ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಸಮಯದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?
Recommended Video

ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬ ಮಾತೊಂದಿದೆ. ಹಿರಿಯರಾದ ಶಿವಕುಮಾರ ಸ್ವಾಮಿಗಳು ಶಿವೈಕ್ಯರಾದ ದಿನ, ಕಾಲವನ್ನು ಪರಾಂಬರಿಸುವಾಗ ಅದೆಂಥ ಅಚ್ಚರಿಯ ಸಂಗತಿಗಳು ತಿಳಿದುಬರುತ್ತಿವೆ ಗೊತ್ತೆ? ಅಂಥ ವಿಚಾರಗಳನ್ನು ನಿಮ್ಮೊಂದಿಗೆ ಅಲ್ಲದೆ ಇನ್ಯಾರ ಜತೆಗೆ ಹಂಚಿಕೊಳ್ಳಲು ಸಾಧ್ಯ?
ಜನವರಿ 21ನೇ ತಾರೀಕು, ಸೋಮವಾರ ಬೆಳಗ್ಗೆ 11.44ಕ್ಕೆ ಶಿವಕುಮಾರ ಸ್ವಾಮೀಜಿ ಕಾಲವಾಗಿದ್ದಾರೆ ಎಂಬುದು ಸದ್ಯಕ್ಕೆ ಇರುವ ಮಾಹಿತಿ. ಈಗ ಉತ್ತರಾಯಣ ಪರ್ವ ಕಾಲ. ಅದರಲ್ಲೂ ಪೌಷ ಮಾಸ, ಶುಕ್ಲ ಪಕ್ಷದ ಪೌರ್ಣಮಿ. ಚಂದ್ರನಿಗೆ ಸಂಪೂರ್ಣ ಬಲವಿರುವ ಸಂದರ್ಭ ಇದು. ಇನ್ನು ನಕ್ಷತ್ರದ ವಿಚಾರಕ್ಕೆ ಬಂದರೆ, ಪುಷ್ಯ ನಕ್ಷತ್ರ.
ಈಗ ವೈದ್ಯರು ನೀಡಿದ ಸಮಯಕ್ಕಿಂತ ಜ್ಯೋತಿಷ್ಯ ಮತ್ತೊಂದು ಸಮಯ ಹೇಳುತ್ತಿದೆ. ಈ ವಿಚಾರದಲ್ಲಿ ಗೊಂದಲ ಬೇಡ. ಏಕೆಂದರೆ ಬೆಳಗ್ಗೆ ಸೂರ್ಯೋದಕ್ಕೂ ಮೊದಲು ಅಂದರೆ 5.12 ರಿಂದ 6.50ರೊಳಗೆ ಅಥವಾ 6.50ರಿಂದ ಸ್ವಲ್ಪ ಕಾಲದೊಳಗೆ ಶಿವಕುಮಾರ ಸ್ವಾಮಿಗಳ ಆತ್ಮವು ದೇಹದಿಂದ ಪ್ರಯಾಣ ಆರಂಭಿಸಿದ ಸಾಧ್ಯತೆ ಇರುತ್ತದೆ.

ಆ ಅವಧಿಯಲ್ಲಿ ಧನು ಅಥವಾ ಮಕರ ಲಗ್ನ ಇರುತ್ತದೆ. ಆ ಎರಡೂ ಲಗ್ನಗಳ ಗ್ರಹ ಸ್ಥಿತಿಯನ್ನು ಲೆಕ್ಕ ಹಾಕಿ ನೋಡುವುದಾದರೆ, ಶ್ರೀಗಳ ಆತ್ಮವು ದೇಹದಿಂದ ಬಿಡುಗಡೆ ಹೊಂದಿದ ಸಮಯ ಅದಾಗಿರಬಹುದು ಎಂದು ಅಂದಾಜಿಸಬಹುದು. ಆ ವೇಳೆ ಕಾಲವಾದವರಿಗೆ ಮುಂದಿನ ಜನ್ಮ ಎಂಬುದು ಇರುವುದಿಲ್ಲ. ಮೋಕ್ಷ ಪ್ರಾಪ್ತಿ ಆಗುತ್ತದೆ.
ಇನ್ನು ಬೆಳಗ್ಗೆ 11.44 ಅಂತ ಲೆಕ್ಕಕ್ಕೆ ತೆಗೆದುಕೊಂಡರೂ ಕೆಲ ಮುಖ್ಯ ಹಾಗೂ ಅಷ್ಟೇ ಆಸಕ್ತಿಕರ ಸಂಗತಿಗಳು ಹೇಳಲಿಕ್ಕಿದೆ. ಈ ಸಮಯದಲ್ಲಿ ದೇಹ ತ್ಯಜಿಸಿದ್ದರೆ, ಸೂಕ್ಷ್ಮ ಸ್ವರೂಪದಲ್ಲಿ ಶಿವಕುಮಾರ ಸ್ವಾಮಿಗಳು ಸಿದ್ದಗಂಗಾ ಮಠದಲ್ಲಿಯೇ ಇರುತ್ತಾರೆ. ಅವರ ಭೌತಿಕ ಕಾಯಕ್ಕೆ ಮಾತ್ರ ಇಲ್ಲಿಂದ ಬಿಡುಗಡೆಯೇ ವಿನಾ ಚಿರಂಜೀವಿಯಾಗಿ ಅವರ ಆತ್ಮ ಇಲ್ಲೇ ಉಳಿಯುತ್ತದೆ.
ಈ ಸಮಯದಲ್ಳಾದರೆ ಅವರ ಆತ್ಮಕ್ಕೆ ಮೋಕ್ಷ ಸಿಗುವ ಸಾಧ್ಯತೆ ಇಲ್ಲ. ಇನ್ನೊಂದು ಮಾತು, ಇನ್ನು ಮುಂದೆ ಕೂಡ ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಯಾವುದೇ ಶುಭ ಕಾರ್ಯಗಳಿಗೂ ಅವರ ಆಶೀರ್ವಾದ ಇದ್ದೇ ಇರುತ್ತದೆ. ಪವಾಡಗಳು ಅನುಭವಕ್ಕೆ ಬರುತ್ತವೆ. ಒಟ್ಟಾರೆ ಈ ದಿನವು ಬಹಳ ವಿಶಿಷ್ಟವಾಗಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications