ಮನೆ ಕಟ್ಟುವಾಗ ವಾಸ್ತು ಪಾಲಿಸದಿದ್ದರೆ ಏನಾಗುತ್ತದೆ? ಇಲ್ಲಿವೆ 5 ಪ್ರಮುಖ ನಿಯಮಗಳು
ಮನೆ ನಿರ್ಮಾಣ ಮಾಡುವಾಗ ನಾವು ವಾಸ್ತು ಶಾಸ್ತ್ರವನ್ನು ತಪ್ಪದೆ ಪಾಲಿಸುವುದು ಒಳ್ಳೆಯದು ಎಂದು ವಾಸ್ತು ಶಾಸ್ತ್ರದ ತಜ್ಙರು ಹೇಳುತ್ತಾರೆ. ಮನೆ ಕೇವಲ ಇಟ್ಟಿಗೆ ಮತ್ತು ಸಿಮೆಂಟ್ ಕಟ್ಟಡವಲ್ಲ ಇದು ಐದು ಮೂಲಭೂತ ಅಂಶಗಳ ಸಮತೋಲನದ ಮೇಲೆ ನಿಂತಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಅಡಿಪಾಯದಿಂದ ಗೋಡೆಗಳವರೆಗೆ ಪ್ರತಿಯೊಂದು ಭಾಗವು ಸರಿಯಾದ ರೀತಿಯಲ್ಲಿ ನಿರ್ಮಾಣವಾಗಬೇಕು. ಇಲ್ಲದಿದ್ದರೆ ಮನೆಯಲ್ಲಿರುವವರ ಜೀವನದ ಮೇಲೆ ನಕಾರಾತ್ಮಕ ಶಕ್ತಿಯು ಪರಿಣಾಮ ಬೀರುತ್ತದೆ.
ಅಡಿಪಾಯದ ಬಲವಾಗಿದ್ದರೆ ಕಟ್ಟಡವು ಬಲವಾಗಿರುತ್ತದೆ
ಮನೆಯ ಅಡಿಪಾಯ ಎಷ್ಟು ಬಲವಾಗಿರುತ್ತದೆ ಅಷ್ಟೆ ಬಲವಾಗಿ ಮನೆ ಕಟ್ಟಡ ಇರುತ್ತದೆ. ಹೆಚ್ಚಾಗಿ ನೈಋತ್ಯ ದಿಕ್ಕಿನ ಅಡಿಪಾಯವು ಹೆಚ್ಚು ಆಳವಾಗಿಯೂ ಮತ್ತು ಭಾರವಾಗಿಯೂ ಇರಬೇಕು ಈ ಭಾಗವು ದುರ್ಭಲವಾದ್ದರೆ ಮನೆಯ ಯಜಮಾನರಿಗೆ ಆರ್ಥಿಕ ನಷ್ಟ ಮತ್ತು ಆರೋಗ್ಯದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರ ಜೊತೆಗೆ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮನೆಯ ನೆಲಮಟ್ಟವು ರಸ್ತೆಯ ನೆಲಮಟ್ಟಕಿಂತ ಸ್ವಲ್ಪ ಎತ್ತರದಲ್ಲಿ ಇರುವುದು ಒಳ್ಳೆಯದು.

ಒಂದೆ ಸೈಜಿನ ಗೋಡೆಗಳ ನಿರ್ಮಾಣ
ಮನೆ ಕಟ್ಟುವಾಗ ಎಲ್ಲರು ಒಂದೆ ಸೈಜಿನ ಗಾತ್ರದಲ್ಲಿ ಗೋಡೆಗಳನ್ನು ನಿರ್ಮಿಸುತ್ತಾರೆ ಆದರೆ ಇದು ವಾಸ್ತು ಪ್ರಕಾರ ಎಷ್ಟು ಸರಿ? ಅದಕ್ಕೆ ಇಲ್ಲಿದೆ ಪರಿಹಾರ.
ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಗೋಡೆಗಳು ದಪ್ಪಾವಾಗಿ ಮತ್ತು ಎತ್ತರವಾಗಿ ಇರಬೇಕು.
ಉತ್ತರ ಮತ್ತು ಪೂರ್ವ ದಿಕ್ಕಿನ ಗೋಡೆಗಳು ತೆಳ್ಳಗಾಗಿರಬೇಕು. ಇದರಿಂದ ಸೂರ್ಯನ ಬೆಳಕು ಮತ್ತು ಗಾಳಿ ಸರಿಯಾಗಿ ಮನೆಗೆ ಪ್ರವೇಶಿಸುತ್ತದೆ. ಈ ನಿಯಮ ಪಾಲಿಸದಿದ್ದರೆ, ಮನೆಯೊಳಗೆ ಅಶಾಂತಿ ಹೆಚ್ಚಾಗಿ, ಅನಾರೋಗ್ಯದ ಸಮಸ್ಯೆಗಳು ಕಾಡಬಹುದು.
ಪಕ್ಕದ ಮನೆ ಗೋಡೆಗೆ ಆಧಾರ
ನಮ್ಮ ಮನೆಯ ಗೋಡೆಗಳು ಬೇರೆ ಮನೆಯ ಗೋಡೆಗಳಿಗೆ ಅಂಟಿರಬಾರದು ಮತ್ತು ಅದಕ್ಕೆ ಅವಲಂಭಿಸಿರಬಾರದು. ಇದರಿಂದ ಮನೆಗೆ ವಾಸ್ತು ದೋಷ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರತಿಯೊಂದು ಮನೆಗೂ ತನ್ನದೆ ಆದ ಗಟ್ಟಿಯಾದ ಗೋಡೆಗಳನ್ನು ಹೊಂದುವುದು ಒಳ್ಳೆಯದು ಇದರಿಂದ ಮನೆಯು ಗಟ್ಟಿಯಾಗಿರುತ್ತದೆ ಮತ್ತು ವಾಸ್ತು ಶಾಸ್ತ್ರವನ್ನು ಪಾಲಿಸಿದಂತಾಗುತ್ತದೆ.
ಮೇಲ್ಛಾವಣಿ ಸುತ್ತಲಿನ ವಾಸ್ತು
ಮನೆಯ ಮೇಲ್ಛಾವಣಿ ಸುತ್ತಲು ನಾವು ಕಟ್ಟುವ ರಕ್ಷಾ ಗೋಡೆಗಳು, ಕಡಿಮೆ ಎತ್ತರದ ಗೋಡೆಗಳನ್ನು ನಿರ್ಮಿಸಿರುತ್ತಾರೆ. ನೈಋತ್ಯ ಭಾಗದಲ್ಲಿ ಸ್ವಲ್ಪ ಎತ್ತರವಾಗಿಯೂ, ಈಶಾನ್ಯ ಭಾಗದಲ್ಲಿ ಸ್ವಲ್ಪ ಕಡಿಮೆಯಾಗಿಯೂ ಇರುವುದು ಒಳ್ಳೆಯದು. ಇದು ಮನೆಯ ಶಕ್ತಿಯ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ಗೋಡೆಗಳಲ್ಲಿ ಬಿರುಕುಗಳು ಅಪಶಕುನ
ಮನೆಯ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡರೆ ಅದು ವಾಸ್ತು ಪ್ರಕಾರ ಅಶುಭಕರ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಈಶಾನ್ಯ ದಿಕ್ಕಿನಲ್ಲಿ ಬಿರುಕು ಇದ್ದರೆ ಅದು ಆರ್ಥಿಕ ನಷ್ಟ ಮತ್ತು ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿರಬಹುದು. ಆದ್ದರಿಂದ ಇಂತಹ ದೋಷಗಳನ್ನು ತಕ್ಷಣ ಸರಿಪಡಿಸುವುದು ಅತ್ಯಅಗತ್ಯವಾಗಿದೆ.
-
Vastu Tips: ಮನೆಯಲ್ಲಿ ಎರಡು ಕನ್ನಡಿಗಳು ಎದುರುಬದರಿನಲ್ಲಿ ಇದೆಯಾ? ತಕ್ಷಣ ಬದಲಿಸಿ -
ರಾಶಿಯಷ್ಟೇ ಅಲ್ಲ, ದಿಕ್ಕು ಕೂಡಾ ಮುಖ್ಯ: ರಾಶಿಗನುಗುಣವಾಗಿ ನಿಮ್ಮ ಅದೃಷ್ಟ ದಿಕ್ಕು ಯಾವುದು ಗೊತ್ತಾ? -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ













Click it and Unblock the Notifications