ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲೂರು ವಿಧಾನಸಭೆ ಕ್ಷೇತ್ರ: ಜನರ ಸಮಸ್ಯೆಗಳಿಗೆ ಅಭಿವೃದ್ಧಿಯ ಪರದೆ

|
Google Oneindia Kannada News

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಜನ್ಮ ಸ್ಥಳ ಇರುವ ಈ ತಾಲೂಕಿನಲ್ಲಿ ಸಾಹಿತ್ಯದ ಪ್ರಭಾವ ಅಷ್ಟಾಗಿ ಕಾಣಿಸುವುದಿಲ್ಲ. ಈಗೇನಿದ್ದರೂ ರಿಯಲ್ ಎಸ್ಟೇಟ್, ರಾಜಕಾರಣ, 'ಗಾಡ್ ಮಾಫಿಯಾ', ಕೈಗಾರಿಕೆ ಪ್ರದೇಶದ ಅಭಿವೃದ್ಧಿ ಇಂಥದ್ದೇ ಕಂಡುಬರುತ್ತದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯ ಲಕ್ಷಣ ಕಂಡುಬರುತ್ತಿದೆ.

ಹಾಲಿ ಶಾಸಕ - ಮಂಜುನಾಥ ಗೌಡ ಜೆಡಿಎಸ್ ಅಭ್ಯರ್ಥಿ. ಅವರ ಒಂದು ಕಾಲದ ನಿಷ್ಠ- ಆಪ್ತ ನಂಜೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ. ಇನ್ನು ಬಿಜೆಪಿಯಿಂದ ಕೃಷ್ಣಯ್ಯ ಶೆಟ್ಟಿ ಸ್ಪರ್ಧಾಳು. ಇದು ಕೃಷ್ಣಯ್ಯ ಶೆಟ್ಟಿ ಅವರು ಬಿಜೆಪಿಯನ್ನು ಪ್ರತಿನಿಧಿಸಿ, ಗೆದ್ದಿದ್ದ ಕ್ಷೇತ್ರ. ಕೈಗಾರಿಕೆ, ರಿಯಲ್ ಎಸ್ಟೇಟ್ ಈ ತಾಲೂಕಿನ ಪಾಲಿಗೆ ಎರಡು ಕಣ್ಣುಗಳು.

ನಾನಾ ಬಗೆಯ ಬದುಕು, ಬವಣೆಯ 'ಕಮರ್ಷಿಯಲ್ ಸಿನಿಮಾ' ಬೆಂಗಳೂರಿನ ಗಾಂಧಿನಗರನಾನಾ ಬಗೆಯ ಬದುಕು, ಬವಣೆಯ 'ಕಮರ್ಷಿಯಲ್ ಸಿನಿಮಾ' ಬೆಂಗಳೂರಿನ ಗಾಂಧಿನಗರ

ಇನ್ನು ರಿಯಲ್ ಎಸ್ಟೇಟ್ ನ ಚೇತರಿಕೆ ಹಾಗೂ ಕೈಗಾರಿಕೆ ಕೇಂದ್ರಗಳಾಗಿರುವುದನ್ನಷ್ಟೇ ಅಭಿವೃದ್ಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಮಾನವ -ಪ್ರಾಣಿ ಸಂಘರ್ಷ ಸೇರಿದಂತೆ ಹಲವು ಸಮಸ್ಯೆಗಳಿವೆ.

Karnataka assembly elections 2018: Malur constituency profile

ಒಕ್ಕಲಿಗ ಮತದಾರರ ಪ್ರಾಬಲ್ಯ ಇಲ್ಲಿ ಹೆಚ್ಚಿದೆ. ಆ ನಂತರ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮತಗಳಿವೆ. ಆ ನಂತರದ ಸ್ಥಾನ ಮುಸ್ಲಿಮರದು. ಮುಂದಿನ ಪ್ರಾಶಸ್ತ್ಯ ಕುರುಬ ಸಮುದಾಯದ್ದು. ತಿಗಳರು (ವಹ್ನಿಕುಲ), ಬಲಜಿಗರು, ವಾಲ್ಮೀಕಿ, ಗಾಣಿಗರು, ಪದ್ಮಶಾಲಿ ಸಮಾಜದವರದು.

ಮಾಲೂರು ಬೆಂಗಳೂರಿಗೂ ಬಲು ಸಮೀಪದಲ್ಲಿದೆ. ಈಗಾಗಲೇ ಕ್ಷೇತ್ರದಲ್ಲಿ ಪುಕ್ಕಟೆ ಪ್ರವಾಸ, ಊಟ-ತಿಂಡಿ, ಸೀರೆ ಹಂಚಿಕೆ, ನಾಟಕ ಪ್ರದರ್ಶನ ಎಲ್ಲ ಒಂದು ರೌಂಡ್ ಮುಗಿದುಹೋಗಿದೆ.

ಬ್ಯಾಟರಾಯನಪುರ ಕ್ಷೇತ್ರ: ಗ್ರಾಮೀಣ-ನಗರ ಮತದಾರರ ಸಮ್ಮಿಲನ ಬ್ಯಾಟರಾಯನಪುರ ಕ್ಷೇತ್ರ: ಗ್ರಾಮೀಣ-ನಗರ ಮತದಾರರ ಸಮ್ಮಿಲನ

ಮಾಲೂರಿನಲ್ಲಿ ಕಲ್ಲು ಗಣಿಗಾರಿಕೆಯು ಅಕ್ರಮವಾಗಿ ನಡೆಯುವ ಹಲವು ಪ್ರಕರಣಗಳು ಕಣ್ಣೆದುರು ಇವೆ. ಅಂಥ ಕಡೆ ಚಿರತೆ ಓಡಾಟ ಹೆಚ್ಚು. ಆ ಬಗ್ಗೆ ಸ್ಥಳೀಯರಲ್ಲಿ ಬಹಳ ಆತಂಕ ಇದೆ. ಇನ್ನು ಇಲ್ಲಿಂದ ಮಣ್ಣಿನ ಸಾಗಣೆ ಪಕ್ಕದ ಕೇರಳಕ್ಕೆ ನಡೆಯುತ್ತದೆ. ಅದು ಕೂಡ ಇಲ್ಲಿನ ಗಂಭೀರ ಸಮಸ್ಯೆ.

ಟೇಕಲ್ ಹೋಬಳಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಸಮಸ್ಯೆ ತೀವ್ರವಾಗಿದೆ. ಲಕ್ಕೂರು ಹಾಗೂ ಕಸಬಾ ಹೋಬಳಿ ಕೆರೆಗಳ ಮಣ್ಣು ಕೇರಳಕ್ಕೆ ಸಾಗಣೆ ಮಾಡುತ್ತಾರೆ. ಲಕ್ಕೂರು ಹೋಬಳಿಯ ಗಡಿ ಭಾಗಗಳಲ್ಲಿ ಕುಡಿಯುವ ನೀರಿನ ಫ್ಲೋರೈಡ್ ಅಂಶದ ಸಮಸ್ಯೆ ಇದೆ. ಈಗ ಅಲ್ಲೆಲ್ಲ ಶುದ್ಧ ನೀರಿನ ಘಟಕ ಆರಂಭಿಸಲಾಗಿದೆ. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ.

ಸಿ.ವಿ. ರಾಮನ್‌ನಗರ ಕ್ಷೇತ್ರ: ಇಲ್ಲಿ ಬಂಡಾಯದ ಬಾವುಟದ್ದೇ ಹಾರಾಟ ಸಿ.ವಿ. ರಾಮನ್‌ನಗರ ಕ್ಷೇತ್ರ: ಇಲ್ಲಿ ಬಂಡಾಯದ ಬಾವುಟದ್ದೇ ಹಾರಾಟ

ಮಾಲೂರು ತಾಲೂಕಿನಾದ್ಯಂತ ದೊಡ್ಡ ರಸ್ತೆಗಳು ಚೆನ್ನಾಗಿ ಆಗಿವೆ. ಆದರೆ ಹಳ್ಳಿಗಳಲ್ಲಿ ಸಂಪರ್ಕ ರಸ್ತೆಗಳದೇ ತೊಂದರೆ. ಖಾಸಗಿ ಸಹಭಾಗಿತ್ವದಲ್ಲಿ ಶಾಸಕ ಮುಂಜುನಾಥ ಗೌಡ ಮಾಡಿರುವ ಸ್ಟೇಡಿಯಂ, ರಂಗಮಂದಿರ, ಶಾದಿ ಮಹಲ್, ಶಿಕ್ಷಕರ ಭವನ, ಒಂದೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಉದ್ಯಾನದ ಬಗ್ಗೆ ಒಳ್ಳೆ ಮಾತು ಕೇಳಿಬರುತ್ತದೆ. ಕೂರಂಡಹಳ್ಳಿ ಕೈಗಾರಿಕಾ ಪ್ರಾಂಗಣದಿಂದ ಸ್ಥಳೀಯರಿಗೆ ಅನುಕೂಲವಾಗಿದೆ.

ತಮಿಳುನಾಡಿನಿಂದ ಕರ್ನಾಟಕಕ್ಕೆ ಹಾದು ಹೋಗುವ ವಾಹನಗಳು ಮಾಲೂರು ಪಟ್ಟಣದೊಳಗೆ ಹೋಗುತ್ತವೆ. ಇದರಿಂದ ಬಹಳ ಸಮಸ್ಯೆಯಾಗಿದೆ. ಇದಕ್ಕೊಂದು ಪರ್ಯಾಯ ಆಗಬೇಕಿದೆ ಎಂಬುದು ಸ್ಥಳೀಯರ ಆಗ್ರಹ. ಇಲ್ಲಿನ ರೈಲ್ವೆ ಸೇತುವೆ ಸರಿಪಡಿಸಬೇಕಿದೆ. ರಾಜಕಾರಣದ ವಿಚಾರಕ್ಕೆ ಬಂದರೆ ಈ ಸಲ ಇಲ್ಲಿ ತ್ರಿಕೋನ ಸ್ಪರ್ಧೆ ಕಾಣುತ್ತದೆ.

English summary
Karnataka Assembly Elections 2018: Read all about Kolar district Malur assembly constituency. Get election news from Kolar district. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X