ಕಟಕ ರಾಶಿಗೆ ಗುರು ಸಂಕ್ರಮಣ: ಈ ರಾಶಿಗಳಿಗೆ ಶುಭ ಫಲ
ಜೂನ್ 2026 ರಲ್ಲಿ ಗುರು ಗ್ರಹವು ಕರ್ಕ ರಾಶಿಗೆ ಪ್ರವೇಶಿಸುತ್ತಿದ್ದಂತೆ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ವೃತ್ತಿಯಲ್ಲಿ ಬೆಳವಣಿಗೆ, ಅದೃಷ್ಟ ಮತ್ತು ಭಾವನಾತ್ಮಕ ಸ್ಪಷ್ಟತೆ ಈ ಸಂದರ್ಭದಲ್ಲಿ ಸಿಗಲಿದೆ. ಗುರು ಈ ರಾಶಿಯಲ್ಲಿ ಸಂಚಾರ ಮಾಡುವಾಗ ಜೀವನವು ಶಾಂತವಾಗಿರುತ್ತದೆ ಜೊತೆಗೆ ಹೆಚ್ಚು ಸ್ಥಿರವಾಗಿರುತ್ತದೆ. ಕಟಕ ರಾಶಿಯಲ್ಲಿ ಗುರು ಸಂಕ್ರಮಣ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು, ಸಂಬಂಧಗಳನ್ನು ಸರಿಪಡಿಸಲು ಮತ್ತು ಸುರಕ್ಷಿತ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಕರ್ಕಾಟಕ ರಾಶಿಗೆ ಗುರು ಸಂಕ್ರಮಣದ ದಿನಾಂಕ ಮತ್ತು ಸಮಯ:
ದಿನಾಂಕ - ಜೂನ್ 2, 2026 (ಮಂಗಳವಾರ)
ಸಮಯ - ಮುಂಜಾನೆ 02:25
ಜೂನ್ನಲ್ಲಿ ಕರ್ಕಾಟಕ ರಾಶಿಯಲ್ಲಿ ಆಗುವ ಗುರು ಸಂಕ್ರಮಣವು 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗುರುವು ಕರ್ಕ ರಾಶಿಗೆ ಪ್ರವೇಶಿಸುತ್ತಿದ್ದಂತೆಯೇ ಪ್ರತಿಯೊಂದು ರಾಶಿಯವರ ಪ್ರೀತಿ ಬದುಕು, ವೃತ್ತಿ, ಹಣಕಾಸು ಮತ್ತು ಸಂಬಂಧಗಳಲ್ಲಿ ಬದಲಾವಣೆಗಳಾಗುವುದು. ಈ ಸಂಚಾರವು ಅರ್ಥಪೂರ್ಣ ಬದಲಾವಣೆಗಳು ಮತ್ತು ಹೊಸ ಅವಕಾಶಗಳನ್ನು ಹುಟ್ಟಿ ಹಾಕುತ್ತದೆ.

ಮೇಷ ರಾಶಿ:
ಕಳೆದ ಕೆಲವು ತಿಂಗಳುಗಳಿಂದ ಕಡಿದು ಹೋಗಿದ್ದ ಪ್ರೀತಿ ಪಾತ್ರರೊಂದಿಗಿನ ಸಂಬಂಧ ಮತ್ತೆ ಚಿಗುರಿಕೊಳ್ಳುವುದು. ತಪ್ಪು ತಿಳುವಳಿಕೆಗಳು ಸ್ಪಷ್ಟವಾದಾಗ ಮತ್ತು ಭಾವನಾತ್ಮಕ ಬೆಂಬಲವು ಬಲಗೊಂಡಾಗ ಕುಟುಂಬ ಸಂಬಂಧಗಳು ಸುಧಾರಿಸಬಹುದು. ಬೇರೆ ಕಡೆಗೆ ಸ್ಥಳಾಂತರ, ಆಸ್ತಿ ಖರೀದಿ ಮಾಡುವ ಸಾಧ್ಯತೆ ಇದೆ. ನೀವಿರುವ ಜಾಗವನ್ನು ಹೆಚ್ಚು ಶಾಂತಿಯುತವಾಗಿ ಇರಿಸಲು ಪ್ರಯತ್ನಿಸಿ. ಕೆಲಸವು ಹೆಚ್ಚು ಸ್ಥಿರವಾಗುತ್ತದೆ. ಜವಾಬ್ದಾರಿಗಳನ್ನು ಸಮತೋಲನಗೊಳಿಸಲು ಹೆಣಗಾಡುತ್ತಿದ್ದರೆ ಈ ಹೊತ್ತಿನಲ್ಲಿ ಎಲ್ಲವೂ ಸರಿ ಹೋಗಬಹುದು.

ವೃಷಭ ರಾಶಿ:
ವಿಷಯಗಳಲ್ಲಿ ಸ್ಪಷ್ಟತೆ ಇರುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ನಿಮ್ಮ ಮಾತುಗಳಲ್ಲಿ ಹೆಚ್ಚು ಸ್ಪಷ್ಟವಾಗಿರುವಿರಿ. ಬರವಣಿಗೆ, ಬೋಧನೆ, ಮಾರ್ಕೆಟಿಂಗ್, ಕಂಟೆಂಟ್ ಕ್ರಿಯೇಶನ್, ಕೌನ್ಸೆಲಿಂಗ್, ಸೇಲ್ಸ್, ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ತಮ್ಮ ಮಾತಿನ ಮೂಲಕವೇ ಯಶಸ್ಸು ಸಾಧಿಸುವರು. ಡಿಜಿಟಲ್ ವೇದಿಕೆಗಳು, ಸಾಮಾಜಿಕ ಮಾಧ್ಯಮ, ಸಲಹಾ ಅಥವಾ ಸಂವಹನ ಆಧಾರಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವವರೂ ಕೂಡಾ ತಮ್ಮ ಕಾರ್ಯಗಳಲ್ಲಿ ಗೆಲುವು ಪಡೆಯುವರು. ಒಡಹುಟ್ಟಿದವರು ಅಥವಾ ಸೋದರಸಂಬಂಧಿಗಳೊಂದಿಗಿನ ಸಂಬಂಧಗಳು ಗಮನಾರ್ಹವಾಗಿ ಸುಧಾರಿಸುತ್ತವೆ. ತಪ್ಪು ತಿಳುವಳಿಕೆಗಳು ಕರಗಿ ಹೋಗುವುದು.

ಮಿಥುನ ರಾಶಿ:
ಆದಾಯವು ಸ್ಥಿರವಾಗಿರುವುದು. ಅನಿಯಮಿತ ವೇತನ ಅಥವಾ ಹಣಕಾಸಿನ ಸಮಸ್ಯೆಯಿಯಿಂದ ಬಳಲುತ್ತಿದ್ದರೆ, ಈ ಸಮಯದಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳಬಹುದು. ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಹೆಚ್ಚಾಗುವುದು. ನೀವು ಮಾಡುವ ಕೆಲಸಕ್ಕೆ ಸರಿಯಾದ ಮನ್ನಣೆ ಸಿಗುವುದು. ನಿಮ್ಮ ಮಾತಿನ ಮೂಲಕವೇ ವ್ಯವಹಾರಗಳಲ್ಲಿ ಯಶಸ್ಸು ಸಾಧಿಸುವುದು ಸಾಧ್ಯವಾಗುವುದು.

ಕರ್ಕಾಟಕ ರಾಶಿ:
ನಿಮಗೆ ಇದು ಅತ್ಯಂತ ಅದೃಷ್ಟ್ದ ವರ್ಷ. ಒತ್ತಡ ಕಡಿಮೆಯಾಗುತ್ತದೆ ತೆಗದುಕೊಳ್ಳುವ ನಿರ್ಧಾರಗಳಲ್ಲಿ ಸ್ಪಷ್ಟತೆ ಇರುವುದು. ಹಿಂದಿನ ನೋವುಗಳನ್ನು ಮರೆಯುವುದು ಸಾಧ್ಯವಾಗುತ್ತದೆ. ಗೌರವ, ಪ್ರೀತಿ ಹೆಚ್ಚಾಗುವುದು. ನಿಮ್ಮ ನಿರ್ಧಾರಗಳಲ್ಲಿ ಬಹಳ ಸ್ಪಷ್ಟತೆ ಇರುವುದು. ಈ ಸಮಯ ಹೊಸ ಆರಂಭಕ್ಕೆ ಸಾಕ್ಷಿಯಾಗುವುದು. ಹೊಸ ಉದ್ಯೋಗವನ್ನು ಪ್ರಾರಂಭಿಸಬಹುದು. ಮನೆಗಳನ್ನು ಬದಲಾಯಿಸುವ ಯೋಚನೆ ಇದ್ದರೆ ಅದಕ್ಕೂ ಸಕಾಲ. ಆರೋಗ್ಯವು ಸುಧಾರಿಸುತ್ತದೆ.

ಸಿಂಹ ರಾಶಿ:
ಹಳೆಯ ಸಂಬಂಧಗಳು, ಆಘಾತಗಳಿಂದ ಸುಲಭವಾಗಿ ಬಿಡುಗಡೆ ಹೊಂದುವಿರಿ. ದೈವಿಕತೆಯೊಂದಿಗಿನ ನಿಮ್ಮ ಸಂಪರ್ಕವು ಬಲಗೊಳ್ಳುತ್ತದೆ. ಸಂಶೋಧನೆ, ಸೃಜನಶೀಲ ತರಬೇತಿ ಅಥವಾ ಆಧ್ಯಾತ್ಮಿಕ ಕೆಲಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು. ಬೆಳವಣಿಗೆಗೆ ಅವಕಾಶಗಳು ಹುಟ್ಟಿಕೊಳ್ಳುವುದು. ಗುರುವು ನಿಮ್ಮನ್ನು ಮೌನವಾಗಿ ರಕ್ಷಿಸುತ್ತಿರುತ್ತಾನೆ.

ಕನ್ಯಾರಾಶಿ:
ಪ್ರಭಾವಿ ಜನರನ್ನು ಭೇಟಿಯಾಗುವಿರಿ. ಸಮುದಾಯ ಆಧಾರಿತ ಕೆಲಸವನ್ನು ಬೆಳೆಸಿಕೊಳ್ಳಲು ಇದು ಅತ್ಯುತ್ತಮ ಸಮಯ. ಅಸಾಧ್ಯವೆಂದು ಭಾವಿಸಿದ್ದ ದೀರ್ಘಕಾಲೀನ ಕನಸುಗಳು ಇದ್ದಕ್ಕಿದ್ದಂತೆ ನನಸಾಗುವತ್ತ ವೇಗ ಪಡೆಯುವುದು. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವುದು. ನಿಮ್ಮ ಕೆಲಸವು ಸುಗಮ ಮತ್ತು ಹೆಚ್ಚು ಅರ್ಥಗರ್ಭಿತವಾಗಿರುತ್ತದೆ. ಹಣಕಾಸಿನ ಸಮಸ್ಯೆಗಳು ಬಗೆಹರಿಯಬಹುದು. ಹಿಂದೆ ಮಾಡಿದ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು.

ತುಲಾ ರಾಶಿ:
ವೃತ್ತಿ ಜೀವನದಲ್ಲಿ ಹೊಸ ಯಶಸ್ಸು ಸಿಗುವುದು. ಇದು ನಿಮ್ಮ ಜೀವನದ ಅತ್ಯಂತ ಶಕ್ತಿಶಾಲಿ ವೃತ್ತಿ-ಬೆಳವಣಿಗೆಯ ಹಂತಗಳಲ್ಲಿ ಒಂದಾಗುತ್ತದೆ. ಬಡ್ತಿ ಸಿಗಬಹುದು. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರುವುದು.ಅಧಿಕಾರದಲ್ಲಿರುವ ವ್ಯಕ್ತಿಗಳು ನಿಮ್ಮನ್ನು ಬೆಂಬಲಿಸಬಹುದು.ದೀರ್ಘಕಾಲದಿಂದ ನಿಂತು ಹೋಗಿರುವ ಕೆಲಸ ಮತ್ತೆ ಮುಂದುವರಿಯುವುದು. ಸ್ವಯಂ ಕಾಳಜಿಗೆ ಆದ್ಯತೆ ನೀಡಬೇಕಾಗುತ್ತದೆ.

ವೃಶ್ಚಿಕ ರಾಶಿ:
ನಿಮ್ಮನ್ನು ಉನ್ನತಿಗೇರಿಸುವ ಬದಲಾವಣೆಗಳನ್ನು ತರುವ ಗುರುವಿನ ಅತ್ಯಂತ ಶುಭ ಸಂಚಾರ ಇದಾಗಿರಲಿದೆ. ನಿಮ್ಮ ಮಿತಿ ಮತ್ತು ಭಯಗಳನ್ನು ಮೀರಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಾಯವಾಗುವುದು. ಕಾನೂನು ಹೋರಾಟ ನಡೆಸುತ್ತಿದ್ದರೆ ಜಯ ನಿಮ್ಮದಾಗುವುದು. ಗುರು ಸಂಕ್ರಮಣದಿಂದಾಗಿ ನಿಮ್ಮ ಅದೃಷ್ಟ ಬದಲಾಗುವುದು. ಹೊಸ ಹೊಸ ಅವಕಾಶಗಳು ಒದಗಿ ಬರುವುದು.

ಧನು ರಾಶಿ:
ಆಂತರಿಕ ಪರಿವರ್ತನೆಗೆ ಒಳಗಾಗಬಹುದು. ಗುರುವು ನಿಮಗೆ ಭಾವನಾತ್ಮಕ ಶಕ್ತಿಯನ್ನು ನೀಡುತ್ತದೆ. ಪ್ರಬುದ್ಧತೆ ಮತ್ತು ಆಂತರಿಕ ಬುದ್ಧಿವಂತಿಕೆಯೊಂದಿಗೆ ಸನ್ನಿವೇಶಗಳನ್ನು ಕಂಡುಕೊಳ್ಳಲು ಸಹಾಯವಾಗುವುದು. ಸಾಲ, ವಿಮೆ, ಇಎಂಐಗಳು, ತೆರಿಗೆಗಳು, ವಸಾಹತುಗಳು ಅಥವಾ ಆನುವಂಶಿಕತೆಯ ಸುತ್ತಲಿನ ಸಮಸ್ಯೆಗಳು ಪರಿಹಾರವಾಗುವುದು. ಕುಟುಂಬ ಅಥವಾ ಬಾಹ್ಯ ಮೂಲಗಳಿಂದ ಹಣಕಾಸಿನ ನೆರವು ಪಡೆಯಬಹುದು.

ಮಕರ ರಾಶಿ:
ವಿವಾಹದ ಬಗ್ಗೆ ಚರ್ಚೆಗಳು ನಡೆಯಬಹುದು. ಈಗಾಗಲೇ ನಿಮ್ಮ ಜೀವನದಲ್ಲಿ ಸಂಗಾತಿಯಿದ್ದರೆ ಹಿಂದೆ ಸಂಬಂಧದಲ್ಲಿ ಮೂಡಿ ಬಂದಿರುವ ಭಿನ್ನಾಭಿಪ್ರಾಯಗಳು ಸರಿ ಹೋಗುವುದು. ಪಾಲುದಾರಿಕೆಯಲ್ಲಿ ಮಾಡುವ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಸಿಗುವುದು. ಅನಾರೋಗ್ಯಕರ ಸಂಬಂಧಗಳಿಂದ ಹೊರ ಬರುವಿರಿ. ಒಟ್ಟಾರೆಯಾಗಿ, ಗುರುವಿನ ಈ ಸಂಚಾರವು ಮಕರ ರಾಶಿಯವರಿಗೆ ಪ್ರೀತಿ, ಸಾಮರಸ್ಯ, ಬದ್ಧತೆ ಮತ್ತು ಸಂಬಂಧಗಳಲ್ಲಿನ ಸ್ಥಿರತೆಗೆ ಒಂದು ಸುಂದರ ಅವಧಿಯಾಗಲಿದೆ.

ಕುಂಭ ರಾಶಿ:
ವೃತ್ತಿ ಜೀವನದಲ್ಲಿ ಅಭಿವೃದ್ಧಿಯಾಗುವುದು. ಬಾಕಿ ಇರುವ ಕೆಲಸಗಳು ಫುರ್ಣಗೊಳ್ಳುವುದು. ನಿಮಗೆ ಒಲಿದು ಬರುವ ಹೊಸ ಜವಾಬ್ದಾರಿಗಳನ್ನು ಉತ್ತಮ ರೀತಿಯಲ್ಲಿಯೇ ನಿರ್ವಹಿಸುವಿರಿ. ಗುರು ಸಂಚಾರದಿಂದಾಗಿ ನಿಮ್ಮ ವೃತ್ತಿ ಬದುಕಿನಲ್ಲಿ ಗಮನಾರ್ಹವಾದ ಸುಧಾರಣೆ ಕಂಡು ಬರುವುದು. ಆರೋಗ್ಯವು ಉತ್ತಮಗೊಳ್ಳುತ್ತದೆ. ಭಾವನಾತ್ಮಕವಾಗಿ ಒತ್ತಡ ಕಡಿಮೆಯಾಗುವುದು. ಆರ್ಥಿಕವಾಗಿಯೂ ಕೂಡಾ ಈ ಅವಧಿಯು ಉತ್ತಮವಾಗಿರುವುದು. ಹಠಾತ್ ಲಾಭಗಳಾಗುವುದು. ಗಳಿಕೆಯನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು.

ಮೀನ ರಾಶಿ:
ಗುರು ಸಂಚಾರದ ಪರಿಣಾಮವು ಸಂತೋಷವನ್ನು ಹೆಚ್ಚು ಮಾಡುವುದು. ನೀವು ಒಂಟಿಯಾಗಿದ್ದರೆ, ನಿಮ್ಮ ಭಾವನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ, ಹೃದಯಕ್ಕೆ ಹತ್ತಿರವಾಗಿರುವ ವ್ಯಕ್ತಿಯನ್ನು ಭೇಟಿಯಾಗಬಹುದು. ಆರ್ಥಿಕವಾಗಿ, ಸೃಜನಶೀಲ ಯೋಜನೆಗಳು, ಉತ್ಸಾಹ ಆಧಾರಿತ ಕೆಲಸ ಅಥವಾ ಊಹಾತ್ಮಕ ಅವಕಾಶಗಳ ಮೂಲಕ ಲಾಭಗಳಾಗುವುದು. ಒಟ್ಟಾರೆಯಾಗಿ, ಗುರು ಸಂಕ್ರಮಣ ಮೀನ ರಾಶಿಯವರಿಗೆ ಭಾವನಾತ್ಮಕ ಸಮೃದ್ಧಿ, ಪ್ರೀತಿ, ಸೃಜನಶೀಲತೆ ಮತ್ತು ಹೃತ್ಪೂರ್ವಕ ಸಂತೋಷದ ವರ್ಷವನ್ನು ತರುತ್ತದೆ.
ಕರ್ಕಾಟಕ ರಾಶಿಗೆ ಗುರು ಸಂಕ್ರಮಣದಿಂದ ಉಂಟಾಗುವ ಅಶುಭ ಫಲಗಳನ್ನು ತೊಡೆದು ಹಾಕಲು ಪರಿಹಾಋಗಳು :
• ಸೋಮವಾರದಂದು ಹಾಲು, ಅನ್ನ ಅಥವಾ ಬಿಳಿ ಸಿಹಿತಿಂಡಿಗಳನ್ನು ದಾನ ಮಾಡಿ.
• ಮನಸ್ಸಿನ ಶಾಂತಿಯನ್ನು ಹೆಚ್ಚಿಸಲು ನಿಮ್ಮ ಹಾಸಿಗೆಯ ಪಕ್ಕದಲ್ಲಿ ಚಂದ್ರಶಿಲೆ ಅಥವಾ ಮುತ್ತನ್ನು ಇರಿಸಿ .
• ಭಾವನಾತ್ಮಕವಾಗಿ ಹೆಚ್ಚು ಸದೃಢವಾಗಲು ನಿಮ್ಮ ಪರ್ಸ್ನಲ್ಲಿ ಬೆಳ್ಳಿ ನಾಣ್ಯವನ್ನು ಇರಿಸಿ.
• ಈಶಾನ್ಯ ದಿಕ್ಕಿನಲ್ಲಿ ತುಪ್ಪದ ದೀಪ ಬೆಳಗಿಸಿ.
• ಭಾವನಾತ್ಮಕವಾಗಿ ಹೆಚ್ಚು ಪ್ರತಿಕ್ರಿಯಿಸುವುದನ್ನು ತಪ್ಪಿಸಿ. ಶಾಂತವಾಗಿರಿ.
• ಅಗತ್ಯವಿರುವ ಮಹಿಳೆಯರಿಗೆ ಬಿಳಿ ಬಟ್ಟೆ ಅಥವಾ ಆಹಾರವನ್ನು ದಾನ ಮಾಡಿ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications