135995godಇಬ್ಬರ ಜಗಳದಲಿ ಬಡವಾದ ಚಿಕ್ಕಮಂಡ್ಯ ಹಳ್ಳಿಕೇಶ್ವರ/cj/umesh-mandya/2009/0511-hallikeshwara-locked-up-in-chikkamandya.htmlದೇವರು ಎಲ್ಲೆಡೆ ಇರುತ್ತಾನೆಂದು ಎಲ್ಲರೂ ನಂಬುತ್ತಾರೆ, ಆದರೂ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸದಿದ್ದರೆ ಭಕುತರಿಗೆ ಸಮಾಧಾನವಿರುವುದಿಲ್ಲ. ಆದರೆ, ಚಿಕ್ಕಮಂಡ್ಯ ಗ್ರಾಮದಲ್ಲಿ ಒಳಜಗಳದಿಂದಾಗಿ ಹಳ್ಳಿಕೇಶ್ವರದೇವಸ್ಥಾನಕ್ಕೆ ಬೀಗಜಡಿದು, ಭಕ್ತಗಣಕ್ಕೆ ದೇವರ ದರುಷನವಾಗದಂತೆ ಮಾಡಲಾಗಿದೆ. ಇಬ್ಬರ ಜಗಳದಲ್ಲಿ ಪೂಜೆ ಪುನಸ್ಕಾರವಿಲ್ಲದೆ ದೇವರು ಬಡವಾಗುತ್ತಿದ್ದಾನೆ. ಮೇ 10ರಂದು ಸಭೆ ಸೇರಿಸಲಾಗಿತ್ತಾದರೂ ಸಂಧಾನ ಕಾರ್ಯ ಮುಂದುವರಿದಿದೆ.* ಉಮೇಶ್, ಮಂಡ್ಯಮಂಡ್ಯ, ಮೇ. 11 : ಇಲ್ಲಿನ 36531http://kannada.oneindia.com/img/2009/05/11-chikkamandya1.jpg135995godಸ್ವಪ್ನದಲ್ಲಿ ಬಂದು ಮರವೊಂದು ಮಾತನಾಡಿದಾಗ!/cj/roopa/2009/0601-when-a-tree-conversed-with-a-man-in-dream.htmlಪ್ರಕೃತಿಯ ಭಾಗವಾಗಿರುವ, ಪ್ರಕೃತಿಯೊಡನೆ ಭಾವನಾತ್ಮಕ ಸಂಬಂಧ ಹೊಂದಿರುವ ಮನುಷ್ಯ ಮರಗಿಡಗಳೊಡನೆ ಸಂಭಾಷಿಸುವುದು ಲೌಕಕಿವೋ, ಅಲೌಕಿಕವೋ? ಲೌಕಿಕವೆನಿಸಿದರೂ ಅಲೌಕಿಕವೆಂಬಂತಹ ಒಂದು ಘಟನೆಯ ವಿವರ ಇಲ್ಲಿದೆ. ಇಂತಹ ಘಟನೆಗಳಿಗೆ ವೈಜ್ಞಾನಿಕ ತಳಹದಿಯಾದರೂ ಎಂತಹುದು? ಚರ್ಚೆಯಾಗಲಿ.* ರೂಪಾ ಎಸ್ಮರಗಿಡಗಳಲ್ಲೂ ಆತ್ಮವಿದೆ ಮತ್ತು ಅವಕ್ಕೂ ಸುಖ ದುಃಖಗಳು ಸೂಕ್ಷ್ಮರೂಪದಿಂದ ತಿಳಿಯತ್ತವೆ ಎಂಬುದು ಭಾರತೀಯರ ಪರಂಪರೆಯಲ್ಲಿ ಅನೂಚಾನವಾಗಿ ಬಂದಿರುವ ನಂಬಿಕೆ. ಅರಳೀಮರ ಮುಂತಾದ ಪೂಜಾವೃಕ್ಷದಲ್ಲಿ 37033http://kannada.oneindia.com/img/2009/06/01-roopa-s1.jpg135995godಸಾಹಸಜೀವಿ, ಪರಮಾರ್ಥ ಸಾಧಕ ಘನಶ್ಯಾಮಾಚಾರ್/column/gv/2009/0905-mumbai-kannadiga-ghanashyamachar.htmlಕೈಕಾಲು ದೇಹದ ಸರ್ವಾಂಗಗಳೂ ಸದೃಢವಾಗಿದ್ದರೂ ನಯಾಪೈಸೆ ಕೆಲಸ ಮಾಡದ ಅಪಾಪೋಲಿಗಳನ್ನು ನೋಡಿದ್ದೇವೆ. ತಮ್ಮ ನಿಷ್ಕ್ರಿಯತೆಗೆ ದೇವರನ್ನು ಬೈದಾಡಿಕೊಳ್ಳುತ್ತಲೇ ಎಲ್ಲವೂ ವಿಧಿಲಿಖಿತ ಎಂಬಂತೆ ಅಬ್ಬೇಪಾರಿ ಜೀವನ ನಡೆಸಿರುವವರನ್ನು ಕಂಡಿದ್ದೇವೆ. ಇಂಥವರ ನಡುವೆ ಯಶಸ್ಸಿನ ತುತ್ತತುದಿಯಲ್ಲಿದ್ದಾಗ ಎರಡೂ ಕಾಲ್ಗಳ ಸ್ವಾಧೀನ ಕಳೆದುಕೊಂಡರೂ, ಎಂಥ ಚಟುವಟಿಕೆಯಿಂದ ಇರುವಂಥ ವ್ಯಕ್ತಿಯೂ ನಾಚುವಂತೆ ಬದುಕಿದ ಕನ್ನಡಿಗ, ಜೀವನವನ್ನು ಅಪಾರವಾಗಿ ಪ್ರೀತಿಸಿದ ಘನಶ್ಯಾಮಾಚಾರ್ ಅವರ ಸಾಧನೆ 39020http://kannada.oneindia.com/img/2009/09/05-ghanashyamachar1.jpg135995godಅಪರವಯಸ್ಕನ ಅಮೆರಿಕಾ ಯಾತ್ರೆ : ಒಂದು ಪರಿಚಯ/nri/article/2003/010903anm.html'ಹೊರದೇಶಕ್ಕೆ ಹೋಗಿಬಂದವರೆಲ್ಲ ಒಂದೊಂದು ಪುಸ್ತಕ ಬರೆದುಬಿಡುತ್ತಾರೆ" ಎಂಬ ಕುಹಕದ ಮಾತು ಆಗಾಗ್ಗೆ ಕೇಳಿಬಂದರೂ, ಕನ್ನಡದಲ್ಲಿ ಅಂಥ ಪುಸ್ತಕಗಳು ಕಡಿಮೆಯೆಂದೇ ನನ್ನ ಎಣಿಕೆ. ಅದರಲ್ಲೂ ಹೊರಗಿನ ಪ್ರವಾಸದ ಕಥನದೊಂದಿಗೆ, ಮನಸ್ಸು ಕೈಗೊಳ್ಳುವ ಒಳಗಿನ ಪ್ರವಾಸದ ಕಥನವನ್ನೂ ಒಳಗೊಂಡ ಪುಸ್ತಕಗಳು ಇನ್ನೂ ಕಡಿಮೆ. ಈ ದೃಷ್ಟಿಯಿಂದ ಮೂರ್ತಿರಾಯರ ಪುಸ್ತಕ ಒಂದು ಉತ್ತಮ ಸಾಧನೆ. ಹೊರನೋಟ-ಒಳನೋಟ ಎರಡೂ ಹದವಾಗಿ ಬೆರೆತಿರುವ ಈ 39044http://kannada.oneindia.com/img/2009/09/07-an-murthy-rao1.jpg135995godಶಿರಸಿಯಲ್ಲಿ ಹೀಗೊಂದು ಅ'ಮರ' ಭಕ್ತಿ!/literature/my-karnataka/2009/1107-belief-or-superstition-whatever-you-call.htmlಹಳ್ಳಿಗಾಡಿನ ಜನರ ಮನದಲ್ಲಿ ಬೇರು ಬಿಟ್ಟಿರುವ ನಂಬಿಕೆ ಅಥವಾ ಮೂಢನಂಬಿಕೆಗಳನ್ನು ಸುಲಭವಾಗಿ ಕಿತ್ತುಹಾಕುವುದು ಅಷ್ಟು ಸುಲಭದ ಪ್ರಶ್ನೆಯಲ್ಲ. ಹಲವು ಬಾರಿ ಇಂಥ ಮೂಢನಂಬಿಕೆಗಳು ಹಾನಿ ಮಾಡದಿಲ್ಲರೂ ಉಪಕಾರವನ್ನೂ ಮಾಡುವುದಿಲ್ಲ. ಪ್ರಕೃತಿಯ ಭಾಗವಾಗಿರುವ ಮರಗಳ ದೈವಿಕತೆಯ ಬಗ್ಗೆ ಜನರಿಗೆ ವಿಶೇಷವಾದ ಪ್ರೀತಿ. ಆದರೆ, ಅದು ಧರೆಗುರುಳಿದ ಮೇಲೂ ಅದನ್ನು ಮುಟ್ಟಲು ಅಥವಾ ತೆರವುಗೊಳಿಸಲು ಹೆದರಿದರೆ ಹೇಗೆ?* ನಾಗರಾಜ್ ವೈದ್ಯ, 40108http://kannada.oneindia.com/img/2009/11/07-banyan-tree1.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)/column/gv/2009/0117-vinayaka-krishna-gokak-part3.htmlಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಮಾಡಿ ಭಾರತಕ್ಕೆ ಮರಳಿದ ವಿನಾಯಕ ಕೃಷ್ಣ ಗೋಕಾಕ್ ಅವರು ಮಾಡಿಕೊಂಡ ದೊಡ್ಡ ಆಸ್ತಿಯೆಂದರೆ ಅಪಾರ ಶಿಷ್ಯವೃಂದ. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಖ್ಯಾತ ಲೇಖಕರು ಗೋಕಾಕರ ಗರಡಿಯಲ್ಲಿ ಪಳಗಿದವರೇ.* ಡಾ|ಜೀವಿ ಕುಲಕರ್ಣಿಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಂಗ್ಲಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.(ಆಗ್ಝನ್) ಡಿಗ್ರಿ ಪಡೆದು ವಿಕ್ರಮ ಸಾಧಿಸಿದ ಗೋಕಾಕರು 34120http://kannada.oneindia.com/img/2009/01/17-vk-gokak3e.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)/column/gv/2009/0124-vinayaka-krishna-gokak-part4.htmlಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಲೇಖನ ಸರಣಿ ಮುಂದುವರಿಯುತ್ತಿದೆ.* ಡಾ|ಜೀವಿ ಕುಲಕರ್ಣಿ1947ರಲ್ಲಿ ಭಾರತಕ್ಕೆ ಸ್ವಾತಂತ್ಯ ದೊರೆತ ನಂತರ ಬರೋಡಾ ಸಂಸ್ಥಾನ ಭಾರತ ಸರಕಾರದಲ್ಲಿ 34269http://kannada.oneindia.com/img/2009/01/24-vk-gokak4.jpg99737gv kulkarniಧಾರವಾಡಕ್ಕೂ ಗೋಕಾಕರಿಗೂ ಬಿಡಲಾರದ ನಂಟು/column/gv/2009/0131-unforgettable-days-of-gokak-in-dharwad.htmlಧಾರವಾಡಕ್ಕೂ ವಿಕೆ ಗೋಕಾಕರಿಗೂ ಬಿಡಲಾರದ ನಂಟು. ಅವರು ಧಾರವಾಡಕ್ಕೆ ಬರುತ್ತಿದ್ದಾರೆಂದು ತಿಳಿದಕೂಡಲೆ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗೋಕಾಕರ ಮಹತ್ವದ ಕೃತಿಗಳು ಪ್ರಕಟವಾಗಿದ್ದು ಅವರು ಧಾರವಾಡದಲ್ಲಿದ್ದಾಗಲೇ. ಧಾರವಾಡದಲ್ಲಿನ ಅವರ ಒಡನಾಟ, ವಿದ್ಯಾರ್ಥಿಗಳೊಂದಿಗಿನ ಬಾಂಧವ್ಯ, ಸಾಂಸ್ಕೃತಿಕ ನಗರಿಯಲ್ಲಿ ಕಳೆದ ಅವಿಸ್ಮರಣೀಯ ಗಳಿಗೆಗಳನ್ನು ಜೀವಿ ಕುಲಕರ್ಣಿಯವರು ಇಲ್ಲಿ ಮೆಲುಕು ಹಾಕಿದ್ದಾರೆ. ಗೋಕಾಕ್ ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಲೇಖನ ಸರಣಿಯ ಭಾಗ 34397http://kannada.oneindia.com/img/2009/01/31-vk-gokak4.jpg99737gv kulkarniಗೋಕಾಕರಿಗೆ ಸತ್ಯಸಾಯಿಬಾಬಾ ಅನುಗ್ರಹ/column/gv/2009/0207-vk-gokak-birth-centenary-part-6.htmlಶೈಕ್ಷಣಿಕವಾಗಿ ಮಾತ್ರ ವಿನಾಯಕ ಕೃಷ್ಣ ಗೋಕಾಕರು ಪರೀಕ್ಷೆಗಳನ್ನೆದುರಿಸಲಿಲ್ಲ ಜೀವನದುದ್ದಕ್ಕೂ ಅನೇಕ ಸತ್ವಪರೀಕ್ಷೆಗಳನ್ನು ಅವರು ಎದುರಿಸಿದರು. ಹೋದಲ್ಲೆಲ್ಲ ವಿಜಯಶಾಲಿಯಾದರು, ಗೆಳೆಯರನ್ನು ಸಂಪಾದಿಸಿದರು, ಶಿಷ್ಯಂದಿರನ್ನು ಹುಟ್ಟುಹಾಕಿದರು. ಅವರ ವ್ಯಕ್ತಿತ್ವವೇ ಅಂತಹುದಾಗಿದ್ದು. ಗೋಕಾಕರ ಜೀವನವನ್ನು, ವ್ಯಕ್ತಿತ್ವವನ್ನು ಬಣ್ಣಿಸುವ 'ಜೀವಿ' ಕುಲಕರ್ಣಿಯವರ ಸರಣಿ ಲೇಖನದ ಆರನೇ ಭಾಗ, ಗೋಕಾಕರ ಜನ್ಮಶತಮಾನೋತ್ಸವದ ನಿಮಿತ್ತ.ಗೋಕಾಕರು ಎರಡನೆಯ ಸಲ ಹೈದ್ರಾಬಾದ್‌ಗೆ ತೆರಳಿದ್ದು ಆಕಸ್ಮಿಕವಾಗಿದ್ದರೂ, ಒಂದು ರೀತಿಯಲ್ಲಿ, ಇದು 34531http://kannada.oneindia.com/img/2009/02/07-vk-gokak4.jpg545675ಸಾಧನೆರಾಮನಗರ : ಎಚ್ಐವಿ ಪೀಡಿತರ ಸಹಾಯಕ್ಕೆ 'ಸುರಕ್ಷಾ'/cj/poornachandra/2009/0801-ramnagar-suraksha-for-aid-of-sexual-minoritie.htmlರಾಮನಗರ, ಆ. 1 : ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತರು ಮತ್ತು ಎಚ್.ಐ.ವಿ. ಸೋಂಕಿತರು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಮತ್ತು ಸಾಮಾಜಿಕವಾಗಿ ಸಬಲರಾಗಲು ತಮ್ಮದೇ ಆದ "ಸಾಧನೆ" ಮತ್ತು "ಸುರಕ್ಷಾ" ಎಂಬ ಸಂಘಟನೆ ರೂಪಿಸಿಕೊಂಡಿದ್ದಾರೆ. ಎಚ್.ಐ.ವಿ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಈ ಸಂಘಟನೆಗಳ ಮೂಲ ಉದ್ದೇಶವಾಗಿದೆ.ಪದವೀಧರರಾಗಿರುವ ಹವಾರು ಮಂದಿ ಹಿಜಡಾ(ಲೈಂಗಿಕ ಅಲ್ಪಸಂಖ್ಯಾತ)ಗಳು ಲೈಂಗಿಕ ಸುರಕ್ಷತೆ ಮತ್ತು 38358http://kannada.oneindia.com/img/2009/08/01-hijada-heena1.jpg545675ಸಾಧನೆಸಾಹಸಜೀವಿ, ಪರಮಾರ್ಥ ಸಾಧಕ ಘನಶ್ಯಾಮಾಚಾರ್/column/gv/2009/0905-mumbai-kannadiga-ghanashyamachar.htmlಕೈಕಾಲು ದೇಹದ ಸರ್ವಾಂಗಗಳೂ ಸದೃಢವಾಗಿದ್ದರೂ ನಯಾಪೈಸೆ ಕೆಲಸ ಮಾಡದ ಅಪಾಪೋಲಿಗಳನ್ನು ನೋಡಿದ್ದೇವೆ. ತಮ್ಮ ನಿಷ್ಕ್ರಿಯತೆಗೆ ದೇವರನ್ನು ಬೈದಾಡಿಕೊಳ್ಳುತ್ತಲೇ ಎಲ್ಲವೂ ವಿಧಿಲಿಖಿತ ಎಂಬಂತೆ ಅಬ್ಬೇಪಾರಿ ಜೀವನ ನಡೆಸಿರುವವರನ್ನು ಕಂಡಿದ್ದೇವೆ. ಇಂಥವರ ನಡುವೆ ಯಶಸ್ಸಿನ ತುತ್ತತುದಿಯಲ್ಲಿದ್ದಾಗ ಎರಡೂ ಕಾಲ್ಗಳ ಸ್ವಾಧೀನ ಕಳೆದುಕೊಂಡರೂ, ಎಂಥ ಚಟುವಟಿಕೆಯಿಂದ ಇರುವಂಥ ವ್ಯಕ್ತಿಯೂ ನಾಚುವಂತೆ ಬದುಕಿದ ಕನ್ನಡಿಗ, ಜೀವನವನ್ನು ಅಪಾರವಾಗಿ ಪ್ರೀತಿಸಿದ ಘನಶ್ಯಾಮಾಚಾರ್ ಅವರ ಸಾಧನೆ 39020http://kannada.oneindia.com/img/2009/09/05-ghanashyamachar1.jpg545675ಸಾಧನೆಶ್ರೀಸಾಮಾನ್ಯನಿಗೆ ನಮ್ಮ ಬೆಂಗಳೂರು ಪ್ರಶಸ್ತಿ/news/2009/10/23/namma-bengaluru-awards-for-unsung-heros.htmlಬೆಂಗಳೂರು, ಅ. 23 : ಸಮಾಜದಲ್ಲಿ ಸಾಕಷ್ಟು 'ಸೇವೆ' ಸಲ್ಲಿಸಿದ ಅನೇಕರಿಗೆ ಅನೇಕಾನೇಕ ಪ್ರಶಸ್ತಿಗಳು ತಾವೇ ಹುಡುಕಿಕೊಂಡು ಬರುತ್ತವೆ ಮತ್ತು ಕೆಲವರಿಗೆ ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗುವ ಚಾಣಾಕ್ಷತನವೂ ಗೊತ್ತಿರುತ್ತದೆ. ಆದರೆ, ನಿಸ್ವಾರ್ಥದಿಂದ, ಯಾವುದೇ ಲಾಭಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುವವರು ಎಲೆಮರೆ ಕಾಯಿಯಾಗಿಯೇ ಉಳಿದುಬಿಡುತ್ತಾರೆ. ಅಂಥವರಿಗೆ ಪ್ರಶಸ್ತಿಯನ್ನು ಬೆನ್ನತ್ತುವ ಚಾಕಚಕ್ಯತೆಯೂ ಗೊತ್ತಿರುವುದಿಲ್ಲ, ಅದು ಅವರಿಗೆ ಬೇಕಾಗಿಯೂ ಇರುವುದಿಲ್ಲ.ಅಂಥ, ಅಸಾಮಾನ್ಯ ಸೇವೆ 39837http://kannada.oneindia.com/img/2009/10/23-namma-bengaluru-award1.jpg545675ಸಾಧನೆಸಾವನ್ನು ಗೆದ್ದ ಟ್ಯೂಶನ್ ಮಾಸ್ಟರ್ ಬನ್ಸಾಲ್/column/manikanth/2009/1118-success-story-tution-teacher-vk-bansal.htmlದೇಹದ ಅರ್ಧ ಭಾಗವೇ ಸ್ವಾಧೀನದಲ್ಲಿಲ್ಲ ಎಂದು ಗೊತ್ತಾದ ನಂತರವೂ ಅಪಾರ ಜೀವನೋತ್ಸಾಹದಿಂದ ಬದುಕುತ್ತಿರುವ; ಸಾವು ಮಗ್ಗುಲಲ್ಲೇ ನಿಂತಿದೆ ಎಂದು ಗೊತ್ತಾದ ನಂತರವೂ ಇನ್ನೂ 20 ವರ್ಷ ಬದುಕ್ತೀನಿ ನೋಡ್ತಾ ಇರಿ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿರುವ ಬನ್ಸಾಲ್- ಚಿಕ್ಕ ಪುಟ್ಟ ಸೋಲಿಂದ ಹತಾಶರಾಗಿ ಗೋಳಾಡುವ ಎಲ್ಲರಿಗೂ ಮಾದರಿ. ಅಲ್ಲವೇ?* ಎಆರ್ ಮಣಿಕಾಂತ್ಇಲ್ಲಿ ಹೇಳಲು ಹೊರಟಿರುವುದು ಒಬ್ಬ ಮಹಾನ್ ಸಾಧಕನ 40292http://kannada.oneindia.com/img/2009/11/18-bansal-tution-master1.jpgnews"> ಸಾಹಸಜೀವಿ, ಪರಮಾರ್ಥ ಸಾಧಕ ಘನಶ್ಯಾಮಾಚಾರ್ | Ghanashyamachar | Mumbai Kannadiga | Achievement | God - ಸಾಹಸಜೀವಿ, ಪರಮಾರ್ಥ ಸಾಧಕ ಘನಶ್ಯಾಮಾಚಾರ್ - Kannada Oneindia

ಸಾಹಸಜೀವಿ, ಪರಮಾರ್ಥ ಸಾಧಕ ಘನಶ್ಯಾಮಾಚಾರ್

Mumbai Kannadiga Ghanashyamachar
ಕೈಕಾಲು ದೇಹದ ಸರ್ವಾಂಗಗಳೂ ಸದೃಢವಾಗಿದ್ದರೂ ನಯಾಪೈಸೆ ಕೆಲಸ ಮಾಡದ ಅಪಾಪೋಲಿಗಳನ್ನು ನೋಡಿದ್ದೇವೆ. ತಮ್ಮ ನಿಷ್ಕ್ರಿಯತೆಗೆ ದೇವರನ್ನು ಬೈದಾಡಿಕೊಳ್ಳುತ್ತಲೇ ಎಲ್ಲವೂ ವಿಧಿಲಿಖಿತ ಎಂಬಂತೆ ಅಬ್ಬೇಪಾರಿ ಜೀವನ ನಡೆಸಿರುವವರನ್ನು ಕಂಡಿದ್ದೇವೆ. ಇಂಥವರ ನಡುವೆ ಯಶಸ್ಸಿನ ತುತ್ತತುದಿಯಲ್ಲಿದ್ದಾಗ ಎರಡೂ ಕಾಲ್ಗಳ ಸ್ವಾಧೀನ ಕಳೆದುಕೊಂಡರೂ, ಎಂಥ ಚಟುವಟಿಕೆಯಿಂದ ಇರುವಂಥ ವ್ಯಕ್ತಿಯೂ ನಾಚುವಂತೆ ಬದುಕಿದ ಕನ್ನಡಿಗ, ಜೀವನವನ್ನು ಅಪಾರವಾಗಿ ಪ್ರೀತಿಸಿದ ಘನಶ್ಯಾಮಾಚಾರ್ ಅವರ ಸಾಧನೆ ನಿಜಕ್ಕೂ ಘನವಾದುದು.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಕೃತಜ್ಞತೆ
* ನಾನು ಹಾಸಿಗೆಯಲ್ಲಿ ಬಿದ್ದಾಗ, ಅಲಾರ್ಮ ಬಾರಿಸಿದಾಗ, ಗೊಣಗುತ್ತ ಏಳುವಾಗ, ನನಗೆ ಕೇಳಲು ಕಿವಿ ಕೊಟ್ಟಿರುವೆಯಲ್ಲ ದೇವಾ ಎಂದು ನಾನು ನಿನ್ನ ಉಪಕಾರ ಸ್ಮರಿಸುವೆ. ಎಷ್ಟೋ ಜನ ಪೂರ್ತಿ ಕಿವುಡರಾಗಿರುತ್ತಾರಲ್ಲ.
* ಸುಪ್ರಭಾತ ಕಾಲದಲ್ಲಿ ಬೆಳಕು ಎಲ್ಲೆಡೆ ಚೆಲ್ಲಿದಾಗ, ನಾನು ಒಂದು ಕಣ್ಣು ತೆರೆದು ಜಗವನೆಲ್ಲ ನೋಡುವೆ. ಒಂದು ಕಣ್ಣು ಉಳಿಸಿರುವೆಯೆಲ್ಲ ದೇವಾ ಎಂದು ನಿನ್ನ ಉಪಕಾರ ಸ್ಮರಿಸುವೆ. ಎಷ್ಟೋ ಜನರಿಗೆ ಎರಡೂ ಕಣ್ಣು ಇರುವುದಿಲ್ಲವಲ್ಲ.
* ನಾನು ಹಾಸಿಗೆಯಲ್ಲೇ ಒದ್ದಾಡುವೆ, ಏಳಲು ಶಕ್ತಿಯೇ ಇಲ್ಲ. ಯಾರೋ ಬಂದು ನನ್ನನ್ನು ಎಬ್ಬಿಸಿ ಕೂಡಿಸುತ್ತಾರೆ. ನನ್ನನ್ನು ಎಬ್ಬಿಸಿ ಕೂಡಿಸುವ ಜನರನ್ನು ಕೊಟ್ಟಿರುವೆಯಲ್ಲಾ ದೇವಾ ಎಂದು ನಿನ್ನ ಉಪಕಾರ ಸ್ಮರಿಸುವೆ. ಎಷ್ಟೋ ಜನ ಹಾಸಿಗೆಯಿಂದ ಏಳುವುದೇ ಇಲ್ಲವಲ್ಲ.
* ನಾನು ಎದ್ದಾಗ ನನಗೆ ಹಲವಾರು ತೊಂದರೆ. ನನಗೆ ಮುಖ ಒರೆಸಲು ಟವೆಲ್ ಸಿಗುವುದಿಲ್ಲ, ಚಹ ಬರಲು ತಡವಾಗುತ್ತದೆಂದು ಹಲುಬುತ್ತೇನೆ. ಸುತ್ತಮುತ್ತ ಸದ್ದು ಕಿರಿಚಾಟ ಕೇಳುತ್ತೇನೆ. ನನ್ನ ಕುಟುಂಬದ ಸಹಕಾರ ನನಗೆ ದೊರೆವಂತೆ ಮಾಡಿದೆಯಲ್ಲ ದೇವಾ ಎಂದು ನಿನ್ನ ಉಪಕಾರ ಸ್ಮರಿಸುವೆ. ಎಷ್ಟೋ ಜನರ ದೈವದಲ್ಲಿ ಈ ಅನುಕೂಲತೆಯೂ ಇರುವದಿಲ್ಲವಲ್ಲ.
* ನಮ್ಮ ಡೈನಿಂಗ್ ಟೇಬಲ್ ಚಿತ್ರಗಳಲ್ಲಿ ತೋರಿಸಿದಂತೆ ಸುಂದರವಾಗಿರುವುದಿಲ್ಲ, ಎಲ್ಲವೂ ಅಸ್ತವ್ಯಸ್ತ. ಆದರೂ ನನಗೆ ಊಟ ದೊರೆವಂತೆ ಮಾಡಿದೆಯಲ್ಲ ದೇವಾ ಎಂದು ನಿನ್ನ ಉಪಕಾರ ಸ್ಮರಿಸುವೆ. ಎಷ್ಟೋ ಜನರ ಹಣೆಯಲ್ಲಿ ಹೊಟ್ಟೆತುಂಬ ಊಟ ದೊರೆವ ಭಾಗ್ಯ ಬರೆದಿರುವುದಿಲ್ಲವಲ್ಲ.
* ನನಗೆ ನಡೆಯಲು ಬರುವುದಿಲ್ಲ. ವ್ಹೀಲ್-ಚೇರ್ ಹಿಡಿದು ಮನೆಯತುಂಬ ಓಡಾಡುವೆ. ಇಷ್ಟಾದರೂ ಚಲಿಸುವಂತೆ ಮಾಡಿದೆಯಲ್ಲ ದೇವಾ ಎಂದು ನಿನ್ನ ಉಪಕಾರ ಸ್ಮರಿಸುವೆ. ಎಷ್ಟೋ ಜನ ನಿಷ್ಕ್ರಿಯರಾಗಿ ಹಾಸಿಗೆಯಲ್ಲೇ ಬಿದ್ದಿರುವರಲ್ಲ.
* ಪ್ರತಿದಿನ ನನ್ನ ಜೋಲುಬಿದ್ದ ಕಾಲು ಮಸಾಜುಮಾಡಲು ಥೆರಪಿಸ್ಟ್ ಬರುತ್ತಾರೆ, ವ್ಯಾಯಾಮ ಮಾಡಿಸುತ್ತಾರೆ. ನಂತರ ನಾನು ಕಾಂಪ್ಯೂಟರ್ ಮುಂದೆ ಕುಳಿತು ಬರೆಯುತ್ತೇನೆ. ನನಗೆ ಬರೆವ ಬುದ್ಧಿ ಹಾಗೂ ಟೈಪ್‌ಮಾಡುವ ಶಕ್ತಿ ನೀಡಿದೆಯಲ್ಲಾ ದೇವಾ ಎಂದು ನಿನ್ನ ಉಪಕಾರ ಸ್ಮರಿಸುವೆ.
* ಕೆಲವು ಸಲ ದೈವವನ್ನು ಹಳಿಯುತ್ತೇನೆ, ಗೋಳಾಡುತ್ತೇನೆ, ದಿನಗಳು ಉರುಳುತ್ತವೆ. ಅದರೂ ದೇವಾ ನಿನ್ನ ಅಪಾರ ಕರುಣೆ ಮರೆಯಲಾರೆ. ನಿನ್ನ ಕರುಣೆಯ ತುಲನೆಯಲ್ಲಿ ನಾನು ತೋರುವ ಕೃತಜ್ಞತೆಯ ಮೊತ್ತವನ್ನು ಹೋಲಿಸಿದರೆ, ನನಗೆ ಪಾಸಾಗುವಷ್ಟು ಅಂಕಗಳೂ ದೊರೆಯಲಿಕ್ಕಿಲ್ಲ. ನನ್ನನ್ನು ಜೀವಂತ ಇಟ್ಟಿರುವೆಯಲ್ಲ ದೇವಾ, ನಾನು ನಿನಗೆ ಕೃತಜ್ಞ.

ಕೃತಜ್ಞತೆ ಎಂಬ ಮೇಲಿನ ಪ್ರಾರ್ಥನೆ ಬರೆದವರು ಶೂರ್ಪಾಲಿ ಘನಶ್ಯಾಮ ಪವಮಾನಾಚಾರ್. ಅವರು ಬರೆದದ್ದು ಇಂಗ್ಲೀಷಿನಲ್ಲಿ. ಅದರ ಭಾವಾನುವಾದವನ್ನು ಇಲ್ಲಿ ಕೊಡಲಾಗಿದೆ. ಅವರು ಮೀರಾ ರೋಡ್‌ನ ಮನೆಯಲ್ಲಿ ಕಳೆದ 11 ವರ್ಷ ವ್ಹೀಲ್-ಚೇರ್ ಮೇಲೆಯೇ ಹೋರಾಟದ ಜೀವನ ನಡೆಸಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡ ಕಥೆ ಪವಾಡಸದೃಶವಾಗಿದೆ.

ನನ್ನ ಮಿತ್ರ ಶೂರ್ಪಾಲಿ ಪವಮಾನಾಚಾರ್ ಭಾಭಾ ಅಣುಶಕ್ತಿಕೇಂದ್ರದಲ್ಲಿ ಅಧಿಕಾರಿಯಾಗಿ ಕೆಲಸಮಾಡಿ ನಿವೃತ್ತರಾಗಿ ಎರಡು ದಶಕಗಳು ಕಳೆದಿವೆ. ಅವರಿಗೆ ಈ ವರ್ಷ ಸಹಸ್ರಚಂದ್ರದರ್ಶನದ ಪರ್ವಕಾಲ. ಈ ಸಮಯದಲ್ಲಿ ಅವರ ವಂಶದ ಚಂದ್ರ (ಏಕಮಾತ್ರ ಪುತ್ರ ಘನಶ್ಯಾಮ) ಅಸ್ತಂಗತನಾದುದು ಅವರ ಕುಟುಂಬಕ್ಕೆ, ಮಿತ್ರಪರಿವಾರಕ್ಕೆ ಒಂದು ರೀತಿಯ ಗ್ರಹಣವನ್ನು ತಂದಿದೆ. ಘನಶ್ಯಾಮ ಅವರ ಜೀವನ ಮತ್ತು ಸಾಧನೆಗಳು ಸ್ತುತ್ಯವಾಗಿವೆ. ದೇಶವಿದೇಶಗಳಲ್ಲಿ ಸಂಚರಿಸುತ್ತ ತಮ್ಮ ಜೀವನದಲ್ಲಿಯ ಯಶದ ಶಿಖರ ತಲುಪಿದಾಗ ಎರಡುಕಾಲುಗಳನ್ನು ಕಳೆದುಕೊಂಡು ವಿಕಲಾಂಗರಾದರು. ಆದರೂ ಸಾಧಿಸುವ ಛಲವನ್ನು, ಸಂಕಲ್ಪಶಕ್ತಿಯನ್ನು ತೋರಿಸಿ ಮಹಾನ್ ಸಾಧನೆ ಮಾಡಿದವರು ಘನಶ್ಯಾಮ. ಸಕಾರಾತ್ಮಕ ಮನೋಭಾವ ಹಾಗೂ ಸಮಾಜಸೇವೆಗೈಯುವ ಕರ್ಮಯೋಗ ಅವರ ಬಾಳಿಗೆ ಒಂದು ಪೂರ್ಣತೆಯನ್ನು ತಂದುಕೊಟ್ಟಿತು. ಅವರು ದೇವರನ್ನೆಂದೂ ದೂರಲಿಲ್ಲ, ತಮ್ಮ ಪಾಲಿನ ಕರ್ತವ್ಯವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದರು, ಆದರ್ಶ ಜೀವನ ನಡೆಸಿದರು.

ಘನಶ್ಯಾಮ ಮುಂಬೈಯಲ್ಲೇ ಜನಿಸಿದರು(5, ಮಾರ್ಚ್,1952). ಮನೆಯಲ್ಲಿ ಕನ್ನಡ ವಾತಾವರಣ. ಕಲಿತದ್ದು ಚಕಾಲಾದ ಹೋಲಿ ಫ್ಯಾಮಿಲಿ ಹೈಸ್ಕೂಲ್‌ನಲ್ಲಿ. ಮುಂದೆ ಭವನ್ಸ್ ಕಾಲೇಜಿನಿಂದ ಬಿಎಸ್.ಸಿ. ಪದವಿ. ಮುಂಬೈ ವಿಶ್ವ ವಿದ್ಯಾಲಯದಿಂದ ಕರೋಜನ್ ಕೆಮೆಸ್ಟ್ರೀಯಲ್ಲಿ ಎಮ್‌ಎಸ್‌ಸಿ ಡಿಗ್ರಿ ಪಡೆದರು. ಭವನ್ಸ್ ಕಾಲೇಜಿನಲ್ಲಿ ಕೆಲಕಾಲ ಅಧ್ಯಾಪಕರಾಗಿದ್ದರು. ಬಿಸ್‌ನೆಸ್ ಎಡ್‌ಮಿನ್ಟ್ರೇಶನ್ ಹಾಗೂ ಮಾರ್ಕೆಟಿಂಗ್ ಮೆನೆಜ್‌ಮೆಂಟ್‌ನಲ್ಲಿ ಎರಡು ಡಿಪ್ಲೊಮಾಗಳನ್ನು ಪಡೆದರು. ಭಾರತ ಸರ್ಜಿಕಲ್‌ದಲ್ಲಿ ಶಿಫ್ಟ್-ಇನ್-ಚಾರ್ಜ್ ಆಗಿ ಕೆಲಸ ಮಾಡಿದರು. ನಂತರ ಟಿ.ಐ.ಪಿ.ಸಿ.ಓ.ದಲ್ಲಿ ಪ್ರೊಡಕ್ಷನ್ ಇನ್-ಚಾರ್ಜ್ ಆದರು. ದುಬೈಗೆ ಪ್ರವಾಸ ಮಾಡಿ ಅಲ್ಲಿ ಬೆಸ್ಟ್ ಫುಡ್ ಕಾರ್ಪೊರೇಶನ್‌ದಲ್ಲಿ ಸೇಲ್ಸ್ ಕೊ-ಅರ್ಡಿನೇಟರ್ ಆಗಿ ಕೆಲಸಮಾಡಿದರು. 1982ರಿಂದ ಥರ್ಮ್ಯಾಕ್ಸ್ ಲಿಮಿಟೆಡ್ ಕಂಪನಿಯ ಕೆಮಿಕಲ್ ಡಿವಿಜನ್‌ನಲ್ಲಿ ಎರಡು ದಶಕಗಳಕಾಲ ದುಡಿದರು. ಅಲ್ಲಿ ಬಿಸ್‌ನೆಸ್ ಮೆನೆಜರ್ ಹುದ್ದೆಗೆ ಬಡತಿ ಪಡೆದರು. ಕೆಲಕಾಲ ಪುಣೆಯಲ್ಲಿ ವಾಸ. ಕಂಪನಿಯ ಅಭಿವೃದ್ಧಿಗಾಗಿ, ವಿದೇಶಗಳಲ್ಲಿ ಮಾರುಕಟ್ಟೆ ಪಡೆಯುವಲ್ಲಿ ಯಶಸ್ವೀ ಕಾರ್ಯಾಚರಣೆ. ದೇಶವಿದೇಶಗಳಲ್ಲಿ ನಡೆದ ಪ್ರದರ್ಶನ, ವಿಚಾರಸಂಕಿರಣಗಳಲ್ಲಿ ಭಾಗವಹಿಸಿದರು.

1998ರಲ್ಲಿ ಸ್ಪೈನಲ್ ಇಂಜುರಿಯಿಂದಾಗಿ ಕಾಲುಗಳಲ್ಲಿಯ ತ್ರಾಣ ಹೋಯಿತು. ಮನೆಯಲ್ಲೇ ಕುಳಿತುಕೊಳ್ಳಬೇಕಾಯ್ತು. ಇವರ ಕಾರ್ಯಕುಶಲತೆಯನ್ನು ಮೆಚ್ಚಿದ ಕಂಪನಿ ಇವರಿಗೆ ಮನೆಯಲ್ಲಿದ್ದುಕೊಂಡೇ ಕೆಲಸ ಮಾಡಲು ಅನುಮತಿ ಕೊಟ್ಟರು. ಸರ್ಫಿಂಗ್ ಮೆನೆಜರ್ ಆಗಿ ಕೆಲಸ ಮುಂದುವರಿಸಿದರು. ಮೂರು ವರ್ಷಗಳ ನಂತರ ಐಚ್ಛಿಕ ನಿವೃತ್ತಿ ಪಡೆದರು.

ಇವರ ದೇಹದ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಇವರ ಚಿಕಿತ್ಸೆ ಭಕ್ತಿವೇಂದಾಂತ ಆಸ್ಪತ್ರೆಯಲ್ಲಿ ನಡೆಯಿತು. ಅಲ್ಲಿ ಪೇಶಂಟ್ ಆಗಿ ಹೋದವರು ಅಲ್ಲಿ ಕನ್ಸ್‌ಲ್ಟಂಟ್ ಆಗಿ ಕೆಲಸಮಾಡ ತೊಡಗಿದರು. ಆಸ್ಪತ್ರೆಯವರು ಇವರಿಗಾಗಿ ಒಂದು ಅಫೀಸನ್ನು ತೆರೆದುಕೊಟ್ಟರು, ಅಸ್ಪತ್ರೆಗೆ ಸಮೀಪದಲ್ಲಿ ಮನೆ ಕೊಡಿಸಿದರು. ಇವರು ಆಫೀಸಿಗೆ ವ್ಹೀಲ್-ಚೇರ್ ಮೇಲೆ ಹೋಗುತ್ತಿದ್ದರು. ಅವರ ಸೇವೆಗೆ ಆಸ್ಪತ್ರೆಯ ಜವಾನರಿಬ್ಬರು ಬರುತ್ತಿದ್ದರು. ಇವರ ಸೊಂಟದ ಕೆಳಗಿನ ದೇಹ ನಿಷ್ಕ್ರಿಯವಾಗಿತ್ತು. ಇವರು ಹತಾಶರಾಗಲಿಲ್ಲ. ತಲೆ ಚೆನ್ನಾಗಿ ಕೆಲಸ ಮಾಡುತ್ತಿತ್ತು. ಇವರು ಟೆಲಿಫೊನ್ ಮತ್ತು ಕಂಪ್ಯೂಟರ್ ಬಳಸಿ ಅಗಾಧವಾಗಿ ಕೆಲಸ ಮಾಡಿತೋರಿಸಿದರು ನಾಲೇಜ್ ಮೆನೇಜ್‌ಮೆಂಟ್ ಕನ್ಸ್‌ಲ್ಟಂಟ್ ಆಗಿ ಕೆಲಸ ಮಾಡಿದರು. ಆಸ್ಪತ್ರೆಯ ಕಾರ್ಯಗಳ ಕ್ಯಾಲೆಂಡರ್ ತಯಾರಿಕೆ, ವಾರದ ಪ್ರಗತಿಯ ಬಗ್ಗೆ ಆಡಳಿತ ವರ್ಗಕ್ಕೆ ವರದಿಯ ಪೂರೈಕೆ, ವೆಬ್‌ಸೈಟ್ ವಿಕಾಸ ಹಾಗೂ ಮೇಲ್ವಿಚಾರಣೆ, ರೋಗಗಳ ಸರ್ವೇ ಹಾಗೂ ಡಾಕ್ಯುಮೆಂಟೇಶನ್ ಮಾಡುವುದರಲ್ಲಿ ಪ್ರಗತಿ ಸಾಧಿಸಿ ಆಸ್ಪತ್ರೆಯಲ್ಲಿ ಅನನ್ಯ ಸ್ಥಾನ ಗಳಿಸಿದರು. ಶೇರ್ ಯುವರ್ ಕೇರ್ ಎಂಬ ವಿಭಾಗದಲ್ಲಿ ಕೆಲಸ ಮಾಡುತ್ತ ರೋಗಿಗಳಿಗೆ ಅವಶ್ಯಕವಾದ ಹಣವನ್ನು ಚಾರಿಟೆಬಲ್ ಸಂಸ್ಥೆಗಳಿಂದ ಲಕ್ಷಾವಧಿ ರೂಪಾಯಿ ದಾನ ರೂಪದಲ್ಲಿ ಪಡೆದರು, ಜನಹಿತ ಸಂಪರ್ಕಾಧಿಕಾರಿಯಂತೆ ಕೆಲಸ ಮಾಡಿದರು. ಡೈರೆಕ್ಟರ್ ಕೆ. ವೆಂಕಟರಾಮನ್ ಹೇಳುವಂತೆ ಇವರು ಆ ವಿಭಾಗದ ಬೆನ್ನೆಲುಬೇ ಆಗಿದ್ದರು.

ಇವರದು ಕಾನ್ವೆಂಟ್ ಸ್ಕೂಲಿನ ಶಿಕ್ಷಣ. ಆದ್ದರಿಂದ ಕನ್ನಡ ಓದಲು ಬರೆಯಲು ಬರುತ್ತಿರಲಿಲ್ಲ. ತತ್ತ್ವಜ್ಞಾನದಲ್ಲಿ ಆಸಕ್ತರಾದ ಇವರು ಕನ್ನಡದಲ್ಲಿದ್ದ ದಾಸಸಾಹಿತ್ಯದ ಆಭ್ಯಾಸಮಾಡಲು ಕನ್ನಡ ಕಲಿತರು. ಜಗನ್ನಾಥದಾಸರ ಹರಿಕಥಾಮೃತಸಾರವನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದರು, ಜೊತೆಗೆ ವಿವರಣೆಯನ್ನೂ ಬರೆದರು. ಎರಡುವರೆ ಸಾವಿರ ಪುಟಗಳ ಗ್ರಂಥ ಸಿದ್ಧವಾಯಿತು. ವಿಷ್ಣುಸಹಸ್ರನಾಮದ ಬಗ್ಗೆ ಒಂದು ಗ್ರಂಥವನ್ನು ಬರೆಯಲು ಪ್ರಾರಂಭಿಸಿದರು. ಅದು ಅರ್ಧದಷ್ಟು ಆಗಿತ್ತು. ಅವರು ದೇವರನ್ನು ಎಂದೂ ದೂರಲಿಲ್ಲ. ಮೇಲೆ ಉದ್ಧರಿಸಿದ ಪ್ರಾರ್ಥನೆಯೇ ಅದಕ್ಕೆ ಸಾಕ್ಷಿ. ಅಂಗವಿಕಲರಾಗಿದ್ದರೂ, ಹಲವಾರು ರೋಗರುಜಿನಗಳ ಬಾಧೆಗೆ ಬಲಿಯಾಗಿದ್ದರೂ, ಅವರ ಸಾಹಸ ಹಾಗೂ ಸಾಧನೆಗಳು ನಿರಂತರವಾಗಿ ಮುಂದುವರೆದವು. ಅವರ ಹೆಂಡತಿ ಪ್ರೊ.ವೀಣಾ ಇಂಗ್ಲಿಷ್ ವಿಷಯದ ಅಧ್ಯಾಪಕಿ. ಮಗ ಲೋಕನಾಥ ಫೈನಲ್ ಸಿ.ಎ. ತಲುಪಿದವ. ಜೊತೆಗೆ ಜರ್ಮನಿ ಹಾಗೂ ಚೈನಾ ಭಾಷಗಳ ತಜ್ಞ. ಇಬ್ಬರೂ ಘನಶ್ಯಾಮರಿಗೆ ಮಾನಸಿಕ ಹಾಗೂ ಆಧ್ಯಾತ್ಮಿಕ ಸಹಕಾರ ನೀಡಿದರು, ಅವರ ಸಾಧನೆಗೆ ಬೆಂಬಲವಾಗಿ ನಿಂತರು. ತಂದೆ ಪವಮಾನಾಚಾರ್ಯರು ನಿವೃತ್ತಿಯ ಹಾಗೂ ಶ್ರೇಯಸ್ಸಿನ ಮಾರ್ಗ ತೋರಿಸಿದರು.

ಸೋಮವಾರ 24 ಅಗಸ್ಟ್ 2009 ಬ್ರಾಹ್ಮೀ ಮೂಹೂರ್ತದಲ್ಲಿ ಘನಶ್ಯಾಮ ಬ್ರೇನ್ ಹ್ಯಾಮರೇಜ್ ಆಗಿ ಅಸು ನೀಗಿದರು. ಅವರದು ಸಾಧನ ಶರೀರ. ನೆತ್ತಿಯಿಂದ ಪ್ರಾಣಹೋದದ್ದು ಶುಭಸೂಚಕ. ಅವರ ಆತ್ಮಕ್ಕೆ ಚಿರಶಾಂತಿ ಕೋರಲು ಆಪ್ತಮಿತ್ರರೊಂದಿಗೆ ಇಡೀ ಭಕ್ತಿವೇದಾಂತ ಆಸ್ಪತ್ರೆಯೇ ನೆರೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+