‘ಶ್ರೇಯಸ್ಸಿ’ನ ಮಾರ್ಗ ತೋರಿಸು ಗುರುವೇ : ಭಾಗ 2
ಇಲ್ಲಿ
ಎರಡು
ಕತೆಗಳು
ಜ್ಞಾಪಕಕ್ಕೆ
ಬರುತ್ತವೆ
:
ಪಾಂಡವರು
ವನವಾಸ
ಮಾಡುತ್ತಾ
,
ದ್ವೆ
ೖತವನದಲ್ಲಿ
ಇದ್ದಾಗ,
ಒಂದು
ದಿನ
ಪ್ರಯಾಣಮಾಡುತ್ತಾ
,
ಮಾಡುತ್ತಾ
ಬಿಸಿಲಿನಲ್ಲಿ
ಬಳಲಿ,
ಬಾಯಾರಿಕೆಯಿಂದ
ನರಳುತ್ತಾ
ಇದ್ದಾಗ,
ದೂರದಲ್ಲಿ
ಒಂದು
ಸರೋವರ
ಕಾಣುತ್ತೆ
.
ನೀರನ್ನು
ತರಲು
ಒಬ್ಬೊಬ್ಬರಾಗಿ
ಹೋದ
ಸಹದೇವ,
ನಕುಲ,
ಅರ್ಜುನ
ಮತ್ತು
ಭೀಮ-
ಯಾರೂ
ಹಿಂತಿರುಗುವುದಿಲ್ಲ
;
ಒಬ್ಬೊಬ್ಬರೂ
ಆ
ಸರೋವರದ
ಅಧಿಪತಿ
'ಯಕ್ಷ’ನು
ಕೇಳಿದ
ಪ್ರಶ್ನೆಯನ್ನು
ಕಡೆಗಣಿಸುತ್ತಾರೆ,
ಅಸು
ನೀಗಿರುತ್ತಾರೆ!
ಕೊನೆಗೆ
ಹೋದ
ಯುಧಿಷ್ಠಿರನು
ಯಕ್ಷನ
ಪ್ರಶ್ನೆಗಳಿಗೆ
ಉತ್ತರಿಸಿ
ಗೆಲ್ಲುತ್ತಾನೆ.
ಅವುಗಳಲ್ಲಿ
ಒಂದು
ಪ್ರಶ್ನೆ
ಮುಖ್ಯವಾದದ್ದು
:
'ಕಿಂ
ಆಶ್ಚರ್ಯಮ್?’
ಅಂದರೆ,
ಪ್ರಶ್ನೆ
:
'ಜಗತ್ತಿನಲ್ಲಿ
ಎಲ್ಲವನ್ನೂ
ಮೀರಿಸುವ
ತುಂಬಾ
ಆಶ್ಚರ್ಯಕರವಾದ
ವಿಷಯ
ಏನು?’
ಉತ್ತರ
:
ಅನುದಿನವೂ
ಜವರಾಯನತ್ತ
ಮತ್ತೆ
ಹೋಗುತ್ತಲಿವೆ
ಪ್ರಾಣಿಗಳು;
ಇದ
ತಿಳಿದೂ
ತಾನಿಲ್ಲಿ
ಸ್ಥಿರನೆಂದು
ಬಗೆವುದೇನಚ್ಚರಿಯೋ
!
'ಹುಟ್ಟಿದವರೆಲ್ಲ
ಕೊನೆಗೊಂದು
ದಿನ
ಸಾಯಲೇ
ಬೇಕು
ಎಂದು
ಗೊತ್ತಿದ್ದರೂ,
ಅದನ್ನು
ಮರೆತು
ಜನರು
ಈ
ಬಾಳು
ಶಾಶ್ವತ
ಅಂತ
ಭ್ರಮಿಸಿ,
ಏನೇನೋ
ಮಾಡುತ್ತಾ
ಇರುವುದು
ಎಂಥ
ದೊಡ್ಡ
ಆಶ್ಚರ್ಯ
!’
(ಅಹನಿ
ಅಹನಿ
ಭೂತಾನಿ
ಗಚ್ಛನ್ತಿ
ಇಹ
ಯಮಾಲಯಮ್।
ಶೇಷಾ:
ಸ್ಥಾವರಂ
ಇಚ್ಛನ್ತಿ,
ಕಿಂ
ಆಶ್ಚರ್ಯಂ
ಅತ:
ಪರಮ್।।
-
ಮಹಾಭಾರತ,
ವನಪರ್ವ
313
:
116)
ಇನ್ನೊಂದು ಕಿಸಾಗೌತಮಿಯ ಕತೆ:
ತನ್ನ ಮುದ್ದಿನ ಹಸುಗೂಸನ್ನ ಕಳೆದುಕೊಂಡ ಇನ್ನೂ ಚಿಕ್ಕ ವಯಸ್ಸಿನ ತಾಯಿ ಒಬ್ಬಾಕೆ, ಗೌತಮ ಬುದ್ಧನ ಬಳಿ ಬಂದು ಅಂಗಲಾಚುತ್ತಾಳೆ: ' ಹಲವರಿಗೆ ಜ್ಞಾನೋದಯ ಮಾಡಿದ ಸಿದ್ಧಪುರುಷರು ನೀವು ; ಮಹಾಮಹಿಮರು ನೀವು ! ನನಗಿರುವುದೊಂದೇ ಮಗು ; ಇದನ್ನ ಬದುಕಿಸಿ ಕೊಡಿ !’ ಎಂದು ಬೇಡುತ್ತಾಳೆ.
ಕಡುದುಃಖದಲ್ಲಿ
ಮುಳುಗಿದ
ಅವಳಿಗೆ
ಏನು
ಬುದ್ಧಿ
ಹೇಳುವುದು
?
ಏನು
ತಿಳುವಳಿಕೆ
ಮೂಡಿಸುವುದು
?
ಯಾವ
ರೀತಿ
ಸಮಾಧಾನ
ಮಾಡುವುದು?
ಬುದ್ಧ
ಹೇಳುತ್ತಾನೆ:
'ಆಗಲಿ,
ತಾಯಿ.
ಒಂದು
ಕೆಲಸ
ಮಾಡು.
ಒಂದಿಷ್ಟು
ಸಾಸಿವೆಯನ್ನು
ತೆಗೆದುಕೊಂಡು
ಬಾ.
ಅದನ್ನು
ಮಂತ್ರಿಸಿ,
ನಿನ್ನ
ಮಗುವಿನ
ಮೇಲೆ
ಚಿಮುಕಿಸುತ್ತೇನೆ.
ಮಗು
ಮತ್ತೆ
ಬದುಕಿ
ಬಂದೀತು
!’
'ಈಗಲೇ
ಓಡಿ
ಹೋಗಿ
ಸಾಸಿವೆ
ತರುತ್ತೇನೆ’,
ಎನ್ನುತ್ತಾಳೆ,
ಹೊರಡತೊಡಗುತ್ತಾಳೆ,
ಅವಳು.
'ತಡಿ,
ತಾಯಿ
!
’,
ಬುದ್ಧ
ತಡೆಯುತ್ತಾನೆ.
'ಸಾವು
ಆಗಿಲ್ಲದ
ಮನೆಯಿಂದ
ಸಾಸಿವೆ
ತಾ’.
ಎಂದು
ಕಳಿಸಿಕೊಡುತ್ತಾನೆ,
ಅವಳನ್ನ.
ಪಾಪ. ಸಾವಿಲ್ಲದ ಮನೆ ಅವಳಿಗೆ ಸಿಗುವುದಾದರೂ ಹೇಗೆ ? ಸುತ್ತಿ, ಸುತ್ತಿ, ಅರಿವು ಮೂಡಿದ ಬಳಿಕ ಬುದ್ಧನ ಬಳಿಗೆ ಅವಳು ಮರಳುತ್ತಾಳೆ. ಬುದ್ಧ ಮತ್ತು ಅವಳು ಬಗೆಹರಿಯದ ಈ ಸಮಸ್ಯೆಯ ಬಗ್ಗೆ ಅಳುತ್ತಾರೆ!
ಅದಕ್ಕೇನೆ ಶ್ರೀಕೃಷ್ಣ ಅರ್ಜುನನ ನೆಪ ಮಾಡಿಕೊಂಡು, ನಮಗೆ ಹೇಳಿದ್ದು: 'ತಸ್ಮಾತ್ (ಆದ್ದರಿಂದ), ಅಪರಿಹಾರ್ಯೇ ಅರ್ಥೆ(ಪರಿಹರಿಸಲಾಗದ ಈ ಹುಟ್ಟು-ಸಾವುಗಳ ವಿಷಯದಲ್ಲಿ), ಶೋಚಿತುಮ್ ನ ಅರ್ಹಸಿ (ಶೋಕಿಸಬೇಕಾಗಿಲ್ಲ, ಅತ್ತರೆ ಪ್ರಯೋಜನವಿಲ್ಲ !)’
ಹಾಗಾದರೆ, ಬೇರೆ ಏನು ಮಾಡಬಹುದು ? 'ಮರಣ’ದ ಮಾತು ಬಂದಾಗ, ಕೇಳಿದಾಗ, 'ಜೀವ ದೇಹದಿಂದ ಮುಕ್ತವಾಯಿತು. ಬಿಡುಗಡೆ ಹೊಂದಿತು’- ಎಂದು ಸಮಾಧಾನ ಮಾಡಿಕೊಳ್ಳಬೇಕು. ಹೇಳುವುದು ಸುಲಭ, ಆದರೆ ತುಂಬಾ ಹತ್ತಿರದ ಬಂಧುಗಳಿಗೆ ಆದ ನೋವು, ದುಃಖವನ್ನು ತಡೆದುಕೊಳ್ಳುವುದು ಬಲು ಕಷ್ಟ. 'ತುಂಬಾ ಒಳ್ಳೆಯವರನ್ನ, ಪುಣ್ಯದ ಕೆಲಸ ಮಾಡುತ್ತಾ ಪರಿಶುದ್ಧ ಆತ್ಮವುಳ್ಳವರನ್ನ 'ದೇವರು’ ತನ್ನ ಬಳಿ ಬೇಗ ಕರೆದುಕೊಂಡು ಬಿಡುತ್ತಾನೆ’ - ಎಂಬ ಮಾತುಗಳಿಂದ ನೊಂದವರನ್ನು ಸಂತೈಸಬಹುದು. ಅದಕ್ಕೇನೇ ನಾವು ಸಾವನ್ನಪ್ಪಿದ, ಗತಿಸಿದ, ಕೊನೆಯುಸಿರೆಳೆದ, ದೇಹ ಚೆಲ್ಲಿದ, ನಿಧನರಾದವರನ್ನು ಕಣ್ಮರೆಯಾದರು, ಬಯಲಾದರು, ದಿವಂಗತರಾದರು, ಸ್ವರ್ಗಸ್ಥರಾದರು, ಕೈವಲ್ಯ ಹೊಂದಿದರು, ವೈಕುಂಠ-ವಾಸಿಗಳಾದರು, ಪರಂಧಾಮ-ವನೈದಿದರು, ಶಿವೈಕ್ಯರಾದರು- ಎಂದು ಅಶ್ರುತರ್ಪಣ ಸೂಚಿಸುವುದು, ಶ್ರದ್ಧಾಂಜಲಿಯನ್ನ ಅರ್ಪಿಸುವುದು.
'ಬಿಡುಗಡೆಯೇ ಮೋಕ್ಷ’ ಎಂಬ ಮಾತಿನಲ್ಲಿ ಅರ್ಥವಿದೆ. ಈಗ ತೊಡಗಿ ಇರುವವರು ಆ ಬಿಡುಗಡೆಯ ದಿನವನ್ನು ಸಮಚಿತ್ತದಿಂದ ನಿರೀಕ್ಷಿಸುವ, ಕಾಯುವ ಸ್ಥೈರ್ಯ ತಂದುಕೊಳ್ಳಬೇಕು: 'ಹುಟ್ಟುತ್ತಾ ಬಂದಾಗ, ನಾವು ಅಳುತಿದ್ದೆವು; ಹತ್ತಿರದ ಬಂಧುಗಳು ನಗುತ್ತಾ ಸಂತೋಷಿಸುತ್ತಿದ್ದರು. ಬಾಳನ್ನ ಹೇಗೆ ಕಳೆಯಬೇಕೆಂದರೆ, ಸಾಯುವ ವೇಳೆ ನಾವು ನಗು ನಗುತ್ತಾ ಕೊನೆಯುಸಿರೆಳೆಯಬೇಕು ; ಸುತ್ತಲೂ ನೆರೆದವರು ಕಣ್ಣೀರ್ಗರೆಯುತ್ತಿರಬೇಕು !’ ಇದನ್ನೇ 'ಶರಣರ ಗುಣವನ್ನ ಮರಣದಲ್ಲಿ ನೋಡು’ಎಂದಾಗ, ಇಚ್ಛಾಮರಣಿ ಭೀಷ್ಮನ ಕತೆ ನೆನಪಾಗುತ್ತದೆ; ಯೋಗಾಭ್ಯಾಸಿಗಳ 'ಸಮಾಧಿ’ ಸ್ಥಿತಿಯ ವಿಚಾರ, ಬುದ್ಧ ಬೋಧಿಸಿದ 'ನಿರ್ವಾಣ’ದ ಸಮ್ಯಕ್ ಜ್ಞಾನ ಬೆಳಕೂಡುತ್ತದೆ; ಏಳನೆಯ ಶತಮಾನದ ಪೂರ್ವಾರ್ಧದ ಹಳೆಗನ್ನಡದ, (ಹೆಚ್ಚೂ ಕಡಿಮೆ ಮೊಟ್ಟ ಮೊದಲ) ಪ್ರಾಚೀನ ಗದ್ಯ ಗ್ರಂಥ, ಶಿವಕೋಟ್ಯಾಚಾರ್ಯನ 'ವಡ್ಡಾರಾಧನೆ’ಯಲ್ಲಿ ಬರುವ ಜೈನ ಮುನಿಗಳು ಅನುಭವಿಸಿದ ಅಂತ್ಯದ ದಿನಗಳ ಚಿತ್ರ ಎದುರಾಗುತ್ತದೆ.
ಶ್ರೀಮದ್ ಭಾಗವತದ ಕವಿ ಚಮತ್ಕಾರ-ಪೂರ್ವಕವಾಗಿ 'ತಮ್ಮದಲ್ಲದ ದೇಹವನು ಬಿಟ್ಟು ಹೋದುದಾದರೂ ಎಂತು ?’ ಎಂದು ಈ ಬಗ್ಗೆ ಪ್ರಶ್ನಿಸುವುದನ್ನು ಕೇಳಿ :
ತಮಗಾಗಿ
ಜೀವಿಸದೆ
ಪರರಿಗೇ
ಇದ್ಧಂಥವರು
ಇವರು,
ಎಲ್ಲರುನ್ನತಿಯನ್ನ
ಮೂಲೋಕದೊಳಿತ
ಬಯಸುತ್ತಿದ್ದವರು,
ಅನುದಿನವೂ
ಮನಸಾರೆ
ಹಾಡಿ
ಈ
ಹೊಗಳಬೇಕಾದವರು-
ಯಾರ
ಕೇಳದೆ
ದೇಹ
ಬಿಟ್ಟು
ಹೋದುದಾದರೂ
ಹೇಗೆ
?
(ಶಿವಾಯ
ಲೋಕಸ್ಯ,
ಭವಾಯ
ಭೂತಯೇ,
ಯ
ಉತ್ತಮ-ಶ್ಲೋಕ-ಪರಾಯಣಾ
ಜನಾ
:
।
ಜೀವನ್ತಿ
ನ
ಆತ್ಮಾರ್ಥಂ
ಅಸೌ
ಪರಾಶ್ರಯಂ,
ಮುಮೋಚ
ನಿರ್ವಿದ್ಯ
ಕುತ್
:
ಕಳೇವರಮ್
।।
ಭಾಗವತ
1
:
4:
12)
'ಮಾಡಬೇಕಾದ್ದನ್ನೆಲ್ಲಾ
ಮಾಡಿ
ಮುಗಿಸಿದವರು,
ತಮಗೆ
ಇಷ್ಟನಾದ
ಅತಿಥಿಯನ್ನು
ಸ್ವಾಗತಿಸಲು
ಕಾದಿರುವಂತೆ,
ಸಾವನ್ನು
ನಿರೀಕ್ಷಿಸುತ್ತಿರುತ್ತಾರೆ’
('ಕೃತಕೃತ್ಯಾ:
ಪ್ರತೀಕ್ಷ್ಯನ್ತೇ
ಮೃತ್ಯುಂ
ಪ್ರಿಯಂ
ಇವ
ಅತಿಥಿಮ್।’)-
ಎಂಬ
ಮಾತೊಂದಿದೆ.
ಅದಕ್ಕೆ
ಪೂರಕವಾಗಿ
ಇಲ್ಲಿ
ನೋಡಿ
:
ಮೃತ್ಯುವಿಗೆ
ಭಯಪಡುವೆ,
ಮೂಢ,
ನೀ
ಆಶಿಸುವೆ
:
ಯಮ
ನನ್ನ
ಬಿಟ್ಟಾನು
;
ಪಾಪ
!,
ಹೆದರಿದನೆಂದು
;
ಇದು
ಗುಟ್ಟು
:
'ಮುಟ್ಟನೋ
ಆ
ಹುಟ್ಟದವನನ್ನ
ಯಮ,
ಮತ್ತೆ
ಹುಟ್ಟದ
ಹಾಗೆ
ನೀ
ಬಾಳಿ
ಬದುಕೋ!’
('ಮೃರ್ತ್ಯೋರ್ ಭಿಭೇಷಿ ಕಿಂ ಮೂಢ !, ಭೀತಂ ಮುಂಚತಿ ಕಿಂ ಯಮ:। ಅಜಾತಂ ನೈವ ಗೃಹ್ಣಾತಿ, ಕುರು ಯತ್ನಂ ಅಜನ್ಮನಿ।।’)
ಅಂದರೆ ನಾವು ಇಲ್ಲಿ ಹೇಗೆ ಬಾಳುತ್ತೇವೋ ಅದನ್ನ ಅವಲಂಬಿಸಿದೆ ನಮ್ಮ ಮುಂದಿನ ಬಾರಿಯ ಪ್ರಯಾಣ - ಎಂಬ ಭಾವ, ಪುನರ್ಜನ್ಮವನ್ನು ನಂಬಿದವರ ವಿಶ್ವಾಸ. ಅಥವಾ, ಸಂಸ್ಕೃತ ನಾಟಕಕಾರ ಭಾಸ ತನ್ನ 'ಪಾಂಚರಾತ್ರ’ದಲ್ಲಿ ಹೇಳಿದಂತೆ-,
'ಮಾಡಿದೊಳ್ಳೆಯದಕ್ಕೆ
ಸತ್ತು,
ಸ್ವರ್ಗಕೆ
ಹೋದ’-
ಎಂಬ
ಮಾತೇನಿಹುದು,
ಅದು
ಹಸಿಯ
ಸುಳ್ಳು
!
ಸ್ವರ್ಗ-
ನರಕಗಳೆಲ್ಲ
ಪರೋಕ್ಷ
ಬೇರೆಲ್ಲೋ
ಇಲ್ಲ
-
ಎಲ್ಲವೂ
ಫಲಿಸುವುದು
ಇಲ್ಲೆ
ಇಲ್ಲೇ
!
(ಮೃತೈ:
ಪ್ರಾಪ್ಯ
ಸ್ವರ್ಗೋ
ಯದ್
ಇಹ
ಕಥಯತಿ
ಏತದ್
ಅನೃತಮ್।
ಪರೋಕ್ಷೋ
ನ
ಸ್ವರ್ಗೋ,
ಬಹುಗುಣಂ
ಇಹ
ಏವ
ಏಷ
ಫಲತಿ
।।
-
ಭಾಸ
ಪಾಂಚರಾತ್ರ)
ಇನ್ನೇಕೆ ಮತ್ತೆ ಹುಟ್ಟುವ ಮಾತು ? ಜೀವನದ ಹಲವು ಹೆದ್ದಾರಿಗಳಲ್ಲಿ ತೆವಳಿ, ಕುಪ್ಪಳಿಸಿ, ನಡೆದು, ಓಡಿ ಏನೇನೋ ಪ್ರಾಣಿಗಳಾಗಲಿಲ್ಲವೇ ನಾನು? ಎಂಥದೆಂತದೋ ಪಾತ್ರಗಳನ್ನು ವಹಿಸಿ, ನಾಟಕವಾಡಲಿಲ್ಲವೇ ನಾನು ?- ಎನ್ನುತ್ತಾ ,
ಮತ್ತೆ
ಹುಟ್ಟುವುದೇನೂ
ಬೇಕಿಲ್ಲ,
ನಾನಿಲ್ಲೆ
ಹಲವು
ಜನ್ಮಗಳನ್ನು
ಎತ್ತಿರುವೆನಲ್ಲ
!
ಅನುಭವದ
ಮೂಸೆಯಲಿ
ಕರಗಿ
ನೀರಾಗೆದ್ದು,
ಘನಿಸಿ
ರೂಪಗಳೆನಿತೋ
ತಳೆದಿರುವೆನಲ್ಲ
!
ಎಂದು
ವಾದಿಸುವವರೂ
ಇರಬಹುದು.
ಅಂಥವರು
ಈ
ಬಂಧ-ಮೋಕ್ಷ
ಎರಡೂ
ನಮ್ಮ
ಮನಸ್ಸಿನ
ವ್ಯಾಪಾರ
ಮಾತ್ರ
ಎನ್ನುತ್ತಾ,
ಬಂಧನಕು
ಬಿಡುಗಡೆಗೂ
ಮನೆವೊಂದೆ
ಕಾರಣ,
ಜಾಣ;
ಅಂಟಿಕೊಂಡಿರೆ
ಅದೇನೆ
ಸೆರೆ,
ತಗಲದಲೆ
ಇರೆ
ಮೋಕ್ಷ
ಕಾಣ
!
(ಮನ
ಏವ
ಮನುಷ್ಯಾಣಾಂ,
ಕಾರಣಂ
ಬಂಧ
ಮೋಕ್ಷಯೋ
:
।
ಬಂಧಯಾ
ವಿಷಯಾಸಂಗೀಂ,
ಮೋಕ್ಷೋ
ನಿರ್ವಿಷಯಾ
ಸ್ಮೃತಮ್।।
-
ಮೈತ್ರೀ
ಉಪನಿಷತ್:
6
:
34)
-
ಎನ್ನಬಹುದು.
ಹೌದು,
ಮನಸ್ಸೇ
ಎಲ್ಲಕ್ಕೂ
ಮೂಲ.
ಸ್ವರ್ಗದೋಪಾದಿಯ
ಆದರ್ಶ
ಸುಖ,
ನರಕ-
ಸದೃಶ
ಪರಮ-ಯಾತನೆ,
ಅದರ
ಸಮ್ಮಿಶ್ರತತೆಯ
ಈ
ಮರ್ತ್ಯಲೋಕಾನುಭವ
ಎಲ್ಲಕ್ಕೂ
ಕಾರಣ
ಈ
ಮನಸ್ಸಿನ
ತುಡಿತ
ಮಿಡಿತಗಳೇ
ತಾನೆ(ಯೋಗ
ವಾಸಿಷ್ಟ)
:
ಚಿತ್ತವೇ
ಮೂಲ
ಎಲ್ಲಕ್ಕೂನು,
ಮೂಲೋಕ
ಹುದುಗಿದೆ
ಅಡಗಿ
ಅಲ್ಲೇ;
ಅದು
ಕ್ಷಯಿಸೆ
ಮುಳುಗೀತು
ಇದು,
ಬೇಕು
ಬುದ್ಧಿಗೆ
ಮುದ್ದು,
ಗುದ್ದು,
ಮದ್ದು!
(ಚಿತ್ತಂ
ಕಾರಣಂ
ಅರ್ಥಾನಾಂ,
ತಸ್ಮಿನ್
ಸತಿ
ಜಗತ್
ತ್ರಯಮ್।
ತಸ್ಮಿನ್
ಕ್ಷೀಣೇ
ಜಗತ್
ಕ್ಷೀಣಂ,
ತತ್
ಚಿಕಿತ್ಸ್ಯಂ
ಪ್ರಯತ್ನತಃ
।।-
ಯೋಗವಾಸಿಷ್ಟ,
ರಾಧಾಕೃಷ್ಣನ್
ಉಲ್ಲೇಖ,
ಪುಟ
846)
ಮನಸ್ಸಿನ ವ್ಯಾಪಾರ ? ಜೀವನವೇ ಉದ್ದಕ್ಕೂ ಒಂದಲ್ಲ ಒಂದು ಬಗೆಯ ಕೊಡುವ ಕೊಳ್ಳುವ ಸಂಪಾದಿಸುವ ಅಮೂಲ್ಯ ವ್ಯಾಪಾರವೇ ಅಲ್ಲವೇ ?
ಶಿಕಾರಿಪುರದ
ಒಂದು
ಪ್ರಾಚೀನ
ಶಾಸನದಲ್ಲಿ
(ಶಾಸನ
100-112)
ಬರುವ
ಆ
ಊರಿನ
ವರ್ತಕರ
ಸ್ವಾರಸ್ಯಕರವಾದ
ಈ
ವರ್ತನೆಯನ್ನು
ಕೇಳಿ:
'ಕಿಡುವೊಡಮೆಯನ್
ಒಂದನೆ
ಕೊಟ್ಟೆಡೆ
ಮಡಗದೆ,
ಇಹಪರಂಗಳೆಂಬ
ಎರಡುಮನಂ
ಅಂಗಡಿಯಾಳ್
ಕಿಡದ
ಒಡಮೆಯನ್
ಅಡಿಗಡಿಗೆ
ಅರ್ಜಿಪರಲ್ಲಿ
ನೆಗಳ್ದ
ಪುರದ
ಜನಂಗಳ್।’-
ಅವರಂತೆ
!
(ಅಲ್ಲಿಯ ಊರಿನ ಜನರು ಅಂಗಡಿಗಳಲ್ಲಿ 'ಕಿಡುವೊಡೆಗಳ’ ನ್ಯಾಯವಾದ ಮಾರಾಟದಿಂದ 'ಇಹ-ಪರ’ಗಳೆಂಬ, ಎರಡೂ ಕೆಡದ ಒಡವೆಗಳನ್ನು ಸಂಪಾದಿಸುತ್ತಿದ್ದರಂತೆ, ಕೀರ್ತಿ ಪಡೆಯುತ್ತಿದ್ದರಂತೆ !) ಇದಕ್ಕಿಂತ ಮಿಗಿಲಾದ ಲಾಭ ಬೇಕೆ?