ವಿಶಿಷ್ಟ ವ್ಯಕ್ತಿತ್ವದ ಎಡಚರ ಸ್ವಾತಂತ್ರ್ಯಕ್ಕೆ ಜೈ ಎನ್ನಿ!
ಬಾರ್ಸಿಲೋನಾದಲ್ಲಿ ಒಬ್ಬಳೆ ಮೊಟ್ಟ ಮೊದಲಬಾರಿಗೆ 4 ಲೆವೆಲ್ ಇದ್ದ ಸೂಪರ್ ಮಾರ್ಕೆಟ್ ಗೆ ಹೋದೆ. ಮೊದಲ ಬಾರಿ ಮನೆಯ ಸಾಮಾನು ಅಂಥದೆಲ್ಲಾ ಜವಾಬ್ದಾರಿಗಳನ್ನೆಲ್ಲಾ ಹೊತ್ತಿದ್ದು. ಸೂಪರ್ ಮಾರ್ಕೆಟ್ ಅಲ್ಲಿಯೇ ಲಿಫ್ಟ್, ಎಸ್ಕಲೇಟರ್, ಎಲಿವೇಟರ್ ಇವೆಲ್ಲಾ ನೋಡಿ ಹೈರಾಣಾಗಿ ಅರ್ಥವಾಗದ ಭಾಷೆಯಲ್ಲಿ ವೆರ್ದೂರ (ಶಾಖಾಹಾರಿ) ಸೆಕ್ಷನ್ ಗೆ ಹೋಗೋ ಅಷ್ಟರಲ್ಲಿ ನನ್ನ ಹಿಂದೆ ದುರು ದುರು ಎಂದು ಬೈದು, ಕೆಕ್ಕರಿಸಿ ನೋಡೀ "ಜಾಗ ಬಿಡು" ಎಂದು ಬೈದು ಹೋದಳು ಒಂದು ಹುಡುಗಿ.
ನನ್ನ ಪಾಡಿಗೆ ನಾನು ಎಸ್ಕಲೇಟರ್ ಅಲ್ಲಿ ಎಡಗಡೆಗೆ ನಿಂತಿದ್ದೆ. ನನ್ನ ಹಿಂದೆ ಸುಮಾರು ಜನ ನಿಂತಿದ್ದರು. ಅವರ ನೋಟದಿಂದ ನನ್ನಿಂದಲೇ ಎಡಕ್ಕೆ ನಿಂತಿದ್ದರು ಎಂದು ಗೊತ್ತಾಯಿತು. ಅಲ್ಲಿ ಎಡಕ್ಕೆ ಜನ ಅವರ ಪಾಡಿಗೆ ಹೋಗುತ್ತಾರೆ. ಎಸ್ಕಲೇಟರ್ ನಲ್ಲಿ ಬಲಕ್ಕೆ ನಿಲ್ಲಬೇಕು. ಅವರ ದಾರಿ ಎಡಕ್ಕೆ. ನನಗೆ ಅದು ಅರ್ಥವಾಗದೇ ಮಧ್ಯದಲ್ಲಿ ನಿಂತು ಹೋದೆ. ಇವೆರೆಲ್ಲರ ಬೈಗುಳದಿಂದ ತಪ್ಪಿಸಿಕೊಳ್ಳೋಕೆ.
ಅಲ್ಲಿನ ಬಸ್ ಸಂಚಾರ, ರಸ್ತೆ ನಿಯಮ ಎಲ್ಲವೂ ಎಡಚರಿಗೆ ಅನುಕೂಲವಾದ್ದದ್ದು. ನನ್ನ ಅಲ್ಲಿದ್ದ ಮುಕ್ಕಾಲು ಪಾಲು ಸ್ನೇಹಿತರು ಎಡಚರು. ಅಲ್ಲಿನ ಕಾರು, ಸೈಕಲ್ ಲೇನ್, ಬೀಗ ಹಾಕುವ ರೀತಿ, ಮನೆಯಲ್ಲಿನ ಕತ್ತರಿ ಎಲ್ಲವೂ ಎಡಚರ ಪರವೆ ಎಂದು ತಿಳಿದು ಒಮ್ಮೆಲೆ ನನಗೆ ಇದಕ್ಕೆ ಅಡ್ಜೆಸ್ಟ್ ಹೇಗಾಗೋದು ಎಂದು ಯೋಚಿಸುತ್ತಿದ್ದಾಗ, ನನ್ನ ಮನೆಯಲ್ಲಿ ನನ್ನ ಒಡಹುಟ್ಟಿದ ತಂಗಿ ನಮ್ಮಂತಹ ಬಲಗೈ ಜನರ ಮಧ್ಯೆ ಎಷ್ಟು ಒದ್ದಾಡುತ್ತಿದ್ದಳು ಎಂಬ ಸತ್ಯ ಅರಿವಾಗಿ ಇವರೆಲ್ಲರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸಿದೆ.

"ನಾವು ಅಲ್ಪಸಂಖ್ಯಾತರಾದಾಗ ಮಾತ್ರ ಅವರ ನೋವು ನಮಗೆ ತಿಳಿಯೋದು, ಬಹುಸಂಖ್ಯಾತರ ಮಧ್ಯೆ ಇದ್ದರೆ ಅದರ ಆಳ ತಿಳಿಯುವುದಿಲ್ಲ" ಎಂಬ ಮಾತನ್ನ ಸುಮಾರು ಬಾರಿ ಕೇಳಿದ್ದೆ. ಎಷ್ಟೋ ಬಾರಿ ತಂಗಿಗೆ "ಹೀಗ್ ತಿರುಗಿಸೋ ಬದ್ಲು, ಹಾಗ್ ತಿರುಗಿಸು" ಎಂದು ಅತಿ ಸಾಮಾನ್ಯವಾಗಿ ತಿಳಿಸುತ್ತಿದ್ದೆ. ಅವತ್ತು ಎಡಚರ ಡೋರ್ ನಾಬ್ ಸರಿಯಾಗಿ ತಿರುಗಿಸದೆ ಹೀಗೂ ಹಾಗೂ ಬೇಕಾದಷ್ಟು ಬಾರಿ ತಿರುಗಿಸಿ ಮನೆ ಲಾಕ್ ಆಗಿ, ನಾಬ್ ಕೈಗೆ ಬಂದು, ಅವತ್ತು ಛಳಿಯಲ್ಲಿ ಗೆಳತಿ 4 ಘಂಟೆ ಬರೋವರೆಗೂ ಫುಟ್ ಪಾತ್ ನಲ್ಲಿ ಕೂತಿದ್ದು ಇನ್ನೂ ನೆನಪಿದೆ. ತನ್ನ ಅಭ್ಯಾಸವನ್ನ ಒಂದರೆಕ್ಷಣದಲ್ಲಿ ಬದಲಾಯಿಸೋದು ಬಹು ಕಷ್ಟ ಅನ್ನೋದು ಅನುಭವಕ್ಕೆ ಬಂದಾಗಲೇ ಅದರ ಕಥೆ ಗೊತ್ತಾಗೋದು.
ನನ್ನ ತಂಗಿಯನ್ನ ಶಾಲೆಗೆ ಸೇರಿಸಿದಾಗ ಬಹು ಸಾಮಾನ್ಯವಾಗಿ ಎಲ್ಲಾ ಶಿಕ್ಷಕರು ಅವಳಿಗೆ ಬಲಗೈಗೆ ಪೆನ್ಸಿಲ್ ಕೊಟ್ಟು ಬರೆಸೋದಕ್ಕೆ ಶುರು ಮಾಡಿದ್ದರು. ಅವಳಿಗೆ ಗ್ರಿಪ್ ಬರುತ್ತಿರಲ್ಲಿಲ್ಲ. ಬರೆಯೋದಕ್ಕೆ ಸೋಂಬೇರಿತನ ಎಂದು ಅಂದುಕೊಳ್ಳುತ್ತಿದ್ದರು. ತುಂಬಾ ದಿವಸಗಳ ನಂತರ ಎಡಗೈಗೆ ಪೆನ್ಸಿಲ್ ಕೊಟ್ಟಾಗ ಬರೆಯೋದು ಸುಲಭವಾಯ್ತು. ನಮ್ಮ ಮನೆಯ ಮೊದಲ ಎಡಗೈ ಸುಂದರಿ ನನ್ನ ತಂಗಿ.
ನಮ್ಮ ಮನೆಯಲ್ಲಿ ಎಡಚರ ಬಗ್ಗೆ ಹೊಸ ಹೊಸ ವಿಷಯಗಳು ತಿಳಿಯೋದಕ್ಕೆ ಶುರುವಾಯ್ತು. ಸಾಮಾನ್ಯ ಕೀ - ಲಾಕ್, ಕತ್ತರಿ, ಗಾಡಿ ಓಡಿಸೋದು, ಕಾರ್ ಓಡಿಸೋದು ಎಲ್ಲವೂ ಅವಳಿಗೆ ವಿಭಿನ್ನ. ಪೂರ್ತಿ ವಿಭಿನ್ನ. ಅಮ್ಮ ಆಗಾಗ ಶಾಲೆಗೆ ಬಂದು ಅವಳನ್ನ ಬೆಂಚಿನ ಎಡಕ್ಕೆ ಕೂರಿಸಿ ಅಂತ ಸುಮಾರು ಬಾರಿ ಹೇಳುತ್ತಿದ್ದರು. ಕೆಲವೊಮ್ಮೆ ನಮ್ಮ ಸಂಸ್ಕೃತಿಯಲ್ಲಿ ಎಡಗೈ ಬಳಸೋದು ಸಮಂಜಸವಲ್ಲ ಎಂಬ ವಿಷಯಕ್ಕೆ ಮೊದಲ ರೆಬಲ್ ಅವಳು. ಎಡಗೈಯಲ್ಲಿ ಹೊಡೆಸಿಕೊಂಡಿದ್ದರೆ ಮತ್ತೆ ನೀವು ಆ ಮಾತನ್ನ ಅವರ ಮುಂದೆ ಆಡುವುದೇ ಇಲ್ಲ.
ಈ ಎಡಚರು ಜಗತ್ತಿನ ಜನರಲ್ಲಿ ಹತ್ತು ಪ್ರತಿಶತ ಮಾತ್ರ ಇರೋದು. ಅವರನ್ನ ಅತಿ ಬುದ್ಧಿವಂತರೆಂದೇ ಕರೆಯುತ್ತಾರೆ. ಮನೋವೈದ್ಯೆ ಕ್ಲಾರೆ ಪೋರಾಕ್ ಎಡಚರ ಬಗ್ಗೆ ಸುಮಾರು ಅಧ್ಯಯನ ಮಾಡಿದ್ದಾರೆ. ನಮ್ಮ ಮೆದುಳು, ಅದರ ಎಡ, ಬಲ ಭಾಗ ಇವೆಲ್ಲವೂ ಹೇಗೆ ಕೆಲಸ ಮಾಡುತ್ತದೆ ಎಂಬುದರ ಅನುಗುಣವಾಗಿ ನಾವು ಯಾವ ಕೈಯಲ್ಲಿ ಬರೆಯುತ್ತೇವೆ ಎಂಬುದು ನಿರ್ಧಾರವಾಗುತ್ತದೆ. 90 ಪ್ರತಿಶತ ಜನರು ಬಲಗೈಯವರು. ಮಾತು ಮತ್ತು ಭಾಷೆ ಮೆದುಳಿನ ಎಡ ಭಾಗದ ಪ್ರಾಸೆಸ್. ಹಾಗೂ ದೇಹದ ಬಲ ಭಾಗವನ್ನ ಎಡ ಮೆದುಳು ಕಂಟ್ರೋಲ್ ಮಾಡುವುದರಿಂದ ಮತ್ತು ಬರೆಯುವುದು ಭಾಷೆಯ ಒಂದು ಅಂಗವಾದುದ್ದರಿಂದ ತುಂಬಾ ಜನರು ಬಲಗೈಯನ್ನ ಬರೆಯೋಕೆ ಉಪಯೋಗಿಸಿದ್ದರ ಪುರಾವೆ ಸಹಿತ ತಿಳಿಸಿದ್ದಾರೆ.
ಮತ್ತೊಂದು, ನಮ್ಮಲ್ಲಿ ಇರುವ ಡಿ ಜೀನ್ ಮತ್ತು ಸಿ ಜೀನ್ ಎಂಬುದರಿಂದ ಆಗೋದು. ಈ ಡಿ ಜೀನ್ ಇರೋರು ಬಲಗೈಯವರಾಗುತ್ತಾರೆ. ಅಕಸ್ಮಾತ್ ಒಬ್ಬೊಬ್ಬರಿಗೆ ಸಿ ಜೀನ್ ಇದ್ದರೆ ಅವರು ಎಡಚರಾಗುತ್ತಾರೆ. ಕೋಟಿಗೊಬ್ಬ ಥರ. ಆದರೆ ಸುಮಾರು ಜನರು ಬಲಗೈಯವರಾಗೋದು ಕೆಲವೊಮ್ಮೆ ನಮ್ಮ ಸುತ್ತಮುತ್ತಲಿನ ಜನರಲ್ಲಿ ಬಿತ್ತಿರುವ ಎಡಗೈ ಕೆಟ್ಟದ್ದು ಎಂಬ ನಂಬಿಕೆಯಿಂದ.
ಮುಂಚಿನ ಕಾಲದಲ್ಲಿ ಜನಕ್ಕೆ ಕೆಲವುದರ ಬಗ್ಗೆ ತಿಳಿವಳಿಕೆ ಇರಲ್ಲಿಲ್ಲ. ಅವರು ನಂಬಿದ್ದ ಸತ್ಯ ಬೇರೆಯವರು ಮಾಡಬೇಕೆಂದು ಬಯಸಿದ್ದರು. ಅದರಲ್ಲಿ ಭೂಮಿ ಗುಂಡಗಿಲ್ಲ, ಭೂಮಿ ಸುತ್ತ ಸೂರ್ಯ ಸುತ್ತುತ್ತದೆ ಎಂಬ ಅತಾರ್ಕಿಕ ನಂಬಿಕೆಗಳೊಂದಿಗೆ ಈ ಥರ ಎಡಗೈ ಸಹ ಕೆಟ್ಟದ್ದು ಎಂದು ನಂಬಿದ್ದರು. ಇವೆಲ್ಲಾ ದಾಟಿ ನಾವು ಬರಬೇಕಿದೆ. ನಿಮ್ಮ ಮೊದಲ ಮಗು ಬಲಗೈಯಲ್ಲಿ ಬರೆಯತ್ತೆ ಅನ್ನೋದು ಎಷ್ಟು ಸಹಜವೋ, ಅಷ್ಟೆ ಸಹಜ ಮತ್ತೊಂದು ಮಗು ಎಡಗೈಯಲ್ಲಿ ಬರೆಯುತ್ತೆ ಅನ್ನೋದು. ನಿಮ್ಮ ಅತಾರ್ಕಿಕ ಮೂಢನಂಬಿಕೆಗಳಿಗೆ ಮಕ್ಕಳ ನ್ಯಾಚುರಲ್ ಎಬಿಲಿಟಿಯನ್ನ ಬಲಿಕೊಡಬೇಡಿ. ಇಷ್ಟಕ್ಕೂ ಆಗಸ್ಟ್ 13 ಎಡಚರ ದಿವಸ, ಆಗಸ್ಟ್ 15 ಸ್ವಾತಂತ್ರ್ಯ ದಿವಸ. ಎಡಚರ ಸ್ವಾತಂತ್ರ್ಯಕ್ಕೆ ಜೈ!
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications