ವ್ಯಂಗ್ಯಚಿತ್ರ: ಸುಳ್ಳನ್ನೇ ಆಡುವ ಬಾಯಿಗೆ ಸತ್ಯದ ಸವಿ ಗೊತ್ತಿರಲು ಸಾಧ್ಯವೆ?
ನಗುವನ್ನಷ್ಟೆ ಉಕ್ಕಿಸಿ ಸುಮ್ಮನಾದರೆ ಕಾರ್ಟೂನ್ಗಳು ಫೇಲ್ ಆದಂತೆ, ಅವು ಚಿಂತನೆಗೆ ಹಚ್ಚಬೇಕು, ವಿಷಯವೊಂದನ್ನು ನೋಡುಗನಿಗೆ ದಾಟಿಸಬೇಕು. ಈ ಎರಡೂ ಕಾರ್ಯವನ್ನು ಶಂಕರ್ ಅವರ ಈ ಕಾರ್ಟೂನು ಶಕ್ತವಾಗಿ ಮಾಡುತ್ತಿದೆ.
ಸಮಯವೊಂದಿತ್ತು ವಿಚಾರಗಳ ಮೇಲೆ, ಸಮಸ್ಯೆಗಳ ಮೇಲೆ ಚುನಾವಣೆ ನಡೆಯುತ್ತಿತ್ತು, ಪರ ವಿರೋಧ ಸ್ಪರ್ಧಿಗಳಿಗೂ ಗಾಂಧಿಯೇ ಆದರ್ಶವಾಗಿರುತ್ತಿದ್ದರು, ಸನ್ಮಾರ್ಗದಲ್ಲೇ ಚುನಾವಣೆ ನಡೆಯುತ್ತಿತ್ತು ಆದರೆ ಇಂದಿನ ರಾಜಕಾರಣಿಗಳಿಗೆ ಗಾಂಧಿ ವಾದದ ಅರ್ಥವೇ ತಿಳಿದಿಲ್ಲ ಅವರಿಗೆ ಗೊತ್ತಿರುವ ಗಾಂಧಿ ಪಿಂಕು ನೋಟಿನ ಮೇಲೆ ನಗುತ್ತಿರುವ ಗಾಂಧಿ ಅಷ್ಟೆ.

ಶಂಕರ್ ಅವರ ಈ ಕಾರ್ಟೂನು ನಮ್ಮ ರಾಜಕಾರಣಿಗಳ ಬುದ್ಧಿಮತ್ತೆ, ನಿರಾದರ್ಶ ಸ್ಥಿತಿಗೆ ಕನ್ನಡಿ ಹಿಡಿದಿದೆ. ಇಲ್ಲೊಬ್ಬ ರಾಜಕಾರಣಿ ಗಾಂಧಿಯವರ 'ನುಡಿದಂತೆ ನಡೆ, ಸತ್ಯವನ್ನೇ ನುಡಿ' ಎಂಬ ಉತ್ಕೃಷ್ಠ ಜೀವನ ಪದ್ಧತಿಯನ್ನು ಗೊಂದಲದಿಂದ ನೋಡುತ್ತಿದ್ದಾನೆ, ಗಾಂಧಿ ಅವರ ಈ ಆದರ್ಶದ ಅರಿವೂ ಆತನಿಗಿಲ್ಲ. ಇಂದಿನ ಬಹುತೇಕ ನಮ್ಮ ರಾಜಕಾರಣಿಗಳ ಸ್ಥಿತಿ ಇದೇ ಆಗಿದೆ.
ಹಣ ಬಲ, ಭುಜಬಲ, ಜಾತಿಬಲದಿಂದ ಇಂದಿನ ಚುನಾವಣೆಗಳಲ್ಲಿ ಗೆಲುವು ನಿಶ್ಚಯವಾಗುತ್ತಿದೆ, ಇದಕ್ಕೆ ಕಾರಣ ಅಧಃಪತನ ಕಂಡಿರುವ ನಮ್ಮ ರಾಜಕಾರಣಿಗಳ ಮಾನಸಿಕ ಸ್ಥಿತಿ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications