ಗಾಂಧಿ ಕನ್ನಡಕಕ್ಕೆ ಎಕ್ಸ್-ರೇ ಪವರ್ : ರಾಹುಲ್

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನ್ನಡಕ ಹಲವು ದಶಕಗಳ ನಂತರ ಭಾರತಕ್ಕೆ ಹಿಂದಿರುಗಿರುವ ಶುಭ ಸಂದರ್ಭದಲ್ಲಿ ಮದ್ಯೋದ್ಯಮಿ ಡಾ.ವಿಜಯ್ ಮಲ್ಯ ನಗರದಲ್ಲಿ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿಯವರು, ದೇಶದಲ್ಲೇ ಪ್ರಪ್ರಥಮ ಬಾರಿಗೆ ಗಾಂಧೀಜಿಯವರ ಕನ್ನಡಕವನ್ನು ಮತ್ತೊಮ್ಮೆ ಧರಿಸಿ ಈ ಮಾತನ್ನು ಆಡಿದರು.
"ಗಾಂಧಿ ತಾತನ ಕಣ್ಣಿನ ಪವರ್ ಬೇರೆ. ನನ್ನ ಕಣ್ಣಿನ ಪವರ್ ಬೇರೆ" ಎಂದ ರಾಹುಲ್, "ಆದರೆ, ಈ ಕನ್ನಡಕ ಕಣ್ಣಿಗೆ ಮಾತ್ರವಲ್ಲ. ಹೃದಯ ಮತ್ತು ಬುದ್ಧಿಗೂ ಹೊಸದೊಂದು ದೃಷ್ಟಿ ನೀಡುವಂತಹುದು. ಇದನ್ನು ಧರಿಸಿದ ಮೇಲೆ ನನಗೆ ಭಾರತದ ಬಗೆಗೆ ಹೊಸದೊಂದು ದರ್ಶನವೇ ಆಗಿದೆ. ಭಾರತೀಯರ ಬಗೆಗೆ ಒಳನೋಟ ತೋರುವ ಎಕ್ಸ್-ರೇ ಪವರ್ ಈ ಕನ್ನಡಕಕ್ಕಿದೆ" ಎಂದರು.
"ಈ ಕನ್ನಡಕವನ್ನು ಧರಿಸಲು ಅವಕಾಶ ನೀಡಿದ ಮಲ್ಯ ಅಂಕಲ್ಗೆ ಧ್ಯಾಂಕ್ಸ್" ಎಂದ ರಾಹುಲ್ ಗಾಂಧಿ, ಅನುಮತಿ ದೊರೆತರೆ ಲೋಕಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಈ ಕನ್ನಡಕವನ್ನು ಪ್ರತಿದಿನ ಧರಿಸಿ ಜನ ಸಾಮಾನ್ಯರಿಗೆ ಅದರ ದರ್ಶನ ನೀಡಲು ತಾವು ಸಿದ್ಧರಿರುವುದಾಗಿ ಅವರು ಘೋಷಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಖ್ಯಾತ ಚಿತ್ರ ನಟಿ ಮತ್ತು ಸಂಸದೆ ಜಯಪ್ರದ, ಮಲ್ಯ ಅನುಮತಿ ಇತ್ತರೆ ಮುಂದಿನ ಬಾರಿ ವೈದ್ಯಕೀಯ ತಪಾಸಣೆಗೆ ಹೋದಾಗ ಗಾಂಧೀಜಿಯವರ ಬ್ಲಡ್ ಟೆಸ್ಟ್ ರಿಪೋರ್ಟ್ ಅನ್ನು ತಾವು ಬಳಸುವುದಾಗಿ ನುಡಿದರು.
(ಮಜಾವಾಣಿ ದೆಹಲಿ ಬ್ಯೂರೋ)
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications