ICC World Cup 2023: ಜ್ಯೋತಿಷ್ಯದ ಪ್ರಕಾರ ವಿಶ್ವಕಪ್ ಫೈನಲ್ನಲ್ಲಿ ಯಾವ ತಂಡ ಟ್ರೋಫಿ ಗೆಲ್ಲುತ್ತೆ?
ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ವಿಶ್ವಕಪ್ ಫೈನಲ್ ಮ್ಯಾಚ್ ನಾಳೆ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ಭಾನುವಾರ ಅಹಮದಾಬಾದ್ನಲ್ಲಿ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ಸಜ್ಜಾಗಿವೆ. ಎರಡು ಬಲಿಷ್ಠ ತಂಡಗಳು ವಿಶ್ವಕಪ್ ಫೈನಲ್ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿರೀಕ್ಷೆಗಳು ಹೆಚ್ಚಾಗತೊಡಗಿವೆ.
ಭಾರತ ಮತ್ತು ಆಸ್ಟ್ರೇಲಿಯಾ 46 ರೋಚಕ ಪಂದ್ಯಗಳ ನಂತರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ 2023ರ ಫೈನಲ್ನಲ್ಲಿ ಮುಖಾಮುಖಿಯಾಗಲು ಸಿದ್ಧವಾಗಿವೆ. ಆಸ್ಟ್ರೇಲಿಯಾ ಆರಂಭದಲ್ಲಿ ಅನುಭವಿಸಿದ ಸತತ ಎರಡು ಸೋಲುಗಳಿಂದ ಚೇತರಿಸಿಕೊಂಡು ಸೆಮಿಫೈನಲ್ಗೆ ಪ್ರವೇಶಿಸಿದ್ದು ನಂತರ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಫೈನಲ್ಗೆ ಲಗ್ಗೆಯಿಟ್ಟಿದೆ.

ಪ್ರತಿಯೊಂದಕ್ಕೂ ಜ್ಯೋತಿಷ್ಯದ ಭವಿಷ್ಯವನ್ನು ನೋಡುವ ಅಭ್ಯಾಸ ಬಹುತೇಕರಿಗಿದೆ. ಅದರಲ್ಲಿ ಈ ವಿಶ್ವಕಪ್ ಕೂಡ ಸೇರಿದೆ. ಗ್ರಹಗಳ ಸ್ಥಾನಗಳ ಪ್ರಕಾರ, ಈ ಫೈನಲ್ನಲ್ಲಿ ಯಾರಿಗೆ ಅನುಕೂಲವಾಗಲಿದೆ ಎಂದು ಜ್ಯೋತಿಷ್ಯದಲ್ಲಿ ತಿಳಿಯಬಹುದು. ಹಾಗಾದರೆ ಈ ಭವಿಷ್ಯವಾಣಿಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯೋಣ.
ಭಾರತೀಯ ತಂಡ
ಈ ವಿಶ್ವಕಪ್ ಆರಂಭದಿಂದಲೂ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಮತ್ತು ಶ್ರೇಯಸ್ ಅಯ್ಯರ್ ಅವರ ಪ್ರದರ್ಶನ ಅತ್ಯುತ್ತಮವಾಗಿದೆ. ನಾಯಕ ರೋಹಿತ್ ಶರ್ಮಾ ಅವರ ತಂಡ ನಡೆಸಿಕೊಂಡು ಹೋಗುವ ಪರಿ ಭಾರತ 2023ರ ವಿಶ್ವಕಪ್ನಲ್ಲಿ ಅಜೇಯವಾಗಿ ಉಳಿಯಲು ಕಾರಣವಾದವು. ತಂಡದ ಗೆಲುವಿಗೆ ಮೂರು ವಿಷಯಗಳು ಅತ್ಯಗತ್ಯ, ಅವುಗಳು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್. ಈ ಮೂರೂ ವಿಭಾಗಗಳಲ್ಲಿ ಭಾರತ ತಂಡ ಈ ಬಾರಿಯ ವಿಶ್ವಕಪ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ.
ಆಸ್ಟ್ರೇಲಿಯಾ ತಂಡ
ಇನ್ನೂ ಆಸ್ಟ್ರೇಲಿಯಾ ಇಲ್ಲಿಯವರೆಗೆ ಐದು ವಿಶ್ವಕಪ್ ಟ್ರೋಫಿಗಳನ್ನು ಗೆದ್ದಿದೆ. ಸದ್ಯ ಆಸ್ಟ್ರೇಲಿಯಾ ತನ್ನ ಆರನೇ ವಿಶ್ವಕಪ್ ಗೆಲುವಿಗೆ ತಯಾರಿ ನಡೆಸುತ್ತಿದೆ. ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮಿಚೆಲ್ ಮಾರ್ಷ್ ಅವರಂಥಾ ಆಲ್ರೌಂಡರ್ಗಳು, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಹೇಜಲ್ವುಡ್ ಅವರಂಥಾ ವಿಶ್ವದರ್ಜೆಯ ವೇಗಿಗಳು ಮತ್ತು ಬ್ಯಾಟರ್ಗಳ ಕೌಶಲ್ಯದಿಂದ ಆಸ್ಟ್ರೇಲಿಯಾ ಭಾರತಕ್ಕೆ ಕಠಿಣ ಸವಾಲಾಗಿದೆ.
ಟೀಮ್ ಇಂಡಿಯಾದ ಭವಿಷ್ಯ
2023ರ ವಿಶ್ವಕಪ್ ಭವಿಷ್ಯದಲ್ಲಿ ನಾವು ಗಮನಹರಿಸಬೇಕಾದದ್ದು ಭಾರತೀಯ ನಾಯಕ ರೋಹಿತ್ ಶರ್ಮಾ ಅವರ ಗ್ರಹಗಳ ಸ್ಥಾನಗಳು. ಅದೃಷ್ಟವಶಾತ್ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಸಮಯದಲ್ಲಿ ರೋಹಿತ್ ಶರ್ಮಾ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಗುರು ಮತ್ತು ಮಂಗಳ ಗ್ರಹಗಳ ಜೋಡಿಯು ಸಹಾಯ ಮಾಡುತ್ತದೆ. ಅವರ ಜಾತಕವು ಮಂಗಳಕರ ರಾಜಯೋಗವನ್ನು ಹೊಂದಿದ್ದು ಅದು ಅವರ ನಾಯಕತ್ವದ ಗುಣಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.

ಈ ಎರಡು ಗ್ರಹಗಳು ಮಂಗಳಕರ ರಾಜಯೋಗವನ್ನು ಸೃಷ್ಟಿಸುತ್ತವೆ. ಹೀಗಾಗಿ ಗುರು ಮತ್ತು ಮಂಗಳ ಭಾರತ ತಂಡಕ್ಕೆ ಉತ್ತಮ ಆಟದ ತಂತ್ರಗಳನ್ನು ನೀಡುತ್ತವೆ. ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಕಠಿಣ ಸ್ಪರ್ಧಿಯಾಗಲು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಸಹಾಯ ಮಾಡುತ್ತವೆ.
ಆಸ್ಟ್ರೇಲಿಯಾ ತಂಡದ ಭವಿಷ್ಯ
ಬೆಳವಣಿಗೆ ಮತ್ತು ಪ್ರಗತಿಯ ಗ್ರಹವಾದ ಗುರು, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಜಾತಕದಲ್ಲಿ ಸ್ಥಿರವಾಗಿದೆ. ಸದ್ಯ ಗ್ರಹಗಳು ಕಮ್ಮಿನ್ಸ್ ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬಲಪಡಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಮಯದಲ್ಲಿ ಬುಧವು ವೃಶ್ಚಿಕಗೆ ಚಲಿಸುತ್ತದೆ. ಇದು ಪ್ಯಾಟ್ ಕಮ್ಮಿನ್ಸ್ ಈ ಪಂದ್ಯದಲ್ಲಿ ಉತ್ತಮ ತಂತ್ರಗಾರಿಕೆಯನ್ನು ತರಲು ನೆರವಾಗಲಿದೆ. ಆದರೆ ಪ್ಯಾಟ್ ಕಮ್ಮಿನ್ಸ್ ಅವರ ಜಾತಕದಲ್ಲಿ ಕೇತುವಿನ ಬಲವಾದ ಪ್ರಭಾವದಿಂದಾಗಿ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ 2023 ರ ಫೈನಲ್ನಲ್ಲಿ ಕೆಲವು ಅನಿರೀಕ್ಷಿತ ತಿರುವುಗಳನ್ನು ತರಬಹುದು.
ಯಾರು ಟ್ರೋಫಿ ಗೆಲ್ಲುತ್ತಾರೆ?
ಎರಡೂ ತಂಡಗಳ ಭವಿಷ್ಯವಾಣಿಯ ಪ್ರಕಾರ ಎರಡೂ ತಂಡಗಳು 250ರಿಂದ 315 ರನ್ ಗಳಿಸುವ ಸಾಧ್ಯತೆ ಇದೆ. ಒಂದೆಡೆ ಆಸ್ಟ್ರೇಲಿಯ ತಂಡವು ವೃಶ್ಚಿಕದಲ್ಲಿ ಗುರು ಮತ್ತು ಬುಧದ ಸಂಕ್ರಮಣ ಪ್ರಯೋಜನಗಳನ್ನು ಪಡೆಯಲಿದೆ. ಇದು ಆಸ್ಟ್ರೇಲಿಯ ತಂಡಕ್ಕೆ ತಂತ್ರಗಳು ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆದರೆ ಅದೇ ಸಮಯದಲ್ಲಿ ಮಂಗಳ ಮತ್ತು ರಾಜಯೋಗದ ಬಲವಾದ ಪ್ರಭಾವವು ಭಾರತ ತಂಡದ ಪ್ರದರ್ಶನವನ್ನು ಬಲಪಡಿಸುತ್ತದೆ. ಕೇತುವಿನ ಪ್ರವೇಶವು ಫೈನಲ್ನಲ್ಲಿ ಆಸ್ಟ್ರೇಲಿಯಾದ ಪ್ರದರ್ಶನವನ್ನು ಹಾಳುಮಾಡುತ್ತದೆ. ಆದ್ದರಿಂದ 2023ರ ವಿಶ್ವಕಪ್ ಭವಿಷ್ಯವು ಭಾರತ 3ನೇ ಬಾರಿಗೆ ಟ್ರೋಫಿಯನ್ನು ಗೆಲ್ಲುತ್ತದೆ ಎಂದು ಹೇಳುತ್ತದೆ. ಗ್ರಹಗಳ ಸ್ಥಾನವು ಆಸ್ಟ್ರೇಲಿಯಾಕ್ಕಿಂತ ಭಾರತ ತಂಡಕ್ಕೆ ಅನುಕೂಲಕರವಾಗಿದೆ ಎಂಬುದು ಸ್ಪಷ್ಟವಾಗಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications