ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಮೊದಲ ಟ್ವೀಟ್
Recommended Video
ಬೆಂಗಳೂರು, ಮೇ 17: "ಅಭಿವೃದ್ಧಿ ಪರವಾದ ಬಿಜೆಪಿಯ ಆಡಳಿತವು ಕರ್ನಾಟಕದಲ್ಲಿ ಆರಂಭವಾಗಿದೆ. ನಾಡಿನ ಸರ್ವಾಂಗೀಣ ಏಳಿಗೆಯನ್ನು ಗುರಿಯಾಗಿಟ್ಟಕೊಂಡು ಕಾರ್ಯೋನ್ಮುಖವಾಗಿದ್ದೇವೆ" ಇದು ಕರ್ನಾಟಕ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ ಎಸ್ ಯಡಿಯೂರಪ್ಪನವರ ಟ್ವೀಟ್. ಅವರು ಮುಖುಯಮಂತ್ರಿಯಾದ ನಂತರ ಮಾಡಿದ ಮೊದಲ ಟ್ವೀಟ್ ಸಹ ಹೌದು.
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರು(75) ಇಂದು(ಮೇ 17) ಬೆಳಿಗ್ಗೆ 9 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಜೆಪಿ ಪಾಲಿಗೆ ಇದು ಅತ್ಯಂತ ಸಂಭ್ರಮದ ದಿನವೆನ್ನಿಸಿದೆ. ರಾಮಕೃಷ್ಣ ಹೆಗಡೆ ಅವರನ್ನು ಬಿಟ್ಟರೆ ಮೂರನೇ ಭಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಮೂಲಕ ದಾಖಲೆ ಬರೆದಿದ್ದಾರೆ ಯಡಿಯೂರಪ್ಪ.
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ
ಅಭಿವೃದ್ಧಿ ಪರವಾದ ಬಿಜೆಪಿಯ ಆಡಳಿತವು ಕರ್ನಾಟಕದಲ್ಲಿ ಆರಂಭವಾಗಿದೆ. ನಾಡಿನ ಸರ್ವಾಂಗೀಣ ಏಳಿಗೆಯನ್ನು ಗುರಿಯಾಗಿಟ್ಟಕೊಂಡು ಕಾರ್ಯೋನ್ಮುಖವಾಗಿದ್ದೇವೆ. @BJP4Karnataka @BJP4India pic.twitter.com/6NvIdjeAqn
— B.S. Yeddyurappa (@BSYBJP) May 17, 2018
ಮೊಟ್ಟ ಮೊದಲ ಬಾರಿಗೆ ರೈತರಿಗೆಂದೇ ಪ್ರತ್ಯೇಕ ಬಜೆಟ್ ಮಂಡಿಸಿದ್ದ ಯಡಿಯೂರಪ್ಪ ಇಂದು ಸಹ ರೈತರು ಮತ್ತು ದೇವರ ಹೆಸರಿನಲ್ಲಿ ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿದರು.
ಮೇ 15 ರಂದು ಹೊರಬಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ, ಕಾಂಗ್ರೆಸ್ 78 ಸ್ಥಾನ, ಜೆಡಿಎಸ್ 38 ಸ್ಥಾನ ಮತ್ತು ಇತರರು 2 ಸ್ಥಾನ ಗೆದ್ದಿದ್ದರು.