Powerful Vastu Plants: ಮನೆಗೆ ಪಾಸಿಟಿವ್ ಎನರ್ಜಿ ಬೇಕಾ? ಈ ಸಸ್ಯಗಳನ್ನು ಇಡಿ, ಜೀವನವೇ ಬದಲಾಗುತ್ತದೆ
ಮನೆ ನಿರ್ಮಾಣದ ನಂತರ ನಾವು ಅದರ ಒಳಾಂಗಣ ವಿನ್ಯಾಸ ಮತ್ತು ವಾತಾವರಣವು ಕುಟುಂಬದ ಜೀವನದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ವಾಸ್ತು ಶಾಸ್ತ್ರದ ಕೆಲವು ತತ್ವಗಳನ್ನು ಪಾಲಿಸುವುದು ಕುಟುಂಬದ ಸಂತೋಷ ಮತ್ತು ಸಮೃದ್ಧಿಗೆ ಮುಖ್ಯವೆಂದು ನಂಬಲಾಗಿದೆ. ಮನೆಗೆ ಧನಾತ್ಮಕ ಶಕ್ತಿ ಬರಲು ಸಸ್ಯಗಳ ಪಾತ್ರವೂ ಬಹು ಮುಖ್ಯವಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ವಿಶೇಷ ಸಸ್ಯಗಳನ್ನು ಬೆಳೆಸುವುದರಿಂದ ಆರ್ಥಿಕ ಅಭಿವೃದ್ಧಿ ಮತ್ತು ಮಾನಸಿಕ ಶಾಂತಿ ದೊರೆಯುತ್ತದೆ. ದಾಸವಾಳ, ನಿಂಬೆ, ಅಶೋಕ, ಮನಿ ಪ್ಲಾಂಟ್, ತುಳಸಿ ಹಾಗೂ ಗುಲಾಬಿ ಸಸ್ಯಗಳು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇವು ಮನೆಗೆ ಪಾಸಿಟಿವ್ ಎನರ್ಜಿ ತರಲು ಸಹಕಾರಿಯಾಗುತ್ತವೆ.

ತುಳಸಿ ಸಸ್ಯವನ್ನು ಅತ್ಯಂತ ಪವಿತ್ರವೆಂದು ಹೇಳಲಾಗುತ್ತದೆ. ಇದನ್ನು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಟ್ಟರೆ ಆರ್ಥಿಕ ಸ್ಥಿರತೆಯು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ಮನಿ ಪ್ಲಾಂಟ್ ಸಸ್ಯವು ಹಣಕಾಸಿನ ಬೆಳವಣಿಗೆಗೆ ಸಹಾಯಕವಾಗುತ್ತದೆ.
ಅಶೋಕ ಮರವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಟ್ಟರೆ ಮನೆಯಲ್ಲಿನ ಕಲಹಗಳು ಕಡಿಮೆಯಾಗುತ್ತವೆ. ನಿಂಬೆ ಗಿಡವು ವಾಸ್ತು ದೋಷಗಳನ್ನು ಕಡಿಮೆ ಮಾಡುತ್ತದೆ ಮತ್ತು ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುತ್ತವೆ.
ಲಕ್ಕಿ ಬಿದಿರು ಸಸ್ಯವನ್ನು ಅದೃಷ್ಟ, ಸಮೃದ್ಧಿ ಮತ್ತು ಉತ್ತಮ ಆರೋಗ್ಯದ ಸಂಕೇತವಾಗಿ ಪರಿಗಣಿಸಲ್ಪಡುತ್ತದೆ. ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡುವುದು ಉತ್ತಮ. ಇದು ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ಮನೆಗೆ ಧನಾತ್ಮಕ ಶಕ್ತಿ ತರಲು ಸಹಾಯ ಮಾಡುತ್ತದೆ. ದಾಸವಾಳ, ಗುಲಾಬಿ ಮತ್ತು ಮಲ್ಲಿಗೆ ಹೂವುಗಳು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗುತ್ತವೆ.
ಆದರೆ ವಾಸ್ತು ಪ್ರಕಾರ ಕೆಲವು ಸಸ್ಯಗಳನ್ನು ಮನೆಯಲ್ಲಿ ಬೆಳೆಸಬಾರದು. ಮುಳ್ಳಿನ ಸಸ್ಯಗಳು ಮತ್ತು ಹಾಲಿನ ರಸ ಹೊರಹೊಮ್ಮಿಸುವ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಇವುಗಳನ್ನು ಬೆಳಸದೆ ಇರುವುದು ಉತ್ತಮ.
ಸಸ್ಯಗಳನ್ನು ದಿಕ್ಕಿನ ಪ್ರಕಾರವೂ ನೆಡುವುದು ಪ್ರಮುಖವಾದ ವಿಷಯ ಆಗಿದೆ. ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಸಣ್ಣ ಸಸ್ಯಗಳನ್ನು ಮತ್ತು ದಕ್ಷಿಣ, ಪಶ್ಚಿಮ ಭಾಗಗಳಲ್ಲಿ ದೊಡ್ಡ ಮರಗಳನ್ನು ಬೆಳೆಸುವುದು ಒಳ್ಳೆಯದು ಎಂದು ವಾಸ್ತು ತಜ್ಞರು ಸೂಚಿಸುತ್ತಾರೆ.
ಒಟ್ಟಿನಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಹೇಳುವುದಾದರೆ, ಸರಿಯಾದ ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ, ಆರೋಗ್ಯ ಮತ್ತು ಸಂಪತ್ತು ಹೆಚ್ಚುತ್ತದೆ ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ.












Click it and Unblock the Notifications