ದಿ ಟೈಮ್ಸ್ ಆಫ್ ಇಂಡಿಯಾ ಪ್ರಕಟಣೆ ರದ್ದು!

ಹಿರಿಯ ಪತ್ರಕರ್ತ ಈಶ್ವರ ದೈತೋಟ ಅವರ ಸಂಪಾದಕತ್ವದಲ್ಲಿ ಇಂಗ್ಲಿಷ್ ಪತ್ರಿಕೆಯ [Times of India] ಕನ್ನಡ ರಿಮೇಕ್ 'ದಿ ಟೈಮ್ಸ್ ಆಫ್ ಇಂಡಿಯಾ' ಪ್ರಕಟವಾಗುತ್ತಿತ್ತು. 2007ರ ಜನವರಿಯಲ್ಲಿ ಆರಂಭವಾದ ಈ ಪ್ರಯತ್ನ ಮೂರು ವರ್ಷಗಳ ಕಾಲ ಉಳಕೊಂಡಿತ್ತು. ತೀರಿಕೊಂಡ ಪತ್ರಿಕೆಯಲ್ಲಿ ಅಕ್ಷರ ನೌಕರಿ ಮಾಡುತ್ತಿದ್ದ ಪತ್ರಕರ್ತರನ್ನು ಟೈಮ್ಸ್ ಬಳಗದಲ್ಲೇ ಉಳಿಸಿಕೊಂಡು ದುಡಿಸಿಕೊಳ್ಳುವ ಆಲೋಚನೆಗಳಿವೆ ಎಂದು ಗೊತ್ತಾಗಿದ್ದರೂ ಯಾವುದೇ ಖಾತರಿ ಇಲ್ಲ.
ಪತ್ರಿಕೆ ಮುಚ್ಚಲು ಕಾರಣ ಏನು ಎಂದು ನಾವು ಒತ್ತಿ ಹೇಳಬೇಕಾದ ಅಗತ್ಯ ಇಲ್ಲ. ಇಂಗ್ಲಿಷ್ ಟೈಮ್ಸ್ ವರದಿಗಳನ್ನು ಮಕ್ಕಿಕಾಮಕ್ಕಿ ಅನುವಾದ ಮಾಡಿ ಓದುಗರಿಗೆ, ಅದೂ, ಬೆಂಗಳೂರಿನ ಓದುಗರಿಗೆ ಉಣಬಡಿಸುತ್ತಿದ್ದುದು ಪತ್ರಿಕೆ ಫೇಲ್ ಆಗುವುದಕ್ಕೆ ಮುಖ್ಯ ಕಾರಣ. ತನ್ನದೇ ಆದ ಓದುಗರು, ತನ್ನದೇ ಆದ ಸಂಪಾದಕೀಯ ಧೋರಣೆ, ತನ್ನದೇ ಆದ ಜಾಹಿರಾತುದಾರರ ಜಾಲ ರೂಪಿಸಿಕೊಳ್ಳಲು ನಿರಾಕರಿಸಿದ ಪತ್ರಿಕಾ ಮಾಲಿಕರ ನಿಲುವಿನಿಂದಾಗಿ ಅವಸಾನ ಎದುರಾಯಿತು. ಕನ್ನಡ ಚಲನಚಿತ್ರ ಪ್ರಪಂಚದಲ್ಲಿ ರಿಮೇಕ್ ಚಿತ್ರಗಳು ಕೆಲವು ನಿರ್ಮಾಪಕರ ಜೇಬು ಭರ್ತಿ ಮಾಡುತ್ತಿರಬಹುದು. ಆದರೆ ಕನ್ನಡ ದಿನ ಪತ್ರಿಕೆ ವಿಚಾರದಲ್ಲಿ ಈ ಲಾಜಿಕ್ ಮ್ಯಾಜಿಕ್ ಮಾಡುವುದಿಲ್ಲ.
ಕನ್ನಡ 'ದಿ ಟೈಮ್ಸ್ ಆಫ್ ಇಂಡಿಯಾ' ತರಿಸುತ್ತಿದ್ದ ಮನೆಗಳಿಗೆ ಪತ್ರಿಕೆಯ ಜತೆಗೆ ಬೆನೆಟ್ ಕೋಲ್ ಮನ್ ಒಡೆತನದ ಇನ್ನೊಂದು ಪತ್ರಿಕೆ 'ವಿಜಯ ಕರ್ನಾಟಕ'ವನ್ನು ಮುಫತ್ ಆಗಿ ಕೊಡುವ ಪ್ರಸಾರ ಯೋಜನೆ ಕಳೆದ ವಾರ ಜಾರಿಯಲ್ಲಿತ್ತು. ಒಂದು ತೆಗೆದುಕೊಂಡರೆ ಇನ್ನೊಂದು ಉಡುಗೊರೆ ಆಫರ್ ನಿಂದಾಗಿ ಕೆಲವು ಚಂದಾದಾರರು ಚಕಿತಗೊಂಡರೂ ಉದ್ಯಮದಲ್ಲಿರುವವರಿಗೆ 'ಕನ್ನಡ ಟೈಮ್ಸ್ ' ಮುಚ್ಚಬಹುದು ಎಂಬ ಗುಮಾನಿ ಬಂದಿತ್ತು. ಏಕೆಂದರೆ, ಸೀರೆ ತೆಗೆದುಕೊಂಡರೆ ರವಿಕೆ ಫ್ರೀ ಕೊಡುವ ಆಫರ್ ನಂಬಬಹುದು. ಆದರೆ, ರವಿಕೆ ಖರೀದಿಸಿದರೆ ಸೀರೆ ಕೊಡುವ ಆಫರುಗಳನ್ನು ಗ್ರಾಹಕ ನಂಬುವುದು ಕಷ್ಟ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications