ಚಂದ್ರ ಗ್ರಹಣದ ಪೋಸ್ಟ್ ಮಾರ್ಟಮ್ (ಭಾಗ 2)

ಚೈನೀಸ್ ಡಿನ್ನರ್ ನ ಪ್ರಭಾವ ಅಂತ ಕಾಣುತ್ತೆ ನಮ್ಮಯ ಸಂಜೆ ದೀರ್ಘವಾಗತೊಡಗಿತು. TV ನೋಡಾಯಿತು, ಅಲ್ಲಲ್ಲಿ ಫೋನ್ಗಳ ಸುದ್ದಿಯಾಯಿತು, ಚಂದ್ರನ್ನ ನೋಡಿದೆ - ಪೂರ್ಣವಾಗೆ ಇದ್ದ ಆಮೇಲೆ ಪಾಪ ರಾಹುಗೆ ಹಸಿವಾಯಿತು ಅಂತ ಕಾಣುತ್ತೆ ಸ್ವಲ್ಪ ಸ್ವಲ್ಪ ಮಗು ಆಪಲ್ ತಿನ್ನೋ ತರ ತಿಂದು ಮತ್ತೆ ಪೂರ್ಣವಾಗಿ ಉಗುಳಿದ. ನನ್ನವಳು ಹೆದರಿಕೆಯಿಂದಲೇ ನೋಡುತ್ತಿದ್ದಳು. ಹಾಗೆ ರಾತ್ರಿ ಜಾರಿದಂತೆಲ್ಲಾ ಎನೋ ಕಳೆದುಕೊಂಡಂತಹ, ವ್ಯಕ್ತಪಡಿಸಿಲಾರದಂತಹ ಅನುಭವ. ಏನು ಅಂತ ಅರ್ಥವಾಗದೆ ಹೋಯಿತು ಸ್ವಲ್ಪ ಮನೆಯಲ್ಲಾ ಓಡಾಡಿದೆ - ಸಮಾಧಾನವಾಗಲಿಲ್ಲ; ಅಡುಗೆ ಮನೆಗೆ ಕಾಲಿಟ್ಟ ಮೇಲೆ ತಿಳಿಯಿತು ಹಸಿವಿನ ಪ್ರಭಾವವೆಂದು. ಇವಳು ದೂರದಿಂದಲೇ ನನ್ನನ್ನು ಗಮನಿಸುತ್ತಿದ್ದಳು - ಎಲ್ಲಿ ಅವಳಿಗೆ ತಿಳಿಯದಂತೆ ಏನಾದರು ಬಾಯಿಗೆ ಗಬಕ್ಕನೆ ಹಾಕಿಕೊಂಡು ಬಿಟ್ಟಾನೆಂಬ ಭಯ.
ಇನ್ನೂ ಸಮಯ ವ್ಯರ್ಥ ಮಾಡಿದರೆ ಪ್ರಕೃತಿ ರೊಚ್ಚಿಗೆದ್ದು ಬಿಟ್ಟಿತೆಂಬ ಭಯದಲ್ಲಿ ಮಲಗಲು ಹೋದೆ, ಹಾಗೆ-ಹೀಗೆ ಒದ್ದಾಡಿ ಬರಲಾರದ ನಿದ್ದೆಯನ್ನು ಬರಸಿಕೊಂಡು ಮಲಗಿದ್ದಾಯಿತು. ಬೆಳಿಗ್ಗೆ ಎದ್ದಾಗ ಹೊಟ್ಟೆ ಚುರುಗುಟ್ಟುತಿತ್ತು . ಕಾಫಿ ಕೊಡು ಅಂದೆ ಅವಳು ಒಮ್ಮೆಲೆ ಗುರ್ರೆಂದು ಮೊದಲು ಮನೆ ಸಾರಿಸಿ, ದೇವರ ಪೂಜೆ ಆಮೇಲೆ ಏನಾದರು ಹೊಟ್ಟೆಗೆಂದು ತಾಕೀತು ಮಾಡಿದಳು. ನನ್ನ ಜಂಘಾಬಲವೇ ಉಡುಗಿಹೋದಂತಾಯಿತು. ಅದ್ಹೇಗೆ ಪೆಟ್ರೋಲ್ ಇಲ್ದೆ ಗಾಡಿ ಓಡುತ್ತೆ? ಹಾಲಿಗೆ ನೀರಿಗೆ ದೋಷವಿಲ್ಲವೆಂದು ಏನೇನೋ ಸಮಜಾಯಿಸಿ ಕೊಟ್ಟೆ - ಕಾಫಿಯ ಫಲಮಾತ್ರ ನೀಡಲಿಲ್ಲ. ಇನ್ನೂ ಅವಸರದಲ್ಲಿ ಮನೆ ಸಾರಿಸಿ-ಗುಡಿಸಿ, ಕತ್ತಲು ಕೋಣೆಯಲ್ಲಿ ಕೂಡಿಹಾಕಿದ್ದ ದೇವರುಗಳನ್ನೆಲ್ಲಾ ಬೇಗಬೇಗನೆ ನೀರಿನಲ್ಲಿ ಅದ್ದಿ ತೆಗೆದು ಪೂಜೆಯ ಶಾಸ್ತ್ರಮುಗಿಸಿ ಬರುವುದರೊಳಗಾಗಿ ಊಟ ರೆಡಿಯಾಗಿತ್ತು. ಊಟ ಮಾಡಿ ಕುಳಿತೆವು. ಹೋದ ಜೀವ ಬಂದಂತಾಗಿ, ರೇಗಾಡಿಕೊಂಡು ಓಡಾಡುತ್ತಿದ್ದವರು ಕುಳಿತು ಮಾತಾಡುವಂತಾದೆವು. ಮೊಗದಲ್ಲಿ ಕೊಳೆ ಹೋಗಿ ಕಳೆಯು ಮರುಕಳಿಸಿತ್ತು.
ಏನೇ ಆದ್ರೂ ಚೈನೀಸ್ ಡಿನ್ನರ್ಗಿಂತ ನಮ್ಮ ಏಕಾದಶಿ ಉಪವಾಸ ಬಹುಮೇಲು ಎನಿಸಿತು. ಅಷ್ಟರಲ್ಲಿ ಶರೀರವಾಣಿ ಮತ್ತೆ ಮೊಳಗಿತು, ಗ್ರಹಣದ ಪೋಸ್ಟ್ ಮಾರ್ಟಮ್ ನಡೆಯುತಿತ್ತು! ಇನ್ನೊಂದು ವಿಷಯ ನಿಮಗೆ ಹೇಳ್ಲೇ ಬೇಕು. ನಿನ್ನೆ ಇವಳು ತನ್ನ ಗರ್ಭಿಣಿ ಸ್ನೇಹಿತೆಗೆ ಗ್ರಹಣದ ಸಮಯದಲ್ಲಿ ಹೇಗಿರಬೇಕೆಂದು ಒಂದು ದೊಡ್ಡ ಪ್ರವಚನ ಕೊಟ್ಟು ಇಲ್ಲ ಸಲ್ಲದ ಬೆದರಿಕೆ(ಅನುಭವದ ಸಲಹೆ)ಗಳನ್ನು ಹೇಳಿದ್ದಳು. ಅವರು ಅಂದು ರಾತ್ರಿ ನಮ್ಮ ಮನೆಗೆ ಬಂದಿದ್ದರು, ಅವರನ್ನು ನೋಡಿದರೆ ಭಯದಿಂದ ಗಾಬರಿಯಾದಂತೆ ಕಾಣುತಿತ್ತು. ಉಭಯ ಕುಶುಲೋಪರಿಯ ನಂತರ ಆವರು ಗ್ರಹಣದ ಸಮಯದಲ್ಲಿ ಮರೆತು ಆಪಲ್ ಕಟ್ಟುಮಾಡಿಬಿಟ್ಟೆ ಏನು ಆಗೊಲ್ಲ ತಾನೆ? ಅಂತ ಯಾರನ್ನೋ ಕೊಲೆ ಮಾಡಿಬಂದಷ್ಟು ಅಂಜಿಕೆಯಲ್ಲಿ ಕೇಳುತ್ತಿದ್ದರು.
ಇವಳಿಗೂ ಏನು ತೋಚಲಿಲ್ಲ ನನ್ನ ಮುಖನೋಡಿದಳು ನಾನೇನು ಭಾರಿ ವಿಷಯಗಳನ್ನು ತಿಳಿದುಕೊಂಡವನಂತೆ ಕಂಡೆನೊ ಏನೋ ಆ ಚಂದ್ರನೆ ಬಲ್ಲ. ನಾನು ಒಳ್ಳೇ ಅಣ್ಣಾ ಹಜಾರೆ ಸ್ಟೈಲ್ನಲ್ಲಿ "ಆಪಲ್ ಕಟ್ಟು ಮಾಡಿದ್ರಾ? ಒಂದೇ ಆಪಲ್ ಕಟ್ಟು ಮಾಡಿದ್ರಾ?" ಅಂತ ಕೇಳಿ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಅದಾದ ಮೇಲೆ "ಏನು ಆಗೊಲ್ಲ-ಧೈರ್ಯವಾಗಿರೆಂಬ"ವೆಂಬ ಸರ್ವಕಷ್ಟನಿವಾರಣೆಯ ಮಂತ್ರವನ್ನು ಬೋಧಿಸಿ ಆಲ್ಲಿಂದ ಜಾಗ ಖಾಲಿಮಾಡಿದೆ. ಅವರೆಲ್ಲಾ ಹೋದ ಮೇಲೆ ಮತ್ಯಾವಾಗ ಚೈನೀಸ್ ಡಿನ್ನರ್ ಅಂತ ಕೇಳಿ ಅದರ ಬಗೆಗಿನ ಮಹತ್ವದ ಬಗ್ಗೆ ಹೇಳುವಷ್ಟರಲ್ಲಿ ನನ್ನ ನೋಡಿ ವಿಚಿತ್ರವಾಗಿ ನಕ್ಕಳು - ಬಹುಶಃ ಉತ್ತರಭೂಪನ ದರ್ಶನವಾಗಿರಬೇಕು ಅವಳಿಗೆ!
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications