ಬಿಡುಗಡೆ : ಭಾಗ 3
ಸುಖ-ದುಃಖಗಳ, ಲಾಭ-ಅಲಾಭಗಳ ಸಮೀಕರಣ
ಸುಖ-ದುಃಖಗಳ, ಲಾಭ-ಅಲಾಭಗಳ ಸಮೀಕರಣಕ್ಕೆ ಹಿಂತಿರುಗುವಾ. ‘ಭರತೇಶ ವೈಭವ’(ಕ್ರಿ.ಶ.1557) ದ ರತ್ನಾಕರವರ್ಣಿ ಹೇಳುವಂತೆ:
‘ಸುಖಕೆ
ಉಬ್ಬಿ,
ದುಃಖಕೆ
ಮರುಗಿದರೆ,
ಒಡನೆ
ಮುಂದೆ
ಅಖಿಳ
ಕರ್ಮಗಳು
ಕಟ್ಟುವುವು;
ಸುಖ,
ದುಃಖಕೆ
ಅತ್ತಿತ್ತಲಾಗದೆ
ಧ್ಯಾನಾಭಿಮುಖದೊಳು
ಇದ್ದರೆ
ಬಂಧವಿಲ್ಲ
!’-
ಎಂಬ,
ಆತ್ಮನಿಗೆ
ಕರ್ಮವನ್ನು
ಸುಡುವ
ಸಾಮರ್ಥ್ಯ
ಉಂಟೇ
ಎಂದು
ಚಿಂತಿಸಬಹುದು.
ಇಲ್ಲವೇ
ಇನ್ನೂ
ಒಂದು
ಹೆಜ್ಜೆ
ಮುಂದೆ
ಹೋಗಿ(ದ್ದರೆ),
ಅವಧೂತರಂತೆ
ಪರಿಪಕ್ವ
ಮನಸ್ಸಿನಿಂದ,
ನಾವು
ಹೇಳಬಹುದು:
ಈ
ದೇಹ,
ನಾಕ-
ನರಕಗಳೆಲ್ಲ
ಸೆರೆ-ತೆರವು
ಮಾತೇ
ಸಲ್ಲ;
ಕಲ್ಪನೆಯೆ
ಬೇರೇನಿಲ್ಲ,
ನಾ
ಚಿದಾತ್ಮನಿರೆ
ಇವೇನು
ಬೇಕೇ
ಇಲ್ಲ
!
(ಶರೀರಂ
ಸ್ವರ್ಗ-ನರಕೌ,
ಬನ್ಧ-
ಮೋಕ್ಷಾಭ್ಯಾಂ
ತಥಾ।
ಕಲ್ಪನಾಮಾತ್ರಂ
ಏವೈ
ತತ್;
ಕಿಂ
ಮೇ
ಕಾರ್ಯಂ
ಚಿದಾತ್ಮನ:।।
-ಅಷ್ಟವಕ್ರಗೀತಾ
2)
ಇವೆಲ್ಲಕ್ಕಿಂತ ನೂರಾ ಎಂಬತ್ತು ಡಿಗ್ರಿ ವಿಮುಖರಾಗಿರುವವರು, ನಮ್ಮ ಚಾರ್ವಾಕರ ಮಾತನ್ನು ಅನುಮೋದಿಸುವವರು, ಪಾರಲೌಕಿಕತೆಯನ್ನು ಅಲ್ಲಗಳೆದು ನಿರಾಕರಿಸುವವರು ಹೀಗೆ ದನಿಗೂಡಿಸಬಹುದು:
ಬಾಳು
!
ಕಳೆದುದು
ಸಿಗದು
!
ಸಂತೋಷದಲಿ
ಓಲಾಡು
!
ಸುಖವ
ಅನುಭವಿಸುತ್ತ
ಕೊನೆಯುಸಿರ
ಹಾಡು
!
ಸಾಲವಾದರೂ
ಮಾಡು,
ತುಪ್ಪ
ತಿಂದುಂಡು
ನಲಿದಾಡು
!
ಮತ್ತೆ
ಬಂದೀತೆಲ್ಲಿಂದ
ಸುಟ್ಟ
ಮೇಲೀ
ಗೂಡು
!!
(ಯಾವತ್
ಜೀವೇತ್
ಸುಖಂ
ಜೀವೇತ್,
ಋಣಂ
ಕೃತ್ವಾ
ಘೃತಂ
ಪಿಬ।
ಭಸ್ಮೀಭೂತಸ್ಯ
ದೇಹಸ್ಯ
ಪುನರ್
ಆಗಮನಂ
ಕುತ:?
।।-
ಶ್ರೀ
ಮಾಧವಾಚಾರ್ಯ,
ಚಾರ್ವಕ
ದರ್ಶನ,
ಸರ್ವದರ್ಶನ
ಸಂಗ್ರಹ.)
ಮಾತಿನ ಸಂಕೇತವನ್ನು ಅವರೂ ಒಪ್ಪುತ್ತಾರೆ, ‘ಯಮನೆಲ್ಲೋ ಕಾಣನೆಂದು ಹೇಳಬೇಡ’ ಎಂದು ದಾಸರು ಹೇಳಿದಾಗ, ಸರಿ- ತಪ್ಪುಗಳನ್ನು ಸದಾ ವೀಕ್ಷಿಸುತ್ತಿರುವ ಆ ವೈವಸ್ವತ ಧರ್ಮರಾಜ ಬೇರೆಲ್ಲೋ ಇಲ್ಲ, ಇಲ್ಲೇ ನಮ್ಮ ಶರೀರದಲ್ಲೇ ಹೃದಯದಲ್ಲಿ ಕುಳಿತು ‘ಪಾಪಂ ಪುಣ್ಯಂ ಚ ಸರ್ವಶ: ತತ್ರ ಪಶ್ಯನ್ತಿ’ - ಎನ್ನುತ್ತದೆ ಗರುಡಪುರಾಣ. ನಮ್ಮ ಬಾಳೇ ಒಂದು ಬಗೆಯ ತೀರ್ಥಯಾತ್ರೆ; ಬೇರೊಂದು ಗಂಗೆಯನ್ನ, ಕುರುಕ್ಷೇತ್ರವನ್ನ ಅರಸಿ ಹೋಗಬೇಕಿಲ್ಲ. ಎದೆಯಲ್ಲಿ ಕುಳಿತವನೊಂದಿಗೆ ಚೌಕಾಶಿ ಮಾಡಬೇಕಿಲ್ಲದಿದ್ದಾಗ, ಪಾಪವನ್ನೇ ಮಾಡದಿದ್ದರೆ, ಅದನ್ನು ತೊಳೆಯಲು ಹೋಗಬೇಕೆಲ್ಲಿಗೆ? ಯಾಕೆ? (ಯಮೋ ವೈವಸ್ವತೋ ರಾಜಾ ಯಸ್ ತವ ಏಷ ಹೃದಿ ಸ್ಥಿತ: । ತೇನ ಚೇತ್ ಅವಿವಾದಸ ತೇ, ಮಾ ಗಂಗಾಂ ಮಾ ಕುರೂನ್ ಗಮ: ।। - ಮನುಸ್ಮೃತಿ)
ಸಾವಿತ್ರೀ-
ಸತ್ಯವಾನನ
ಕತೆಯಲ್ಲಿ
(ಮಹಾಭಾರತ,
ವನಪರ್ವ,
ಅಧ್ಯಾಯ
297)
ಯಮನ
ಸೋಲಿಗೆ
ಕಾರಣವಾದರೂ
ಏನಿದ್ದಿರಬಹುದು,
ಪೌರಾಣಿಕನ
ಉದ್ದೇಶದಲ್ಲಿ?
ಮಾತಿನಲ್ಲಿ
ಸಿಕ್ಕುಬಿದ್ದು
ಸಮವರ್ತಿ
ಸೋತನೇ?
ಕೃತಾಂತ
ಈ
ಸಾಧ್ವಿಯ
ಸಚ್ಚಾರಿತ್ರ್ಯಕ್ಕೆ
ಮಣಿದನೇ?
ಕಾಲ
ಇನ್ನೂ
ಮುಗಿದಿರಲಿಲ್ಲವೆಂದು
ಹಿಂತಿರುಗಿದನೇ?
ಕಿಂಚಿತ್ತೂ
ದಯೆಯಿಲ್ಲದ
ಅಂತಕನ
ದೂತರಿಂದ
ಮಾರ್ಕಂಡೇಯನನ್ನು
ಬಿಡುಗಡೆಮಾಡಿಸಿ
ಉಳಿಸಿದ
ಶಕ್ತಿಯಾದರೂ
ಅದಾವುದು?
ಕೊನೆಯುಸಿರೆಳೆಯುವ
ಆ
ಕಾಲ
ಸಂಪ್ರಾಪ್ತಿಯಾದಾಗ
ಯಾವ
ಶಾಸ್ತ್ರಜ್ಞಾನ
(ಪಾಣಿನಿಯ
ವ್ಯಾಕರಣ
ಸೂತ್ರ
‘ಡುಕೃಂ
ಕರಣೇ’)
ರಕ್ಷಿಸೀತು?
ಕೇಳೋಣವೆಂದರೆ,
ಅತ್ತ
ಹೋದವರಾರೂ
ಹಿಂತಿರುಗಿ
ಬಂದಿಲ್ಲ;
ಆ
ಕತ್ತಲ
ಆಚೆಗೆ
ಏನಿದೆಯೋ
ಯಾರಿಗೂ
ಗೊತ್ತಿಲ್ಲ
!
ವಿಷ್ಣು ಸ್ಮೃತಿಯಲ್ಲಿ (ಅಧ್ಯಾಯ 20. 39-48) ಈ ವಿಚಾರವಾಗಿ ‘ಕೊನೆಯ ಅಂಕದ ಪರದೆ ಇಳಿವ ಮುನ್ನಿನ ಮಾತು’ಗಳು ಸ್ವಾರಸ್ಯಕರವಾಗಿ ಬರುತ್ತವೆ. ಇದನ್ನು ನಿಮ್ಮ ಮುಂದಿಟ್ಟು, ನಿಮ್ಮಿಂದ ಸಧ್ಯಕ್ಕೆ ಬಿಡುಗಡೆ ಕೇಳಿಕೊಳ್ಳುತ್ತೇನೆ:
ಕರೆದಲ್ಲಿಗಲ್ಲಿಗೆ
ನಮ್ಮನನುಸರಿಸಿ
ಬಂದಾರು
ಬಂಧುಗಳು
ಬಾಂಧವರು
ಕೈ
ಹಿಡಿದ
ಸಂಗಾತಿ;
ಗೊತ್ತೆ
ಗಡಿ?
ನಡೆಗೆ
ತಡೆ?
ಕೊನೆಯ
ಕಾಣಿಸುವಾತ
ಕರೆದು
ಕೊಂಡೊಯ್ಯುವ
ಹಾದಿ
ಕಟ್ಟೆವರೆಗೆ
!
ನಾವು
ಗಳಿಸಿದ
ಪುಣ್ಯ-
ಪಾಪಗಳೆ
ನಮ್ಮೊಡನೆಲ್ಲೂ
ಬೆಂಬಿಡದೆ
ಜೊತೆ
ಬರುವ
ನಮ್ಮದೇ
ನೆರಳು;
ಅದ
ತಿಳಿದು
ಸರಿ-
ದಾರಿ
ಹಿಡಿದು
ನಡೆಯಲು
ಬಾಳು
ನಾವು
ರೂಪಿಸಿಕೊಂಡಂತೇನೇ
ಹಗಲು-
ಇರುಳು
!
ನಾಳೆ
ಮಾಡುವುದೇನು
ಇಂದೇ
ಮಾಡಲು
ತೊಡಗಿ,
ಸಂಜೆಗೇತಕೆ
ಕಾಯುವುದು?
ಮುಂಜಾನೆಯೇ
ಮುಗಿಸಿ;
ಮೃತ್ಯು
ಕಾಯುವನಲ್ಲ,
ಮುಗಿದಿರಲಿ
ಮುಗಿಯದೆ
ಇರಲಿ-
ಕನಸ
ಸಂಕಲ್ಪದ
ಕೆಲಸ
ಹೋಗುವುದೇ
ಉಳಿಸಿ?
ಮನವಂತು
ಹರಿದಾಡುತಿದೆ
ಮನೆ
ಮಠವೊ
ಎಲ್ಲೊ
ಗಳಿಸಿ
ಉಳಿಸುವ
ಅದನು
ಕಾಯ್ದಿಡುವ
ಪರಿಯ;
ಎತ್ತಲೆತ್ತಲೊ
ಗಮನ,
ಇದ್ದಕಿದ್ದಂತೆರಗಿ
ಮೃತ್ಯು
ಕೊಂಡೊಯ್ದೀತು
ತೋಳದೊಲು
ಕುರಿಯ
!
ಮೇಲು-
ಕೀಳುಗಳಿಲ್ಲ,
ಹಗೆಯಿಲ್ಲ,
ಕೆಳೆಯಿಲ್ಲ,
ಬಲ್ಲ
ಕಾಲನಿಗೆ
ಸಮವೆ
ಎಳಸು
ಮಾಗಿದುದೆಲ್ಲ;
ಹಿಂದಿನಂದಿನ
ಕರ್ಮ
ಈಗೊದಗಿದಾಯಸ್ಸು
ಸವೆ
ಸವೆದು
ಬರಿದಾಗಲಸು
ಅವ
ಎಳೆವ
ಮಲ್ಲ!
ನೂರು
ಬಾಣದ
ಮೊನಚು
ಎದೆಗೆ
ಬಂದೆರಗಿದರೂ
ಕೂಡಿ
ಬಾರದೆ
ಕಾಲ
ಅಸು
ನೀಗರೆಂದೂ;
ವೇಳೆ
ಬಂದಾಯ್ತೆನಲು
ಹುಲ್ಲು
ಕಡ್ಡಿಯೆ
ಸಾಕು
ಕೊನೆಯುಸಿರನೆಳೆಯಲೊಂದು
ನೆಪ
ತಗುಲಿತೆಂದು
!
ಮದ್ದು
ಪಥ್ಯಗಳಿರಲಿ,
ಮಂತ್ರ
ಪೂಜೆಗಳಿರಲಿ,
ಹೋಮ
ಜಪ
ತಪಾದಿಗಳೆಲ್ಲ
ಅತ್ತ
ಇರಲಿ;
ಯಾವುದೂ
ಸಿದ್ಧಿಸದು
ಮುಪ್ಪಡರಿ
ಬಾಗಿಲಲಿ
ನಿಂತಿರಲು
ಜವರಾಯ
ಹಿಡಿದೊಂದು
ಕೊಡಲಿ!
ಏನು
ಪ್ರಯೋಜನವಿಲ್ಲ,
ಎಷ್ಟು
ಮಾಡಿದರಷ್ಟೆ,
ನೂರು
ಮುನ್ನೆಚ್ಚರಿಕೆಗಳೇನು
ತಪ್ಪಿಸದು,
ವ್ಯರ್ಥ!
ಇಂದಿಲ್ಲದೊಂದು
ದಿನ
ಅದು
ಬಂದೆ
ಬರುವುದಿರೆ
ತಲೆ
ಕೆಡಿಸಿಕೊಳ್ಳುವುದೇಕೆ?
ಬಿಡಿ,
ಬರಲಿ
ಅನರ್ಥ
!
ಮಂದೆಯಲಿ
ನೂರಾರು
ಹಸು-
ಕರುಗಳಿದ್ದರೂ
ಕರು
ಓಡಿ
ತಾಯ
ಬಳಿ
ಕೂಡಿ
ಸೇರುವ
ತೆರದಿ
ನಮ್ಮ
ಸಂಚಿತ
ಕರ್ಮ
ಬಿಮ್ಮನರಸುತ
ಬಂದು
ಹಮ್ಮೇಳು-
ಬೀಳಿನ
ವೇಳಾ-ಪಟ್ಟಿ
ಯೋಜಿಸಿಹುದು!
ಗೊತ್ತೆ
ಮೊದಲೆಲ್ಲಿತ್ತೆಂದು?
ಗೊತ್ತಿಲ್ಲ
ಮುಂದೇನೆಂದು
!
ಈ
ನಡುವೆ
ಓಲಾಡುವುದರರಿವು
ಇದ್ದಂತೆ
ಭಾಸ;
ಏಕೀ
ಆಟಾಟೋಪ?
ಬಿಟ್ಟು
ಬಿಡುವುದೆ
ಲೇಸು
ತುಂಬ
ಯೋಚನೆ
ಬೇಡ,
ಅದು
ಸಲ್ಲದಾಭಾಸ
!
(ಮೃತೋ
ಅಪಿ
ಬಾನ್ಧವಾಃ
ಶಕ್ತೋ,
ನ
ಅನುಗನ್ತುಂ
ನರಂ
ಮೃತಮ್।
ಜಾಯಾ-
ವರ್ಜ್ಯಂ
ಹಿ
ಸರ್ವಸ್ಯ,
ಯಾಮ್ಯಃ
ಪನ್ಥಾ
ವಿರುಧ್ಯತೇ।।
ಧರ್ಮ
ಏಕೋ
ಅನುಯಾತಿ
ಏನಂ,
ಯತ್ರ
ಕ್ವಚನ
ಗಾಮಿನಮ್।
ನನು
ಅಸಾರೇ
ನೃಲೋಕೇ
ಅಸ್ಮಿನ್,
ಧರ್ಮಂ
ಕುರುತ
ಮಾ
ಚಿರಮ್।।
ಶ್ವಃ
ಕಾರ್ಯಂ
ಅದ್ಯ
ಕುರ್ವೀತ,
ಪೂರ್ವಾಹ್ನೇ
ಚ
ಅಪರಾಹ್ನಿಕಮ್।
ನ
ಹಿ
ಪ್ರತೀಕ್ಷತೇ
ಮೃತ್ಯುಃ,
ಕೃತಂ
ವಾ
ಅಸ್ಯ
ನ
ಅಕೃತಮ್।।)
ಕ್ಷೇತ್ರ
ಆಪಣ
ಗೃಹ
ಆಸಕ್ತಮ್,
ಅನ್ಯತ್ರ
ಗತ
ಮಾನಸಮ್।
ವೃಕೀ
ಇವ
ಉರಣಂ
ಆಸಾದ್ಯ,
ಮೃತ್ಯುರ್
ಆದಾಯ
ಗಚ್ಛತಿ।।
ನ
ಕಾಲಸ್ಯ
ಪ್ರಿಯಃ
ಕಶ್ಚಿದ್,
ದ್ವೇಷ್ಯಶ್
ಚ
ಅಸ್ಯ
ನ
ವಿದ್ಯತೇ।
ಆಯುಷ್ಯೇ
ಕರ್ಮಣಿ
ಕ್ಷೀಣೇ,
ಪ್ರಸಹ್ಯ
ಹರತೇ
ಜನಮ್।।
ನ
ಅಪ್ರಾಪ್ತ
ಕಾಲೋ
ಮ್ರಿಯತೇ,
ವಿದ್ಧಃ
ಶರ-ಶತೈರ್
ಅಪಿ।
ಕುಶ-ಅಗ್ರೇಣ
ಅಪಿ
ಸಂಸ್ಪೃಷ್ಟಃ,
ಪ್ರಾಪ್ತಕಾಲೋ
ನ
ಜೀವತಿ।।
ನ
ಔಷಧಾನಿ
ನ
ಮನ್ತ್ರಾಶ್
ಚ,
ನ
ಹೋಮ
ನ
ಪುನರ್
ಜಪಾಃ
ತ್ರಾಯನ್ತೇ
ಮೃತ್ಯುನಾ
ಉಪೇತಂ,
ಜರಯಾ
ವಾ
ಅಪಿ
ಮಾನವಮ್।।
ಆಗಾಮಿನಂ
ಅನರ್ಥಂ
ಹಿ,
ಪ್ರವಿಧಾನ
ಶತೈರ್
ಅಪಿ।
ನ
ನಿವಾರಯಿತುಂ
ಶಕ್ತಸ್,
ತತ್ರ
ಕಾ
ಪರಿದೇವನಾ।।
ಯಥಾ
ಧೇನು-ಸಹಸ್ರೇಷು,
ವತ್ಸೋ
ವಿನ್ದತಿ
ಮಾತರಮ್।
ತಥಾ
ಪೂರ್ವ
ಕೃತಂ
ಕರ್ಮ,
ಕರ್ತಾರಂ
ವಿನ್ದತೇ
ಧ್ರುವಮ್।।
ಅವ್ಯಕ್ತ
ಆದೀನಿ
ಭೂತಾನಿ,
ವ್ಯಕ್ತ-ಮಧ್ಯಾನಿ
ಚ
ಅಪಿ
ಅಥ।
ಅವ್ಯಕ್ತ-ನಿಧನಾನಿ
ಏವ,
ತತ್ರ
ಕಾ
ಪರಿದೇವನಾ।।
(-ವಿಷ್ಣು
ಸ್ಮೃತಿ,
ಅಧ್ಯಾಯ
20.39-48)