ದಟ್ಸ್ ಕನ್ನಡ ಹೂವಿನಂಗಡಿ 24/7

ಇದು ಹೂವಿನಾ ಲೋಕವೇ... ಇಲ್ಲಿ ಗೆಳತಿಯರಿಲ್ಲವೆ... ಹೇಗೆ ನಾ ಹಾಡಲಿ... ಹೇಳಿ ಹೂಗಳೆ...
ಇದು ಕನಸುಗಾರ ರವಿಚಂದ್ರನ್ ಅಭಿನಯದ 'ನಾನು ನನ್ನ ಹೆಂಡ್ತಿ' ಚಿತ್ರದ ಮನೋಜ್ಞ ಗೀತೆ. ಹೃದಯವನ್ನು ಮೃದುವಾಗಿ ಕಲಕುವ ಹಾಡುಗಳಂತೆ ಮನಕ್ಕೆ ಮುದ ನೀಡುವ ಸುಂದರವಾದ ಹೂವುಗಳಿಗೆ ಮನಸೋಲದವರಿಲ್ಲ. ಹೂವು ಸೌಂದರ್ಯ, ಪ್ರೀತಿ, ಪ್ರೇಮ, ಗೆಳೆತನ, ಒಳ್ಳೆಯತನಕ್ಕೆ ಸಂಕೇತ. ಹೂವನ್ನು ಬೇಡವೆನ್ನದ ದೇವರು ಇಲ್ಲವೇ ಇಲ್ಲ. ಇನ್ನು, ಮೆಚ್ಚಿದ ಗೆಳತಿಗೆ 'ಹೂವಿಗಿಂತ ಚೆಂದ ಈ ನಿನ್ನ ಮೊಗದ ಅಂದ' ಅಂತ ಹೇಳಿದರೆ ಆಕೆಯ ಮನದಲ್ಲಿ ಉಲ್ಲಾಸದ ಹೂಮಳೆ.
ಮಲ್ಲಿಗೆ, ಸಂಪಿಗೆ, ಕೆಂಡಸಂಪಿಗೆ, ಜಾಜಿ, ಡೇರೆ, ಡೇಲಿಯಾ, ಕನಕಾಂಬರ, ಲಿಲ್ಲಿ, ಡೈಸಿ, ಸೇವಂತಿಗೆ... ಹೂವುಗಳ ಹೆಸರು ಹೇಳುತ್ತಿದ್ದಂತೆ ಮನವೂ ಅರಳುತ್ತಾ ಹೋಗುತ್ತದೆ. ಪೂಜೆಯಿಂದ ಹಿಡಿದು ಯಾವುದೇ ಶುಭ ಸಮಾರಂಭವಿರಲಿ, ಅಲ್ಲಿ ಹೂವುಗಳದ್ದೇ ರಾಜ್ಯಭಾರ. ಮದುವೆಯಿರಲಿ, ಹುಟ್ಟುಹಬ್ಬವಿರಲಿ, ಯಾರಾದರೂ ಫಾರಿನ್ನಿಗೆ ಹೋಗುತ್ತಿರಲಿ, ಅಲ್ಲಿಂದ ಮರಳುತ್ತಿರಲಿ ಒಂದು ಕೈಕುಲುಕಿ ಅಂದವಾಗಿ ಅರಳಿದ ಹೂಗಳ ಗುಚ್ಛ ನೀಡಿದರೆ ಮನಸು ಸಂತಸದ ಬುಗ್ಗೆಯಾಗಿರುತ್ತದೆ.
ಈಗಂತೂ ಇಂಟರ್ನೆಟ್ ಜಮಾನಾ. ಉತ್ತಮವಾದ, ತಾಜಾತಾಜಾ ಹೂಗುಚ್ಛಗಳು ಕೈಗೆಟಕುವ ದರಗಳಲ್ಲಿ ಎಲ್ಲಿ ಸಿಗುತ್ತದೆಂದು ಗಲ್ಲಿಗಲ್ಲಿಗೆ ಹೋಗಿ ಹುಡುಕುವ ಅಗತ್ಯವೇ ಇಲ್ಲ. ಇದಕ್ಕಾಗಿಯೇ ದಟ್ಸ್ ಕನ್ನಡ ತಾಣದ ಮದರ್ ಪೋರ್ಟಲ್ ಒನ್ ಇಂಡಿಯಾ ಸುಂದರ ಹೂವುಗಳ ಲಾಲ್ ಬಾಗ್ ಬಾಗಿಲನ್ನು ನೆಟ್ಟಿಗರಿಗಾಗಿ ತೆರೆದಿದೆ.
ಪ್ರೀತಿ ನಿವೇದಿಸಬೇಕಾ? ಪ್ರೀತಿಪಾತ್ರರಿಗೆ ಶುಭ ಹಾರೈಸಬೇಕಾ? ಪ್ರಿಯತಮೆಗೆ ಅಥವಾ ಪ್ರಿಯತಮನಿಗೆ ನಿಮ್ಮ ಮನದಾಳದ ಪ್ರೇಮವನ್ನು ನಿವೇದಿಸಿಕೊಳ್ಳಬೇಕಾ? ಚಾಕಲೇಟು ಅಥವಾ ಪುಟಾಣಿ ಉಡುಗೊರೆಯೊಂದಿಗೆ ಹೂಗುಚ್ಛ ನೀಡಿ ವಿಶ್ ಮಾಡಬೇಕಾ? ಇಲ್ಲಿವೆ ತರಹೇವಾರಿ, ಅಂದವಾಗಿ ಅಲಂಕರಿಸಿದ, ಸುಗಂಧ ಪರಿಮಳ ಬೀರುವ ಬಣ್ಣಬಣ್ಣದ ಹೂವುಗಳ ಸುಂದರ ಲೋಕ.
ಬನ್ನಿ, ನಿಮಗೊಪ್ಪುವ ಹೂವಿನ ಬೊಕೆ ರವಾನೆಗೆ ಆದೇಶ ನೀಡಿ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications