ಕಾರ್ಟೂನ್: ಪೂರ್ತಿ ಕುರ್ಚಿ ಸಿಗದಿದ್ದರೂ ಪರವಾಗಿಲ್ಲ..!
"ನನಗೆ ಪೂರ್ತಿಯಾಗಿ ಕುರ್ಚಿ ಸಿಗದಿದ್ದರೂ ಪರವಾಗಿಲ್ಲ. ಇಷ್ಟು ಸಿಕ್ಕಿದ್ರೆ ಸಾಕು" ಎನ್ನುತ್ತಿರುವ ರಾಜಕಾರಣಿ ಅಧಿಕಾರದ ದುರಾಸೆಯನ್ನು ಪ್ರತಿಪಾದಿಸುತ್ತಿದ್ದಾನೆ. ಅಧಿಕಾರಕ್ಕಾಗಿ ವಿರೋಧ ಪಕ್ಷದೊಂದಿಗೂ ಕೈಜೋಡಿಸಲು ಸಿದ್ಧವಿರುವ ರಾಜಕಾರಣಿಗಳ ಕುರಿತು ಇಂಥದೊಂದು ಅರ್ಥವತ್ತಾದ ಕಾರ್ಟೂನ್ ನೀಡಿದ್ದಾರೆ ಕಾರ್ಟೂನಿಸ್ಟ್ ಶಂಕರ್.
ಮೇ 12 ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದ್ದು, ಮೇ 15 ರಂದು ಫಲಿತಾಂಶ ಹೊರಬರಲಿದೆ. ಯಾರು, ಯಾರೊಂದಿಗೆ ಕೈಜೋಡಿಸುತ್ತಾರೆ, ಅರ್ಧ ಕುರ್ಚಿಗೇ ಸಮಾಧಾನ ಪಟ್ಟುಕೊಳ್ಳುವವರು ಯಾರೆಂಬುದು ಅಂದು ತಿಳಿಯಲಿದೆ.
ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ













Click it and Unblock the Notifications