ಕರ್ಕ : ಉತ್ತಮ ಫಲಿತಾಂಶಗಳು ಲಭಿಸಲಿವೆ
ಪುರುಷರು: ಈ ತಿಂಗಳು ನಿಮಗೆ ಉತ್ತಮ ಫಲಿತಾಂಶಗಳು ಲಭಿಸಲಿವೆ. ವೃತ್ತಿಪರವಾಗಿ ನೋಡಿದಾಗ ಉತ್ತಮ ಸಮಯ ಕಾಣಿಸುತ್ತಿದೆ. ಸಹೋದ್ಯೋಗಿ ಹಾಗೂ ಮೇಲಧಿಕಾರಿಗಳಿಂದ ಸಹಕಾರ ಲಭಿಸಲಿದೆ. ಉದ್ಯೋಗ ನಿಮಿತ್ತ ಪರದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಅಲ್ಲಿ ಉತ್ತಮ ಸ್ಥಾನಮಾನ, ಇನ್ನೂ ಹೆಚ್ಚಿನ ಅಧಿಕಾರ ಯೋಗ ಸಿಗುತ್ತದೆ.
ಸಾಮಾನ್ಯವಾಗಿಯೇ ಈ ತಿಂಗಳು ನಿಮಗೆ ಪ್ರಯಾಣಗಳು ಹೆಚ್ಚು ಇವೆ. ಅನ್ಯರೊಡನೆ ಮಾತನಾಡುವಾಗ ಎಚ್ಚರ ಇರಲಿ. ನಿಮ್ಮನ್ನು ಅವರು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆಗಳು ಇವೆ. ತಿಂಗಳ ಮಧ್ಯಭಾಗ ದಾಟುತ್ತಿದ್ದಂತೆ ಕೆಲಸದ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಆದರೆ ಆರ್ಥಿಕವಾಗಿ ನೋಡಿದಾಗ ಈ ತಿಂಗಳು ಪೂರ್ಣವಾಗಿ ಅತ್ಯುತ್ತಮವಾಗಿದೆ.

ಹಣದ ಒಳಹರಿವು ಉತ್ತಮವಾಗಿದ್ದು, ಅನಿರೀಕ್ಷಿತ ಧನಲಾಭ ಸಹ ಕಾಣಿಸುತ್ತಿದೆ. ದುಡ್ಡು ಉತ್ತಮವಾಗಿ ಬರುತ್ತಿರುವುದರಿಂದ ಖರ್ಚುಗಳನ್ನೂ ಹೆಚ್ಚು ಮಾಡುತ್ತೀರಿ. ಅದರಲ್ಲಿಯೂ ಐಷಾರಾಮಿ ಜೀವನ ಅರಿವಿಲ್ಲದಂತೆ ರೂಢಿ ಆಗಿಬಿಡುತ್ತದೆ. ಆದರೆ ಆ ಹಣವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡಿದಲ್ಲಿ ಮಾತ್ರ ಅತ್ಯುತ್ತಮ.
ಸ್ತ್ರೀಯರು: ಆರೋಗ್ಯ ಉತ್ತಮವಾಗಿ ಕಾಣಿಸುತ್ತಿದೆ. ಆದರೆ ಹೊಸ ಪ್ರಯೋಗಗಳನ್ನು ನಿಮ್ಮ ತ್ವಚೆಯ ಮೇಲೆ ಮಾಡಲು ಹೋಗಿ, ಇಲ್ಲದ ಚರ್ಮ ವ್ಯಾಧಿ ತಂದುಕೊಳ್ಳುವ ಸಾಧ್ಯತೆಗಳಿವೆ. ಹಾಗೆಯೇ ಕಣ್ಣಿನ ಸಮಸ್ಯೆ ಸಹ ಆಗಬಹುದು, ಎಚ್ಚರ. ಬಾಳಸಂಗಾತಿ ಜೊತೆ ಹಲವು ಕಾರ್ಯಕ್ರಮಗಳಿಗೆ ಹೋಗಬಹುದು ಹಾಗೂ ಅವರ ಕಡೆಯಿಂದ ಉಡುಗೊರೆ ಸಹ ಸಿಗಲಿದೆ.
ಕೌಟುಂಬಿಕವಾಗಿ ಉತ್ತಮವಾಗಿ ಕಾಣುತ್ತಿದೆ. ಚಿಕ್ಕಪುಟ್ಟ ವ್ಯಾಪಾರ ವಹಿವಾಟು ಮಾಡುತ್ತಾ ಇದ್ದೀರಿ ಎಂದಾದಲ್ಲಿ ಉತ್ತಮ ಲಾಭ ಇದೆ. ಮನೆಯಲ್ಲಿ ಗೊತ್ತಿಲ್ಲದೆ ಕೊಟ್ಟ ಸಾಲ ಹಿಂತಿರುಗಿ ಬರುತ್ತದೆ.
ವಿದ್ಯಾರ್ಥಿಗಳು: ನಿಮಗಿದು ಅತ್ಯುತ್ತಮ ಸಮಯ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಹಾಗೂ ಶಾಲಾ- ಕಾಲೇಜು ಪರಿಸರದಲ್ಲಿ ಎಲ್ಲರೂ ಗುರುತಿಸುವಂತೆ ಆಗುತ್ತದೆ.
ಪರಿಹಾರ: ಈ ತಿಂಗಳಿನಲ್ಲಿ ಕಷ್ಟ ಆದರೂ ಹೇಗಾದರೂ ಒಮ್ಮೆ ಮೈಸೂರು ಚಾಮುಂಡೇಶ್ವರಿ ದೇವಿ ದರ್ಶನ ಮಾಡಿ ಬನ್ನಿ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications