ಚಂದ್ರ ಗ್ರಹಣದ ಪೋಸ್ಟ್ ಮಾರ್ಟಮ್

ಇನ್ನು ಮನೆಯಲ್ಲಿ ಅಮ್ಮ-ಅಕ್ಕಂದಿರು ಇದ್ದ-ಬದ್ದ ಪಾತ್ರೆಗಳನ್ನೆಲ್ಲಾ ಹರಡಿಕೊಂಡು ಕುಡಿಯುವ ನೀರಿನ ಸಂಗ್ರಹಣೆಯ ತಾಮ್ರ/ಹಿತ್ತಾಳೆಯ ದೊಡ್ದ ದೊಡ್ದ ಕೊಪ್ಪರಗಳನ್ನು ಹುಣಿಸೆಹಣ್ಣಿನಿಂದ facial ಮಾಡ್ತಾ ಮಾತಾಡಿಕೊಂಡು ಕುಳಿತುಬಿಡುತ್ತಿದ್ದರು. ಇನ್ನು ದೇವರ ಮನೆಯ ಕೆಲಸ ಆ ದೇವರಿಗೆ ಪ್ರೀತಿ. ಪಾಪ ಚಳಿ-ಬಿಸಿಲೆನ್ನದೆ ತಾನು ಸಹ ಎಲ್ಲದಕ್ಕೂ ಸಹಕರಿಸಿಕೊಂಡು ಹೋಗುತ್ತಿದ್ದ-ಇಲ್ಲದಿದ್ದರೆ ಬಿಡುವುದಿಲ್ಲವೆಂದು ಗೊತ್ತು ಅನಿಸುತ್ತೆ. ಆಮೇಲೆ ಪೂಜೆ /ಅಡುಗೆ ತಯಾರಿ ನಡೆಯುತ್ತಿದ್ದರೆ ನಮ್ಮನ್ನಂತು ಯಾರೂ ಕೇಳುವವರಿಲ್ಲದೆ ಚೆನ್ನಾಗಿ ಆಟಕ್ಕಿಳಿದು ಸಮಯ ಕಳೆಯುತ್ತಿದ್ದೆವು.
ಇದೆಲ್ಲಾ ಅಲ್ಲಿ. ಆದ್ರೆ ಅಂತಹದೇ ಒಂದು ಗ್ರಹಣ ಹೇಳ್ದೆ-ಕೇಳ್ದೆ ಸಿಂಗಪುರಕ್ಕೂ ಬಂದ್ಬಿಡ್ತು. ಮೊನ್ನೆ ಹೀಗೆ ಆಯಿತು. ಇದ್ದಕ್ಕಿದ್ದಂತೆ ದೂರವಾಣಿ ಮೂಲಕ ಶನಿವಾರ ಗ್ರಹಣವಂತೆ ಎಂಬ ಒಂದು (ದೊಡ್ಡ) ಶರೀರವಾಣಿ - ನನ್ನ ಅತ್ತೆಯವರದು. ಬೆಂಗಳೂರಿನ ಆ-ಶರೀರ-ವಾಣಿ ನನ್ನವಳ ಕಿವಿಯೊಳಗೆ ಮೊಳಗಿ, ಮೆದುಳಿಗೆ ತೂರಿ, ಇಡೀ ನರಮಂಡಲದಲ್ಲಿ ಸಂಚಲಿಸಿ ಅವಳ ಕಣ್ಣುಗಳ ಮೂಲಕ ಹಾದು ಹೊರಬಂದು, ಎಂದಿನಂತೆ ಬಡಪಾಯಿ ನನ್ನ ಮೇಲೆ ತನ್ನ ತರಂಗಗಳನ್ನೆಬ್ಬಿಸಿ ನನ್ನ ಸ್ಥಿರತೆಯನ್ನು ಸ್ವಲ್ಪ ಅಲ್ಲಾಡಿಸಿಬಿಟ್ಟಿತು. ನಾನು ಅಷ್ಟೊಂದು ತಲೆಕೆಡಿಸಿಕೊಳ್ಳದಿದ್ದರೂ ಬಲವಂತವಾಗಿ ನನ್ನ ತಲೆಯಲ್ಲಿ ತೂರಲ್ಪಟ್ಟು, ಇಡೀ ಮನೆಯೇ ಪೂರ್ವಗ್ರಹ ಪೀಡಿತವೆಂಬಂತೆ ಗ್ರಹಣಕ್ಕೆ ತಯಾರಿ ನಡೆಸಿತ್ತು.
ಹೊರಗಡೆ ಇದ್ದಕಾರಣ ಬೇಗ ಮನೆಗೆ ಹೋಗಬೇಕು, ಸಂಜೆ 7ರ ಒಳಗೆ ಅಡುಗೆ ಮಾಡಿ ತಿನ್ನಬೇಕು ಎಂಬ ಎಚ್ಚರಿಕೆಯ ಗಂಟೆ ಆಗಾಗ ನನ್ನವಳಿಗೆ ಬಡಿದು ಅವಳ್ಮೂಲಕ ನನಗೂ ಬಡಿಯತೊಡಗಿತ್ತು. ಇಷ್ಟರ ಮದ್ಯೆ ಶರೀರವಾಣಿ ಆಗಾಗ ಮೊಳಗಿ ನಮ್ಮ ಆಗು-ಹೋಗುಗಳ ಬಗೆಗಿನ ನಿಖರ ಮಾಹಿತಿ ಸಂಗ್ರಹಣೆ ನಡೆಸಿತ್ತು. “ಚಂದ್ರ ಸಿಂಗಾಪುರಕ್ಕೆ ಆಗ್ಲೆ ಬಂದ್ನಾ?” ಎಂದು ಕೇಳಿದಂತಿತ್ತು. ನಾನು “ಇಲ್ಲ ಇನ್ನು ರಾಹು/ಕೇತುನೊ ನುಂಗುವುದಕ್ಕೆ ಬಂದಿಲ್ಲ” ಅಂತಂದೆ. ಯಾವುದಕ್ಕೂ ಫೋನ್ ಮಾಡಿ ಕೇಳ್ಲಾ? ಅಂದೆ. ಯಾರಿಗೆ ಅಂದಳು, ನೇರವಾಗಿ ಚಂದ್ರನ್ನೇ ಕೇಳಿಬಿಡೋಣವೆಂದೆ. ಗುರ್ರನೆ ನೋಡಿದಳು, ಯಾಕೋ ಸ್ವಲ್ಪ ಅವಳು ರಾಹು ತರ ನುಂಗುವಂತೆ ಕಂಡಿದ್ದರಿಂದ ನಾನು ಭಯದಿಂದ ಚಂದಿರನಂತಾದೆ.
ಆದರೂ ಅವರ ದೂರವಾಣಿ ಸಂಭಾಷಣೆ ಕೇಳಿದರೆ ಚಂದ್ರನನ್ನು GPSನಿಂದ track ಮಾಡ್ತಾಯಿರೊ ತರಹ ಅನಿಸ್ತು. ಆಗಸದ ಕಡೆ ನೋಡಿದೆ, ಚಂದ್ರ ಇನ್ನು ಬಂದಿರಲಿಲ್ಲ. ದೂರವಾಣಿಯಲ್ಲಿ ಗ್ರಹಣದ ಗುರಿ, ಗತಿ, ದೋಷ ನಿವಾರಣೆ ವಿಷಯಗಳು ನಿರರ್ಗಳವಾಗಿ ಸಾಗುತ್ತಿದ್ದವು. ನನಗೇನೊ ಖುಷಿಯೋ ಖುಷಿ ಇವತ್ತು ಚೈನೀಸ್ ಡಿನ್ನರ್ (6 ಗಂಟೆಗೆ) ಎಂದು. ಮನೆಗೆ ಬಂದ ತಕ್ಷಣ ಅವಳು ನೇರ ಅಡುಗೆ ಮನೆಗೆ ದಾಳಿ ನಡೆಸಿದರೆ ನಾನು ದರ್ಭೆಯನ್ನು ಎಲ್ಲ ಕಡೆ ನೆಡುವ ಕಾರ್ಯಕ್ಕೆ ಮುನ್ನುಗ್ಗಿದೆ. ಇಷ್ಟೆಲ್ಲಾ ಮಾಡುವುದಕ್ಕಿಂತ ಮನೆಯ ತೋರಣಕ್ಕೊಂದು ಮತ್ತು ನಮ್ಮಿಬ್ಬರ ಶಿರಗಳಿಗೊಂದು ದರ್ಭೆ ಸಿಗಿಸಿಕೊಂಡರೆ ಸಾಕಲ್ಲವೆಂಬ ಅಧಿಕ ಪ್ರಸಂಗದ ಪ್ರಶ್ನೆಗೆ ನನ್ನವಳ ಮುಖಾರವಿಂದದಲ್ಲಿ ಮತ್ತೊಮ್ಮೆ ರಾಹುವಿನ ದರ್ಶನಮಾಡಿಕೊಂಡೆ. [ಮುಂದೆ ಓದಿ : ಭಾಗ 2]
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications