ಸ ರಘುನಾಥ ಅಂಕಣ; ಮುನೆಕ್ಕನಿಂದ ಎಲ್ಲರ ಬಾಲಗಳು ಮುದುಡಿಕೊಂಡವು
ಬೀರಣ್ಣ ಮಗನನ್ನು ಮಾಲೂರಿನಲ್ಲಿದ್ದ ಮಗಳು ಗೋಪಮ್ಮನ ಮನೆ ಸೇರಿಸಿದ. ಪೊರಕೆ ಏಟು ತಿನ್ನುವುದೆಂದರೆ ಶನಿಮಹಾತ್ಮನು ಹೆಗಲೇರಿದಂತೆ. ಮುಂದೆ ಏನೇನು ಕಾದಿದೆಯೋ ಎಂದು ಬೀರಣ್ಣನ ಹೆಂಡತಿ ಚೌಡಮ್ಮ ಗೋಳಾಡಿದಳು. ಶನಿದೇವರ ಗುಡಿಗೆ ಪೂಜೆಗೆ ಕೊಡಿಸಿದಳು. ಬೀರಣ್ಣ ಸೀತಾರಾಮಶಾಸ್ತ್ರಿಗಳನ್ನು ಕರೆಸಿ ವಿಷಯ ತಿಳಿಸಿ ಶಾಂತಿಪೂಜೆ ಮಾಡಿಸಿದ ಮೇಲೆ ಅವಳಗೆ ಎಷ್ಟೋ ಸಮಾಧಾನವಾಯಿತು.
ಪ್ರಸಾದ ತಂದು ಸುನಂದಾಳಿಗೆ ಕೊಟ್ಟು, 'ನೀನು ನನ್ನ ಮಗಳಿದ್ದ ಹಾಗೆ. ಮನಸ್ಸಿಗೆ ಹಾಕಿಕೊಳ್ಳಬೇಡ ಮಗಳೆ' ಎಂದು ಚೌಡಮ್ಮ ಕಣ್ಣು ತುಂಬಿಕೊಂಡಳು. 'ನಾನೂ ದುಡುಕಿಬಿಟ್ಟೆ. ಚೌಡಮ್ಮ' ಎಂದು ಮುನೆಕ್ಕ ಅವಳ ಎರಡೂ ಕೈ ಹಿಡಿದುಕೊಂಡಳು.
ಮುನೆಕ್ಕ ನಡೆದುದೆಲ್ಲವನ್ನೂ ಅಪ್ಪಯ್ಯನ ಮನೆಯವರಿಗೆ ಹೇಳಿದಳು. ಏನೇ ಆಗಲಿ ನೀನು ಹಾಗೆ ಮಾಡಬಾರದಿತ್ತು ಎಂದು ಅಮ್ಮ ಆಕ್ಷೇಪಿಸಿದಳು. ಸುನಂದಾ ಕಣ್ಣು ತುಂಬಿಕೊಂಡು, ನಾನು ಮದನಪಲ್ಲಿಗೆ ಹೋಗಿಬಿಡುತ್ತೇನೆ ಎಂದು ಬಿಕ್ಕಿದಳು. 'ಈಗೇನು ಸಾಮ್ರಾಜ್ಯ ಮುಳುಗಿತು ಅಂತ? ಇಂಥವಕ್ಕೆಲ್ಲ ಹೆದರುತಾರೇನೆ ಹುಚ್ಚಮ್ಮ' ಎಂದ ಅಪ್ಪಯ್ಯ. 'ಏನೂ ಆಗಿಲ್ಲ ಅಂತ ಇದ್ದುಬಿಡಿ. ಎಲ್ಲೂ ಬಾಯಿ ಬಿಡಬೇಡಿ. ಬೀರಣ್ಣ ಕೆಟ್ಟೋನೇನಲ್ಲ' ಅಂದಳು ಅಮ್ಮ.

ನರಸಿಂಗರಾಯ ಎದೆಯೊಳಗೇ ಮರುಗಿದ, ಕೊರಗಿದ, ಕನಲಿದ. ಮಗನತ್ತ ನೋಡಿದ ಅಪ್ಪಯ್ಯ, 'ನರಸಿಂಗ ಹುಷಾರ್, ನಿನ್ನ ಗೆಳೆಯರಿಗೆ ಹೇಳಬೇಡ. ಇದು ಇನ್ನೆಲ್ಲಿಗೋ ಹೋಗುತ್ತೆ. ಹಾಗಾಗೋದು ಬೇಡ' ಅಂದ.
ನರಸಿಂಗರಾಯನಿಗೆ ಬೋಡಪ್ಪ, ಪಿಲ್ಲಣ್ಣನಿಗೆ ಹೇಳದಿರಲಾಗಲಿಲ್ಲ. ಹಾಗೆಯೇ ಅಪ್ಪನ ಮಾತನ್ನೂ ಹೇಳಿದ. ನಾವೇನು ಮಾಡೋಕೂ ಇಲ್ಲದಂತೆ ಮುನೆಕ್ಕ ಮಾಡಿದ್ದಾಳೆ ಬಿಡು ಎಂದ ಬೋಡಪ್ಪ.
ಮಾಡೋದೇನೂ ಬೇಡ. ಸೋಮೇಶನ ಆ ನಾಲ್ಕು ನಾಯಿಗಳ ಕಿವಿಗೆ ಹಾಕೋಣ. ಉಚ್ಚೆ ಹೊಯ್ಕೊಳ್ತಾವೆ ಅಂದ ಪಿಲ್ಲಣ್ಣ. ಆ ಮೂವರ ಮಾತುಗಳನ್ನು ಕೇಳಿಸಿಕೊಂಡಿದ್ದ ಲಕ್ಷ್ಮೀನಾರಾಯಣ, ನೀವು ಹೇಳೋಕೇನೂ ಉಳಿದಿಲ್ಲ. ಅವು ಆಗಲೇ ಹುಯ್ಕೊಂಡಾಗಿದೆ. ಈಗ ಅವರಂತಹ ಯಾರಿಗೂ ಸುನಂದಾಳನ್ನು ನೋಡಿ ಹಲ್ಕಿಸಿಯೋಕೂ ಭಯ ಹುಟ್ಟಿಕೊಂಡಿದೆ. ಮುನೆಕ್ಕ ನಮ್ಮೂರ ಹೆಣ್ಗಂಡು ಅಂದ. ನಿನ್ನ ಕಿವೀಗೂ ಬಿತ್ತ! ಇನ್ನು ಏಡುಕೊಂಡಲವಾಡಾ ವೆಂಕಟರಮಣಾ... ಎಂದು ನರಸಿಂಗರಾಯ ಹೇಳುತ್ತಿದ್ದಂತೆ ಉಳಿದಿಬ್ಬರು ಸೋಮೇಶನ ಗತಿ ಗೋವಿಂದಾ ಗೋವಿಂದ ಎಂದರು.
ಈ ವಿಷಯದಲ್ಲಿ ಕೊಂಚ ನಿನ್ನ ಬಾಯನ್ನ ಹೊಲಕೊ ಲಚ್ಚ ಎಂದು ನರಸಿಂಗರಾಯ ಹೇಳಿದ. ಹೊಲಕೊಳ್ಳೋಕೆ ಆಗಲೆ ಬಾಯಿ ಖಾಲಿ ಆಗೋಗಿದೆ ಅಂದ ಲಕ್ಷ್ಮೀನಾರಾಯಣ. ಗೆಳೆಯರು ಮತ್ತೊಮ್ಮೆ ಗೋವಿಂದಾ ಗೋವಿಂದಾ ಎಂದರು.
ಬಾಯೆನ್ನುವವರೆಗೆ ಊರಿಗೆ ಬಂದುಗಿಂದೀಯ ಜೋಕೆ ಎಂದು ಸೋಮೇಶನಿಗೆ ಬೀರಣ್ಣ ತಾಕೀತು ಮಾಡಿದ್ದ. ಇದರಿಂದ ಪಿಲ್ಲಣ್ಣ ಹೇಳಿದ 'ಆ ನಾಲ್ಕು ನಾಯಿಗಳು' ಬಾಯಾರಿಕೆ ತಾಳದೆ, ಸೋಮೇಶ ಬರುತ್ಲೇ ಕೊಡುವುದಾಗಿ ಹೇಳಿ ಹಂದಿಜೋಗಪ್ಪನ ಸಾರಾಯಿ ಗುಡಿಸಲಿನಲ್ಲಿ ಸಾಲ ಬರೆಸುವಂತಾಯಿತು. ಅವನು ದಿನಕ್ಕೆ ನಾಲ್ಕು ಕ್ವಾರ್ಟರ್ ಕೊಟ್ಟು, ಅವರು ಹೋದ ಮೇಲೆ ಆರು ಕ್ವಾರ್ಟರ್ ಎಂದು ಕಿಟಕಿ ಬಾಗಿಲ ಹಿಂದೆ ಆರು ಗೀಟುಗಳನ್ನು ಹಾಕುತ್ತಿದ್ದ. ಅವುಗಳ ಅಡಿಯಲ್ಲಿ ಎಂಟು ಚಿಕ್ಕ ಗೆರೆಗಳು. ಅವು ಬೋಂಡಗಳ ಲೆಕ್ಕ.
ಸೋಮೇಶ ಜೊತೆಯಲ್ಲಿದ್ದಾಗ ಸಿಗರೇಟನ್ನೇ ಸೇದುತ್ತಿದ್ದವರು ಈಗ ಬೀಡಿಗೆ ಬಂದಿದ್ದರು. ಮುನೆಕ್ಕನಿಗೆ ಗುಟುಕಿಗೊಂದು ಬೈಗುಳ, ಸುನಂದಾಳಿಗೆ ದಮ್ಮಿಗೊಂದು ಬೈಗುಳ ಅರ್ಪಿಸುತ್ತ ಸೋಮೇಶನ ಆಗಮನಕ್ಕಾಗಿ ಕಾಯುತ್ತಿದ್ದರು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications