ಮಜಾವಾಣಿ ವರ್ಷದ ವ್ಯಕ್ತಿ : ರಾಮಚಂದ್ರ ಗೌಡ

ಸಚಿವ ಗೌಡರು ಇತ್ತೀಚೆಗೆ ಹಲವಾರು ಅತ್ಯಂತ ಮುಖ್ಯ ಮತ್ತು ನಿಗೂಢ ವಿಷಯಗಳನ್ನು ಬಯಲಿಗೆಳೆದಿದ್ದು, ಈ ಕಾರಣಕ್ಕಾಗಿಯೇ ಅವರಿಗೆ ಮಜಾವಾಣಿ ವರ್ಷದ ವ್ಯಕ್ತಿಯ ಗೌರವ ದೊರಕಿದೆ ಎನ್ನಲಾಗಿದೆ.
ಈ ವಿಚಾರದ ಕುರಿತು ವರದಿಗಾರರೊಂದಿಗೆ ಮಾತನಾಡಿದ ಮಜಾವಾಣಿ ಪತ್ರಿಕೆಯ ವ್ಯವಸ್ಥಾಪಕ ಪ್ರಧಾನ ಮುಖ್ಯ ಉಪಸಂಪಾದಕರು "ಸಚಿವ ಗೌಡರಿಗೆ ಈ ಗೌರವ ದೊರಕಿರುವುದು ಸೂಕ್ತವೇ ಆಗಿದೆ. ಸತ್ಯದ ವಿರುದ್ಧ ಸಮರ ನಮ್ಮ ಪತ್ರಿಕೆಯ ಧ್ಯೇಯ. ಡಾ.ಯಡಿಯೂರಪ್ಪನವರು ವಿಶ್ವದ ಶ್ರೇಷ್ಠ ಅರ್ಥಿಕ ತಜ್ಞ ಎಂಬ ವಿಚಾರವನ್ನು ಹೊರಗೆಡವಿರುವ ಸಚಿವ ಗೌಡರು ನಮ್ಮ ಪತ್ರಿಕೆಯ ಧ್ಯೇಯೋದ್ದೇಶವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅದೂ ಅಲ್ಲದೆ, ನ್ಯೂಟನ್ಗೆ ನೊಬೆಲ್ ಪ್ರಶಸ್ತಿ ದೊರೆತ ವೈಚಿತ್ರ್ಯವನ್ನೂ ಬಯಲಿಗೆಳೆದಿರುವ ಸಚಿವರು ಐತಿಹಾಸಿಕ ವಾಸ್ತವದ ದಬ್ಬಾಳಿಕೆಯ ವಿರುದ್ಧ ಕ್ರಾಂತಿಯ ಕಹಳೆಯನ್ನೇ ಮೊಳಗಿಸಿದ್ದಾರೆ." ಎಂದಿದ್ದಾರೆ.
2008ರಲ್ಲಿ ನ್ಯೂಟನ್ಗೆ ನೊಬೆಲ್ ನೀಡಿರುವ ಸಚಿವರು, ಹೊಸ ವರ್ಷದಲ್ಲಿ ಆದಿ ಕವಿ ಪಂಪನಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸುವ ಸಾಧ್ಯತೆಗಳಿದ್ದು, ಆರೋಗ್ಯ ಇಲಾಖೆಯ ಸುಧಾರಣೆಗಾಗಿ ತಲತಲಾಂತರದಿಂದ ಜನರ ಆರೋಗ್ಯದ ರಕ್ಷಣೆ ಮಾಡುತ್ತಿರುವ ಲೈಫ್ಬಾಯನ್ನು ಉಪ ಆರೋಗ್ಯಸಚಿವನನ್ನಾಗಿ ನೇಮಕ ಮಾಡುವ ಆಲೋಚನೆಯನ್ನೂ ಹೊಂದಿದ್ದಾರೆನ್ನಲಾಗಿದೆ.
***

ರಾಮಚಂದ್ರ ಗೌಡರನ್ನು ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಿರುವ ಮಜಾವಾಣಿ ಪತ್ರಿಕೆಯ ನಿರ್ಧಾರ ಆ ಪತ್ರಿಕೆಯ ಸಂಪಾದಕೀಯ ವರ್ಗದಿಂದಲೇ ಕಟು ಟೀಕೆಗೆ ಗುರಿಯಾಗಿದೆ. ಈ ಗೌರವಕ್ಕೆ ಪಾತ್ರರಾಗುವಂತಹ ಎಷ್ಟೋ ಮಂದಿ ನಾಯಕರಿದ್ದರೂ, ವರ್ಷವಿಡೀ ಸುಮ್ಮನಿದ್ದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಒಂದೇ ಒಂದು ವರದಿಯ ಆಧಾರದ ಮೇಲೆ ಗೌಡರನ್ನು ಆಯ್ಕೆ ಮಾಡಿರುವ ಮಜಾವಾಣಿ ಸಂಪಾದಕರ ಕ್ರಮವನ್ನು ಪತ್ರಿಕೆಯ ಸಂಪಾದಕೀಯ ಮಂಡಳಿ "ಸೋಮಾರಿತನದ ಪರಮಾವಧಿ" ಎಂದು ಖಂಡಿಸಿದೆ.
(ಮಜಾವಾಣಿ ಬ್ಯೂರೋ ವರದಿ)
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications