇ 15ರಂದು ಪ್ರಕಟವಾದ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಮತ್ತು ಇತರರು 2 ಸ್ಥಾನಗಳಲ್ಲಿ ಜಯ ಸಾಧಿಸಿದ್ದು ಯಾವ ಪಕ್ಷವೂ ಬಹುಮತ ಪಡೆದಿರಲಿಲ್ಲ.
Karnataka Assembly (Half way mark- 109)
Total MLAs
Abstained
Present in Assembly
BJP
104
-1
103
CONGRESS
78
-2
76
JDS+
37
0
0
OTHERS
2
0
2
Newest FirstOldest First
6:44 PM, 19 May
ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಸರಕಾರ ರಚಿಸುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಆಹ್ವಾನ ನೀಡಿದ್ದಾರೆ.
6:10 PM, 19 May
ಬಿಜೆಪಿ ವಿರುದ್ಧದ ಶಾಸಕ ಖರೀದಿ ಯತ್ನ ಆರೋಪ ಶುದ್ಧ ಸುಳ್ಳು, ತಪ್ಪು ಸಂದೇಶ ರವಾನೆಯಾಗುತ್ತಿದೆ, ಆದರೆ ನಾವು ಕುದುರೆ ವ್ಯಾಪಾರವನ್ನು ಮಾಡಿಲ್ಲ-ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್
6:06 PM, 19 May
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ಆರಂಭಿಸಿದ್ದಾರೆ
5:42 PM, 19 May
ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಹಿನ್ನೆಲೆಯಲ್ಲಿ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ನೆಲಮಂಗಲದಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಸಂಭ್ರಮ
5:39 PM, 19 May
ಬೆಂಗಳೂರಿನ ಇಂದಿರಾನಗರದ ಹಿಲ್ಟನ್ ಹೋಟೆಲ್ ನಲ್ಲಿ ಕಾಂಗ್ರೆಸ್- ಜೆಡಿಸ್ ಶಾಸಕರ ವಾಸ್ತವ್ಯ
5:25 PM, 19 May
ಅಧಿವೇಶನದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವಾಗಲೇ ಅದಕ್ಕೆ ಗೌರವ ಕೂಡಾ ಕೊಡದೆ ಬಿಜೆಪಿಯ ಎಲ್ಲ ನಾಯಕರು ಎದ್ದು ಹೊರಕ್ಕೆ ಹೋದರು ಇದು ಅವರ ದೇಶಭಕ್ತಿ ಎಂದು ಮೂದಲಿಸಿದ ರಾಹುಲ್ ಗಾಂಧಿ
5:24 PM, 19 May
ಬಿಜೆಪಿಯು ಸಿಬಿಐ, ಇಡಿ, ಐಟಿ ಸೇರಿದಂತೆ ರಾಷ್ಟ್ರದಲ್ಲಿನ ಎಲ್ಲಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರ ಹಿಡಿಯಲು ಯತ್ನಿಸಿತ್ತು, ಆದರೆ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಾಗಿ ಹೋರಾಡಿ ಜಯ ಸಾಧಿಸಿದ್ದಾರೆ-ರಾಹುಲ್ ಗಾಂಧಿ
5:23 PM, 19 May
ಭ್ರಷ್ಟಾಚಾರದ ವಿರುದ್ಧ ಎಂದು ತಮ್ಮನ್ನು ತಾವೇ ಕರೆದುಕೊಳ್ಳುವ ಮೋದಿ ಅವರೇ ಕರ್ನಾಟಕದಲ್ಲಿ ಕುದುರೆ ವ್ಯಾಪಾರ ಮಾಡಲು ಮಾರ್ಗದರ್ಶನ ನೀಡಿದ್ದರು-ರಾಹುಲ್ ಗಾಂಧಿ
5:21 PM, 19 May
ಕರ್ನಾಟಕದಲ್ಲಿ ಬಿಜೆಪಿಗೆ ಆಗಿರುವ ಸೋಲು, ಪ್ರಜಾಪ್ರಭುತ್ವಕ್ಕೆ ದೊರಕಿರುವ ಗೆಲುವು, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಪ್ರಜಾಪ್ರಭುತ್ವವನ್ನು ಉಳಿಸಿದೆ- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
5:01 PM, 19 May
ಕರ್ನಾಟಕದಲ್ಲಿ ಮೂರು ದಿನದಲ್ಲಿ ಬಿಜೆಪಿ ಸರ್ಕಾರ ಬಿದ್ದಿದೆ. ಅಧಿಕಾರ, ಹಣವೇ ಎಲ್ಲವೂ ಅಲ್ಲ ಎಂದು ಸಾಬೀತಾಗಿದೆ- ರಾಹುಲ್ ಗಾಂಧಿ
5:01 PM, 19 May
ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಲು ವೇದಿಕೆ ಸಿದ್ಧವಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ.
4:38 PM, 19 May
We are waiting for invitation from the Governor's House: JD(S)'s HD Kumaraswamy on being asked when he will take oath as Chief Minister #Karnatakapic.twitter.com/Uol7BK46lg
"ಸರ್ಕಾರ ರಚಿಸಲು ನಮಗೆ ರಾಜ್ಯಪಾಲರಿಂದ ಆಮಂತ್ರಣ ಬರಬೇಕೆಂದು ಕಾಯುತ್ತಿದ್ದೇನೆ"- ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಹೇಳಿಕೆ
4:31 PM, 19 May
ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ- ಸಿದ್ದರಾಮಯ್ಯ
4:29 PM, 19 May
ಭಾರತದ ರಾಜಕಾರಣದಲ್ಲಿ ಮತ್ತು ಕರ್ನಾಟಕದ ರಾಜಕಾರಣದಲ್ಲಿ ಇದೊಂದು ಐತಿಹಾಸಿಕವಾದ ಘಟನೆ. ಯಡಿಯೂರಪ್ಪನವರು ವಿಧಾನಸೌಧದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಒಪ್ಪಿಕೊಂಡು, ಆದರೆ ಅದಕ್ಕೆ ಅಸಮರ್ಥರಾಗಿ ಫಲಾಯನ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ವಿಜಯ- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
4:26 PM, 19 May
Bengaluru: Congress' DK Shivkumar, JD(S)'s HD Kumaraswamy & other MLAs at Vidhana Soudha after resignation of BJP's BS Yeddyurappa as Chief Minister of Karnataka. pic.twitter.com/qdGu8zGXWK
ಎಚ್ ಡಿ ಕುಮಾರಸ್ವಾಮಿ ಅವರ ಕೈ ಎತ್ತಿ ಸಂಭ್ರಮ ವ್ಯಕ್ತಪಡಿಸಿದ ಡಿ ಕೆ ಶಿವಕುಮಾರ್
4:18 PM, 19 May
ರಾಜೀನಾಮೆ ಘೋಷಣೆ ಮಾಡಿದ ನಂತರ ಬಿ ಎಸ್ ಯಡಿಯೂರಪ್ಪ ಅವರು ಕಣ್ಣೀರು ಸುರಿಸಿದ್ದಾರೆ.
4:17 PM, 19 May
ಕಾಂಗ್ರೆಸ್ -ಜೆಡಿಎಸ್ ಪಾಳೆಯದಲ್ಲಿ ಮನೆಮಾಡಿದ ಸಂಭ್ರಮ
4:14 PM, 19 May
ಮೂರು ದಿನಗಳಲ ಕಾಲ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಇನ್ನು ಕೆಲವೇ ಕ್ಷಣಗಳಲ್ಲಿ ರಾಜೀನಾಮೆ ನೀಡಲಿದ್ದಾರೆ.
4:12 PM, 19 May
ರಾಜೀನಾಮೆ ನೀಡಲು ರಾಜಭವನದತ್ತ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ.
4:12 PM, 19 May
ವಿಶ್ವಾಸಮತ ಯಾಚಿಸದ ಬಿ ಎಸ್ ಯಡಿಯೂರಪ್ಪ
4:10 PM, 19 May
ಜನಪರ ಹೋರಾಟ ಇನ್ನೂ ಮುಂದುವರಿಯುತ್ತದೆ. ನಾನು ಕೊನೇ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ. ನನಗೆ ಅಧಿಕಾರ ಕೊಡದಿದ್ದರೆ ಪ್ರಾಣ ಕಳೆದುಕೊಳ್ಳುತ್ತೇನೆ ಎಂದರು ಕೆಲವರು. ಆದರೆ ನಾನು ಅದಕ್ಕಾಗಿ ಪ್ರಾಣ ಕಳೆದುಕೊಳ್ಳುವುದಿಲ್ಲ. ಜನರಿಗಾಗಿ ಕಳೆದುಕೊಂಡಿದ್ದಾರೆ- ಬಿ ಎಸ್ ಯಡಿಯೂರಪ್ಪ
4:07 PM, 19 May
ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ - ಬಿ ಎಸ್ ಯಡಿಯೂರಪ್ಪ
4:03 PM, 19 May
ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತೇನೆ- ಬಿ ಎಸ್ ಯಡಿಯೂರಪ್ಪ
4:01 PM, 19 May
ನನಗೊಂದು ಆಸೆಯಿತ್ತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವಾಗ ಇಲ್ಲಿ ಬಿಜೆಪಿ ಸರ್ಕಾರ ಇರಬೇಕು ಎಂದು. ನಮಗೆ ಯಾವ ಕೊರತೆಯೂ ಇಲ್ಲ. ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಕೈಗಳ ಕೊರತೆ ಇದೆ - ಬಿ ಎಸ್ ಯಡಿಯೂರಪ್ಪ
3:57 PM, 19 May
ಅನೇಕ ರೀತಿಯ ಹಗುರ ಮಾತನ್ನು ಕೇಳಿದ್ದೇನೆ. ನನಗೆ ಯಾವ ಬೇಸರವೂ ಇಲ್ಲ. ಕೊಳಗೇರಿ ಜನರ ಸಮಸ್ಯೆ ಈ ನಾಡಿನ ಜ್ವಲಂತ ಸಮಸ್ಯೆಯಲ್ಲೊಂದಾಗಿದೆ. ಅವುಗಳ ಬಗ್ಗೆ ನೆನೆದರೆ ದುಃಖವಾಗುತ್ತದೆ- ಬಿ ಎಸ್ ಯಡಿಯೂರಪ್ಪ
3:56 PM, 19 May
ರೈತರ ಸಾಲಮನ್ನಾ, ನೀರಾವರಿ ವ್ಯವಸ್ಥೆ, ಬೆಂಬಲ ಬೆಲೆ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಹೆಚ್ಚಿಸಬೇಕು ಎಂಬಿತ್ಯಾದಿ ಆಸೆಗಳು ನನ್ನವು-ಬಿ ಎಸ್ ಯಡಿಯೂರಪ್ಪ
3:55 PM, 19 May
ಕೊನೆ ಉಸಿರಿರೋವರೆಗೂ ರೈತರಿಗಾಗಿ ಹೋರಾಡುತ್ತೇನೆ. ರೈತರನ್ನು ಉಳಿಸುವುದಕ್ಕಾಗಿ ನಾನು ಕೆಲಸ ಮಾಡಬೇಕೆಂಬ ಆಸೆಯಿದೆ. ರೈತರ ಕಣ್ಣೀರನ್ನು ಒರೆಸುವ ಕಾರ್ಯ ಮಾಡುತ್ತೇನೆ-ಬಿ ಎಸ್ ಯಡಿಯೂರಪ್ಪ
3:53 PM, 19 May
ನೀರಿನ ಸಮಸ್ಯೆ ಪರಿಹಾರವಾಗಿಲ್ಲ, ಜನರ ಬವಣೆ ಕಡಿಮೆಯಾಗಿಲ್ಲ. ಜನರು ಬೇಸೆತ್ತ ಸಮಯದಲ್ಲಿ ನಡೆದ ಚುನಾವಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದನ್ನು ನೋಡಿದ್ದೇವೆ. ನಾಡಿನ ಉದ್ದಗಲಕ್ಕೂ ಸಂಚರಿಸಿ ನಾಡಿನ ಜನರ ಉದ್ಧಾರಕ್ಕೆ ಕಂಕಣಬದ್ಧರಾಗಿದ್ದೇವೆ- ಬಿ ಎಸ್ ಯಡಿಯೂರಪ್ಪ
3:52 PM, 19 May
ಈ ರಾಜ್ಯದ ರೈತರ, ಅನ್ನದಾತ ಸ್ವಾಭಿಮಾನ, ಗೌರವದಿಂದ ಬಾಳುವುದಕ್ಕೆ ನಾವೆಲ್ಲ ಪ್ರಯತ್ನಿಸಬೇಕಾಗಿದೆ. ನಾನು ಅದಕ್ಕಾಗಿ ನನ್ನ ಸರ್ವಸ್ವನ್ನೂ ನೀಡಲು ಸಿದ್ಧನಿದ್ದೇನೆ-ಬಿ ಎಸ್ ಯಡಿಯೂರಪ್ಪಈ ರಾಜ್ಯದ ರೈತರ, ಅನ್ನದಾತ ಸ್ವಾಭಿಮಾನ, ಗೌರವದಿಂದ ಬಾಳುವುದಕ್ಕೆ ನಾವೆಲ್ಲ ಪ್ರಯತ್ನಿಸಬೇಕಾಗಿದೆ. ನಾನು ಅದಕ್ಕಾಗಿ ನನ್ನ ಸರ್ವಸ್ವನ್ನೂ ನೀಡಲು ಸಿದ್ಧನಿದ್ದೇನೆ-ಬಿ ಎಸ್ ಯಡಿಯೂರಪ್ಪ
3:50 PM, 19 May
ಆದರೆ ಜನಾದೇಶದ ವಿರುದ್ಧ ಅವಕಾಶವಾದಿ ರಾಜಕಾರಣ ನಡೆದಿದೆ. ಏಕೈಕ ಅತೀ ದೊಡ್ಡ ಪಕ್ಷವಾಗಿದ್ದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡದಿರಲು ಪ್ರಯತ್ನಿಸಲಾಗುತ್ತಿದೆ.
READ MORE
3:19 PM, 18 May
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೇ 19 ರಂದು ಅಪರಾಹ್ನ 4 ಗಂಟೆಗೇ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚಿಸಿದೆ.
3:20 PM, 18 May
ಬಹುಮತ ಸಾಬೀತು ಪಡಿಸಲು ರಾಜ್ಯಪಾಲ ವಾಜುಭಾಯ್ ವಾಲಾ ಬಿಜೆಪಿಗೆ 15 ದಿನಗಳ ಸಮಯಾವಕಾಶ ನೀಡಿದ್ದರು. ಈ ನಡೆಯನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟಿನಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ದಾವೆ ಹೋಡಿದ್ದವು
3:23 PM, 18 May
As per the directions of Supreme Court, we are expected to prove our majority tomorrow. We are sending our file to Karnataka governor to call an assembly session at 11 am tomorrow. We are going to prove majority: BS Yeddyurappa, CM of Karnataka. pic.twitter.com/I03TguRAV7
"ಸುಪ್ರೀಂ ಕೋರ್ಟ್ ಸೂಚನೆಯಂತೆ ನಾವು ಬಹುಮತ ಸಾಬೀತುಪಡಿಸಲು ಸಿದ್ಧರಾಗಿದ್ದೇವೆ. ಮೇ 19 ರಂದು ಬೆಳಿಗ್ಗೆ 11 ಗಂತೆಗೆ ಈ ಸಂಬಂಧ ಅಸೆಂಬ್ಲಿ ಸೆಶನ್ ಕರೆದಿದ್ದೇವೆ. ನಾವು ಬಹುಮತ ಸಾಬೀತುಪಡಿಸುತ್ತೇವೆ"-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
3:25 PM, 18 May
"ನಾವು ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಮೇ 19 ರಂದು ನಾವು ಬಹುಮತ ಸಾಬೀತುಪಡಿಸುತ್ತೇವೆ"- ಶೋಭಾ ಕರಂದ್ಲಾಜೆ
— Oneindia Kannada (@OneindiaKannada) May 18, 2018
"104 ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿದ್ದ ಬಿ ಎಸ್ ಯಡಿಯೂರಪ್ಪ, ಬಹುಮತ ಸಾಬೀತುಪಡಿಸಲು 7 ದಿನ ಸಮಯ ಕೇಳಿದ್ದರು. ಆದರೆ ರಾಜ್ಯಪಾಲರು 15 ದಿನ ಸಮಯ ನೀಡುವ ಮೂಲಕ ಅಸಾಂವಿಧಾನಿಕ ನಿರ್ಧಾರ ಕೈಗೊಂಡಿದ್ದಾರೆ"- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
6:49 AM, 19 May
ಕೆಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರನ್ನಾಗಿ ಮಾಡಿ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಇಂದು ಬೆಳಿಗ್ಗೆ 10.30ಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
6:52 AM, 19 May
ಹೈದರಾಬಾದ್ ನ ರೆಸಾರ್ಟ್ ಗಳಲ್ಲಿ ಬೀಡು ಬಿಟ್ಟಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬೆಂಗಳೂರಿಗೆ ವಾಪಸ್ ಆಗಿದ್ದು, ಇಂದು (ಶನಿವಾರ) 11 ಗಂಟೆಗೆ ಆರಂಭವಾಗಲಿರುವ ಅಧಿವೇಶನಕ್ಕೆ ಹಾಜರಾಗಬೇಕು. ಪ್ರಮಾಣವಚನ ಸ್ವೀಕರಿಸಿದ ನಂತರ ವಿಶ್ವಾಸಮತದಲ್ಲಿ ಭಾಗಿಯಾಗಲಿದ್ದಾರೆ.
7:06 AM, 19 May
ವಿಧಾನಸೌಧದ ಸುತ್ತಮುತ್ತ ಭಾರೀ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದ್ದು 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಐವರು ಡಿಸಿಪಿ, 100 ಇನ್ ಸ್ಪೆಕ್ಟರ್, 200 ಪಿಎಸ್ಐಗಳು, 30 ಕೆಎಸ್ಆರ್ಪಿ ತುಕುಡಿಗಳು ಭದ್ರತೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಸಾರ್ವಜನಿಕರಿಗೆ ವಿಧಾನಸೌಧ ಪ್ರವೇಶವನ್ನು ನಿಷೇಧಿಸಲಾಗಿದೆ.
ಶಾಂಗ್ರಿಲಾ ಹೋಟೆಲ್ ನಲ್ಲಿ ಸಭೆ ನಡೆಸಲು ಆಗಮಿಸಿದ ಬಿಜೆಪಿ ಮುಖಂಡರಾದ ಪ್ರಕಾಶ್ ಜಾವ್ಡೇಕರ್, ಮುರಳೀಧರ ರಾವ್
9:13 AM, 19 May
ವಿಧಾನಸಭೆಗೆ ಹಂಗಾಮಿ ಸ್ಪೀಖರ್ ಬೋಪಯ್ಯ ಆಗಮನ
9:17 AM, 19 May
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಭಿಮಾನಿಗಳು ಮತ್ತಿ ಬಿಜೆಪಿ ಕಾರ್ಯಕರ್ತರು ಮೈಸೂರಿನ ಚಾಮುಂಡಿ ಬೆಟ್ಟದ 1001 ಮೆಟ್ಟಿಲು ಹತ್ತಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ವೈ ವಿಶ್ವಾಸಮತ ಗೆಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
9:17 AM, 19 May
ಶಾಂಗ್ರಿಲಾ ಹೋಟೆಲ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಶಾಸಕಾಂಗ ಪಕ್ಷದ ಸಭೆ.
— Oneindia Kannada (@OneindiaKannada) May 19, 2018
"ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿರಬಹುದು. ಆದರೆ ಅವರು ನಮ್ಮ ಸಂಪರ್ಕದಲ್ಲೇ ಇದ್ದಾರೆ. ಅವರು ವಿಧಾನಸೌಧಕ್ಕೆ ಬಂದೇ ಬರುತ್ತಾರೆ. ಮತ್ತು ನಮ್ಮ ಪರವಾಗಿ ಮತಚಲಾಯಿಸುತ್ತಾರೆ"- ರಾಮಲಿಂಗಾ ರೆಡ್ಡಿ, ಕಾಂಗ್ರೆಸ್ ಶಾಸಕ
9:23 AM, 19 May
ಕಾಂಗ್ರೆಸ್ ಹಿರಿಯ ಶಾಸಕರಿರುವ ಹೋಟೆಲ್ ಗೆ ಆಗಮಿಸಿದ ಕಾಂಗ್ರೆಸ್ ನ ಹಿರಿಯ ನಾಯಕರು.
9:34 AM, 19 May
ಲೀ ಮೆರಿಡಿಯನ್ ಹೋಟೆಲ್ ಗೆ ಇಂಟಲಿಜೆನ್ಸ್ ಅಧಿಕಾರಿಗಳು ಭೇಟಿ.
9:35 AM, 19 May
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಭಿಮಾನಿಗಳಿಂದ ದೇವರಿಗೆ ವಿಶೇಷ ಪೂಜೆ.
9:37 AM, 19 May
ತಾಜ್ ವೆಸ್ಟೆಂಡ್ ಹೋಟೆಲ್ ಗೆ ಗಡಿಬಿಡಿಯಲ್ಲಿ ಬಂದು ಅಷ್ಟೇ ಗಡಿಬಿಡಿಯಲ್ಲಿ ವಾಪಸ್ಸಾದ ಬಿ ಎಸ್ ವೈ ಪುತ್ರ ವಿಜಯೇಂದ್ರ. ಇದೀಗ ಬಿಜೆಪಿ ಶಾಸಕರು ತಂಗಿರುವ ಶಾಂಗ್ರೀಲಾ ಹೋಟೆಲ್ ಗೆ ತೆರಳಿದ ವಿಜಯೇಂದ್ರ.
9:40 AM, 19 May
ಬಿಎಸ್ವೈ ಅಧಿಕಾರ ಉಳಿಯಲಿ ಎಂದು ಯಡಿಯೂರು ಸಿದ್ದಲಿಂಗೇಶ್ವರನಿಗೆ ಅಹೋರಾತ್ರಿ ಪೂಜೆ, ಅಭಿಷೇಕ. ನಾಡದೇವತೆ ಚಾಮುಂಡೇಶ್ವರಿಗೂ ವಿಶೇಷ ಪೂಜೆ.
9:42 AM, 19 May
ಸುಪ್ರೀಂ ಕೋರ್ಟ್ ಆವರಣಕ್ಕೆ ಬಂದಿಳಿದ ಅಭಿಷೇಕ್ ಮನು ಸಿಂಘ್ವಿ.
ಹಂಗಾಮಿ ಸ್ಪೀಕರ್ ಆಗಿ ಕೆ ಜಿ ಬೋಪಯ್ಯ ಆಯ್ಕೆ ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂ ನಲ್ಲಿಂದು ಇಂದು ನಡೆಲಿರುವ ಹಿನ್ನೆಲೆಯಲ್ಲಿ ಸಿಂಘ್ವಿ ಆಗಮನ
9:45 AM, 19 May
ಹಂಗಾಮಿ ಸ್ಪೀಕರ್ ಆಗಿ ಕೆ ಜಿ ಬೋಪಯ್ಯ ಅವರನ್ನು ನೇಮಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಇನ್ನು ಕೆಲವೇ ಕ್ಷಣಗಳಲ್ಲಿ ನಡೆಯಲಿದೆ.
9:47 AM, 19 May
ಶಾಸಕರ ದಾಖಲಾತಿ, ಪ್ರಮಾಣಪತ್ರವನ್ನು ಅವರ ಕುಟುಂಬಸ್ಥರು ತಂದು ಕೊಡುತ್ತಿದ್ದಾರೆ. ಮೂರು ದಿನದಿಂದ ಮನೆಯಿಂದ ಆಚೆಯೇ ಇರುವ ಶಾಸಕರು!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more