ದೀಪದಾನದ ಅತ್ಯುನ್ನತ ರೂಪ - ಆಕಾಶದೀಪ
ಕಾರ್ತೀಕ ಮಾಸದಲ್ಲಿ ಒಂದೇ ಒಂದು ದೀಪವನ್ನು ಹಚ್ಚಿದರೂ ಅದು ಅಶ್ವಮೇಧ ಯಜ್ಞವನ್ನು ಮಾಡಿದಷ್ಟೇ ಪುಣ್ಯಪ್ರದವಾದದ್ದೆಂದು ನಂಬಿಕೆಯಿದೆ. ಆ ಬಗ್ಗೆ ವಿಚಿತ್ರಾನ್ನ-211ರಲ್ಲಿ ಬೆಳಕು.
ಇದೀಗ ಆರಂಭವಾಗಿರುವ ಕಾರ್ತೀಕ ಮಾಸವು (ಚಾಂದ್ರಮಾನ ರೀತ್ಯಾ ಎಂಟನೆಯ ತಿಂಗಳು) ಕೃಷ್ಣನಿಗೆ ಅತ್ಯಂತ ಪ್ರಿಯವಾದುದು ಎಂಬ ಪ್ರತೀತಿಯಿದೆ. ಯುಗಗಳಲ್ಲಿ ಕೃತ(ಸತ್ಯ)ಯುಗ, ಧರ್ಮಗ್ರಂಥಗಳಲ್ಲಿ ವೇದಗಳು, ನದಿಗಳ ಪೈಕಿ ಗಂಗಾ, ಗಿಡಗಳ ಪೈಕಿ ತುಳಸಿ, ತೀರ್ಥಕ್ಷೇತ್ರಗಳಲ್ಲಿ ದ್ವಾರಕಾ, ತಿಥಿಗಳಲ್ಲಿ ಏಕಾದಶಿ ಮತ್ತು ಮಾಸಗಳ ಪೈಕಿ ಕಾರ್ತೀಕ - ಇವಿಷ್ಟೂ ಕೃಷ್ಣನ ನೆಚ್ಚಿನವು ಎನ್ನುತ್ತವೆ ಸ್ಕಂದಪುರಾಣ, ಪದ್ಮಪುರಾಣ, ಭಾಗವತ ಇತ್ಯಾದಿ ಕೃಷ್ಣಕಥೆಯ ಪುರಾಣಗಳು.
ಕಾರ್ತೀಕ ಮಾಸವನ್ನು 'ದಾಮೋದರ’ ಮಾಸವೆಂದೂ (ಮುಖ್ಯವಾಗಿ ವೈಷ್ಣವ ಪಂಥಾನುಯಾಯಿಗಳು) ಕರೆಯುತ್ತಾರೆ. ನಮಗೆಲ್ಲ ಗೊತ್ತಿರುವಂತೆ ದಾಮೋದರ ಎಂಬುದು ಶ್ರೀಕೃಷ್ಣನ ಒಂದು ಹೆಸರು. ಆದರೆ, ಕಾರ್ತೀಕ ಮಾಸಕ್ಕೆ ಯಾಕೆ ಆ ಹೆಸರು ಬಂತು ಮತ್ತು ಅದಕ್ಕಿಂತಲೂ ಮೊದಲು ಕೃಷ್ಣನಿಗೆ ಯಾಕೆ ದಾಮೋದರ ಎಂಬ ಹೆಸರು?
ಈ ವಿವರಗಳಿಗೆ ನಾವು ಶ್ರೀಕೃಷ್ಣ ಪರಮಾತ್ಮನ ಬಾಲಲೀಲೆಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ.
ನಂದಗೋಕುಲದಲ್ಲಿ ಬಾಲಕೃಷ್ಣನ ತುಂಟಾಟಗಳಿಗೆ ಕೊನೆಯೆಂಬುದೇ ಇಲ್ಲ. ಅದೊಂದು ದಿನ ತಾಯಿ ಯಶೋದೆ ಹಾಲೂಡಿಸುವುದನ್ನು ಅರ್ಧಕ್ಕೇ ನಿಲ್ಲಿಸಿ ಬೇರೆ ಕೆಲಸಕ್ಕೆ ತೊಡಗಿದಳು ಎಂಬ ಸಿಟ್ಟಿನಿಂದ ಮನೆಯಾಳಗಿನ ಬೆಣ್ಣೆಗಡಿಗೆಗಳನ್ನೆಲ್ಲ ಒಡೆದುಹಾಕಿದ್ದನಂತೆ ಆ ಬಾಲರೂಪಿ ಭಗವಂತ! ಎಷ್ಟು ರಮಿಸಿದರೂ ಅವನ ಚೇಷ್ಟೆಗಳು ನಿಲ್ಲದಾದಾಗ ಯಶೋದೆ ಒಂದು ಉಪಾಯ ಹೂಡಿದಳು. ದನಕರುಗಳನ್ನು ಕಟ್ಟಲಿಕ್ಕೆ ಉಪಯೋಗಿಸುವ ಹಗ್ಗವನ್ನು ತಂದು ಕೃಷ್ಣನ ಹೊಟ್ಟೆಯ ಸುತ್ತ ಕಟ್ಟಿದಳು. ಹಗ್ಗದ ಇನ್ನೊಂದು ತುದಿಯನ್ನು ಒರಳುಕಲ್ಲಿಗೆ ಬಿಗಿದಳು. ಹೀಗೆ ಹೊಟ್ಟೆಗೆ ಹಗ್ಗ ಕಟ್ಟಲ್ಪಟ್ಟ ಕೃಷ್ಣ 'ದಾಮೋದರ’ ಎನಿಸಿಕೊಂಡ.
ಒರಳುಕಲ್ಲಿಗೆ ಕಟ್ಟಿದಮೇಲಾದರೂ ತುಂಟಪೋರ ಒಂದುಕಡೆ ಸುಮ್ಮನಾಗಬಹುದು ಎಂದು ಯಶೋದೆಯ ಅಂದಾಜು. ಆದರೆ ಕೃಷ್ಣ ಹಗ್ಗದೊಂದಿಗೆ ಆ ಒರಳುಕಲ್ಲನ್ನೂ ಎಳೆದುಕೊಂಡು ಹೋಗಿ, ಅದು ಅವಳಿಮರಗಳಿಗೆ ಸಿಕ್ಕಿಹಾಕಿಕೊಂಡು ಅವು ಮುರಿದುಬಿದ್ದು ಮೋಕ್ಷಹೊಂದಿದುವು, ಮತ್ತೆ ಕುಬೇರನ ಮಕ್ಕಳಾಗಿ ಪುನರುಜ್ಜೀವವಾದರು... ಇತ್ಯಾದಿ ಕಥೆ ಮುಂದುವರಿಯುತ್ತದೆ.
ಕೃಷ್ಣ ಈ ರೀತಿ 'ದಾಮೋದರ ’ನಾದ ಘಟನೆ ನಡೆದದ್ದು ಕಾರ್ತೀಕ ಮಾಸದಲ್ಲಿ. ಆದ್ದರಿಂದಲೇ ಕಾರ್ತೀಕ ಮಾಸಕ್ಕೆ ದಾಮೋದರ ಮಾಸ ಎಂಬ ಹೆಸರು. ಮತ್ತೆ ಕೃಷ್ಣನಿಗೆ ಈ ಮಾಸವು ಅತಿ ಪ್ರಿಯವೂ ಆಗಿರುವುದರಿಂದ ಕೃಷ್ಣಭಕ್ತರ ನಾಲಗೆಯಲ್ಲಿ ಈ ತಿಂಗಳಿಡೀ ದಾಮೋದರನದೇ ಗುಣಗಾನ - ಜಿಹ್ವೇ ಪಿಬಸ್ವಾಮೃತಮೇತದೇವ... ಗೋವಿಂದ ದಾಮೋದರ ಮಾಧವೇತಿ!
ದಾಮೋದರ (ಕಾರ್ತೀಕ) ಮಾಸದಲ್ಲಿ ಪ್ರತಿದಿನವೂ ದಾಮೋದರನನ್ನು ಪೂಜಿಸಬೇಕು, ದಾಮೋದರಾಷ್ಟಕವನ್ನು ಪಠಿಸಬೇಕು, ವೃತನಿಯಮಗಳನ್ನು ಪಾಲಿಸಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ದಾಮೋದರನಿಗೆ ದೀಪದಾನ ಮಾಡಬೇಕು!
ಕಾರ್ತೀಕಮಾಸಕ್ಕೂ ದೀಪಕ್ಕೂ ಇರುವ ನಂಟು ಯುಗಯುಗಗಳಿಂದಲೂ ಬಂದದ್ದು. ಕಾರ್ತೀಕ ಮಾಸದಲ್ಲಿ ಒಂದೇ ಒಂದು ದೀಪವನ್ನು ಹಚ್ಚಿದರೂ ಅದು ಅಶ್ವಮೇಧ ಯಜ್ಞವನ್ನು ಮಾಡಿದಷ್ಟೇ ಪುಣ್ಯಪ್ರದವಾದದ್ದೆಂದು ನಂಬಿಕೆಯಿದೆ. ಮೇರು-ಮಂದಾರ ಪರ್ವತಗಳಷ್ಟು ಪ್ರಮಾಣದಲ್ಲಿ ಪಾಪ ಸಂಚಯವಾಗಿದ್ದವರೂ ಕಾರ್ತೀಕಮಾಸದಲ್ಲಿ ದೀಪ ಬೆಳಗಿದರೆ ಆ ಪಾಪಗಳೆಲ್ಲ ಕಣ್ಣುಮುಚ್ಚಿತೆರೆಯುವುದರೊಳಗೆ ಆ ದೀಪಜ್ಯೋತಿಯಾಂದಿಗೇ ಉರಿದುಹೋಗುತ್ತವೆಯಂತೆ.
-
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion












Click it and Unblock the Notifications