ಮತದಾನ ನಮ್ಮ ಹಕ್ಕು, ವೋಟಿಂಗ್ ಪರ ದ್ರಾವಿಡ್ ಬ್ಯಾಟಿಂಗ್!
Recommended Video

Karnataka Elections 2018 :ರಾಹುಲ್ ದ್ರಾವಿಡ್ ಈಗ ಚುನಾವಣಾ ಆಯೋಗದ ರಾಯಭಾರಿ
ಬೆಂಗಳೂರು, ಮಾರ್ಚ್ 29: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ವೋಟಿಂಗ್ ಮಾಡಿ ಎಂದು ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಬ್ಯಾಟಿಂಗ್ ಆರಂಭಿಸಿದ್ದಾರೆ. ಮತದಾನ ನಮ್ಮ ಹಕ್ಕು ಎನ್ನುತ್ತಾ ಈ ಬಾರಿಯೂ ಚುನಾವಣಾ ಆಯೋಗದ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ.
'ಎಲ್ಲರೂ ಚೆನ್ನಾಗಿ ಆಡಿದ್ರೆ, ಮ್ಯಾಚ್ ನಾವು ಗೆಲ್ತೀವಿ, ನೀವೆಲ್ಲ ವೋಟ್ ಮಾಡಿದ್ರೆ ಡೆಮಾಕ್ರಸಿ ಗೆಲುತ್ತೆ, ನಾನು ವೋಟ್ ಮಾಡ್ತೇನೆ, ನೀವು ತಪ್ಪದೇ ವೋಟ್ ಮಾಡಿ, ಡೆಮಾಕ್ರಸಿ ಗೆಲ್ಲಿಸಿ' ಎಂದು ದ್ರಾವಿಡ್ ಅವರು ವಿಡಿಯೋ ಸಂದೇಶ ನೀಡಿದ್ದಾರೆ.

ಇದಲ್ಲದೆ, ವೋಟರ್ ವೆರಿಫೆಯಬಲ್ ಪೇಪರ್ ಆಡಿಟ್ ಟ್ರೇಲ್(ವಿವಿಪಿಎಟಿ) ಬಗ್ಗೆ ಕೂಡಾ ವಿಡಿಯೋ ಪ್ರಾತ್ಯಕ್ಷಿಕೆಯನ್ನು ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
ಮತದಾನದ ವೇಳೆ ಯಾವ ಅಭ್ಯರ್ಥಿಗೆ ಮತ ಚಲಾಯಿಸಿದೆಯೋ ಅಂಥ ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು ಹಾಗೂ ಚಿಹ್ನೆ ಒಂದು ಚೀಟಿಯ ಮೇಲೆ ಮುದ್ರಿತವಾಗುತ್ತದೆ. ವಿವಿಪ್ಯಾಟ್ ಎಂದು ಖಾತ್ರಿ ಯಂತ್ರವಾಗಿದೆ.












Click it and Unblock the Notifications