• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ಕಾರ ರಚನೆಗೆ ಕುಮಾರಸ್ವಾಮಿಯನ್ನು ಆಹ್ವಾನಿಸಿದ ರಾಜ್ಯಪಾಲ ವಾಲಾ

|
      ವಿಶ್ವಾಸ ಮತ ಯಾಚಿಸದೆ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬಿಎಸ್ವೈ | Oneindia Kannada

      ಬೆಂಗಳೂರು, ಮೇ 19: ಕರ್ನಾಟಕ ರಾಜಕಾರಣದ ಪಾಲಿಗೆ ಮೇ 19 ಶನಿವಾರ ಅತ್ಯಂತ ಮಹತ್ವದ ದಿನ. ಸುಪ್ರೀಂ ಕೋರ್ಟಿನ ಸೂಚನೆಯಂತೇ ಕರ್ನಾಟಕದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಎಲ್ಲಾ ಪಕ್ಷಗಳೂ ಅಗ್ನಿಪರೀಕ್ಷೆ ಎದುರಿಸುತ್ತಿವೆ.

      ಸುಪ್ರೀಂ ಆದೇಶ : ಶನಿವಾರ ಬಹುಮತ ಸಾಬೀತು ಮಾಡಬೇಕು

      ಮೇ 17ರಂದು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ ಎಸ್ ಯಡಿಯೂರಪ್ಪ ಆ ಸ್ಥಾನದಲ್ಲೇ ಮುಂದುವರಿಯುತ್ತಾರಾ ಅಥವಾ ಜೆಡಿಎಸ್ ನ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುತ್ತಾರಾ ಎಂಬುದು ಶನಿವಾರ ಸಂಜೆ ತಿಳಿಯಲಿದೆ.

      Karnataka Assembly Floor Test LIVE Updates and results

      ಬಿಜೆಪಿಗೆ ಇದು ಉಭಯ ಸಂಕಟವಾದರೆ, ಕಾಂಗ್ರೆಸ್-ಜೆಡಿಎಸ್ ಪ್ರತಿಷ್ಠೆಯ ಪ್ರಶ್ನೆ. ಮೇ 15ರಂದು ಪ್ರಕಟವಾದ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಮತ್ತು ಇತರರು 2 ಸ್ಥಾನಗಳಲ್ಲಿ ಜಯ ಸಾಧಿಸಿದ್ದು ಯಾವ ಪಕ್ಷವೂ ಬಹುಮತ ಪಡೆದಿರಲಿಲ್ಲ.

      Karnataka Assembly (Half way mark- 109)
      Total MLAs AbstainedPresent in Assembly
      BJP104-1103
      CONGRESS78-276
      JDS+3700
      OTHERS202

      Newest First Oldest First
      6:44 PM, 19 May
      ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಸರಕಾರ ರಚಿಸುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಆಹ್ವಾನ ನೀಡಿದ್ದಾರೆ.
      6:10 PM, 19 May
      ಬಿಜೆಪಿ ವಿರುದ್ಧದ ಶಾಸಕ ಖರೀದಿ ಯತ್ನ ಆರೋಪ ಶುದ್ಧ ಸುಳ್ಳು, ತಪ್ಪು ಸಂದೇಶ ರವಾನೆಯಾಗುತ್ತಿದೆ, ಆದರೆ ನಾವು ಕುದುರೆ ವ್ಯಾಪಾರವನ್ನು ಮಾಡಿಲ್ಲ-ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್
      6:06 PM, 19 May
      ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ಆರಂಭಿಸಿದ್ದಾರೆ
      5:42 PM, 19 May
      ಬಿ.ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಹಿನ್ನೆಲೆಯಲ್ಲಿ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ನೆಲಮಂಗಲದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಸಂಭ್ರಮ
      5:39 PM, 19 May
      ಬೆಂಗಳೂರಿನ ಇಂದಿರಾನಗರದ ಹಿಲ್ಟನ್ ಹೋಟೆಲ್ ನಲ್ಲಿ ಕಾಂಗ್ರೆಸ್‌- ಜೆಡಿಸ್ ಶಾಸಕರ ವಾಸ್ತವ್ಯ
      5:25 PM, 19 May
      ಅಧಿವೇಶನದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವಾಗಲೇ ಅದಕ್ಕೆ ಗೌರವ ಕೂಡಾ ಕೊಡದೆ ಬಿಜೆಪಿಯ ಎಲ್ಲ ನಾಯಕರು ಎದ್ದು ಹೊರಕ್ಕೆ ಹೋದರು ಇದು ಅವರ ದೇಶಭಕ್ತಿ ಎಂದು ಮೂದಲಿಸಿದ ರಾಹುಲ್ ಗಾಂಧಿ
      5:24 PM, 19 May
      ಬಿಜೆಪಿಯು ಸಿಬಿಐ, ಇಡಿ, ಐಟಿ ಸೇರಿದಂತೆ ರಾಷ್ಟ್ರದಲ್ಲಿನ ಎಲ್ಲಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರ ಹಿಡಿಯಲು ಯತ್ನಿಸಿತ್ತು, ಆದರೆ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಾಗಿ ಹೋರಾಡಿ ಜಯ ಸಾಧಿಸಿದ್ದಾರೆ-ರಾಹುಲ್ ಗಾಂಧಿ
      5:23 PM, 19 May
      ಭ್ರಷ್ಟಾಚಾರದ ವಿರುದ್ಧ ಎಂದು ತಮ್ಮನ್ನು ತಾವೇ ಕರೆದುಕೊಳ್ಳುವ ಮೋದಿ ಅವರೇ ಕರ್ನಾಟಕದಲ್ಲಿ ಕುದುರೆ ವ್ಯಾಪಾರ ಮಾಡಲು ಮಾರ್ಗದರ್ಶನ ನೀಡಿದ್ದರು-ರಾಹುಲ್ ಗಾಂಧಿ
      5:21 PM, 19 May
      ಕರ್ನಾಟಕದಲ್ಲಿ ಬಿಜೆಪಿಗೆ ಆಗಿರುವ ಸೋಲು, ಪ್ರಜಾಪ್ರಭುತ್ವಕ್ಕೆ ದೊರಕಿರುವ ಗೆಲುವು, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಪ್ರಜಾಪ್ರಭುತ್ವವನ್ನು ಉಳಿಸಿದೆ- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
      5:01 PM, 19 May
      ಕರ್ನಾಟಕದಲ್ಲಿ ಮೂರು ದಿನದಲ್ಲಿ ಬಿಜೆಪಿ ಸರ್ಕಾರ ಬಿದ್ದಿದೆ. ಅಧಿಕಾರ, ಹಣವೇ ಎಲ್ಲವೂ ಅಲ್ಲ ಎಂದು ಸಾಬೀತಾಗಿದೆ- ರಾಹುಲ್ ಗಾಂಧಿ
      5:01 PM, 19 May
      ಕರ್ನಾಟಕದಲ್ಲಿ ಕಾಂಗ್ರೆಸ್‌ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಲು ವೇದಿಕೆ ಸಿದ್ಧವಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ.
      4:38 PM, 19 May
      "ಸರ್ಕಾರ ರಚಿಸಲು ನಮಗೆ ರಾಜ್ಯಪಾಲರಿಂದ ಆಮಂತ್ರಣ ಬರಬೇಕೆಂದು ಕಾಯುತ್ತಿದ್ದೇನೆ"- ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಹೇಳಿಕೆ
      4:31 PM, 19 May
      ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ- ಸಿದ್ದರಾಮಯ್ಯ
      4:29 PM, 19 May
      ಭಾರತದ ರಾಜಕಾರಣದಲ್ಲಿ ಮತ್ತು ಕರ್ನಾಟಕದ ರಾಜಕಾರಣದಲ್ಲಿ ಇದೊಂದು ಐತಿಹಾಸಿಕವಾದ ಘಟನೆ. ಯಡಿಯೂರಪ್ಪನವರು ವಿಧಾನಸೌಧದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಒಪ್ಪಿಕೊಂಡು, ಆದರೆ ಅದಕ್ಕೆ ಅಸಮರ್ಥರಾಗಿ ಫಲಾಯನ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ವಿಜಯ- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
      4:26 PM, 19 May
      ಎಚ್ ಡಿ ಕುಮಾರಸ್ವಾಮಿ ಅವರ ಕೈ ಎತ್ತಿ ಸಂಭ್ರಮ ವ್ಯಕ್ತಪಡಿಸಿದ ಡಿ ಕೆ ಶಿವಕುಮಾರ್
      4:18 PM, 19 May
      ರಾಜೀನಾಮೆ ಘೋಷಣೆ ಮಾಡಿದ ನಂತರ ಬಿ ಎಸ್ ಯಡಿಯೂರಪ್ಪ ಅವರು ಕಣ್ಣೀರು ಸುರಿಸಿದ್ದಾರೆ.
      4:17 PM, 19 May
      ಕಾಂಗ್ರೆಸ್ -ಜೆಡಿಎಸ್ ಪಾಳೆಯದಲ್ಲಿ ಮನೆಮಾಡಿದ ಸಂಭ್ರಮ
      4:14 PM, 19 May
      ಮೂರು ದಿನಗಳಲ ಕಾಲ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಇನ್ನು ಕೆಲವೇ ಕ್ಷಣಗಳಲ್ಲಿ ರಾಜೀನಾಮೆ ನೀಡಲಿದ್ದಾರೆ.
      4:12 PM, 19 May
      ರಾಜೀನಾಮೆ ನೀಡಲು ರಾಜಭವನದತ್ತ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ.
      4:12 PM, 19 May
      ವಿಶ್ವಾಸಮತ ಯಾಚಿಸದ ಬಿ ಎಸ್ ಯಡಿಯೂರಪ್ಪ
      4:10 PM, 19 May
      ಜನಪರ ಹೋರಾಟ ಇನ್ನೂ ಮುಂದುವರಿಯುತ್ತದೆ. ನಾನು ಕೊನೇ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ. ನನಗೆ ಅಧಿಕಾರ ಕೊಡದಿದ್ದರೆ ಪ್ರಾಣ ಕಳೆದುಕೊಳ್ಳುತ್ತೇನೆ ಎಂದರು ಕೆಲವರು. ಆದರೆ ನಾನು ಅದಕ್ಕಾಗಿ ಪ್ರಾಣ ಕಳೆದುಕೊಳ್ಳುವುದಿಲ್ಲ. ಜನರಿಗಾಗಿ ಕಳೆದುಕೊಂಡಿದ್ದಾರೆ- ಬಿ ಎಸ್ ಯಡಿಯೂರಪ್ಪ
      4:07 PM, 19 May
      ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ - ಬಿ ಎಸ್ ಯಡಿಯೂರಪ್ಪ
      4:03 PM, 19 May
      ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತೇನೆ- ಬಿ ಎಸ್ ಯಡಿಯೂರಪ್ಪ
      4:01 PM, 19 May
      ನನಗೊಂದು ಆಸೆಯಿತ್ತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವಾಗ ಇಲ್ಲಿ ಬಿಜೆಪಿ ಸರ್ಕಾರ ಇರಬೇಕು ಎಂದು. ನಮಗೆ ಯಾವ ಕೊರತೆಯೂ ಇಲ್ಲ. ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಕೈಗಳ ಕೊರತೆ ಇದೆ - ಬಿ ಎಸ್ ಯಡಿಯೂರಪ್ಪ
      3:57 PM, 19 May
      ಅನೇಕ ರೀತಿಯ ಹಗುರ ಮಾತನ್ನು ಕೇಳಿದ್ದೇನೆ. ನನಗೆ ಯಾವ ಬೇಸರವೂ ಇಲ್ಲ. ಕೊಳಗೇರಿ ಜನರ ಸಮಸ್ಯೆ ಈ ನಾಡಿನ ಜ್ವಲಂತ ಸಮಸ್ಯೆಯಲ್ಲೊಂದಾಗಿದೆ. ಅವುಗಳ ಬಗ್ಗೆ ನೆನೆದರೆ ದುಃಖವಾಗುತ್ತದೆ- ಬಿ ಎಸ್ ಯಡಿಯೂರಪ್ಪ
      3:56 PM, 19 May
      ರೈತರ ಸಾಲಮನ್ನಾ, ನೀರಾವರಿ ವ್ಯವಸ್ಥೆ, ಬೆಂಬಲ ಬೆಲೆ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಹೆಚ್ಚಿಸಬೇಕು ಎಂಬಿತ್ಯಾದಿ ಆಸೆಗಳು ನನ್ನವು-ಬಿ ಎಸ್ ಯಡಿಯೂರಪ್ಪ
      3:55 PM, 19 May
      ಕೊನೆ ಉಸಿರಿರೋವರೆಗೂ ರೈತರಿಗಾಗಿ ಹೋರಾಡುತ್ತೇನೆ. ರೈತರನ್ನು ಉಳಿಸುವುದಕ್ಕಾಗಿ ನಾನು ಕೆಲಸ ಮಾಡಬೇಕೆಂಬ ಆಸೆಯಿದೆ. ರೈತರ ಕಣ್ಣೀರನ್ನು ಒರೆಸುವ ಕಾರ್ಯ ಮಾಡುತ್ತೇನೆ-ಬಿ ಎಸ್ ಯಡಿಯೂರಪ್ಪ
      3:53 PM, 19 May
      ನೀರಿನ ಸಮಸ್ಯೆ ಪರಿಹಾರವಾಗಿಲ್ಲ, ಜನರ ಬವಣೆ ಕಡಿಮೆಯಾಗಿಲ್ಲ. ಜನರು ಬೇಸೆತ್ತ ಸಮಯದಲ್ಲಿ ನಡೆದ ಚುನಾವಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದನ್ನು ನೋಡಿದ್ದೇವೆ. ನಾಡಿನ ಉದ್ದಗಲಕ್ಕೂ ಸಂಚರಿಸಿ ನಾಡಿನ ಜನರ ಉದ್ಧಾರಕ್ಕೆ ಕಂಕಣಬದ್ಧರಾಗಿದ್ದೇವೆ- ಬಿ ಎಸ್ ಯಡಿಯೂರಪ್ಪ
      3:52 PM, 19 May
      ಈ ರಾಜ್ಯದ ರೈತರ, ಅನ್ನದಾತ ಸ್ವಾಭಿಮಾನ, ಗೌರವದಿಂದ ಬಾಳುವುದಕ್ಕೆ ನಾವೆಲ್ಲ ಪ್ರಯತ್ನಿಸಬೇಕಾಗಿದೆ. ನಾನು ಅದಕ್ಕಾಗಿ ನನ್ನ ಸರ್ವಸ್ವನ್ನೂ ನೀಡಲು ಸಿದ್ಧನಿದ್ದೇನೆ-ಬಿ ಎಸ್ ಯಡಿಯೂರಪ್ಪಈ ರಾಜ್ಯದ ರೈತರ, ಅನ್ನದಾತ ಸ್ವಾಭಿಮಾನ, ಗೌರವದಿಂದ ಬಾಳುವುದಕ್ಕೆ ನಾವೆಲ್ಲ ಪ್ರಯತ್ನಿಸಬೇಕಾಗಿದೆ. ನಾನು ಅದಕ್ಕಾಗಿ ನನ್ನ ಸರ್ವಸ್ವನ್ನೂ ನೀಡಲು ಸಿದ್ಧನಿದ್ದೇನೆ-ಬಿ ಎಸ್ ಯಡಿಯೂರಪ್ಪ
      3:50 PM, 19 May
      ಆದರೆ ಜನಾದೇಶದ ವಿರುದ್ಧ ಅವಕಾಶವಾದಿ ರಾಜಕಾರಣ ನಡೆದಿದೆ. ಏಕೈಕ ಅತೀ ದೊಡ್ಡ ಪಕ್ಷವಾಗಿದ್ದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡದಿರಲು ಪ್ರಯತ್ನಿಸಲಾಗುತ್ತಿದೆ.
      READ MORE

      ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

      English summary
      Karnataka Assembly Floor Test Live Updates in Kannada :
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X
      We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more