ಕೋಡಿಶ್ರೀ ಭವಿಷ್ಯ; ಸುಂದರ ಹೆಣ್ಣುಮಕ್ಕಳ ಅಂಗಾಂಗಳನ್ನು ಕಿತ್ತು ತಿನ್ನುತ್ತಾರೆ!
ಹಾಸನ, ಏಪ್ರಿಲ್ 5: ದೇಶದಲ್ಲಿ ಅಶಾಂತಿ, ಮತೀಯಗಲಭೆ, ದೊಂಬಿಗಳು ಹೆಚ್ಚಾಗಿ ಸಾವು-ನೋವುಗಳು ಕೊಲೆಗಳಾಗುತ್ತವೆ ಎಂದು ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠದ ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.
ಈ ವರ್ಷದ ಫಲಾಫಲದ ಬಗ್ಗೆ ಮಾತನಾಡಿದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಅಶಾಂತಿ, ಮತೀಯಗಲಭೆ, ದೊಂಬಿಗಳು, ಸಾವು-ನೋವುಗಳು ಕೊಲೆಗಳಾಗುತ್ತವೆ. ವಿಶೇಷವಾಗಿ ಎಲೆಕ್ಟ್ರಿಕ್ನಿಂದ ಅಪಾಯವಿದೆ ಎಂಬ ಕಹಿ ಭವಿಷ್ಯ ನುಡಿದಿದ್ದಾರೆ.
ಸಮಾಜದಲ್ಲಿ ಸುಂದರವಾದ ಹೆಣ್ಣುಮಕ್ಕಳ ಅಂಗಾಗಳನ್ನು ಕಿತ್ತು ತಿನ್ನುತ್ತಾರೆ. ರಾಜಕೀಯ ವಿಪ್ಲವಾಗುತ್ತದೆ, ರಾಜಕೀಯ ಗುಂಪುಗಳಾಗುತ್ತವೆ. ಬೆಂಕಿಯ ಅನಾಹುತ ಜಾಸ್ತಿ, ಗಾಳಿ, ಸಿಡಿಲು, ಗುಡುಗು ವಿಪರೀತ ಅನಾಹುತಗಳಾಗುತ್ತವೆ. ಇಲ್ಲಿಯತನಕ ಕಂಡು ಕೇಳರಿಯದ ಬಹುದೊಡ್ಡ ಆಘಾತ ಭಾರತದಲ್ಲಿ ಆಗುತ್ತದೆ ಎಂದಿದ್ದಾರೆ.

ಈ ವರ್ಷ ಮಳೆ ಕಂಡಮಂಡಲ ರೀತಿಯಾಗಿದ್ದು, ಆದಲ್ಲಿ ಆಯಿತು ಹೋದಲ್ಲಿ ಹೋಯಿತು. ಮಲೆನಾಡು ಹೋಗಿ ಬಯಲು ಆಗುತ್ತದೆ, ಬಯಲು ಹೋಗಿ ಮಲೆನಾಡು ಆಗುತ್ತದೆ. ಆ ತರ ಅವಕಾಶ ಮಳೆಗೆ ಇದೆ.

ಭಾರತದ ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ ನಡೆಯುತ್ತದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ. ಮುಂಗಾರು ಚೆನ್ನಾಗಿ ಆಗುತ್ತದೆ, ಹಿಂಗಾರು ಕಡಿಮೆ ಎಂದು ತಿಳಿಸಿದ್ದಾರೆ.












Click it and Unblock the Notifications