ಅಷ್ಟೇನಾ?ನಂಬಕ್ಕಾಗಲ್ಲ! : ಅನಿತಾ ಕುಮಾರಸ್ವಾಮಿ

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನ ಮಂಡಲದ ಕಾರ್ಯದರ್ಶಿಯಿಂದ ಶಾಸಕರ ಸಂಬಳ-ಸವಲತ್ತುಗಳ ಬಗೆಗೆ ಮಾಹಿತಿ ಪಡೆಯುತ್ತಿದ್ದ ಅನಿತಾ ಕುಮಾರಸ್ವಾಮಿಯವರು, ಶಾಸಕರ ಮಾಸಿಕ ಸಂಬಳ ಕೇವಲ ಕೆಲವೇ ಸಾವಿರ ರೂಪಾಯಿಗಳು ಎಂದು ತಿಳಿದಾಗ ಅವಕ್ಕಾದರು. ಉತ್ತಮವಾದ ಬಿಲ್ಗಳನ್ನು ಪಾಸ್ ಮಾಡಿದರೆ ಏನಾದರೂ ಬೋನಸ್ ಸಿಗುತ್ತದೆಯೇ ಎಂಬ ಅನಿತಾ ಅವರ ಪ್ರಶ್ನೆಗೆ ವಿಧಾನಮಂಡಲದ ಕಾರ್ಯದರ್ಶಿ ನಕಾರಾತ್ಮಕ ಉತ್ತರ ನೀಡಿದಾಗಲಂತೂ ಅನಿತಾರವರ ಮುಖದಲ್ಲಿ ಸಖೇದಾಶ್ಚರ್ಯ ಮನೆ ಮಾಡಿತ್ತು.
ಅನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅನಿತಾರವರು, ಶಾಸಕರ ಸಂಬಳದ ವಿಷಯವನ್ನು ಪ್ರಸ್ತಾಪಿಸಿದರು. "ಸಂಬಳ ಇಷ್ಟು ಕಡಿಮೆ ಅಂದರೆ ನನಗಂತೂ ನಂಬಕ್ಕೇ ಆಗೊಲ್ಲ. ಕುಮಾರ್ ಅವರನ್ನು ಕೆಲವು ಸಲ ಹಣ ಬೇಕು ಅಂದಾಗ ಅವರು 'ನಾನೇನು ಸಾಫ್ಟ್ವೇರ್ ಎಂಜಿನಿಯರ್ ಅಂದ್ಕೊಂಡ್ಯಾ' ಅಂತಿದ್ದರು. ನಾನು ಸುಮ್ಮನೆ ತಮಾಷೆ ಮಾಡ್ತಿದ್ದಾರೆ ಅಂದ್ಕೊಳ್ತಾ ಇದ್ದೆ. ಈಗ ಗೊತ್ತಾಯ್ತು ಅವರಿಗೆ ಎಷ್ಟು ಸಂಬಳ ಬರತ್ತೆ ಅಂತಾ" ಎಂದು ನುಡಿದ ಅನಿತಾರವರು ಇಷ್ಟು ಕಡಿಮೆ ಸಂಬಳ ಎಂದು ಗೊತ್ತಿದ್ದರೂ ತಮ್ಮನ್ನು ಶಾಸಕಿಯಾಗಿಸಿದ ತಮ್ಮ ಕುಟುಂಬವರ್ಗದ ಬಗೆಗೆ ಅಚ್ಚರಿ ವ್ಯಕ್ತಪಡಿಸಿದರು.
"ಒಳ್ಳೇ ಕೆಲಸ ಮಾಡಿದರೆ ಬೋನಸ್ಸೂ ಇಲ್ಲಾ ಅಂದ್ರೆ ಹೇಗೆ?" ಎಂದು ಪ್ರಶ್ನಿಸಿದ ಅನಿತಾರವರು, ತಮ್ಮ ಟಿ.ವಿ.ಚಾನಲ್ನಲ್ಲಿ ಒಳ್ಳೆ ರೇಟಿಂಗ್ ತಂದುಕೊಟ್ಟವರಿಗೆ ಉತ್ತಮ ಬೋನಸ್ ನೀಡುವಂತೆ ವಿಧಾನ ಮಂಡಲದ ಕಾರ್ಯಕ್ರಮ ಟಿ.ವಿ.ಯಲ್ಲಿ ಪ್ರಸಾರವಾದಾಗ ಟಿ.ಆರ್.ಪಿ. ರೇಟಿಂಗ್ ಉತ್ತಮಗೊಂಡರೆ ಶಾಸಕರಿಗೆ ಬೋನಸ್ ಕೊಡುವ ವ್ಯವಸ್ಥೆಯಾದರೆ ಒಳ್ಳೆಯದು ಎಂದರು.
(ಮಜಾವಾಣಿ ಬೆಳಗಾವಿ ಬ್ಯೂರೋ ವರದಿ)
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications