Today Variyan Yoga: ಇಂದು ರೂಪಗೊಂಡ ವರಿಯಾನ ಯೋಗ: ಕನ್ಯಾ ಸೇರಿದಂತೆ ಈ 5 ರಾಶಿಯವರಿಗೆ ಸಂಪತ್ತು, ಸಮೃದ್ಧಿ
ಭಾನುವಾರ ಮಾರ್ಚ್ 31ರಂದು ವೃಶ್ಚಿಕ ರಾಶಿಯ ನಂತರ ಚಂದ್ರನು ಧನು ರಾಶಿಗೆ ಸಾಗಲಿದ್ದಾನೆ. ಅಲ್ಲದೆ ಇಂದು ಚೈತ್ರ ಮಾಸದ ಕೃಷ್ಣ ಪಕ್ಷದ ಷಷ್ಠಿ ತಿಥಿಯಾಗಿದ್ದು, ಈ ದಿನ ವರಿಯಾನ ಯೋಗ, ರವಿಯೋಗ, ಸರ್ವಾರ್ಥ ಸಿದ್ಧಿ ಯೋಗ, ಜ್ಯೇಷ್ಠ ನಕ್ಷತ್ರಗಳ ಶುಭ ಸಂಯೋಗ ನಡೆಯುತ್ತದೆ. ಹೀಗಾಗಿ ಈ ದಿನ ತುಂಬಾ ವಿಶೇಷವಾಗಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ 5 ರಾಶಿಯವರು ಇಂದು ರೂಪುಗೊಳ್ಳುವ ಮಂಗಳಕರ ಯೋಗದ ಲಾಭವನ್ನು ಪಡೆಯುತ್ತಾರೆ. ಈ ರಾಶಿಯವರ ಆರ್ಥಿಕ ಸ್ಥಿತಿ ಬದಲಾಗಲಿದೆ. ಜೊತೆಗೆ ಅವರು ಉತ್ತಮ ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ.
ಇಲ್ಲಿ ಜ್ಯೋತಿಷ್ಯ ಪರಿಹಾರಗಳನ್ನು ಸಹ ನೀಡಲಾಗಿದೆ. ಈ ಪರಿಹಾರಗಳನ್ನು ಅನುಸರಿಸುವುದರಿಂದ ಜಾತಕದಲ್ಲಿ ಸೂರ್ಯ ಗ್ರಹದ ಸ್ಥಾನವು ಬಲಗೊಳ್ಳುತ್ತದೆ. ಈ ಯೋಗಗಳು ಕೆಲ ರಾಶಿಯವರ ಗೌರವ ಹೆಚ್ಚಿಸುತ್ತವೆ. ಹಾಗಾದರೆ ಇಂದು ಅಂದರೆ ಮಾರ್ಚ್ 31 ರಂದು ಯಾವ ರಾಶಿಯವರು ಅದೃಷ್ಟವಂತರು ಎಂದು ತಿಳಿಯೋಣ.

*ಮಾರ್ಚ್ 31 ಮಿಥುನ ರಾಶಿಯವರಿಗೆ ಹೇಗಿರುತ್ತದೆ?
ಮಾರ್ಚ್ 31 ಮಿಥುನ ರಾಶಿಯವರಿಗೆ ಆತ್ಮವಿಶ್ವಾಸ ತುಂಬಲಿದೆ. ಮಿಥುನ ರಾಶಿಯವರು ತಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸಲು ಅದ್ದೂರಿಯಾಗಿ ಖರ್ಚು ಮಾಡುತ್ತಾರೆ. ಅವರ ಕುಟುಂಬ ಸದಸ್ಯರ ಅಗತ್ಯಗಳನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ. ಉದ್ಯಮಿಗಳಿಗೆ ಅನೇಕ ಪ್ರಗತಿಯ ಮಾರ್ಗಗಳು ತೆರೆದುಕೊಳ್ಳುತ್ತವೆ. ಇದರಿಂದ ಅವರ ಮನಸ್ಸು ಸಂತೋಷವಾಗಿರುತ್ತದೆ.
ಪ್ರೇಮಿಗಳು ಭಾನುವಾರದ ರಜೆಯ ಕಾರಣದಿಂದ ಸುಂದರವಾದ ಸ್ಥಳಕ್ಕೆ ಭೇಟಿ ನೀಡಬಹುದು. ಪರಸ್ಪರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ವಿವಾಹಿತರು ಇಂದು ತಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಾರೆ. ಕುಟುಂಬ ಸದಸ್ಯರೊಂದಿಗೆ ಎಲ್ಲೋ ಹೊರಗೆ ಹೋಗಲು ಯೋಜಿಸಬಹುದು. ನೀವು ಇಂದು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಅದು ನಿಮಗೆ ಒಳ್ಳೆಯದು.
ಮಿಥುನ ರಾಶಿಯವರಿಗೆ ಭಾನುವಾರ ಪರಿಹಾರ: ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗಾಗಿ, ತಾಮ್ರದ ಪಾತ್ರೆಯಲ್ಲಿ ಅಕ್ಕಿ, ಸ್ವಲ್ಪ ಕೆಂಪು ಮೆಣಸಿನಕಾಯಿ ಮತ್ತು ಕೆಂಪು ಹೂವುಗಳನ್ನು ನೀರಿನಲ್ಲಿ ಬೆರೆಸಿ ಸೂರ್ಯ ದೇವರಿಗೆ ಅರ್ಪಿಸಿ.

*ಕನ್ಯಾ ರಾಶಿಯವರಿಗೆ ಮಾರ್ಚ್ 31 ಹೇಗಿರುತ್ತದೆ?
ಕನ್ಯಾ ರಾಶಿಯವರಿಗೆ ಮಾರ್ಚ್ 31 ಒಳ್ಳೆಯ ದಿನವಾಗಿದೆ. ಕನ್ಯಾ ರಾಶಿಯ ಜನರು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಆರೋಗ್ಯದ ವಿಷಯದಲ್ಲಿ ಉತ್ತಮವಾಗಿರುತ್ತಾರೆ. ನಿಮ್ಮ ಗುರಿಗಳ ಮೇಲೆ ನೀವು ಗಮನಹರಿಸಿದರೆ ಮಾತ್ರ, ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಅಪೂರ್ಣ ಕಾರ್ಯಗಳು ಇಂದು ಪೂರ್ಣಗೊಳ್ಳುತ್ತವೆ.
ಉದ್ಯೋಗಸ್ಥರು ಭಾನುವಾರದ ರಜೆಯಿಂದಾಗಿ ಮೋಜು ಮಾಡುತ್ತಾರೆ. ಅವರ ವೃತ್ತಿಜೀವನದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ. ನೀವು ಆರಾಮದಾಯಕ ಜೀವನವನ್ನು ನಡೆಸಲು ಸಾಕಷ್ಟು ಹಣವನ್ನು ಹೊಂದಿರುತ್ತೀರಿ. ಭಾನುವಾರ ರಜೆ ಇರುವುದರಿಂದ ಮನೆಯಲ್ಲಿ ಮಕ್ಕಳೊಂದಿಗೆ ಹೊಸ ಖಾದ್ಯಗಳನ್ನೂ ತಿನ್ನಬಹುದು.
ಕನ್ಯಾ ರಾಶಿಗೆ ಭಾನುವಾರ ಪರಿಹಾರ: ಆರ್ಥಿಕ ಪ್ರಗತಿಗಾಗಿ, ಸೂರ್ಯ ದೇವರಿಗೆ ಅಕ್ಕಿಯನ್ನು ನೀರಿನಲ್ಲಿ ಬೆರೆಸಿ ಅರ್ಪಿಸಿ, ಸೂರ್ಯ ದೇವ ಮಂತ್ರವನ್ನು ಜಪಿಸಿ.

* ವೃಶ್ಚಿಕ ರಾಶಿಯವರಿಗೆ ಮಾರ್ಚ್ 31 ಹೇಗಿರುತ್ತದೆ?
ಮಾರ್ಚ್ 31 ವೃಶ್ಚಿಕ ರಾಶಿಯವರಿಗೆ ಉತ್ತಮ ದಿನವಾಗಿದೆ. ವೃಶ್ಚಿಕ ರಾಶಿಯವರು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಎಲ್ಲಾ ಸದಸ್ಯರಿಗೂ ವೃಶ್ಚಿಕ ರಾಶಿಯವರು ಇಂದು ಯುಗಾದಿ ಶಾಪಿಂಗ್ ಮಾಡುವ ಸಾಧ್ಯತೆ ಇದೆ. ಇದರಿಂದ ಕುಟುಂಬದಲ್ಲಿ ಸಂತೋಷ ಇರುತ್ತದೆ.
ನಿಮ್ಮ ಕೆಲವು ವ್ಯಾಪಾರ ಸಂಬಂಧಿತ ಯೋಜನೆಗಳು ವೇಗವನ್ನು ಪಡೆಯುತ್ತವೆ. ಇದರಿಂದಾಗಿ ನೀವು ಉತ್ತಮ ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ ಮತ್ತು ನಿಮ್ಮ ವ್ಯಾಪಾರದ ವಿಶ್ವಾಸಾರ್ಹತೆಯೂ ಹೆಚ್ಚಾಗುತ್ತದೆ. ಬಹಳ ದಿನಗಳಿಂದ ಯಾವುದಾದರೊಂದು ಕೆಲಸದ ಬಗ್ಗೆ ಚಿಂತಿಸುತ್ತಿದ್ದರೆ ಅದು ಇಂದು ಮುಗಿದು ನೆಮ್ಮದಿಯ ನಿಟ್ಟುಸಿರು ಬಿಡಬಹುದು.
ಯಾವುದೇ ಕಾನೂನು ವಿಷಯದಲ್ಲಿ ಅನುಭವಿ ವ್ಯಕ್ತಿಯಿಂದ ಸಲಹೆಯನ್ನು ಪಡೆದರೆ ಅದು ನಿಮಗೆ ಒಳ್ಳೆಯದು. ಉದ್ಯೋಗಸ್ಥರು ಭಾನುವಾರದ ರಜೆಯ ಕಾರಣ ವಿಶ್ರಾಂತಿ ಪಡೆಯುತ್ತಾರೆ ಮತ್ತು ಸ್ನೇಹಿತರೊಂದಿಗೆ ಚಲನಚಿತ್ರವನ್ನು ವೀಕ್ಷಿಸಬಹುದು ಅಥವಾ ಇತರ ಕೆಲವು ಯೋಜನೆಗಳನ್ನು ಮಾಡಬಹುದು.
ವೃಶ್ಚಿಕ ರಾಶಿಯವರಿಗೆ ಭಾನುವಾರದ ಪರಿಹಾರ: ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ ಮತ್ತು ಆದಿತ್ಯ ಸ್ತೋತ್ರವನ್ನು ಪಠಿಸಿ. ಈ ದಿನ ಉಪ್ಪು ಮುಕ್ತ ಆಹಾರ ನಿಮಗೆ ಪ್ರಯೋಜನಕಾರಿಯಾಗಿದೆ.

*ಧನು ರಾಶಿಯವರಿಗೆ ಮಾರ್ಚ್ 31 ಹೇಗಿರುತ್ತದೆ?
ಧನು ರಾಶಿಯವರಿಗೆ ಮಾರ್ಚ್ 31 ಲಾಭದಾಯಕವಾಗಿರುತ್ತದೆ. ಧನು ರಾಶಿಯವರು ಅವರು ಹೊಸದನ್ನು ಕಲಿಯುವರು. ಧನು ರಾಶಿಯವರು ಇಂದು ತಮ್ಮ ಕುಟುಂಬದ ಸದಸ್ಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಮತ್ತು ಸ್ನೇಹಿತರೊಂದಿಗೆ ಬೆರೆಯುವ ಅವಕಾಶವನ್ನು ಸಹ ಪಡೆಯುತ್ತಾರೆ. ಕುಟುಂಬದ ಸದಸ್ಯರ ವಿವಾಹವು ನಿಶ್ಚಯವಾದಾಗ ನೀವು ಸಂತೋಷವಾಗಿರುತ್ತೀರಿ.
ವಿಶೇಷ ಸ್ನೇಹಿತರ ಜೊತೆ ವಿಹಾರಕ್ಕೆ ಇಂದು ನೀವು ಹೋಗಬಹುದು. ಅದು ನಿಮ್ಮ ಮನಸ್ಸನ್ನು ಸಂತೋಷವಾಗಿರಿಸುತ್ತದೆ. ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವವರ ಆಸೆ ಈಡೇರುವ ಲಕ್ಷಣ ಕಾಣುತ್ತಿದೆ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುತ್ತೀರಿ. ಹಿರಿಯ ಆಡಳಿತ ವ್ಯಕ್ತಿಗಳೊಂದಿಗೆ ನಿಮ್ಮ ಪರಿಚಯವೂ ಹೆಚ್ಚಾಗುತ್ತದೆ.
ಧನು ರಾಶಿಗೆ ಭಾನುವಾರ ಪರಿಹಾರ: ಹಣದ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಪಡೆಯಲು, ನೀರಿನಲ್ಲಿ ಬೆಲ್ಲ ಮತ್ತು ತುಪ್ಪವನ್ನು ಅರ್ಪಿಸಿ ಮತ್ತು ಸೂರ್ಯ ಚಾಲೀಸಾವನ್ನು ಪಠಿಸಿ.

*ಕುಂಭ ರಾಶಿಯವರಿಗೆ ಮಾರ್ಚ್ 31 ಹೇಗಿರುತ್ತದೆ?
ಕುಂಭ ರಾಶಿಯವರಿಗೆ ಮಾರ್ಚ್ 31 ತುಂಬಾ ಫಲಕಾರಿಯಾಗಲಿದೆ. ಕುಂಭ ರಾಶಿಯವರ ಶಕ್ತಿ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಅವರು ಭವಿಷ್ಯದ ಯೋಜನೆಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ನಿಮ್ಮ ಮಕ್ಕಳ ವೃತ್ತಿಗೆ ಸಂಬಂಧಿಸಿದಂತೆ ಸಮಸ್ಯೆಯಿದ್ದರೆ, ಇಂದು ನೀವು ಅದರಿಂದ ಪರಿಹಾರ ಪಡೆಯಬಹುದು.
ವ್ಯಾಪಾರದ ಕೆಲಸಕ್ಕೆ ಸಂಬಂಧಿಸಿದಂತೆ ನೀವು ಪ್ರವಾಸಕ್ಕೆ ಹೋಗಬಹುದು. ಅದು ನಿಮಗೆ ಪ್ರಯೋಜನಕಾರಿಯಾಗಿದೆ. ಕುಟುಂಬದ ಸದಸ್ಯರಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಇದು ಮನೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ವಿದೇಶಿ ವ್ಯವಹಾರದಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಅದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ನೀವು ಒಂಟಿಯಾಗಿದ್ದರೆ ಈ ದಿನ ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು. ಭಾನುವಾರವನ್ನು ವಿನೋದದಿಂದ ಕಳೆಯುತ್ತೀರಿ ಮತ್ತು ನೀವು ಹೊಸದನ್ನು ಕಲಿಯುವಿರಿ.
ಕುಂಭ ರಾಶಿಯವರಿಗೆ ಭಾನುವಾರದ ಪರಿಹಾರ: ನಿಮ್ಮ ಇಚ್ಛೆಯನ್ನು ಪೂರೈಸಲು, ಆಲದ ಎಲೆಗಳ ಮೇಲೆ ನಿಮ್ಮ ಆಸೆಯನ್ನು ಬರೆದು ನಂತರ ಹರಿಯುವ ನೀರಿನಲ್ಲಿ ತೇಲಿ ಬಿಡಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)











Click it and Unblock the Notifications