ಪ್ರೇಮ ಪತ್ರ: ಪಕ್ಕದ ತೋಟದ ಈರುಳ್ಳಿ ಬಾನಿನೆಲ್ಲ ಚುಕ್ಕಿಗಳ ತಂದು ಮುಡಿದಂತೆ ಕಂಡಿತು!
ನನ್ನ ಪ್ರೀತಿಯ ಶಕುಂತಲೇ,
ಹಗಲಿಡೀ ಮನಸ್ಸಿಟ್ಟು ಕೆಲಸದಲ್ಲಿ ತಲ್ಲೀನನಾಗಿದ್ದವನಿಗೆ ಸೂರ್ಯ ಮುಳುಗಲಿದ್ದಾಗ, ಕೆಲಸ ಮುಗಿದಾಗ, ಮೈ ಹಿಡಿದ ದಣಿವು ನೀಗಲೆಂದು ನಿನ್ನ ನೆನಪನ್ನು ಮನಸ್ಸಿಗೆ ತಂದುಕೊಂಡು ತೋಟದ ಬದುವಿನಲ್ಲಿದ್ದ ಹೊಂಗೆ ಮರದಡಿ ಕುಳಿತೆ. ನಿನ್ನ ಪ್ರೀತಿ ಎದೆಯಲ್ಲಿ ಪರಿಮಳಿಸಿ ಭಾವಗೀತೆಯಾಗುತ್ತಿದ್ದಾಗ, ಆವರೆಗೆ ಎಲ್ಲೆಲ್ಲಿಯೋ ಅಲೆದಾಡಿ ಬಂದ ಗಿಳಿಗಳು ಹಾಡನ್ನು ಚದುರಿಸಿದವು.
ಸಂಜೆ ನೇಸರನ ಕಾಂತಿಯನ್ನು ತಮ್ಮ ಹಸಿರು ಮೈಗೆ ಹೊದ್ದು, ತೋಟದ ಮಧ್ಯದ ಮುಸುಕಿನ ಜೋಳದ ತೆನೆಗಳ ಮೇಲೆ ಕುಳಿತು ತೆನೆಯನ್ನು ಸುತ್ತಿಕೊಂಡ ಮುಸುಕನ್ನು ತಮ್ಮದೇ ಶೈಲಿಯಲ್ಲಿ ಸುಲಿದು ಹಾಲು ಹಿಡಿದ ಕಾಳುಗಳನ್ನು ಕುದುಕಿ ತಿನ್ನುವ ಗಿಳಿಗಳನ್ನು ಗುರುತಿಸಿ ಓಡಿಸುವುದು ಬಲು ಕಷ್ಟ ಶಕುಂತಲೆ.
ಆಗ ಕವಣೆಗೆ ಕಲ್ಲಿಟ್ಟು, ದಿಕ್ಕು ದಿಕ್ಕಿಗೆ ಬೀಸುವುದಷ್ಟೇ ಕೆಲಸ. ಹಾರಿದವು. ಹಾರಿ ಹೋದರೆ, ಮೊಂಡು ಬುದ್ಧಿಯವು ಕದಲುವುದಿಲ್ಲ. ಕವಣೆ ಬೀಸಬೇಕು, ಹಾಹಾ ಹೋಹೋ ಕೂಗಬೇಕು. ಡಬ್ಬಾ ಬಾರಿಸಬೇಕು, ತೋಟದೊಳಗೆ ನುಗ್ಗಿ ಓಡಾಡಬೇಕು. ಸಂಜೆ ಬೆಳಕು ಕತ್ತಲಾಗುತ್ತ, ಅವು ಗೂಡುಗಳತ್ತ ಹಾರಿದಾಗಲೇ ಬಿಡುವು. ಆಗ ಮರುಕಳಿಸುವುದು ನಿನ್ನ ನೆನಪು.

ನೆನಪಿನಲ್ಲಿ ಮನೆಗೆ ಹೊರಡಲು ಬದುವಿಗೆ ಬಂದೆ. ಅಲ್ಲಿದ್ದ ಮಲ್ಲಿಗೆ ಗಿಡದಲ್ಲಿ ಮೊಗ್ಗುಗಳು ಅರಳುವ ಸನ್ನಾಹದಲ್ಲಿದ್ದವು. ಗುರುವಾರದ ದಿನ ಅಮ್ಮ ಮೊಗ್ಗು ಬಿಡಿಸಲು ಒಪ್ಪುವುದಿಲ್ಲ. ಶುಕ್ರವಾರದ ಪೂಜೆಗೆ ಬೆಳಗ್ಗೆಯೇ ಬಿಡಿಸಿ ತರಬೇಕೆಂಬುದು ಅವಳ ಅಪ್ಪಣೆ. ಹಾಗಾಗಿ ಮೊಗ್ಗು ಬಿಡಿಸುವ ಕೆಲಸ ಬೆಳಗ್ಗೆಗೆ ಮೀಸಲು.
ಅರಳುತ್ತಿದ್ದ ಮೊಗ್ಗುಗಳು ನಿನ್ನ ಮುಗುಳುನಗೆಯನ್ನು ಹೋಲುತ್ತಿದ್ದವು. ನೋಡುತ್ತ ನಿಂತೆ. ಮಲ್ಲಿಗೆಯ ಕಂಪು, ನಿನ್ನ ನೆನಪಿನ ಇಂಪು ಮನಕ್ಕೆ ಎಂಥದೋ ಸುಖಭಾವ ತರುತ್ತಿದ್ದವು. ಚಂದ್ರ ಮೂಡಣದಲ್ಲಿ ಮುಖ ತೋರಿದ. ನನ್ನ ಬೆಳಕಿನಲ್ಲಿ ಮನೆಯ ದಾರಿ ಹಿಡಿಯುತ್ತಿದ್ದವನು ಇನ್ನೂ ನಿಂತಿರುವೆಯಲ್ಲ ಎಂದು ಬೆಳದಿಂಗಳು ನಗೆ ತೋರಿತು. ನನ್ನ ಶಕುಂತಲೆ ನೆನಪಾಗಿ ನಿಲ್ಲಿಸಿದಳು ಎಂದೆ. ಸರಿಯೆಂಬಂತೆ ತಂಗಾಳಿಯೊಂದಿಗೆ ಮುಂದಕ್ಕೆ ಸಾಗಿತು. ನನ್ನಂತಹ ಎಷ್ಟೋ ಜನರ ಉಸಾಬರಿ ಅದಕ್ಕೆ.
ಇನ್ನು ಚಂದಿರನ ಕೈಲೂ ಹೇಳಿಸಿಕೊಳ್ಳುವುದು ಬೇಡವೆಂದು ಮನೆಗೆ ಹೊರಡಲು ಬದು ದಾಟಿದೆ. ಪಕ್ಕದ ತೋಟದ ಈರುಳ್ಳಿ ಬಾನಿನೆಲ್ಲ ಚುಕ್ಕಿಗಳ ತಂದು ಮುಡಿದಂತೆ ಕಂಡಿತು. ಹಸುರಿನ ಮೈ ಮೇಲೆ ಬೆಳ್ಳಿ ಬೆಡಗು! ಜೋಳ ಮಾರಿ, ಅಂಥದೇ ಸೀರೆಯನ್ನು ನಿನಗೆ ತರಬೇಕೆಂಬ ಆಸೆ ಹುಟ್ಟಿತು. ಆಸೆಗೆ ಬಿದ್ದ ಮನದಲ್ಲಿ ಹಾಡು-
ಉದ್ದಾನುದ್ದದ ಜಡೆಯೋಳೆ ಶಕುಂತಲೆ
ಮುಡಿಯಲ್ಲಿ ಮಲ್ಲಿಗೆ, ನಿಲವು ಕಬ್ಬಿನ ಜಲ್ಲೆ
ಕಣ್ಣಲ್ಲಿ ತುಳುಕಿ ಕೆಣಕುವ ನಾಚಿಕೆ
ರತಿದೇವಿ ಸಾಟಿಯೆ ನಿನಗೆ?
ತೋಟ ಕಾಲಿನವನ ಕೈಲಿ ಕಾಗದ ಲೇಖನಿಯೆ? ಮನೆಗೆ ಹೋಗಿ ಬರೆಯಲು ನೆನಪಿರಬೇಕು. ಜೊತೆಗೆ ಬಿಡುವು. ಆದರೆಲ್ಲಿ ಅದು? ಉಂಡರೆ ಕರೆಯುವುದು ಹಾಸಿಗೆ. ಮಲಗಿದರೆ ಕನಸ ಕರೆಯುವುದು ನಿದ್ದೆ. ಕನಸಿನಲಿ ನೀ ಬಂದು ಹೇಳುವ ಕಥೆಗಳಿಗೆ ಹೂಂಗುಡವುದರಲ್ಲೆ ಕೋಳಿ ಕೂಗಿಬಿಡುವುದು. ಇನ್ನೆಲ್ಲಿ ನೆನಪಿಟ್ಟು ಬರೆಯುದು ಹೇಳೆ?
ತಿತ್ತಿರಿ ಹಕ್ಕಿ ನನ್ನ ತಲೆ ಮೇಲೆ ಸುತ್ತಿ ಹಾರಲಿತ್ತು ನಿನ್ನೂರ ಕಡೆಗೆ. ನಿನಗೆ ತಿಳಿಸೆಂದು ಹೇಳಿ, ಹಾಡಿದೆ ಗಟ್ಟಿಯಾಗಿ. ಅದು ಕೇಳಿಸಿಕೊಂಡೆನೆಂಬಂತೆ ತಿತ್ತೀರಿ ತಿತ್ತಿ ಎಂದು ಕೂಗಿ ಹಾರಿತು ನಿನ್ನೂರ ಕಡೆಗೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications