277524nandan nilekaniಇನ್ಫಿ ಉದ್ಯೋಗಿಗಳಿಗೆ ಎನ್ ಜಿಒದಲ್ಲಿ ಆಫರ್/news/2009/03/25/infy-offers-ngo-stint-to-staff-at-half-pay.htmlನ್ಯೂಯಾರ್ಕ್, ಮಾ. 25 : ಆರ್ಥಿಕ ಬಿಕ್ಕಟ್ಟಿನಿಂದ ಸೇವಾ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್ ತನ್ನ ಹೊಸ ನೌಕರರಿಗೆ ಎನ್ ಜಿಒದಲ್ಲಿ ಕೆಲಸದ ಆಫರ್ ನೀಡಿದೆ. ಇದಕ್ಕಾಗಿ ಕಂಪನಿ ತಾನು ನಿಗದಿಪಡಿಸಿದ್ದ ವೇತನದ ಪೈಕಿ ಶೇ. 50ರಷ್ಟನ್ನು ನೀಡಲಿದೆ ಎಂದು ಕಂಪನಿ ಮುಖ್ಯಸ್ಥ ನಂದನ್ ನಿಲೇಕಣಿ ಹೇಳಿದ್ದಾರೆ. ಕಳೆದ ವರ್ಷವೇ ನಾವು ಹೊಸದಾಗಿ 18,000 ಉದ್ಯೋಗಿಗಳನ್ನು ನೇಮಕ 35492http://kannada.oneindia.com/img/2009/03/25-nilekani6.jpg277524nandan nilekaniಗುರುತಿನ ಚೀಟಿ ಯೋಜನೆ ನಿಲೇಕಣಿ ನೇತೃತ್ವ ?/news/2009/06/23/nandan-nilekani-may-get-charge-of-national-id-card.htmlನವದೆಹಲಿ, ಜೂ. 23 : ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಇನ್ ಫೋಸಿಸ್ ಮುಖ್ಯಸ್ಥ ನಂದನ್ ನಿಲೇಕಣಿ ಅವರನ್ನು ಕೇಂದ್ರ ಸರಕಾರ ಅವರನ್ನು ಮಹತ್ವಾಕಾಂಕ್ಷೆಯ ಯೋಜನೆಯಾದ ರಾಷ್ಟ್ರೀಯ ಗುರುತಿನ ವಿತರಣೆ ಕಾರ್ಯಕ್ರಮದ ಮುಖ್ಯಸ್ಥರನ್ನಾಗಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ದೇಶದ ಪ್ರತಿಯೊಬ್ಬರಿಗೂ ಪ್ರತ್ಯೇಕ ಗುರುತಿನ ಚೀಟಿ ನೀಡುವ ಕೇಂದ್ರ ಸರಕಾರದ ಯೋಜನೆಗೆ ಪ್ರಧಾನಮಂತ್ರಿ ಅವರು ನಂದನ್ ನಿಲೇಕಣಿ ಅವರನ್ನು ನೇಮಿಸಿ 37521http://kannada.oneindia.com/img/2009/06/23-nilekani4.jpg277524nandan nilekaniಇನ್ಫೋಸಿಸ್ ಆಡಳಿತ ಮಂಡಳಿಗೆ ನಿಲೇಕಣಿ ರಾಜೀನಾಮೆ /news/2009/06/25/nilekani-to-step-down-as-infosys-board-member.htmlಬೆಂಗಳೂರು, ಜೂ. 25 : ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ ಯೋಜನೆಗೆ ಚೇರಮನ್ ರಾಗಿ ನೇಮಕಗೊಂಡಿರುವ ನಂದನ್ ನಿಲೇಕಣಿ ಅವರು ಇನ್ಫೋಸಿಸ್ ಸಹಸಂಸ್ಥಾಪಕ ಹುದ್ದೆ ಹಾಗೂ ಅಡಳಿತ ಮಂಡಳಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುರುವಾರ ಕೇಂದ್ರದ ಸರಕಾರ ಗುರುತಿನ ಚೀಟಿ ವಿತರಣೆ ಯೋಜನೆಗೆ ನಿಲೇಕಣಿಯವರನ್ನು ಚೇರಮನ್ ರಾಗಿ ಅಧಿಕೃತ ಆದೇಶ ಹೊರಡಿಸಿದೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ 37576http://kannada.oneindia.com/img/2009/06/25-nilekani6.jpg277524nandan nilekaniಗುರುತು ಚೀಟಿ ಯಜ್ಞಕ್ಕೆ ನಂದನ್ ಸಮರ್ಪಣೆ/news/2009/07/09/infosys-farewell-to-nandan-nilekani.htmlಬೆಂಗಳೂರು,ಜು. 9 : 28 ವರ್ಷಗಳ ಹಿಂದೆ ಎನ್ಆರ್ ನಾರಾಯಣ ಮೂರ್ತಿ ಮತ್ತು ಐವರು ಸ್ನೇಹಿತರ ಜೊತೆ ಸೇರಿ ಇಂದು ವಿಶ್ವದ ಅಗ್ರಮಾನ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಭಾರತ ದೇಶಕ್ಕೆ ಅರ್ಪಿಸಿದ ನಂದನ್ ನಿಲೇಕಣಿ ಅವರನ್ನು ಇನ್ಫೋಸಿಸ್ ಸಂಸ್ಥೆಯೇ ಇಂದು ದೇಶದ ಸೇವೆಗಾಗಿ ಅರ್ಪಿಸುತ್ತಿದೆ.ವಿಶ್ವದ ಅಗ್ರಮಾನ್ಯ ಹತ್ತು ಅತ್ಯುತ್ತಮ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಕಂಪನಿಯನ್ನು 37896http://kannada.oneindia.com/img/2009/07/09-nilekani6.jpg277524nandan nilekaniನಿಲೇಕಣಿಯನ್ನು ಕ್ಯಾಂಪಸ್ಸಿನಿಂದ ಬೀಳ್ಕೊಟ್ಟ ಕ್ಷಣ./news/2009/07/10/infosians-bid-farewell-to-nandan-nilekani.htmlಬೆಂಗಳೂರು, ಜು. 10 : Parting is always painful: ಗುರುವಾರ ಸಂಜೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಸಭಾಂಗಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಕಂಪನಿ ಸಭಾಂಗಣದಲ್ಲಿ ಸುಮಾರು 2500 ಉದ್ಯೋಗಿಗಳು ತಮ್ಮ ನೆಚ್ಚಿನ ಮುಖ್ಯಸ್ಥ ಹಾಗೂ ಇನ್ಫೋಸಿಸ್ ಕಂಪನಿಯನ್ನು ಹೆಮ್ಮರವಾಗಿ ಬೆಳೆಸಿದ, ಸದ್ಯ ರಾಷ್ಟ್ರೀಯ ಗುರುತಿನ ಚೀಟಿ ಯೋಜನೆಯ ಮುಖ್ಯಸ್ಥರಾಗಿ ದೇಶ ಸೇವೆಗೆ ನಿಯುಕ್ತಿಗೊಂಡಿರುವ ನಂದನ್ ನಿಲೇಕಣಿ 37901http://kannada.oneindia.com/img/2009/07/10-nandan-nilekani1.jpg135847vishweshwar bhatಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg135847vishweshwar bhatಎಂಟಿಆರ್ : ಆಹಾರ ಸಂಸ್ಕೃತಿಗೆ ಹೊಸರುಚಿ/column/bhat/2009/0129-meet-yajnanarayana-founder-mtr-bengaluru.htmlಆ ಪುಸ್ತಕ ಓದುತ್ತಿದ್ದಾಗ ನನಗೆ ಹೋಟೆಲ್ ಮಾಲೀಕರೊಬ್ಬರ ಜೀವನಕಥನ ಓದುತ್ತಿದ್ದೇನೆಂದು ಅನಿಸಲೇ ಇಲ್ಲ. ಅದು ಕೇವಲ ಹೋಟೆಲ್ ಉದ್ಯಮಿಯೊಬ್ಬರ ಕತೆಯೋ, ಕೈಫಿಯತ್ತೋ ಆಗಿದ್ದಿದ್ದರೆ ಅದರ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಲೂ ಇರಲಿಲ್ಲ. ಒಬ್ಬ ಅಪರೂಪದ ಸಾಧಕ,ದಣಿವರಿಯದ ಶ್ರಮಿಕ, ಹಿರಿಯಣ್ಣನಂಥ ಬೋಧಕ ಹಾಗೂ ಹಲವು ತಲೆಮಾರುಗಳನ್ನು ಮುನ್ನಡೆಸುವ ಮಾರ್ಗದರ್ಶಕ ಹೀಗೆ ಏಕಕಾಲಕ್ಕೆ ಅನೇಕ ಗುಣಗಳಿಂದ ಬದುಕಿಗೆ ಸ್ಫೂರ್ತಿ ನೀಡುವ ಒಬ್ಬ 34361http://kannada.oneindia.com/img/2009/01/29-yn-maiya-kc-reddy.jpg135847vishweshwar bhatಜಾಲಿಯ ಮರವು ನೆರಳಲ್ಲ, ಗೌರವ ಡಾಕ್ಟರೇಟ್ ಸ್ಥಿರವಲ್ಲ/column/bhat/2009/0226-bs-yeddyurappa-and-honorary-doctorate.htmlರುಂಡ ಮುಂಡಗಳನ್ನು ಒಂದು ಮಾಡುವಂತೆ ಮುಚ್ಚುವ ಉಸಿರುಗಟ್ಟಿಸುವ ಹಾರಗಳು, ಅರ್ಹರನ್ನೂ ಅನರ್ಹರನ್ನಾಗಿ ಮಾಡುವ ಗೌರವ ಡಾಕ್ಟರೇಟ್ ಬಿರುದುಬಾವಲಿಗಳನ್ನು ಒಲ್ಲೆ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಕಿವಿತುಂಬಿ ತೂತುಬೀಳುವಂತೆ ಮಾಡುವ ಬಹುಪರಾಕ್ ಗಳನ್ನು ಕೂಡ ನಿರಾಕರಿಸಲಿ. ಇವನ್ನೆಲ್ಲ ನಿರಾಕರಿಸಿ ದೊಡ್ಡವರಾಗುವುದಕ್ಕಿಂತ ನಿಸ್ವಾರ್ಥ ಸೇವೆಯಿಂದ ದೊಡ್ಡವರೆನ್ನಿಸಿಕೊಳ್ಳಲಿ. ಜೊತೆಗೆ ಎಂಟನಿ ಮತ್ತು ಫರ್ನಾಂಡಿಸ್ ಹಾಕಿಕೊಟ್ಟಿರುವ ಮೇಲ್ಪಂಕ್ತಿಯ ಹಾದಿಯಲ್ಲಿ ತುಸುವಾದರೂ ಸಾಗಲಿ.* ವಿಶ್ವೇಶ್ವರ ಭಟ್ 34883http://kannada.oneindia.com/img/2009/02/26-yeddyurappa12.jpg135847vishweshwar bhatದುಡ್ಡಿನಿಂದ ಸುಖ ನೆಮ್ಮದಿ ಖರೀದಿಸಬಹುದೆ?/column/bhat/2009/0312-where-is-happiness.htmlಬಚ್ಚಲಿನ ಟೈಲ್ಸ್ ಕೆಳಗೆ, ಮಂಚದ ಅಡಿಯಲ್ಲಿ, ಬೀರುವಿನಲ್ಲಿ, ಬ್ಯಾಂಕುಗಳಲ್ಲಿ ಕಾಂಚಾಣವನ್ನು ತುಂಬಿಕೊಂಡವರು ಮಹಾ ಸುಖಿಗಳೆಂದು ಭಾವಿಸಿರುತ್ತಾರೆ. ಅಂಥವರಿಗೆ ಕಂತೆ ಕಂತೆ ಕಾಪಾಡಿಕೊಳ್ಳುವುದೇ ಚಿಂತೆ. ಸುಂದರ ಹೆಂಡತಿಯಿದ್ದರೆ ಬೇರೆಯವರು ನೋಡಿಯಾರೆಂಬ ಚಿಂತೆ. ಇನ್ನು ಸಂತಸ ಎಂಬುದು ಸಂತೆಯಲ್ಲಿ ಸೂಜಿ ಹುಡುಕಿದಂತೆ. ಸಂತೋಷ, ಖುಷಿ, ನೆಮ್ಮದಿ ಇರುವುದಾದರೂ ಎಲ್ಲಿ? ಹುಡುಕಿಕೊಳ್ಳಿ. ಸಿಗದಿದ್ದರೆ ಚಿಂತೆ ಮಾಡಬೇಡಿ, ದುಃಖಪಡಬೇಡಿ.* ವಿಶ್ವೇಶ್ವರ ಭಟ್ಇತ್ತೀಚೆಗೆ ಪತ್ರಿಕೆಯಲ್ಲೊಂದು 35179http://kannada.oneindia.com/img/2009/03/12-happiness1.jpg135847vishweshwar bhatಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg483963ಕೇಂದ್ರ ಸರಕಾರಗೆದ್ದವರೆಲ್ಲ ಸಂಪುಟ ರಚಿಸುವಾಗ ಎಡವಿ ಬಿದ್ದವರೇ!/column/bhat/2009/0528-govt-formation-bottle-neck-for-any-govt.htmlಪ್ರಾಯಶಃ ಸೋನಿಯಾಗಾಂಧಿ ಹಾಗೂ ಡಾ. ಮನಮೋಹನ್ ಸಿಂಗ್ ಅವರು ಜವಾಹರಲಾಲ್ ನೆಹರು ಅವರ ಮಾತುಗಳನ್ನು ಕೇಳಿಸಿಕೊಂಡರೆ ಈ ಸಂದರ್ಭದಲ್ಲಿ ತುಸು ಸಮಾಧಾನ ಸಿಗಬಹುದು. ನೀವೆಷ್ಟೇ ಪ್ರಬಲ, ಸಮರ್ಥ ನಾಯಕರಿರಬಹುದು. ಅದು ನಿಜಕ್ಕೂ ಪರೀಕ್ಷೆಗೊಳಗಾಗುವುದು ಸಚಿವ ಸಂಪುಟವನ್ನು ರಚಿಸುವಾಗ ಹಾಗೂ ಅದನ್ನು ವಿಸ್ತರಿಸುವಾಗ. ಇವೆರಡರಲ್ಲಿ ನೀವು ಯಶಸ್ವಿಯಾದರೆ ನಿಮ್ಮ ಸರಕಾರಕ್ಕೆ ಸದ್ಯ ಯಾವುದೇ ಅಪಾಯವಿಲ್ಲ. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. 36964http://kannada.oneindia.com/img/2009/05/28-neharu-cabinet1.jpg483963ಕೇಂದ್ರ ಸರಕಾರನಕ್ಸಲರು ಭಯೋತ್ಪಾದಕರು, ಪಿ ಚಿದಂಬರಂ/news/2009/06/22/centre-bans-cpi-m-declares-it-a-terror-outfit.htmlನವದೆಹಲಿ, ಜೂ. 22 : ಕೊನೆಗೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ದಿಟ್ಟ ನಿರ್ಧಾರವೊಂದನ್ನು ಏಕಾಏಕಿ ಕೈಗೊಂಡಿದೆ. ನಕ್ಸಲ್ ಚಟುವಟಿಕೆಗಳನ್ನು ನಡೆಸುತ್ತಿರುವ ಸಿಪಿಐ(ಮಾವೋ), ಉಲ್ಫಾ, ಲಷ್ಕರ್ ಇ ತೊಯ್ಬಾ, ಸಿಮಿ ಸಂಘಟನೆ ಸೇರಿ ದೇಶದ ವಿವಿಧ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ 34 ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಯೆಂದು ಅಧಿಕೃತವಾಗಿ ಸೋಮವಾರ ಘೋಷಿಸಿ ಅದರ ಮೇಲೆ ನಿಷೇಧ ಹೇರಿ 37508http://kannada.oneindia.com/img/2009/06/22-p-chidambaram1.jpg483963ಕೇಂದ್ರ ಸರಕಾರರಸಗೊಬ್ಬರಗಳ ಪೂರೈಕೆಗೆ ಕೇಂದ್ರಕ್ಕೆ ಸಿಎಂ ಪತ್ರ/news/2009/07/14/yeddyurappa-urges-centre-to-supply-fertilizers.htmlಬೆಂಗಳೂರು, ಜು. 14 : ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಭರದಿಂದ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ತುರ್ತಾಗಿ ಅಗತ್ಯವಿರುವ ಯೂರಿಯಾ, ಕಾಂಪ್ಲೆಕ್ಸ್ ಹಾಗೂ ಎಂ.ಒ.ಪಿ. ರಸಗೊಬ್ಬರಗಳನ್ನು ಬೇಡಿಕೆಗನುಗುಣವಾಗಿ ಸಮರ್ಪಕವಾಗಿ ಸರಬರಾಜು ಮಾಡಲು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಕೃಷಿ ಸಚಿವ ಶರದ್‌ ಪವಾರ್ ಮತ್ತು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವ 37964http://kannada.oneindia.com/img/2009/07/14-yeddyurappa11.jpg483963ಕೇಂದ್ರ ಸರಕಾರಯಾರೇ ಬರಲಿ, ಹೋಗಲಿ ಸರಕಾರವೆಂಬ ಕತ್ತೆ ವರ್ತಿಸೋದೇ ಹೀಗೆ/column/bhat/2009/0801-our-govt-works-like-this-only.htmlಸರಕಾರ ಅಂದ್ರೆ ದಪ್ಪ ಚರ್ಮದ ಕಿವುಡ ಕತ್ತೆ ಇದ್ದಂತೆ! ಎಷ್ಟೇ ಹೊಡೆಯಿರಿ, ಬಡಿಯಿರಿ, ಲಬೋ ಅಂತ ಬಾಯಿಬಡಿದುಕೊಳ್ಳಿ ಉಹುಂ ಅದಕ್ಕೇನೂ ಆಗುವುದಿಲ್ಲ. ಹೋಗಲಿ, ಅದರ ಮುಂದೆ ಅಂಗಾತವೋ, ಬೋರಲೋ ಬಿದ್ದು ಸಾಯಿರಿ, ಅದು ಜಪ್ಪಯ್ಯ ಎನ್ನುವುದಿಲ್ಲ. ಅದು ಅದರ ಪಾಡಿಗೆ ಹಾಯಾಗಿ ಏನೂ ನಡೆದೇ ಇಲ್ಲ ಎಂಬಂತೆ ಸುಮ್ಮನಿದ್ದುಬಿಡುತ್ತದೆ. ಹೊಸ ಮುಖ್ಯಮಂತ್ರಿ, ಮಂತ್ರಿಗಳು ಬರಲಿ, ಹೋಗಲಿ, ಸರಕಾರ 38363http://kannada.oneindia.com/img/2009/08/01-nandan-nilekani3.jpg483963ಕೇಂದ್ರ ಸರಕಾರಉಪಚುನಾವಣೆ ಪ್ರಚಾರ ಆಖಾಡಕ್ಕೆ ಕೃಷ್ಣ/news/2009/08/06/sm-krishna-likely-to-join-by-election-campaign.htmlಬೆಂಗಳೂರು, ಆ. 6 : ಉಪಚುನಾವಣೆ ಪ್ರಚಾರ ಆಖಾಡಕ್ಕೆ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಆಗಸ್ಟ್ 8 ರಂದು ನಗರಕ್ಕೆ ಆಗಮಿಸಲಿದ್ದಾರೆ. ಪಕ್ಷದ ಚುನಾವಣಾ ಪ್ರಚಾರ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ. ಎಲ್ಲಾ ಐದು ಕ್ಷೇತ್ರಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕೃಷ್ಣ ಪ್ರಚಾರಕ್ಕೆ ಇಳಿಯುತ್ತಿರುವುದರಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಉಂಟಾಗಿದೆ. ಹೊಸ 38453http://kannada.oneindia.com/img/2009/08/06-sm-krishna1e.jpgnews"> ಯಾರೇ ಬರಲಿ, ಹೋಗಲಿ ಸರಕಾರವೆಂಬ ಕತ್ತೆ ವರ್ತಿಸೋದೇ ಹೀಗೆ | Central govt | Administration | Nandan Nilekani | Vishweshwar Bhat | ಕೇಂದ್ರ ಸರಕಾರ | ನಂದನ್ ನಿಲೇಕಣಿ | ಇಂಕ್ | ವಿಶ್ವೇಶ್ವರ ಭಟ್ - Kannada Oneindia

ಯಾರೇ ಬರಲಿ, ಹೋಗಲಿ ಸರಕಾರವೆಂಬ ಕತ್ತೆ ವರ್ತಿಸೋದೇ ಹೀಗೆ

Nandan Nilekani
ಸರಕಾರ ಅಂದ್ರೆ ದಪ್ಪ ಚರ್ಮದ ಕಿವುಡ ಕತ್ತೆ ಇದ್ದಂತೆ! ಎಷ್ಟೇ ಹೊಡೆಯಿರಿ, ಬಡಿಯಿರಿ, ಲಬೋ ಅಂತ ಬಾಯಿಬಡಿದುಕೊಳ್ಳಿ ಉಹುಂ ಅದಕ್ಕೇನೂ ಆಗುವುದಿಲ್ಲ. ಹೋಗಲಿ, ಅದರ ಮುಂದೆ ಅಂಗಾತವೋ, ಬೋರಲೋ ಬಿದ್ದು ಸಾಯಿರಿ, ಅದು ಜಪ್ಪಯ್ಯ ಎನ್ನುವುದಿಲ್ಲ. ಅದು ಅದರ ಪಾಡಿಗೆ ಹಾಯಾಗಿ ಏನೂ ನಡೆದೇ ಇಲ್ಲ ಎಂಬಂತೆ ಸುಮ್ಮನಿದ್ದುಬಿಡುತ್ತದೆ. ಹೊಸ ಮುಖ್ಯಮಂತ್ರಿ, ಮಂತ್ರಿಗಳು ಬರಲಿ, ಹೋಗಲಿ, ಸರಕಾರ ಎಂಬ ಕತ್ತೆ ಮಾತ್ರ ಪಟ್ಟಾಗಿ ಕುಳಿತಿರುತ್ತದೆ. ಸರಕಾರಕ್ಕೆ ಆ ಭಗವಂತ ಕಣ್ಣನ್ನು ಕೊಟ್ಟು ಕುರುಡನನ್ನಾಗಿ ಮಾಡಿದ, ಮಾಡಲಿ. ಕಿವಿ ಕೊಟ್ಟು ಕಿವುಡನನ್ನಾಗಿ ಮಾಡಿದ, ಮಾಡಲಿ. ಹೃದಯವನ್ನು ಕೊಟ್ಟು ಭಾವನೆಯನ್ನೂ ಕಿತ್ತುಕೊಂಡ.

ಹೀಗಾಗಿ ಯಾರೇ ಬರಲಿ, ಹೋಗಲಿ, ಸರಕಾರವೆಂಬುದು ಬದಲಾಗುವುದಿಲ್ಲ ಬಂಡೆಗಲ್ಲಿನಂತೆ. ಅದು ಹಾಗೇ ಇರುತ್ತದೆ. ಈ ಕಾರಣದಿಂದ ಸರಕಾರವೆಂಬ ಕತ್ತೆಗೆ ಹೇಗೆ ವರ್ತಿಸಬೇಕೆಂದು ಗೊತ್ತಾಗಿಬಿಟ್ಟಿದೆ. ಅದು ತನ್ನ ಪಾಡಿಗೆ ತಾನು ಸುಮ್ಮನಿದ್ದುಬಿಡುತ್ತದೆ. ಯಾರೋ ಹೊಸ ಮುಖ್ಯಮಂತ್ರಿ, ಹೊಸ ಪ್ರಧಾನಿ ಅಧಿಕಾರಕ್ಕೆ ಬರುತ್ತಿದ್ದಂತೆ ಹಾಗೆ ಮಾಡ್ತೇನೆ, ಹೀಗೆ ಮಾಡ್ತೇನೆ ಎಂದು ಬಡಬಡಾಯಿಸುವಾಗ ನಾವೆಲ್ಲ ಹೌದೇನೋ ಎಂಬಂತೆ ತಲೆದೂಗುತ್ತಿದ್ದರೆ, ಈ ಕತ್ತೆ ಮಾತ್ರ ಗಹಗಹಿಸಿ ನಗುತ್ತಿರುತ್ತದೆ. ಅಧಿಕಾರ ಮುಗಿಸಿ ಕೆಳಗಿಳಿದು ಹೋಗುವಾಗ ಕತ್ತೆಯ ನಗು ಮಾತ್ರ ಪ್ರತಿಧ್ವನಿಯಂತೆ ಮೊಳಗುತ್ತಿರುತ್ತದೆ.

ಕೇಂದ್ರವಿರಬಹುದು, ರಾಜ್ಯವಿರಬಹುದು ಸರಕಾರವೆಂಬ ಕತ್ತೆ ಇರುವುದೇ ಹಾಗೆ. ಒಂದು ವೇಳೆ ಅದು ಹಾಗಿಲ್ಲದಿದ್ದರೆ ಅದು ಕುದುರೆಯಾಗುತ್ತಿತ್ತು. 1969ರಲ್ಲಿಯೇ ಈ ಕತ್ತೆಯ ಬಗ್ಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಕಿಡಿಕಾರಿದ್ದರು. ದಿಲ್ಲಿಯಲ್ಲಿ ಪ್ರಧಾನಿ ಕಾರ್ಯಾಲಯದಿಂದ ಗೃಹಮಂತ್ರಿಗಳ ಕಚೇರಿಗೆ ಕೂಗಳತೆ ದೂರ. ಆದರೂ ಗೃಹಸಚಿವಾಲಯದ ಸಿಬ್ಬಂದಿ ಅಂಚೆಮೂಲಕ ಮಹತ್ವದ ಕಾಗದವನ್ನು ಪ್ರಧಾನಿ ಕಚೇರಿಗೆ ಕಳಿಸಿದ್ದರು. ಯಾಕೆಂದರೆ ಮಹತ್ವದ ಕಾಗದ ಪತ್ರಗಳನ್ನು ರಜಿಸ್ಟರ್‍ಡ್ ಪೋಸ್ಟ್ ಮೂಲಕವೇ ಕಳಿಸಬೇಕೆಂದು ಯಾವನೋ ಹಲಗಣ್ಣ ಒಂದು ರೂಲು ಮಾಡಿ ಹೋಗಿದ್ದಾನೆ. ಅದನ್ನು ಪಾಲಿಸಲೇಬೇಕಲ್ಲ. ಹೀಗಾಗಿ ಪಕ್ಕದ ಕಟ್ಟಡಕ್ಕೂ ಅಂಚೆಮೂಲಕವೇ ಕಳಿಸಿದ್ದ. ಆ ಪತ್ರ ಪ್ರಧಾನಿ ಕಾರ್ಯಾಲಯ ತಲುಪಲು ಹದಿಮೂರು ದಿನಗಳನ್ನು ತೆಗೆದುಕೊಂಡಿತ್ತು. ಗೃಹಸಚಿವಾಲಯದಿಂದ ಬಸವನಹುಳದ ಬೆನ್ನಿಗೆ ಹೇರಿ ಕಳಿಸಿದ್ದರೂ ನಾಲ್ಕು ತಾಸಿನೊಳಗೆ ತಲುಪುತ್ತಿತ್ತೇನೋ? ಸರಕಾರಿ ಕತ್ತೆ ಕೆಲಸ ಮಾಡುವುದೇ ಹಾಗೇ! ಬಂದವರೆಲ್ಲ ಅದನ್ನು ಕುದುರೆ ಮಾಡುತ್ತೇನೆಂಬ ಪೊಗರಿನಿಂದಲೇ ಬರುತ್ತಾರೆ. ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತಾರೆ ಅನ್ನಿ. ಆದರೆ ಕತ್ತೆ ಮಾತ್ರ ತನ್ನ ಹುಟ್ಟು ಗುಣವನ್ನು ಘಟ್ಟ ಹತ್ತಿದರೂ ಕಳೆದುಕೊಳ್ಳುವುದಿಲ್ಲ' ಎಂಬಂತೆ ಹಾಗೇ ಇರುತ್ತದೆ.

ಕೆಲ ವರ್ಷಗಳ ಹಿಂದಿನ ಮಾತು. ಬೆಂಗಳೂರಿನಲ್ಲಿ ಪ್ರಿಂಟಾದ ಪತ್ರಿಕೆ ಬೀದರ್‌ಗೆ ಹೋಗುತ್ತಿತ್ತು. ಬೀದರ್‌ದಿಂದ ಹುಮ್ನಾಬಾದ್, ಬಸವಕಲ್ಯಾಣ ಹಾಗೂ ಗಡಿಭಾಗದ ಹಳ್ಳಿಗಳಿಗೂ ಹೋಗುತ್ತಿತ್ತು. ರಾತ್ರಿ ಎಂಟಕ್ಕೆ ಬೆಂಗಳೂರು ಬಿಟ್ಟು ಮರುದಿನ ಸಾಯಂಕಾಲ ಐದರೊಳಗೆ ಬೀದರ್‌ನ ಎಲ್ಲೆಡೆ ಬಟವಾಡೆಯಾಗುತ್ತಿತ್ತು. ಇದು ಒಂದಲ್ಲ, ಎರಡಲ್ಲ ವರ್ಷದಲ್ಲಿ ನಾಲ್ಕು ರಜಾದಿನ ಬಿಟ್ಟು ಮುನ್ನೂರ ಅರವತ್ತು ದಿನ ಗಾಡಿ ಹೀಗೇ ಓಡಬೇಕು. ಸಾಯಂಕಾಲ ಐದಕ್ಕೆ ತಲುಪಬೇಕಾದ ಪೇಪರ್ ಬಂಡಲ್ ಅರ್ಧಗಂಟೆ ತಡವಾದರೆ ಓದುಗರ ಹಾಹಾಕಾರ. ಹೀಗಾಗಿ ಮಳೆ, ಗಾಳಿ, ಬಿಸಿಲಿರಲಿ ಪೇಪರ್ ವಾಹನ ಮಾತ್ರ ಅಗ್ದಿ ಕರೆಕ್ಟ್ ಟೈಮ್‌ಗೆ ತಲುಪುತ್ತಿತ್ತು. ಒಂದು ವೇಳೆ ಸರಕಾರವೇನಾದರೂ ಪತ್ರಿಕೆ ನಡೆಸಿದ್ದರೆ, ಬೆಂಗಳೂರಿನಿಂದ ಪ್ರಿಂಟ್ ಆದ ಪತ್ರಿಕೆಯನ್ನು ಬೀದರ್‌ಗೆ ಕಳಿಸಲು ಅದಕ್ಕೆ ಕನಿಷ್ಠ ಹತ್ತು ದಿನಗಳಾದರೂ ಬೇಕಾಗುತ್ತದೆ. ಏಕೆಂದರೆ ವಿಧಾನಸೌಧದಿಂದ ಕಳಿಸುವ ಫೈಲು ಬೀದರ್ ಜಿಲ್ಲಾಧಿಕಾರಿ ಟೇಬಲ್ ಮುಂದೆ ಅಂಗಾತವಾಗಲು ಏನಿಲ್ಲವೆಂದರೂ ಎರಡು ವಾರಗಳಾದರೂ ಬೇಕು!

ರಾಜ್ಯದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಒಮ್ಮೆ ಹೇಳಿದ್ದರು-ಕರ್ನಾಟಕ ಸರಕಾರವೇನಾದರೂ ಒಂದು ಫೈಲನ್ನು ಪ್ರಧಾನಿಯವರಿಗೆ ಕಳಿಸಿದರೆ, ಅದೇನಾದರೂ ತೀರ ಮಹತ್ವದ್ದಾಗಿರದಿದ್ದರೆ, ಪ್ರಧಾನಿಯವರ ಟೇಬಲ್ಲಿಗೆ ಬರಲು ಕನಿಷ್ಠ ಒಂದು ವರ್ಷವಾದರೂ ಬೇಕು. ಒಂದು ವೇಳೆ ಬಂದಿತೆನ್ನಿ. ಅವರು ಸಂಬಂಧಪಟ್ಟ ಕೇಂದ್ರ ಸರಕಾರದ ಮಂತ್ರಿಗಳಿಗೆ ಕಳಿಸಿ ವಾಪಸ್ ತರಿಸಿಕೊಳ್ಳುವ ಹೊತ್ತಿಗೆ ಒಂದೋ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ಮಠಸೇರಿ ಮಗ್ಗುಲು ಬದಲಾಯಿಸಿರುತ್ತದೆ. ಮುಂದೆ ಅಧಿಕಾರಕ್ಕೆ ಬರುವವರಿಗೆ ಆ ಫೈಲಿನ ಬಗ್ಗೆ ಗೊತ್ತೇ ಇರುವುದಿಲ್ಲ. ಸಿಂಧುವಿನಲ್ಲಿ ಒಂದು ಬಿಂದುವನ್ನು ಹುಡುಕುವುದಾದರೂ ಹೇಗೆ? ಏನಿಲ್ಲವೆಂದರೂ ಕೇಂದ್ರದ ಮುಂದೆ ಬರೀ ಕರ್ನಾಟಕ ಸರಕಾರ ಕಳಿಸಿದ ಇಂಥ ಹತ್ತಾರು ಸಾವಿರ ಬಿಂದು'ಗಳಿರಬಹುದು! ಕತ್ತೆ ಬದುಕೋದೇ ಹೀಗೆ, ಏನ್ಮಾಡ್ತೀರ?" ಯಾರೇ ಬಂದರೂ ಏನೂ ಮಾಡದ ಸ್ಥಿತಿಯಿದೆ. ಉತ್ತರ ಕನ್ನಡದ ಕುಮಟಾದ ತಹಸೀಲ್ದಾರನೊಬ್ಬ ಒಂದು ಫೈಲನ್ನು ವಿಧಾನಸೌಧದಲ್ಲಿ ಕುಳಿತ ಮುಖ್ಯಮಂತ್ರಿಗೆ ಕಳಿಸಿದನೆನ್ನಿ. ಅದು ಕನಿಷ್ಠ ಇಪ್ಪತ್ತೈದು ಮಂದಿ ಅಧಿಕಾರಿಗಳನ್ನು ಎಡತಾಕಿ ಬರಬೇಕು. ಒಬ್ಬೊಬ್ಬ ಅಧಿಕಾರಿ ಒಂದೇ ವಾರ ತನ್ನ ಟೇಬಲ್ ಮೇಲಿಟ್ಟುಕೊಂಡು ಕಾವು ಕೊಟ್ಟರೂ ಸಾಕು, ಮುಖ್ಯಮಂತ್ರಿಗಳ ಕೈಸೇರುವ ಹೊತ್ತಿಗೆ ಅರ್ಧವಾರ್ಷಿಕ! ಆಗಲೇ ಧೂಳು ತಿಂದು, ಬೆವರು ಕುಡಿದು, ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿರುವ ಪಳೆಯುಳಿಕೆಗಳಂತಾಗಿರುತ್ತವೆ.

ಇವೆಲ್ಲ ಕಾಗದ ಪತ್ರ, ಫೈಲ್‌ಗಳ ಕತೆಯಾಯಿತು. ಆದರೆ ಸಣ್ಣಪುಟ್ಟ ಸಂಗತಿಗಳ ಬಗ್ಗೆ ಈ ಸರಕಾರಿ ಕತ್ತೆ ಹೇಗೆ ವರ್ತಿಸುತ್ತದೆಂಬುದನ್ನು ಗಮನಿಸಿದರೆ ಶಾಕ್ ಆಗುತ್ತದೆ. ಅಧಿಕಾರಿಗಳು ಫೈಲ್‌ಗಳ ಮೇಲೆ ಕೆಂಪು ಶಾಯಿಯಿಂದ ಸಹಿ ಹಾಕಬೇಕಾ, ಕಪ್ಪು ಶಾಯಿಯಲ್ಲಾ ಎಂಬ ತೀರಾತೀರ ಕ್ಷುಲ್ಲಕ ಸಂಗತಿ ಬಗ್ಗೆ ಭಾರತ ಸರಕಾರದ ಸುಮಾರು ನೂರಕ್ಕೂ ಹೆಚ್ಚು ಅಧಿಕಾರಿಗಳು ಒಂದೂವರೆ ವರ್ಷಗಳ ಕಾಲ ಸಭೆ, ಸಮಾಲೋಚನೆ, ಫೈಲ್‌ನೋಟ್ಸ್ ಮಾಡಿದ್ದನ್ನು ಇದೇ ಅಂಕಣದಲ್ಲಿ ಸುಮಾರು ಐದು ವರ್ಷಗಳ ಹಿಂದೆ ಬರೆದಿದ್ದು ನೆನಪಿರಬಹುದು. ಖ್ಯಾತ ಪತ್ರಕರ್ತ ಹಾಗೂ ಕೇಂದ್ರದ ಮಾಜಿ ಸಚಿವ ಅರುಣ್‌ಶೌರಿ Governance and the sclerosis that has set in ಎಂಬ ಪುಸ್ತಕದಲ್ಲಿ ಶಾಯಿಗಾಗಿ ವರ್ಷಗಟ್ಟಲೆ ತಲೆಕೆಡಿಸಿಕೊಂಡ ಅಧಿಕಾರಶಾಹಿ' ಬಗ್ಗೆ ರಸವತ್ತಾಗಿ ಬಣ್ಣಿಸಿದ್ದಾರೆ. ಈ ಘಟನೆಯನ್ನು ಸಂಕ್ಷಿಪ್ತವಾಗಿ, recap ಮಾಡುವುದಾದರೆ...

1999ರ ಜನವರಿಯಲ್ಲಿ ಕೇಂದ್ರ ಸರಕಾರದ ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು ಅಧಿಕೃತ ಫೈಲಿನ ಮೇಲೆ ಷರಾ ಬರೆದಿದ್ದರು. ಆ ಫೈಲು ಮತ್ತೊಂದು ಟೇಬಲ್‌ಗೆ ಹೋಯಿತು. ಅಲ್ಲಿದ್ದ ಅಧಿಕಾರಿಗೆ ಒಂದು ಯೋಚನೆ ಹೊಳೆಯಿತು- ಒಬ್ಬರು ಕೆಂಪು, ಮತ್ತೊಬ್ಬರು ನೀಲಿ ಇಂಕ್‌ನಲ್ಲಿ ಸಹಿ ಮಾಡಿದ್ದಾರಲ್ಲ ಹಾಗೆ ಮಾಡಬಹುದಾ? ಆತ ಆಡಳಿತಾತ್ಮಕ ಸುಧಾರಣಾ ಇಲಾಖೆ ಹಾಗೂ ಸಾರ್ವಜನಿಕ ಕುಂದುಕೊರತೆ ಇಲಾಖೆಗೆ ನೀಲಿ ಹಾಗೂ ಕಪ್ಪು ಇಂಕ್ ಹೊರತಾಗಿ ಬೇರೆ ಇಂಕನ್ನು ಅಧಿಕಾರಿಗಳು ಸಹಿ ಮಾಡಲು ಬಳಸಬಹುದಾ ಎಂದು ಸಚಿವಾಲಯ ತಿಳಿಯಬಯಸುತ್ತದೆ" ಎಂದು ಅಧಿಕೃತ ಪತ್ರ ಬರೆದ. ಈ ಎರಡು ಇಲಾಖೆಗಳ ಕಟ್ಟಡ ಉಕ್ಕು ಸಚಿವಾಲಯದ ಅಕ್ಕಪಕ್ಕದಲ್ಲಿಯೇ ಇದ್ದರೂ ಪತ್ರ ಆರು ದಿನಗಳ ನಂತರ ತಲುಪಿತು. ಪತ್ರ ಸಿಕ್ಕ ತಕ್ಷಣ ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ಮೀಟಿಂಗ್ ಕರೆದರು. ಇಂಥದೇ ಮೀಟಿಂಗ್ ಕುಂದುಕೊರತೆ ಇಲಾಖೆಯಲ್ಲೂ ಏರ್ಪಾಡಾಯಿತು. ಯಾವುದೇ ನಿರ್ಧಾರಕ್ಕೆ ಬರಲಾಗದೇ ಮುಂದಿನ ವಾರಕ್ಕೆ ಸಭೆಯನ್ನು ಮುಂದೂಡಲಾಯಿತು. ಮುಂದಿನ ವಾರ ಸೇರಿದ ಸಭೆಯಲ್ಲಿ, ಇದು ಇಂಕ್‌ಗೆ ಸಂಬಂಧಿಸಿದ ವಿಷಯವಾದ್ದರಿಂದ ಮುದ್ರಣ ನಿರ್ದೇಶನಾಲಯದ ಸಲಹೆ, ಮಾರ್ಗದರ್ಶನ ಪಡೆಯಬೇಕು" ಎಂದು ಆಡಳಿತ ಸುಧಾರಣಾ ಇಲಾಖೆ ನಿರ್ಣಯ ಅಂಗೀಕರಿಸಿತು!

ಮೇ 3, 1999ರಂದು ಆಡಳಿತ ಸುಧಾರಣಾ ಇಲಾಖೆ ಬರೆದ ಅಧಿಕೃತ ಪತ್ರ ಮುದ್ರಣ ನಿರ್ದೇಶನಾಲಯ ತಲುಪಿತು. ನಿರ್ದೇಶನಾಲಯದ ಮುಖ್ಯಸ್ಥರು ಹಿರಿಯ ಅಧಿಕಾರಿಗಳ ಸಭೆ ಕರೆದು ಪತ್ರದ ವಿಷಯ ಪ್ರಸ್ತಾಪಿಸಿದರು. ಅವರೆಲ್ಲ ರೂಲ್‌ಬುಕ್ ಗಳನ್ನು ತಡಕಾಡಿದರು. ಪುನಃ ಮೂರು ಬಾರಿ ಸಭೆ ಸೇರಿದರು. ಇಷ್ಟಕ್ಕೆ ಮೂರು ವಾರಗಳ ಕಾಲಕ್ಷೇಪ ಮಾಡಿ ಯಾವ ಇಂಕ್‌ನಲ್ಲಿ ಸಹಿ ಮಾಡಬೇಕೆಂಬ ಬಗ್ಗೆ ನಿರ್ದೇಶನಾಲಯದಲ್ಲಿ ನಿಶ್ಚಿತ ನಿಯಮ ಇಲ್ಲದ್ದರಿಂದ ಈ ಅಂಶದ ಬಗ್ಗೆ ಹೆಚ್ಚಿನ ಮಾರ್ಗದರ್ಶನ ಕೋರಿ ಗೃಹ ಸಚಿವಾಲಯದ ಸಿಬ್ಬಂದಿ, ತರಬೇತಿ ಇಲಾಖೆಗೆ ಪತ್ರ ಬರೆಯಲು ಮುದ್ರಣ ನಿರ್ದೇಶನಾಲಯ ನಿರ್ಧರಿಸಿತು. ಜುಲೈ 6, 1999ರಂದು ಸಿಬ್ಬಂದಿ, ತರಬೇತಿ ಇಲಾಖೆ ಅಧಿಕಾರಿಗಳು ಸಭೆ ಸೇರಿ ಈ ವಿಷಯವನ್ನು ಆಡಳಿತ ಸುಧಾರಣಾ ಇಲಾಖೆಗೆ ಕಳಿಸಲು ನಿರ್ಧರಿಸಿದರು. ಯಾವ ಇಲಾಖೆ ಸಲಹೆ ಕೇಳಿತ್ತೋ, ಅಲ್ಲಿಗೇ ಪುನಃ ತಿರುಗಿ ಬಂದಿತ್ತು! ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳು ಪುನಃ ಸಭೆ ಸೇರಿದರು. ಅಲ್ಲಿ ಅವರೊಂದು ನಿರ್ಧಾರ ಅಂಗೀಕರಿಸಿದರು- ಯಾವ ಇಂಕ್‌ನಲ್ಲಿ ಸಹಿ ಮಾಡಬೇಕೆಂಬುದು ವಿಷಯವನ್ನು ಆಧರಿಸಿರುತ್ತದೆ. ಕೆಲವು ಫೈಲ್ ಗಳನ್ನು ಶಾಶ್ವತವಾಗಿ ರಕ್ಷಿಸಿಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಸಹಿ ಮಾಡಿದ ಇಂಕ್ ಅಳಿಸಿ ಹೋಗಬಾರದು. ಆದ್ದರಿಂದ ಈ ವಿಷಯದ ಬಗ್ಗೆ ಇನ್ನಷ್ಟು ಚರ್ಚೆ ಅಗತ್ಯ."

ಮುಂದಿನವಾರ ಆಡಳಿತ ಸುಧಾರಣಾ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ಕರೆಯಿತು. ಕೆಲವು ಪರಿಣತರನ್ನು ಆ ಸಭೆಗೆ ಕರೆಯಲಾಗಿತ್ತು. ಅಲ್ಲೊಂದು ನಿರ್ಣಯ ಸ್ವೀಕರಿಸಲಾಯಿತು- ಫೈಲಿನ ಮಹತ್ವ ನೋಡಿ ಬಾಲ್‌ಪೆನ್‌ನಿಂದ ಸಹಿ ಮಾಡಬೇಕೋ, ಇಂಕ್‌ಪೆನ್‌ನಿಂದ ಸಹಿ ಮಾಡಬೇಕೋ ಎಂಬುದನ್ನು ನಿರ್ಧರಿಸಬೇಕು. ಇದನ್ನು ಪರಿಗಣಿಸಿ ಇಂಕಿನ ಬಣ್ಣ ತೀರ್ಮಾನಿಸಬೇಕು. ಫೈಲಿನ ಸಂರಕ್ಷಣೆ ಅಂಶ ಪ್ರಮುಖವಾಗಿರುವುದರಿಂದ ಸರಕಾರಿ ದಾಖಲೆಗಳನ್ನು ಕಾಪಾಡುವ ರಾಷ್ಟ್ರೀಯ ಪತ್ರಾಗಾರ(ಆರ್‌ಕೈವ್ಸ್)ದ ಸಲಹೆ ಪಡೆಯಬೇಕು. ಸರಿ, 12 ಆಗಸ್ಟ್ 1999ರಂದು ರಾಷ್ಟ್ರೀಯ ಪತ್ರಾಗಾರದ ಮಹಾನಿರ್ದೇಶಕರಿಗೆ ಆಡಳಿತ ಸುಧಾರಣಾ ಇಲಾಖೆ ಮುಖ್ಯಸ್ಥರು ಪತ್ರ ಬರೆದರು. ಅವರು ಸಹ ಸಭೆ ಕರೆದು ತಮ್ಮ ಅಭಿಪ್ರಾಯವನ್ನು ಆಗಸ್ಟ್ 29, 1999ರಂದು ಕಳಿಸಿದರು. ಅದರಲ್ಲಿ ಪತ್ರಾಗಾರ ಮಹಾನಿರ್ದೇಶಕರು ಹೀಗೆ ಬರೆದಿದ್ದರು- ಬಾಲ್‌ಪಾಯಿಂಟ್ ಅಥವಾ ಇಂಕ್‌ಪೆನ್ ಬಳಸಿ ಫೈಲುಗಳನ್ನು ಶಾಶ್ವತವಾಗಿಡಬಹುದು. ಆದರೆ ಬಳಸಿದ ಇಂಕ್ ಐಎಸ್‌ಐ ಗುಣಮಟ್ಟ ಹೊಂದಿರಬೇಕು." ಇಷ್ಟೆಲ್ಲ ಬರೆದ ಬಳಿಕ ಮಹಾನಿರ್ದೇಶಕರು ಕೊನೆಯಲ್ಲೊಂದು ವಾಕ್ಯ ಬರೆದಿದ್ದರು- ಫೈಲುಗಳ ಶಾಶ್ವತತೆಗೂ ಇಂಕಿನ ಬಣ್ಣಕ್ಕೂ ಯಾವುದೇ ಸಂಬಂಧ ಇಲ್ಲ."

ಈ ಪತ್ರ ಆಡಳಿತ ಸುಧಾರಣಾ ಇಲಾಖೆಗೆ ಬಂತು. ಇಲಾಖೆಯ ಮುಖ್ಯಸ್ಥರು ಪುನಃ ಸಭೆ ಕರೆದರು. ಅಲ್ಲಿ ರಾಷ್ಟ್ರೀಯ ಪತ್ರಾಗಾರದಿಂದ ಬಂದ ಪತ್ರದ ಬಗ್ಗೆ ಚರ್ಚೆ ನಡೆಯಿತು. ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು, ಭಾರತೀಯ ಸೇನೆಯ ಬೇರೆ ಬೇರೆ ಗ್ರೇಡ್‌ನ ಅಧಿಕಾರಿಗಳು ಬೇರೆ ಬೇರೆ ಬಣ್ಣದ ಇಂಕನ್ನು ಬಳಸುವುದರಿಂದ ಅವರ ಸಲಹೆ ಕೋರಿ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ ಆಡಳಿತ ಸುಧಾರಣಾ ಇಲಾಖೆ ಪತ್ರ ಬರೆಯಿತು. ಜಂಟಿ ಕಾರ್ಯದರ್ಶಿ ಉತ್ತರ ಬರೆದರು- ಸೇನೆಯಲ್ಲಿ ಮಹಾದಂಡನಾಯಕರು ಕೆಂಪು, ಹಿರಿಯ ಅಧಿಕಾರಿಗಳು ಹಸಿರು ಹಾಗೂ ಇತರ ಅಧಿಕಾರಿಗಳು ಕಪ್ಪು ಇಂಕ್‌ನಲ್ಲಿ ಸಹಿ ಮಾಡುತ್ತಾರೆ. ಆದರೂ ಈ ವಿಷಯದ ಬಗ್ಗೆ ಸಿಬ್ಬಂದಿ, ತರಬೇತಿ ಇಲಾಖೆ ಸಲಹೆ ಪಡೆಯುವುದು ಉತ್ತಮ."ಅಷ್ಟಕ್ಕೆ ಸುಮ್ಮನಾಗದ ಅವರು ಒಂದು ಪ್ರತಿಯನ್ನು ಸಿಬ್ಬಂದಿ, ತರಬೇತಿ ಇಲಾಖೆಗೂ ಕಳುಹಿಸಿದರು. ಅಷ್ಟರೊಳಗೆ ಈ ಇಲಾಖೆಗೆ ಇದೇ ವಿಷಯ ಕುರಿತು ಆಡಳಿತ ಸುಧಾರಣಾ ಇಲಾಖೆ ಹಾಗೂ ಕುಂದುಕೊರತೆ ಇಲಾಖೆ ಕನಿಷ್ಠ ಹದಿನೈದು ಬಾರಿ ಸಭೆ ಕರೆದು ಚರ್ಚಿಸಿದ್ದವು.

ಕಟ್ಟಕಡೆಗೆ ಆಡಳಿತ ಸುಧಾರಣಾ ಇಲಾಖೆ ಏಪ್ರಿಲ್ 5, 2000ರಂದು ಉಕ್ಕು ಸಚಿವಾಲಯಕ್ಕೆ ಪತ್ರ ಬರೆಯಿತು- ಕಪ್ಪು ಅಥವಾ ನೀಲಿ ಇಂಕನ್ನು ಎಲ್ಲ ಸಿಬ್ಬಂದಿ ಹಾಗೂ ಅಧಿಕಾರಿಗಳು ಬಳಸಬಹುದು. ಅಪರೂಪದ ಸಂದರ್ಭಗಳಲ್ಲಿ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ ಹಾಗೂ ಮೇಲಿನ ಅಧಿಕಾರಿಗಳು ಹಸಿರು ಅಥವಾ ಕೆಂಪು ಇಂಕ್‌ನಲ್ಲಿ ಸಹಿ ಮಾಡಬಹುದು. ಕರಡು ಪ್ರತಿ ಕಪ್ಪು ಅಥವಾ ನೀಲಿ ಇಂಕಿನಲ್ಲಿರಬಹುದು. ಯಾವುದೇ ತಿದ್ದುಪಡಿ ಮಾಡಬೇಕೆನಿಸಿದಾಗ ಹಸಿರು ಅಥವಾ ಕೆಂಪು ಇಂಕ್ ಬಳಸಬಹುದು. ಇದರಿಂದ ತಿದ್ದುಪಡಿ ಮಾಡಿದ್ದು ಗೊತ್ತಾಗುತ್ತದೆ." ಸುಮಾರು ನೂರಕ್ಕೂ ಹೆಚ್ಚು ಅಧಿಕಾರಿಗಳು (ಐಎಎಸ್ ಅಧಿಕಾರಿಗಳೂ ಸೇರಿ) ಒಂದೂವರೆ ವರ್ಷಗಳ ಕಾಲ ಸಭೆ, ಸಮಾಲೋಚನೆ ಮಾಡಿ ಯಾವ ಬಣ್ಣದ ಇಂಕಿನಲ್ಲಿ ಸಹಿ ಮಾಡ ಬೇಕೆಂಬ ಬಗ್ಗೆ ಅಂತಿಮವಾಗಿ ತೆಗೆದುಕೊಂಡ ನಿರ್ಧಾರವಿದು!

ಇಲ್ಲಿ ನಿಮಗೆ ಕಾಲ್ಪನಿಕ ಕತೆಯೊಂದನ್ನು ಹೇಳಬೇಕು. ಬಹಳ ಸೊಗಸಾಗಿದೆ. ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾದ ಮುಖ್ಯಸ್ಥರಾಗಿ ನೇಮಕಗೊಂಡಿರುವ ಇನ್ಫೋಸಿಸ್‌ನ ನಂದನ್ ನಿಲೇಕಣಿಯವರನ್ನು ಪ್ರಧಾನಿ ಡಾ. ಮನಮೋಹನ್ ಸಿಂಗ್ ಸಂಸತ್ತಿಗೆ ಆಹ್ವಾನಿಸಿದರಂತೆ. ಅಂದು ಪ್ರಧಾನಿಯವರು ಸದನದ ಸದಸ್ಯರನ್ನುದ್ದೇಶಿಸಿ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿಯನ್ನು ಸ್ಥಾಪಿಸಿದ್ದೇಕೆ, ಅದಕ್ಕೆ ನಂದನ್ ನಿಲೇಕಣಿಯವರನ್ನೇ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದೇಕೆ, ಇನ್ಫೋಸಿಸ್‌ನಲ್ಲಿ ಅವರು ಮಾಡಿದ ಮಹತ್ವದ ಕೆಲಸಗಳೇನು ಮುಂತಾದ ಸಂಗತಿಗಳನ್ನು ವಿವರಿಸಿದರಂತೆ. ಇಡೀ ಸದನ ಕುತೂಹಲದಿಂದ ಕೇಳಿತಂತೆ. ಅನಂತರ ಪ್ರಧಾನಿಯವರು ನಂದನ್‌ಗೆ ಮಾತಾಡಲು ಹೇಳಿದರಂತೆ. ನಂದನ್ ಎದ್ದು ನಿಂತು ಪ್ರಧಾನಿಯವರು ತಮ್ಮ ಮೇಲೆ ವಿಶ್ವಾಸವಿಟ್ಟು ಈ ಮಹತ್ವದ ಜವಾಬ್ದಾರಿಯನ್ನು ತಮಗೆ ವಹಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರಂತೆ. ಅಲ್ಲದೇ ತಮಗೆ ವಹಿಸಿದ ಹೊಣೆಗಾರಿಕೆಯನ್ನು ಆದಷ್ಟು ಬೇಗ ಯಶಸ್ವಿಯಾಗಿ ಮುಗಿಸುವುದಾಗಿ ಅವರು ಸದನಕ್ಕೆ ಭರವಸೆ ನೀಡಿದರಂತೆ. ಮಧ್ಯೆಮಧ್ಯೆ ಸದಸ್ಯರ ಮಧ್ಯಪ್ರವೇಶ, ಅನಗತ್ಯ ಅಡ್ಡಿ, ಚರ್ಚೆ. ಭೋಜನ ವಿರಾಮದ ಬಳಿಕ ಯುನಿಕ್ ಐಡೆಂಟಿಫಿಕೇಶನ್ ಪ್ರೋಗ್ರಾಂ ಬಗ್ಗೆ ಸಮಗ್ರವಾಗಿ ವಿವರಿಸುವಂತೆ ಪ್ರಧಾನಿಯವರು ನಂದನ್‌ಗೆ ಸೂಚಿಸಿದರಂತೆ.

ಭೋಜನ ವಿರಾಮ ಸರಿಯಿತು. ಪುನಃ ನಂದನ್ ಸರದಿ. ಅಷ್ಟರೊಳಗೆ ನಂದನ್ ಅವರ ಲ್ಯಾಪ್‌ಟಾಪ್‌ನಲ್ಲಿದ್ದ ಬ್ಯಾಟರಿ ಸಾಕಷ್ಟು ಖಾಲಿಯಾಗಿತ್ತಂತೆ. ನಂದನ್‌ಗೆ ಡುಕುಡುಕು. ಲ್ಯಾಪ್‌ಟಾಪ್ ಮಧ್ಯೆ ಕೈಕೊಟ್ಟರೆ? ನಂದನ್ ಸಣ್ಣಗೆ ಬೆವರಲಾರಂಭಿಸಿದರಂತೆ. ಪ್ರಧಾನಿಯವರ ಸನಿಹ ಹೋಗಿ ತಮ್ಮ ಸಂಕಟ ತೋಡಿಕೊಂಡರಂತೆ. ಪರವಾಗಿಲ್ಲ, ಸುಧಾರಿಸಿಕೊಳ್ಳಿ ಅಂಥದ್ದೇನೂ ಆಗಲಾರದೆಂದು ಪ್ರಧಾನಿ ಸಮಾಧಾನ ಹೇಳಿದರಂತೆ. ಅಷ್ಟರೊಳಗೆ ಸ್ಪೀಕರ್ ನಂದನ್‌ಗೆ ಯುನಿಕ್ ಐಡೆಂಟಿಫಿಕೇಶನ್ ಪ್ರೋಗ್ರಾಂ ಕುರಿತು ಸದನಕ್ಕೆ ವಿವರಿಸುವಂತೆ ಹೇಳಿದರಂತೆ. ನಂದನ್ ಎದ್ದುನಿಂತು, ನಾನು 30-60-90-120 ದಿನಗಳಲ್ಲಿ ಏನೇನು ಮಾಡಬೇಕೆಂಬ ಬಗ್ಗೆ ಈಗಾಗಲೇ ನೀಲನಕ್ಷೆ ತಯಾರಿಸಿದ್ದೇನೆ. ಈ ಬಗ್ಗೆ ಸಚಿತ್ರ, ಸಮಗ್ರ ವಿವರ ತಿಳಿಸುವ ಪವರ್‌ಪಾಯಿಂಟ್ ಪ್ರಸೆಂಟೇಶನ್ ಸಿದ್ಧಪಡಿಸಿದ್ದೇನೆ. ಆದರೆ ನನ್ನ ಲ್ಯಾಪ್‌ಟಾಪ್‌ನಲ್ಲಿ ಬ್ಯಾಟರಿ ಖಾಲಿಯಾಗುತ್ತಿರುವುದರಿಂದ ನನಗೆ ತುರ್ತಾಗಿ ಪವರ್‌ಸಾಕೆಟ್ ಬೇಕಾಗಿದೆ. ಅಲ್ಲದೇ ಒಂದು ಪ್ರೊಜೆಕ್ಟರ್ ಹಾಗೂ ಸ್ಕ್ರೀನ್ ಸಹ ಬೇಕಾಗಿದೆ' ಎಂದು ಹೇಳಿದರಂತೆ. ಸ್ಪೀಕರ್‌ಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ತಮ್ಮ ಕೋರಿಕೆಯನ್ನು ಯಾರು ಈಡೇರಿಸುತ್ತಾರೆಂಬುದು ನಂದನ್‌ಗೆ ಗೊತ್ತಾಗಲಿಲ್ಲ. ಎರಡು ನಿಮಿಷ ಇಡೀ ಸದನದಲ್ಲಿ ದಿವ್ಯಮೌನ.

ಮುಂದೇನಾಯಿತೆಂಬುದನ್ನು ಕೇಳಿ. ನಂದನ್ ನಿಲೇಕಣಿ ಮಂಡಿಸಿದ ಬೇಡಿಕೆ ಈಡೇರಿಸುವ ಸಾಧ್ಯತೆ ಬಗ್ಗೆ ಚರ್ಚಿಸಲು ಜಂಟಿ ಕ್ಯಾಬಿನೆಟ್ ಸೆಕ್ರೆಟರಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತಂತೆ. ಲ್ಯಾಪ್‌ಟಾಪ್, ಸಾಕೆಟ್, ಪ್ರೊಜೆಕ್ಟರ್ ಹಾಗೂ ಸ್ಕ್ರೀನನ್ನು ಸಂಸತ್ತಿನ ಒಳಗೆ ತರುವುದು ರಾಷ್ಟ್ರೀಯ ಭದ್ರತೆಗೆ ಅಪಾಯ ತರಬಹುದೇ ಎಂಬುದನ್ನು ಚರ್ಚಿಸಲು ಪವರ್, ಐಟಿ ಹಾಗೂ ಪ್ರಸಾರ ಖಾತೆ ಅಧೀನ ಕಾರ್ಯದರ್ಶಿಗಳಿಗೆ feasibility ರಿಪೋರ್ಟ್ ಸಿದ್ಧಪಡಿಸಲು ಜಂಟಿ ಕ್ಯಾಬಿನೆಟ್ ಸೆಕ್ರೆಟರಿ ಸಮಿತಿ ಸೂಚಿಸಿತಂತೆ. ಯಾಕೆಂದರೆ ಪವರ್ ಸಾಕೆಟ್ ಬಗ್ಗೆ ಪವರ್ ಮಿನಿಸ್ಟ್ರಿ, ಪ್ರೊಜೆಕ್ಟರ್ ಬಗ್ಗೆ ಐಟಿ ಮಿನಿಸ್ಟ್ರಿ ಮತ್ತು ಸ್ಕ್ರೀನ್ ಬಗ್ಗೆ ಪ್ರಸಾರ ಖಾತೆಯ ಸಚಿವರುಗಳು ನಿರ್ಧಾರ ತೆಗೆದುಕೊಳ್ಳಬೇಕಲ್ಲ. ಸಾಕೆಟ್, ಪ್ರೊಜೆಕ್ಟರ್ ಹಾಗೂ ಸ್ಕ್ರೀನ್ ಖರೀದಿಸಲು ಆಯಾ ಖಾತೆಯ ಸಂಬಂಧಪಟ್ಟ ಅಧಿಕಾರಿಗಳು ಟೆಂಡರ್ ಕರೆಯಬೇಕು. ಟೆಂಡರ್ ರಿವ್ಯೂ ಕಮಿಟಿ, ಟೆಂಡರ್ ಓಪನ್ ಕಮಿಟಿ, ಟೆಂಡರ್ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳುವ ಕಮಿಟಿ ರಚಿಸಲು ಸೂಚಿಸಲಾಯಿತಂತೆ. ಅನಂತರ ಇವುಗಳನ್ನು ಪೂರೈಸಲು ಟೆಂಡರ್ ಪಡೆದವರಿಗೆ ಹೇಳಿದಾಗ ಅವರು ತೊಂಬತ್ತು ದಿನ ಕಾಲಾವಕಾಶ ಕೋರಿದರಂತೆ. ಒಂದು ಜುಜುಬಿ ಸಾಕೆಟ್, ಪ್ರೊಜೆಕ್ಟರ್, ಸ್ಕ್ರೀನ್ ಪೂರೈಸಲು ಕೇಂದ್ರ ಸರಕಾರದಲ್ಲಿ ಇಷ್ಟೆಲ್ಲ ಸರ್ಕಸ್ ಮಾಡಬೇಕಾಗಿರುವಾಗ, ದೇಶದ 115 ಕೋಟಿ ಜನರಿಗೆ ಯುನಿಕ್ ಐಡೆಂಟಿಫಿಕೇಶನ್ ಕಾರ್ಡ್ ಕೊಡುವುದಾದರೂ ಹೇಗೆ ಎಂಬ ಯೋಚನೆ ನಂದನ್‌ಗೆ ಕಾಡಲಾರಂಭಿಸಿತಂತೆ. ಅಷ್ಟೊತ್ತಿಗೆ ನಂದನ್‌ಗೆ 30-60-90-120 ದಿನಗಳ ಟೈಮ್‌ಲೈನ್ ಬದಲು ವರ್ಷ' ಎಂದು ಬದಲಿಸಿಕೊಳ್ಳುವಂತೆ ಯಾರೋ ಸೂಚಿಸಿದರಂತೆ.

ಈ ಎಲ್ಲ ಸಂಗತಿಗಳನ್ನು ಪರಿಗಣಿಸಿ ಆರು ತಿಂಗಳ ನಂತರ ಪವರ್‌ಪಾಯಿಂಟ್ ಪ್ರಸೆಂಟೇಶನ್ ಮಾಡಲು ನಂದನ್‌ಗೆ ಸ್ಪೀಕರ್ ಸೂಚಿಸಿ ಕಲಾಪ ಮುಂದೂಡಿದರಂತೆ. ನಂದನ್‌ಗೆ ಹೇಗಾಗಿರಬೇಡ?

ಗೊತ್ತಿರಲಿ, ಅಕ್ಷರಶಃ ಸರಕಾರವೆಂಬ ಕತ್ತೆ ವರ್ತಿಸುವುದೇ ಹೀಗೆ. ಯಾರೇ ಬರಲಿ, ಹೋಗಲಿ ಸರಕಾರವೆಂಬ ಕತ್ತೆ ವರ್ತಿಸೋದೇ ಹೀಗೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+