ಉಡುಪಿ ಸೇರಿ 40 ಕ್ಷೇತ್ರಗಳಲ್ಲಿ ಆರ್ ಪಿಐ ಕಣಕ್ಕೆ
ಉಡುಪಿ, ಏಪ್ರಿಲ್ 03: ಡಾ.ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಆರ್ ಪಿಐ) ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಉಡುಪಿ ಸೇರಿದಂತೆ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಆರ್ ಪಿ ಐ ರಾಜ್ಯ ಅಧ್ಯಕ್ಷಾರ್ ಮೋಹನ್ ರಾಜ್ ಹೇಳಿದರು.
ಉಡುಪಿ ಕ್ಷೇತ್ರದಲ್ಲಿ ಶೇಖರ್ ಹಾವಂಜೆ ಸ್ಪರ್ಧಿಸುತ್ತಿದ್ದಾರೆ. ಅಭ್ಯರ್ಥಿಗಳ ಪೂರ್ಣ ಪಟ್ಟಿಯನ್ನು ಏಪ್ರಿಲ್ 11ರಂದು ಬೆಂಗಳೂರಿನಲ್ಲಿ ಪ್ರಕಟಿಸಲಾಗುತ್ತದೆ. ಉಡುಪಿ, ಕಾರ್ಕಳ, ಸುಳ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಪರಿಣಾಮ ಬೀರುವ ನಿರೀಕ್ಷೆಯಿದೆ.
ಉಳಿದಂತೆ, ಹುಮನಾಬಾದ್ ನಿಂದ ಅಂಕುಶ್ ಗೋಖಲೆ,ಬಾಗಲಕೋಟೆ- ಪರಶುರಾಮ್ ನೀಲನಾಯಕ, ಬಬಲೇಶ್ವರ-ಶಾಸ್ತ್ರಿ ಹೊಸಮನಿ, ವಿಜಯನಗರ-ಮುಕ್ತಮ್ ಶಾ ಅಲಿ ನದಾಫ್, ಕೆಜಿಎಫ್- ಶಿವಲಿಂಗಂ, ಸಿ.ವಿ ರಾಮನ್ ನಗರ- ಆರ್ ಮೋಹನ್ ರಾಜ್, ಎಚ್ ಡಿ ಕೋಟೆ-ಜಿ.ಕೆ ಗೋಪಾಲ್, ಪಿರಿಯಾಪಟ್ಟಣ-ಎಚ್ ಬಿ ದೇವರಾಜ್ ಹಾಗೂ ಯಾದಗಿರಿಯಲ್ಲಿ ಈರಪ್ಪ ಎಂ ಕಸನ್ ಸ್ಪರ್ಧಿಸಲಿದ್ದಾರೆ.