ದಿ ಟೈಮ್ಸ್ ಆಫ್ ಇಂಡಿಯಾ ಪ್ರಕಟಣೆ ರದ್ದು!

ಹಿರಿಯ ಪತ್ರಕರ್ತ ಈಶ್ವರ ದೈತೋಟ ಅವರ ಸಂಪಾದಕತ್ವದಲ್ಲಿ ಇಂಗ್ಲಿಷ್ ಪತ್ರಿಕೆಯ [Times of India] ಕನ್ನಡ ರಿಮೇಕ್ 'ದಿ ಟೈಮ್ಸ್ ಆಫ್ ಇಂಡಿಯಾ' ಪ್ರಕಟವಾಗುತ್ತಿತ್ತು. 2007ರ ಜನವರಿಯಲ್ಲಿ ಆರಂಭವಾದ ಈ ಪ್ರಯತ್ನ ಮೂರು ವರ್ಷಗಳ ಕಾಲ ಉಳಕೊಂಡಿತ್ತು. ತೀರಿಕೊಂಡ ಪತ್ರಿಕೆಯಲ್ಲಿ ಅಕ್ಷರ ನೌಕರಿ ಮಾಡುತ್ತಿದ್ದ ಪತ್ರಕರ್ತರನ್ನು ಟೈಮ್ಸ್ ಬಳಗದಲ್ಲೇ ಉಳಿಸಿಕೊಂಡು ದುಡಿಸಿಕೊಳ್ಳುವ ಆಲೋಚನೆಗಳಿವೆ ಎಂದು ಗೊತ್ತಾಗಿದ್ದರೂ ಯಾವುದೇ ಖಾತರಿ ಇಲ್ಲ.
ಪತ್ರಿಕೆ ಮುಚ್ಚಲು ಕಾರಣ ಏನು ಎಂದು ನಾವು ಒತ್ತಿ ಹೇಳಬೇಕಾದ ಅಗತ್ಯ ಇಲ್ಲ. ಇಂಗ್ಲಿಷ್ ಟೈಮ್ಸ್ ವರದಿಗಳನ್ನು ಮಕ್ಕಿಕಾಮಕ್ಕಿ ಅನುವಾದ ಮಾಡಿ ಓದುಗರಿಗೆ, ಅದೂ, ಬೆಂಗಳೂರಿನ ಓದುಗರಿಗೆ ಉಣಬಡಿಸುತ್ತಿದ್ದುದು ಪತ್ರಿಕೆ ಫೇಲ್ ಆಗುವುದಕ್ಕೆ ಮುಖ್ಯ ಕಾರಣ. ತನ್ನದೇ ಆದ ಓದುಗರು, ತನ್ನದೇ ಆದ ಸಂಪಾದಕೀಯ ಧೋರಣೆ, ತನ್ನದೇ ಆದ ಜಾಹಿರಾತುದಾರರ ಜಾಲ ರೂಪಿಸಿಕೊಳ್ಳಲು ನಿರಾಕರಿಸಿದ ಪತ್ರಿಕಾ ಮಾಲಿಕರ ನಿಲುವಿನಿಂದಾಗಿ ಅವಸಾನ ಎದುರಾಯಿತು. ಕನ್ನಡ ಚಲನಚಿತ್ರ ಪ್ರಪಂಚದಲ್ಲಿ ರಿಮೇಕ್ ಚಿತ್ರಗಳು ಕೆಲವು ನಿರ್ಮಾಪಕರ ಜೇಬು ಭರ್ತಿ ಮಾಡುತ್ತಿರಬಹುದು. ಆದರೆ ಕನ್ನಡ ದಿನ ಪತ್ರಿಕೆ ವಿಚಾರದಲ್ಲಿ ಈ ಲಾಜಿಕ್ ಮ್ಯಾಜಿಕ್ ಮಾಡುವುದಿಲ್ಲ.
ಕನ್ನಡ 'ದಿ ಟೈಮ್ಸ್ ಆಫ್ ಇಂಡಿಯಾ' ತರಿಸುತ್ತಿದ್ದ ಮನೆಗಳಿಗೆ ಪತ್ರಿಕೆಯ ಜತೆಗೆ ಬೆನೆಟ್ ಕೋಲ್ ಮನ್ ಒಡೆತನದ ಇನ್ನೊಂದು ಪತ್ರಿಕೆ 'ವಿಜಯ ಕರ್ನಾಟಕ'ವನ್ನು ಮುಫತ್ ಆಗಿ ಕೊಡುವ ಪ್ರಸಾರ ಯೋಜನೆ ಕಳೆದ ವಾರ ಜಾರಿಯಲ್ಲಿತ್ತು. ಒಂದು ತೆಗೆದುಕೊಂಡರೆ ಇನ್ನೊಂದು ಉಡುಗೊರೆ ಆಫರ್ ನಿಂದಾಗಿ ಕೆಲವು ಚಂದಾದಾರರು ಚಕಿತಗೊಂಡರೂ ಉದ್ಯಮದಲ್ಲಿರುವವರಿಗೆ 'ಕನ್ನಡ ಟೈಮ್ಸ್ ' ಮುಚ್ಚಬಹುದು ಎಂಬ ಗುಮಾನಿ ಬಂದಿತ್ತು. ಏಕೆಂದರೆ, ಸೀರೆ ತೆಗೆದುಕೊಂಡರೆ ರವಿಕೆ ಫ್ರೀ ಕೊಡುವ ಆಫರ್ ನಂಬಬಹುದು. ಆದರೆ, ರವಿಕೆ ಖರೀದಿಸಿದರೆ ಸೀರೆ ಕೊಡುವ ಆಫರುಗಳನ್ನು ಗ್ರಾಹಕ ನಂಬುವುದು ಕಷ್ಟ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications