ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಪರಿಚಯ

* ಸಾಧನೆಗಳು: ಗೃಹ, ಸಾರಿಗೆ, ಉಪಮುಖ್ಯಮಂತ್ರಿ ಗೌರವಗಳು ಅಶೋಕ್ ಬತ್ತಳಿಕೆಯಲ್ಲಿವೆ. 2008ಕ್ಕೆ ಮುನ್ನ ರಾಜ್ಯದಲ್ಲೇ ಅತಿ ದೊಡ್ಡ ಕ್ಷೇತ್ರವೆನಿಸಿದ್ದ ಉತ್ತರಹಳ್ಳಿಯಿಂದ ಹ್ಯಾಟ್ರಿಕ್ ಗೆಲುವು ಕಂಡವರು. ಕ್ಷೇತ್ರ ಪುನರ್ವಿಂಗಡಣೆಯಿಂದ ಪದ್ಮನಾಭ ನಗರದಲ್ಲಿ ತಳವೂರಿದರು. ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ 3 ಬಸ್ ನಿಲ್ದಾಣಗಳ ಸ್ಥಾಪನೆ. ವಿಶೇಷವಾಗಿ ಆಟದ ಮೈದಾನ ಅಭಿವೃದ್ಧಿಯಾಗಿದೆ. ಬಹುತೇಕ ಎಲ್ಲ ಪಾರ್ಕುಗಳಿಗೂ ಮರುಜೀವ ತುಂಬಿದ್ದಾರೆ.
* ಸಮಸ್ಯೆಗಳು: ಏಕೈಕ ಹೆಸರಿಗೆ ಆಸ್ಪತ್ರೆ ಹೊರತುಪಡಿಸಿದರೆ ಬೇರೆ ಸರಕಾರಿ ಆಸ್ಪತ್ರೆಗಳೇ ಇಲ್ಲ. ಆಟದ ಮೈದಾನಗಳನ್ನು ಭೂಗಳ್ಳರು ಕದ್ದಿದ್ದಾರೆ ಎಂದು ಎಂವಿ ಪ್ರಸಾದ್ ಬಾಬು ಕಿಡಿಕಾರುತ್ತಾರೆ. ಸಾರ್ವಜನಿಕ ಸಾರಿಗೆಯಲ್ಲಿ ಮತ್ತಷ್ಟು ಸುಧಾರಣೆ ತರುವುದಕ್ಕೆ ಅವಕಾಶ ಇದೆ. ಕಾನೂನು ಸುವ್ಯವಸ್ಥೆ ಪರವಾಗಿಲ್ಲ.
* ವಾರ್ಡ್: ಹೊಸಕೆರೆ ಹಳ್ಳಿ, ಗಣೇಶ ಮಂದಿರ, ಕರಿಸಂದ್ರ, ಯಡಿಯೂರು, ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಬಡಾವಣೆ, ಪದ್ಮನಾಭ ನಗರ, ಚಿಕ್ಕಲಸಂದ್ರ
* ಮತದಾರರ ಸಂಖ್ಯೆ: 1,05,939 . ಕಳೆದ ಬಾರಿ ವೋಟ್ ಮಾಡಿದವರು ಶೇ. 54ರಷ್ಟು ಮಂದಿ. ಅದರಲ್ಲಿ ಆರ್ ಅಶೋಕ್ ಮತ ಗಳಿಕೆ ಪ್ರಮಾಣ ಶೇ. 52.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications